Advertisement

Tag: ಬೆಂಗಳೂರು

ಅರಾಸೇ ಮತ್ತು ಆರ್‌ಕೆಶ್ರೀ ಜೊತೆಗಿನ ಪ್ರಸಂಗಗಳು: ಎಚ್. ಗೋಪಾಲಕೃಷ್ಣ ಸರಣಿ

ರೂಮಿನ ತುಂಬಾ ಪುಸ್ತಕಗಳು, ಟೇಬಲ್ಲಿನ ಮೇಲೆ ಅರ್ಧ ಓದಿದ್ದ ಆರೆಂಟು ಅರೆ ತೆರೆದ ಪುಸ್ತಕ, ಅರ್ಧ ತೆರೆದುಕೊಂಡಿದ್ದ ಪೇಪರು, ರಟ್ಟಿನ ಪ್ಯಾಡ್ ಮೇಲೆ ಬರೆಯುತ್ತಿದ್ದ ಜೋಡಿಸಿದ್ದ ಹಾಳೆಗಳು, ಕ್ಯಾಪ್ ತೆಗೆದಿರಿಸಿದ ಎರಡು ಪೆನ್ನು, ಪಕ್ಕದಲ್ಲಿ ಕನ್ನಡ ಇಂಗ್ಲಿಷ್ ಡಿಕ್ಷನರಿ….. ಇದ್ದಕ್ಕಿದ್ದ ಹಾಗೆ ನನ್ನ ರೂಮಿನಲ್ಲಿ ಕೂತಿದ್ದೀನಿ, ಹರಡಿರುವ ಪುಸ್ತಕಗಳು ನಾನೇ ಹರಡಿದ್ದು, ಕ್ಯಾಪ್ ತೆಗೆದಿಟ್ಟವನು ನಾನೇ…. ಅನಿಸಿಬಿಟ್ಟಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತಾರನೆಯ ಕಂತು ನಿಮ್ಮ ಓದಿಗೆ

Read More

ಸಂಗೀತ ವಿಶಾರದರ ನೆಲೆವೀಡು…: ಎಚ್. ಗೋಪಾಲಕೃಷ್ಣ ಸರಣಿ

ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತದ ಬಗ್ಗೆ ಅಷ್ಟು ಒಲವು ಇಲ್ಲದ್ದಿದ್ದ ಕಾಲದಲ್ಲಿ ಅದರ ನೆಲೆಗೆ ಒಂದು ಸಾಂಘಟಿಕ ಶಕ್ತಿ ಬೇಕಿತ್ತು. ಅಂತಹ ಶಕ್ತಿ ಒದಗಲು ದತ್ತಾತ್ರೇಯ ಗರುಡರು ಒಂದು ಪ್ರೇರಕ ವ್ಯಕ್ತಿ. ಬೆಂಗಳೂರಿನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ನೆಲೆನಿಲ್ಲಲು, ಶ್ರೀ ರಾಮರಾವ್ ನಾಯಕ್ ಮತ್ತು ಶ್ರೀ ಶೇಷಾದ್ರಿ ಗವಾಯಿ ಅವರೊಡನೆ ದತ್ತಾತ್ರೇಯ ಗರುಡರು ಶ್ರಮಿಸಿದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಸಂಪಿಗೆಯ ಹಾದಿ, ಸಂಸ್ಕೃತಿಯ ಬೀದಿ: ಎಚ್. ಗೋಪಾಲಕೃಷ್ಣ ಸರಣಿ

ಸಂಪಿಗೆ ರಸ್ತೆಯ ಸಂಪಿಗೆ ಹೂವು, ಬೇವಿನ ಮರದ ರಸ್ತೆಯ ಬೇವನ್ನೂ ನಾವು ಖಂಡಿತಾ ಮರೆತಿಲ್ಲ. ನಿತ್ಯ ವಸಂತ. ನಿತ್ಯ ಯುಗಾದಿ ಈ ಬಡಾವಣೆಯ ವೈಶಿಷ್ಟ್ಯ. ಸಿಹಿ ನೀರಿನ ಬಾವಿಗಳಿಂದ ನೆಲದ ಮಟ್ಟದಲ್ಲಿ ನೀರು ಸಿಗುತ್ತಿದ್ದ ದಿನಗಳನ್ನು ನಾವೇ ನೋಡಿದ್ದೇವೆ. ಅದು ಬಾವಿಯೋ ಅಥವಾ ನೀರು ತುಂಬಿಸಲು ನಿರ್ಮಿಸಿರುವ ನೀರಿನ ತೊಟ್ಟಿಯೋ ಎಂದು ಆಶ್ಚರ್ಯ ಪಟ್ಟಿದ್ದೇವೆ. ಊಟ ತಿಂಡಿ, ಮಲ್ಲೇಶ್ವರಂ ಅಡ್ಡೆಗಳ ಬಗ್ಗೆ ಬರೆಯುವುದು ಸಾಧ್ಯವೇ ಇಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ಮೂರನೆಯ ಕಂತು ನಿಮ್ಮ ಓದಿಗೆ

Read More

ಮಲ್ಲೇಶ್ವರಂನ ಮತ್ತಷ್ಟು ನೆನಪುಗಳು…: ಎಚ್. ಗೋಪಾಲಕೃಷ್ಣ ಸರಣಿ

ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಒಂದು ರೀತಿಯ ಶಿಸ್ತು, ಒಪ್ಪ ಓರಣ ಎದ್ದು ಕಂಡರೆ ಯಶವಂತಪುರದ ಮಾರುಕಟ್ಟೆ ಒಂದು ರೀತಿ ಅವ್ಯವಸ್ಥೆ ಮತ್ತು ಕೊಳಕು. ಅಲ್ಲಿನ ಶಿಸ್ತು ಒಪ್ಪ ಓರಣ ಇಲ್ಲಿ ಮಿಸ್ಸಿಂಗ್. ಆದರೂ ಎರಡೂ ಮಾರುಕಟ್ಟೆ ನೋಡಿರುವ ನನ್ನಂತಹವರಿಗೆ ಮಲ್ಲೇಶ್ವರದ ಮಾರುಕಟ್ಟೆ ಅಷ್ಟಾಗಿ ಹಿಡಿಸದು. ಕಾರಣ ಎರಡೂ ಮಾರುಕಟ್ಟೆ ನೋಡಿರುವುದು ಮತ್ತು ಬೆಲೆ ಇಲ್ಲಿ ಮುಖ್ಯ ಪಾತ್ರ. ಇದೇ ರೀತಿಯ ಪರಿಸ್ಥಿತಿ ನಾನು ನೋಡಿರುವುದು ಎಂದರೆ ಗಾಂಧಿ ಬಝಾರ್ ಮಾರುಕಟ್ಟೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಸರಣಿ ಕಳ್ಳತನ ತಪ್ಪಿಸಿದ ಅಮ್ಮ…:ಎಚ್. ಗೋಪಾಲಕೃಷ್ಣ ಸರಣಿ

ಕಾಲ ಮೇಲೆ ಏನೋ ಬಿದ್ದ ಹಾಗನ್ನಿಸಿತು ಅಂತ ಕಾಲಿನ ಕಡೆ ನೋಡ್ತಾಳೆ. ಇವಳದ್ದೆ ಕಾಸಿನ ಸರ ತುಂಡಾಗಿ ಕಾಲಮೇಲೆ ಕಾಸು ಬಿದ್ದಿದೆ. ಕೂಡಲೇ ಸೆರಗು ಅಡ್ಡ ಹಿಡಿದಳು ಮತ್ತು ಆದಷ್ಟು ಕಾಸು, ಗುಂಡು ಅಲ್ಲೇ ಬೀಳಿಸಿಕೊಂಡಳು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ