Advertisement

Tag: Bangalore

ಬೆಂಗಳೂರು ವಸತಿ ಪುರಾಣ-1: ರಂಜಾನ್‌ ದರ್ಗಾ ಸರಣಿ

ಮೊದಲ ದಿನವಾದ ಕಾರಣ ಲೈಟ್ ಹಚ್ಚಿಕೊಂಡೇ ಮಲಗಿದೆ. ಬೇಗ ನಿದ್ರೆ ಬರಲಿಲ್ಲ. ಆ ಮೇಲೆ ಮಧ್ಯರಾತ್ರಿ ಎಚ್ಚರವಾಯಿತು. ಕಣ್ಣು ತೆರೆದಾಗ ಗಾಢಾಂಧಕಾರ ಆವರಿಸಿದ್ದು ಗಾಬರಿ ಹುಟ್ಟಿಸಿತು. ಕರೆಂಟ್ ಹೋಗಿರಬಹುದು ಎಂದು ಭಾವಿಸಿ ಹಾಗೆ ಮಲಗಿದೆ. ಬೆಳಿಗ್ಗೆ ಬಹಳ ಹೊತ್ತಿನವರೆಗೆ ಎಚ್ಚರಾಗಲಿಲ್ಲ. ಕೊನೆಗೆ ಎಚ್ಚರವಾದಾಗ ಸೊಳ್ಳೆಪರದೆ ಮೇಲೆಲ್ಲ ಸೊಳ್ಳೆಗಳು ಸುತ್ತಿಕೊಂಡಿದ್ದರಿಂದ ಕತ್ತಲು ಆವರಿಸಿದ್ದು ಗೊತ್ತಾಯಿತು!
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಶೇಷಾದ್ರಿಪುರದ ಇತಿಹಾಸ ಗೊತ್ತ?: ಎಚ್. ಗೋಪಾಲಕೃಷ್ಣ ಸರಣಿ

ಸಿಟಿ ಮಾರ್ಕೆಟ್ ಸುತ್ತಲಿನ ಪುಟ್ಟಪುಟ್ಟ ಗಲ್ಲಿಗಳ ಹೆಸರು ಓದುತ್ತಾ ಹೋದಂತೆ ಕಣ್ಣೆದುರು ಜ್ಞಾಪಕ ಚಿತ್ರಶಾಲೆ ತೆರೆದುಕೊಳ್ಳುತ್ತೆ. ಒಮ್ಮೆ ರೈಲ್ವೆ ಪ್ಲಾಟ್ ಫಾರ್ಮ್ ರಸ್ತೆಯಲ್ಲಿ ಹೋಗಬೇಕಾದರೆ ಅಲ್ಲಿನ ಮೂಲೆ ಮನೆಯ ಗೋಡೆ ಅಂಚಿನಲ್ಲಿ ಒಂದು ಕನ್ನಡ ಫಲಕ ಕಾಣಿಸಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೈದನೆಯ ಕಂತು ನಿಮ್ಮ ಓದಿಗೆ

Read More

ಸಂಪಿಗೆಯ ಹಾದಿ, ಸಂಸ್ಕೃತಿಯ ಬೀದಿ: ಎಚ್. ಗೋಪಾಲಕೃಷ್ಣ ಸರಣಿ

ಸಂಪಿಗೆ ರಸ್ತೆಯ ಸಂಪಿಗೆ ಹೂವು, ಬೇವಿನ ಮರದ ರಸ್ತೆಯ ಬೇವನ್ನೂ ನಾವು ಖಂಡಿತಾ ಮರೆತಿಲ್ಲ. ನಿತ್ಯ ವಸಂತ. ನಿತ್ಯ ಯುಗಾದಿ ಈ ಬಡಾವಣೆಯ ವೈಶಿಷ್ಟ್ಯ. ಸಿಹಿ ನೀರಿನ ಬಾವಿಗಳಿಂದ ನೆಲದ ಮಟ್ಟದಲ್ಲಿ ನೀರು ಸಿಗುತ್ತಿದ್ದ ದಿನಗಳನ್ನು ನಾವೇ ನೋಡಿದ್ದೇವೆ. ಅದು ಬಾವಿಯೋ ಅಥವಾ ನೀರು ತುಂಬಿಸಲು ನಿರ್ಮಿಸಿರುವ ನೀರಿನ ತೊಟ್ಟಿಯೋ ಎಂದು ಆಶ್ಚರ್ಯ ಪಟ್ಟಿದ್ದೇವೆ. ಊಟ ತಿಂಡಿ, ಮಲ್ಲೇಶ್ವರಂ ಅಡ್ಡೆಗಳ ಬಗ್ಗೆ ಬರೆಯುವುದು ಸಾಧ್ಯವೇ ಇಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ಮೂರನೆಯ ಕಂತು ನಿಮ್ಮ ಓದಿಗೆ

Read More

ಸರಣಿ ಕಳ್ಳತನ ತಪ್ಪಿಸಿದ ಅಮ್ಮ…:ಎಚ್. ಗೋಪಾಲಕೃಷ್ಣ ಸರಣಿ

ಕಾಲ ಮೇಲೆ ಏನೋ ಬಿದ್ದ ಹಾಗನ್ನಿಸಿತು ಅಂತ ಕಾಲಿನ ಕಡೆ ನೋಡ್ತಾಳೆ. ಇವಳದ್ದೆ ಕಾಸಿನ ಸರ ತುಂಡಾಗಿ ಕಾಲಮೇಲೆ ಕಾಸು ಬಿದ್ದಿದೆ. ಕೂಡಲೇ ಸೆರಗು ಅಡ್ಡ ಹಿಡಿದಳು ಮತ್ತು ಆದಷ್ಟು ಕಾಸು, ಗುಂಡು ಅಲ್ಲೇ ಬೀಳಿಸಿಕೊಂಡಳು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಮಲ್ಲೇಶ್ವರಂ ಅಂದರೆ ನಮ್ಮ ಹೃದಯ!: ಎಚ್. ಗೋಪಾಲಕೃಷ್ಣ ಸರಣಿ

ಯಾವುದೇ ಪುಸ್ತಕ, ಗೈಡ್ ಬೇಕಿದ್ದರೂ ನಾವು ಮೊದಲು ಓಡುತ್ತಾ ಇದ್ದದ್ದು ಆತ್ಮ ಸ್ಟೋರ್ಸ್ ಕಡೆಗೆ. ಸುಮಾರು ಐದಾರು ದಶಕಗಳ ಕಾಲ ಅದು ವಿದ್ಯಾರ್ಥಿಗಳ ಬೇಕು ಬೇಡ ನೋಡಿಕೊಂಡಿತು ಮತ್ತು ಈಗಲೂ ತನ್ನ ಕಾಯಕ ಮುಂದುವರೆಸಿದೆ. ಮತ್ತೊಂದು ಸಂಗತಿ ಅಂದರೆ ಈ ರಸ್ತೆಯಲ್ಲಿ ಅಂಡರ್ ಪಾಸ್ ಆಗುತ್ತಿದ್ದ ಸಮಯದಲ್ಲಿ ಅಲ್ಲಿನ ರಸ್ತೆಯ ನಿವಾಸಿಗಳು ಪಟ್ಟ ಪಾಡು ಹೇಳ ತೀರದು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ