Advertisement

Tag: Kannada Literature

ಪುಸ್ತಕ ಪ್ರಕಟಣೆಯ ಪ್ರಸಂಗಗಳು: ಎಚ್. ಗೋಪಾಲಕೃಷ್ಣ ಸರಣಿ

ಪುಸ್ತಕಕ್ಕೆ ಹೆಸರು ಇಡಬೇಕಿತ್ತಲ್ಲ. ಮುಖಪುಟ ಬರೆದಾಗ ಪುಸ್ತಕದ ಹೆಸರೂ ಕೊಟ್ಟರೆ ಕಲರ್ ಕಾಂಬಿನೇಷನ್‌ಗೆ ಉತ್ತಮ ಎನ್ನುವ ಅಭಿಪ್ರಾಯ ಬಂದಿತ್ತು. ನನ್ನ ಕತೆಗಳ ಹಸ್ತಪ್ರತಿಯ ಒಂದು ಕತೆ ಹೆಸರು ವೈಶಾಖ ಎಂದು. ಈಗಾಗಲೇ ಚದುರಂಗ ಅವರು ವೈಶಾಖ ಎನ್ನುವ ಕಾದಂಬರಿ ಬರೆದು ಅದು ಪ್ರಖ್ಯಾತವಾಗಿತ್ತು. ನನ್ನ ಸಂಕಲನಕ್ಕೂ ವೈಶಾಖ ಹೆಸರು ಇಟ್ಟರೆ ಓದುಗರು ಕನ್ಫ್ಯೂಸ್ ಮಾಡಿಕೊಳ್ಳುವ ಸಂಭವ ಹೆಚ್ಚಿರುತ್ತೆ ಅನಿಸಿತು. ಆದರೂ ಚದುರಂಗರ ವೈಶಾಖ ಕಾದಂಬರಿಯು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೬ನೇ ಬರಹ ನಿಮ್ಮ ಓದಿಗೆ

Read More

ವಿಫುಲ ರೂಪ ಧಾರಿಣಿ ಹುಡುಕಾಡುತಿದೆ ಮನುಷ್ಯ ಪ್ರೀತಿಗಾಗಿ….: ಡಾ. ರಾಜೇಂದ್ರಕುಮಾರ್  ಕೆ. ಮುದ್ನಾಳ್ ಬರಹ

ಇಂದಿನ ಆಧುನಿಕ ತಂತ್ರಜ್ಞಾನ ಕೃತಕ ಬುದ್ಧಿಮತ್ತೆಯಲ್ಲಿ ನಿಸರ್ಗದ ಚೈತನ್ಯವನ್ನು ನೋಡುವುದನ್ನು ಮರೆತುಬಿಟ್ಟಿದ್ದೇವೆ. ಗುಬ್ಬಿ ಗೂಡು ಕಟ್ಟುವುದನ್ನು,ಸೂರ್ಯೋದಯ ಚಂದ್ರೋದಯಗಳ ನಯನ ಮನೋಹರ ದೃಶ್ಯವನ್ನು, ಕರು ಆಕಳ ಕೆಚ್ಚಲನ್ನು ಹುಡುಕುವ ಹೊತ್ತನ್ನು ಮರೆತುಬಿಟ್ಟಿದ್ದೇವೆ. ಆಕಾಶದಿಂದ ಜಾರುವ ಮಳೆ, ಕಾಮನಬಿಲ್ಲು, ಇಬ್ಬನಿಯ ರೂಪ, ಪ್ರೀತಿ -ವಿರಹಗಳ ನಡುವಿನ ಬಾಂಧವ್ಯ, ಮೌನ ರಹಸ್ಯಗಳ ನಡುವಿನ ವಿಸ್ಮಯ. ಇವುಗಳ ನಡುವಿನ ಪ್ರೀತಿಯನ್ನು ಗಳಿಸುವ, ಬೆಳೆಸುವ, ಉಳಿಸುವ ದಾಹ ನಮ್ಮದಾಗಲಿ ಎಂಬ ಆಶಯ ವಿಫುಲ ರೂಪ ಧಾರಣಿಯದು. ಏಕೆಂದರೆ ‘ದಾರಿ ನೂರಾರಿವೆ ಬಿಡುಗಡೆಯ ಬೆಳಕಿನ ಅರಮನೆಗೆ’ ಎಂಬ ಸಾಲುಗಳು ನಮ್ಮಲ್ಲಿ ಪ್ರೀತಿಯ ಬುಗ್ಗೆ ಚಿಮ್ಮುವಂತಾಗಲಿ.
ಜಿ.ಎಸ್.‌ ಶಿವರುದ್ರಪ್ಪನವರ ಕವಿತೆಗಳನ್ನು ಆಧರಿಸಿದ ‘ವಿಫುಲ ರೂಪ ದಾರಿಣಿ’ ಕಾವ್ಯ ಅಭಿನಯದ ಕುರಿತು ಡಾ. ರಾಜೇಂದ್ರಕುಮಾರ್ ಕೆ. ಮುದ್ನಾಳ್ ಬರಹ

Read More

ಸುಧಾ ಆಡುಕಳ ಬರೆದ ಈ ಭಾನುವಾರದ ಕತೆ “ಆರೂವರೆ ಅಡಿಯ ಮನುಷ್ಯ”

ನಾನು ಗುರುವೆಂದು ಭಾವಿಸಿದ ಫುಲೆ ದಂಪತಿಗಳು ಹೇಳಿದ್ದೂ ಇದೇ ಮಾತುಗಳನ್ನು. ಪುಟ್ಟ ಬಾಲಕಿಯರಿಂದ ಹಿಡಿದು, ಮದುವೆಯಾಗಿ ವಿಧವೆಯರಾದ ಹೆಣ್ಣುಗಳವರೆಗೆ ಎಲ್ಲರ ಕೈಯ್ಯಲ್ಲಿಯೂ ಅಕ್ಷರದ ದೀವಿಗೆಯನ್ನು ಹಿಡಿಸಬೇಕೆಂದು ಅವರು ಶ್ರಮಿಸಿದ ಮಾರ್ಗ ನನ್ನೆದುರು ತೆರೆದುಕೊಂಡಿತ್ತು. ಅವರು ಹುಟ್ಟುಹಾಕಿದ ಅರಿವಿನ ಸಸಿಯಿಂದು ಆರೈಕೆಯಿಲ್ಲದೇ ಸೊರಗಿ ಸಾಯುವ ಸ್ಥಿತಿಯಲ್ಲಿತ್ತು. ವಾಸ್ತವ ಸತ್ಯವನ್ನರಿಯಲು ನಾನು ರಾಜ್ಯದ ತುಂಬೆಲ್ಲ ಸಂಚರಿಸತೊಡಗಿದೆ.
ಸುಧಾ ಆಡುಕಳ ಬರೆದ ಕತೆ “ಆರೂವರೆ ಅಡಿಯ ಮನುಷ್ಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಸುನಂದಾ ಕಡಮೆ ಬರೆದ ಈ ಭಾನುವಾರದ ಕತೆ “ನಿವೃತ್ತಿ”

ಕೈಯಲ್ಲಿದ್ದ ಲಾಠಿಯಿಂದ ರಬ್ಬನೆ ಅವಳ ಕಾಲಿನ ಮೇಲೆ ಒಂದೇಟು ಬಿತ್ತು, ಇದನ್ನು ಮಾತ್ರ ಶೀಲಕ್ಕ ನಿರೀಕ್ಷಿಸಿರಲಿಲ್ಲ, ‘ಅಯ್ಯ ನಮ್ಮವ್ವ.. ನನಗ ಹೊಡೀತೀರಿ? ಅಯ್ಯ ಅಯ್ಯ..’ ಅಂತ ಮುಳುಮುಳು ಮಾಡಿದಳು. ಆಗಲೇ ಪ್ರತಾಪಣ್ಣ ಬಾಗಿಲು ತೆರೆದು ಗೇಟುದಾಟಿಯಾಗಿತ್ತು. ಅವಮಾನದಿಂದ ದುಃಖ ಉಮ್ಮಳಿಸಿತು, ಯಾಕೋ ಅವನು ಮೊದಲಿನಂತಿಲ್ಲ ಅನ್ನಿಸಿತು. ಬಲಗಾಲ ಮೀನಖಂಡದಲ್ಲಿ ಎದ್ದ ನೋವನ್ನು ನೀವಿಕೊಳ್ಳುತ್ತಿರುವಾಗಲೇ ಮಗ ಕಾಲ್ ಮಾಡಿದ, ವಿಷಯ ತಿಳಿದು ‘ಮೂವತ್ತೈದ ವರ್ಷ ತೊಟ್ಕೊಂಡ ಯೂನಿಫಾರ್ಮ ಐತದ, ಅದ್ನ ನೋಡ್ಕೋತ ಇದ್ರ ಅಪ್ಪಗ ಒಂಥರಾ ಟೆಮ್ಟ್ ಆಗ್ತಿರಬೇಕ, ನಾಳಿಂದ ಅದ್ನ ತಗದ ಎಲ್ಲರ ಹುಗಸಿ ಇಟ್ಬಿಡು’ ಅಂದ.
ಸುನಂದಾ ಕಡಮೆ ಬರೆದ ಕತೆ “ನಿವೃತ್ತಿ” ನಿಮ್ಮ ಈ ಭಾನುವಾರದ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವೈದೇಹಿ ಬರೆದ ಕತೆ

ಯಾಕೋ ನನಗೆ ಕೋರ್ಟುಮನೆ ಅಲೆದೇ ಸೋತು ಕುಸಿದುಹೋಗಿದ್ದ ಅಪ್ಪನ ಹೋರಾಟದ ಬಗ್ಗೆ ಹೇಳಲೇಬೇಕೆನಿಸಿತು. ಆಸ್ತಿಗಾಗಿ ಕುಟುಂಬದಲ್ಲೇ ಒಂದು ಆತ್ಮಹತ್ಯೆ ಆಯಿತು, ಒಂದು ಕೊಲೆ ಆಯಿತು, ಇದೆಲ್ಲ ನಮ್ಮ ಮಟ್ಟಿಗೆ ಎಂಥ ದೊಡ್ಡದು ಯೋಚಿಸಿ. ಅಪ್ಪ ಕಡೆಕಡೆಗೆ ತಮ್ಮದೇ ಕುಟುಂಬದೊಂದಿಗೆ ಕೋರ್ಟುಕಚೇರಿ ವ್ಯಾಜ್ಯ ಯಾಕಾದರೂ ಬೇಕಿತ್ತು ಅಂತ ಕೊರಗುತಿದ್ದರು ಅಷ್ಟಿಷ್ಟಲ್ಲ. ಹಾಗೆಂದು ‘ಜಗಳ ಬೇಡ, ಎಲ್ಲ ನಿಮಗೇ, ತಕೊಳ್ಳಿ’ ಅಂತ ಬಿಟ್ಟುಕೊಟ್ಟರೇನು? ಇಲ್ಲವಲ್ಲ. ಅದು ಸಾಧ್ಯವೂ ಇಲ್ಲ. ‘ಒಂದು ರೀತಿ ಮಹಾಭಾರತದಲ್ಲಿ ಬರುವ ಧರ್ಮವ್ಯಾಧನ ಕತೆಯಂತೆ ನಾವೆಲ್ಲ.
ನಾನು ಮೆಚ್ಚಿದ ನನ್ನ ಕಥಾ ಸರಣಿಯ ಕೊನೆಯ ಕಂತಿನಲ್ಲಿ ವೈದೇಹಿ ಬರೆದ ಕತೆ “ಅಮುದ ಹೇಳಿದ ಕತೆ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ