Advertisement

Tag: kendasampige

ಇದು ರಾಜಕೀಯ ಕಾಲ: ಚೈತ್ರಾ ಶಿವಯೋಗಿಮಠ ಸರಣಿ

ಶಿಂಬೋರ್ಸ್ಕಾರ ಜನಪ್ರಿಯತೆ ಮತ್ತು ಯಶಸ್ಸಿಗೆ ಕಾರಣವೇನು ಗೊತ್ತೇ? ವಿಶಿಷ್ಟ ಕಾವ್ಯ ಶೈಲಿ, ವಿಭಿನ್ನತೆ. ಯಾವುದೇ ಒಂದು ಕಾವ್ಯ ಶೈಲಿಗೆ ಜೋತು ಬೀಳದೆ, ತನ್ನದೇ ಆದ ನುಡಿಗಟ್ಟನ್ನು ಮತ್ತು ತನ್ನದೇ ಆದ ಭಾಷೆಯನ್ನು ಠಂಕಿಸಿದರು. ದೊಡ್ಡ ಐತಿಹಾಸಿಕ ಘಟನೆಗಳು, ಮಾನವ ಅಸ್ತಿತ್ವದ ಜೈವಿಕ ಸ್ಥಿತಿಗತಿ, ಕವಿಯ ಸಾಮಾಜಿಕ ಪಾತ್ರ ಮತ್ತು ತಾತ್ವಿಕ ವ್ಯವಸ್ಥೆಗಳು, ಸಿದ್ಧಾಂತಗಳಿಂದ ದೂರವೇ ಉಳಿಯಿತು ಅವರ ಕಾವ್ಯ.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿ

Read More

ಸ್ಯಾನಿಟರಿ ಇಂಜಿನಿಯರ್ಸ್..: ಪೂರ್ಣೇಶ್ ಮತ್ತಾವರ ಪ್ರಬಂಧ

ಹೀಗೆ ನೀರು ಹೊತ್ತುಕೊಂಡು ಹೋದರೂ ಯಾವಾಗಲೂ ಉದ್ದನೆಯ ಸಾಲು, ನೂಕು ನುಗ್ಗಲು! ಸರಿ, ಈ ಎಲ್ಲಾ ಕಿರಿಕಿರಿ, ಪಡಿಪಾಟಲುಗಳನ್ನು ಅನುಭವಿಸುತ್ತಲೇ ಹತ್ತಾರು ನಿಮಿಷ ಕಾದು ಒಳ ಹೋದರೂ, ಹೋದವರು ಬಾಗಿಲು ಹಾಕಿ, ಬಾಗಿಲಿನ ಚಿಲಕ ಸರಿ ಇಲ್ಲವೆಂದು ಬಕೆಟನ್ನೇ ಬಾಗಿಲಿಗೆ ಅಡ್ಡವಾಗಿ ಇಟ್ಟು, ಕುಕ್ಕರುಗಾಲು ಹಾಕಿ ಕೂತು ಒಂದು ಕೈಲಿ ಬಕೆಟ್, ಮತ್ತೊಂದು ಕೈಲಿ ಸಹಿಸಲಾರದ ವಾಸನೆಗೆ ಮೂಗು ಮುಚ್ಚಿ ಶೌಚ ನಡೆಸಬೇಕೆನ್ನುವಷ್ಟರಲ್ಲೇ ದಡಬಡ ಬಾಗಿಲು ಬಡಿತ, ಸ್ವಲ್ಪ ತಡವಾದರೂ ಬಾಗಿಲನ್ನೇ ಮುರಿಯುವ ಬೆದರಿಕೆ, ಇತ್ಯಾದಿ, ಇತ್ಯಾದಿ..
ಪೂರ್ಣೇಶ್‌ ಮತ್ತಾವರ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಮಕ್ಕಳ ಶಿಕ್ಷಣದಲ್ಲಿ ಕುಟುಂಬದ ಜವಾಬ್ದಾರಿ: ಅನುಸೂಯ ಯತೀಶ್ ಸರಣಿ

ನೋಡಿ ಮೇಡಮ್ ನೀವು ಮೊದಲು ಅವನಿಗೆ ಟಿವಿ ನೋಡೋದು ಬಿಡಿಸಿ. ಶಾಲೆಯಿಂದ ಬಂದಾಗ ಟಿವಿ ಮುಂದೆ ಕೂತ್ರೆ ಅರ್ಧ ರಾತ್ರಿವರೆಗೂ ಒಂದಾದ ಮೇಲೆ ಒಂದರಂತೆ ಧಾರವಾಹಿ ನೋಡ್ತಾನೆ. ಮಲಗೋದು ಸರಿ ರಾತ್ರಿ ಆಗಿರುತ್ತೆ. ಬೆಳಗ್ಗೆ ಏಳಲು ತಲೆಸುತ್ತು ಅಂತಾನೆ. ನಿದ್ದೆ ಬರುತ್ತೆ ಅಂತ ಹತ್ತು ಗಂಟೆಯಾದರೂ ಮಲಕೊಂಡವ್ನೆ. ಅದಕ್ಕೆ ನಿಮ್ಮ ಮೇಲೆ ಕೋಪ ಬಂದಿದೆ. ನಿಮ್ಮ ಮೇಲೆ ಕೂಗಾಡಿದ್ದು ಇನ್ಯಾಕೆ ಅಂದುಕೊಂಡ್ರಿ ಅಂತ ಆಕೆಯ ಕಿರುಚಾಟ, ಹಾರಾಟದ ಹಿಂದಿನ ಸತ್ಯ ಬಾಯ್ಬಿಟ್ಟಳು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

Read More

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಕೆಂಪು ಬಣ್ಣದ ರೇಷ್ಮೆ ಸೀರೆಯನ್ನು ಹಿಂದಿನೆರಡು ಬಟ್ಟೆ ತುಂಡುಗಳ ಜೊತೆಗೆ ಜೋಡಿಸುತ್ತಿದ್ದ ಶಂಕ್ರಜ್ಜಿಗೆ ಮದುವೆಯ ನೆನಪು ಬಂದರೂ ಅದು ಮನಸ್ಸಿಗೆ ಖುಷಿ ಕೊಡಲಿಲ್ಲ. ಹಸಿರು, ಹಳದಿ, ಕೆಂಪು ಬಣ್ಣಗಳಿಂದ ತಯಾರಾಗುತ್ತಿದ್ದ ಕೌದಿಗೆ ಸೇರಿಸಲು ಇನ್ನೊಂದೆರಡು ಬಟ್ಟೆಗಳಷ್ಟೇ ಬೇಕಿದ್ದದ್ದು. ಅವಳ ಮಡಿಲ ಬುಡದಲ್ಲಿಯೇ ಇತ್ತು ನೀಲಿ ಬಣ್ಣದ ಫ್ಯಾನ್ಸಿ ಸೀರೆ. ಅದನ್ನು ಎತ್ತಿಕೊಂಡು ಉಳಿದವುಗಳ ಜೊತೆಗೆ ಸೇರಿಸಿ ಹೊಲಿಯಲಾರಂಭಿಸಿದಳು.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಕೌದಿ” ನಿಮ್ಮ ಓದಿಗೆ

Read More

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳು: ಎಂ.ವಿ ಶಶಿಭೂಷಣ ರಾಜು ಅಂಕಣ

ಹೀಗೆ ಹೊತ್ತಿಲ್ಲದ ಹೊತ್ತಿನಲ್ಲಿ ಕೆಲಸಮಾಡುವುದರಿಂದ, ಓಡಾಡಲು ಸ್ವಂತ ವಾಹನ ಇಲ್ಲದಿರುವುದರಿಂದ, ರೈಲು, ಬಸ್ಸುಗಳಲ್ಲಿ ಅಥವಾ ನಡೆದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಬೇಕಾಗಿರುವುದರಿಂದ, ಕೆಲವು ಅನಾಹುತಗಳಿಗೆ ತೆರೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದೇ ಹೆಚ್ಚಿನ ಅನಾಹುತಗಳಿಗೆ ಕಾರಣ. ಇದು ಭಾರತೀಯ ವಿದ್ಯಾರ್ಥಿಗಳೇ ಅಲ್ಲ, ಎಲ್ಲಾ ದೇಶಗಳ ವಿದ್ಯಾರ್ಥಿಗಳಿಗೂ ಜರುಗುತ್ತದೆ.
ಎಂ.ವಿ. ಶಶಿಭೂಷಣ ರಾಜು ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ