Advertisement

Tag: Mogalli Ganesh

ವರ್ತಮಾನದ ತಲ್ಲಣಗಳಿಗೆ ಪ್ರತಿಕ್ರಿಯೆ: ಮೊಗಳ್ಳಿ ಗಣೇಶ್‌ ಬರಹ

ಚಂದನ್ ಮತೊಂದು ಭಾರತವನ್ನು ಅವಲೋಕಿಸುತ್ತಿರುವುದೇ ದಮನಿತರ ದೃಷ್ಟಿಕೋನದಿಂದ. ಅಂಚಿನ ಸಂಗತಿಗಳನ್ನು ಮುಖ್ಯ ವಾಹಿನಿಗೆ ತಂದಿರಿಸಿ ನಿರೂಪಿಸುವುದೇ ಸಾಂಸ್ಕೃತವಾಗಿ ಮಹತ್ವದ್ದು. ದಲಿತ ಕವಿ ಸಿದ್ದಲಿಂಗಯ್ಯನವರ ಆತ್ಮಕಥನವ ಕಂಡಂತೆಯೆ, ಸರ್.ಎಂ.ವಿಶ್ವೇಶ್ವರಯ್ಯ ಅವರ ಬಗೆಗೂ, ನಾಲ್ವಡಿ ಕೃಷ್ಣ ರಾಜೇಂದ್ರ ಅವರ ಬಗೆಗೂ ಟಿಪ್ಪು ಸುಲ್ತಾನ್ ಬಗೆಗೂ ಸಮಾನವಾಗಿ ನೋಡುವ ಪರಿಯು ಗಮನಾರ್ಹವಾಗಿದೆ. ಯು.ಆರ್. ಅನಂತಮೂರ್ತಿ ಅವರು ಆತ್ಯಂತಿಕ ಪ್ರಭೆಯ ಲೇಖಕರು. ಅವರ ಮೂಲಕ ಭಾರತವನ್ನು ಚಂದನ್ ಭಾವಿಸುತ್ತಾರೆ.
ಚಂದನ್‌ ಗೌಡ ಹೊಸ ಕೃತಿ “ಅನದರ್‌ ಇಂಡಿಯಾ” ಕೃತಿಯ ಕುರಿತು ಮೊಗಳ್ಳಿ ಗಣೇಶ್‌ ಬರಹ

Read More

ಮೊಗಳ್ಳಿ ಗಣೇಶ್ ಬರೆದ ಈ ಭಾನುವಾರದ ಕತೆ

ಏನೊ ಆತಂಕ. ಒಂಟಿತನ. ಈ ಓದು ಕೂಡ ಉಪಯೋಗ ಇಲ್ಲ. ಬುದ್ದಿಗೆ ಬೆಲೆ ಇಲ್ಲ. ದಡ್ಡರಿಗೇ ಎಲ್ಲೆಡೆ ದೊಡ್ಡ ದೊಡ್ಡ ಪದವಿ. ಮೂರ್ಖರು ಮೂರ್ಖರನ್ನೆ ಬೆಳೆಸುತ್ತಾರೆ. ಈ ಜಾತಿ ಕೂಪದಲ್ಲಿ ನಾನು ಏನೇ ಆಗಿದ್ದರೂ ಅದೇ ಆಗಿರುತ್ತೇನೆ. ಅದಕ್ಕಾಗಿ ಯಾಕೆ ಇಷ್ಟೆಲ್ಲ ಹೋರಾಟ? ವಿದ್ವತ್ತು? ಮನುಷ್ಯತ್ವ… ಕೊನೆಗೂ ನನಗೇನು ಉನ್ನತ ಕೆಲಸ ಸಿಗುವುದಿಲ್ಲವಲ್ಲಾ ಎಂದು ಮಂಕಾಗಿದ್ದೆ. ವಿಶ್ವಾಸ ಕುಗ್ಗುತ್ತಿತ್ತು. ಅವನು ನನ್ನ ಅಪ್ಪ ನಾಲ್ಕನೆ ಬಾರಿಗೆ ಯಾವುದೊ ಒಂದು ಹೆಂಗಸ ಒಪ್ಪಿಸಿ ಕರೆತಂದು ಮನೆಯಲ್ಲಿ ಇಟ್ಟುಕೊಂಡಿದ್ದನಂತೆ.
ಮೊಗಳ್ಳಿ ಗಣೇಶ್ ಬರೆದ ಕಥೆ “ಅವಳು ಚಿಲುಮೆ”

Read More

ಅವನಿಗೆ ಒಂದು ಹಿಡಿ ಮಣ್ಣನ್ನೂ ಕೊಡಲಿಲ್ಲ.

ಆ ಮನೆಯ ಅಂಗಳದಲ್ಲಿ ಎಷ್ಟೊಂದು ದೊರೆಯಂತೆ ಮೆರೆದಿದ್ದವನು… ಎಷ್ಟು ಬಡಿದಾಡಿ ರಕ್ತ ಹರಿಸಿದ್ದವನು. ಈಗ ಅದೇ ಅಂಗಳವ ಹಾದು ಹೋಗುವ ಹಾದಿ ಹೋಕರತ್ತ ಕ್ಷೀಣ ದನಿ ಹೊರಡಿಸಿ ಕೈ ಒಡ್ಡಿ ತಿನ್ನಲು ಏನಾದರೂ ಕೊಡಿ ಎಂದು ಬೇಡುತ್ತಿದ್ದ. ಕೊಡುವವರು ಕೊಡುತ್ತಿದ್ದರು. ಅವನ ಮೂರನೇ ಹೆಂಡತಿ ಮೈಸೂರು ಸೇರಿದ್ದವಳು ತನ್ನ ಮಗಳ ಸಮೇತ ನಾಪತ್ತೆ ಆದವಳು ಮತ್ತೆ ಎಲ್ಲೂ ಕಂಡಿರಲಿಲ್ಲ. ಶಾಂತಿ ಮಾತ್ರ ಬಚಾವಾಗಿ ಗಂಡನ ಮನೆಯಲ್ಲಿ ಅನುಕೂಲವಾಗಿ ಇದ್ದಳು.
ಮೊಗಳ್ಳಿ ಗಣೇಶ್‌ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 39ನೇ ಕಂತು

Read More

ಚಿತೆಯ ಜೊತೆ ಚಿತೆಯಾಗಿದ್ದೆ

ಆ ಹೆಂಗಸು ನನ್ನತ್ತ ಎರಡು ಮೂರು ಬಾರಿ ನೋಡಿತು. ಅವಳ ಕಣ್ಣಲ್ಲಿದ್ದ ನೀರೆಲ್ಲ ತೀರಿ ಹೋಗಿದ್ದವೇನೊ! ಸ್ಮಶಾನದ ಮೂಲೆಯಲ್ಲಿ ಶವದತ್ತ ನೋಡುತ್ತಲೇ ಕೂತು ಕೂಸಿಗೆ ಎದೆ ಕಚ್ಚಿಸಿದ್ದಳು. ಆ ಕೂಸಿನ ಹೆಜ್ಜೆಗಳಿನ್ನೂ ಮೂಡಿಯೇ ಇಲ್ಲಾ… ಅವನು ನಡೆ ನಡತೆ ನುಡಿಗಳ ಮುಗಿಸಿದ್ದ. ಆ ಹೆಂಗಸಿನ ಹೆಜ್ಜೆಗಳು ಬಾಕಿ ಇದ್ದವು. ಸ್ಮಶಾನ ಬಿಟ್ಟು ಬೇಗ ಮನೆಗೆ ತೆರಳಲು ಮುಂದಾಗಿದ್ದರು. ಸ್ಮಶಾಸನದಲ್ಲಿ ಸಂಸಾರವೇ! ಆಕೆಯೂ ಆ ಜನರ ಜೊತೆ ಎದ್ದು ಹೊರಟಳು ಏನೂ ಆಗಿಯೇ ಇಲ್ಲ ಎಂಬಂತೆ.
ಮೊಗಳ್ಳಿ ಗಣೇಶ್‌ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 38ನೇ ಕಂತು

Read More

ನಿಶೆಯ ಹೆಬ್ಬಾವಿನ ಬಾಯಲ್ಲಿ ಮಲಗಿದ್ದೆ

“ನನ್ನ ಸ್ವಕಾರಣದಿಂದ ಪಿಎಚ್.ಡಿ ಸಂಶೋಧನೆಗೂ, ಅತಿಥಿ ಉಪನ್ಯಾಸಕ ವೃತ್ತಿಗೂ ರಾಜಿನಾಮೆ ನೀಡುತ್ತಿರುವೆ’ ಎಂದು ಒಂದು ಸಾಲಿನ ರಾಜಿನಾಮೆ ಬರೆದು ಲಕೋಟೆಯಲ್ಲಿಟ್ಟು ಯಾರ್ಯಾರಿಗೆ ಕೊಡಬೇಕೊ ಅವರಿಗೆಲ್ಲ ಕೊಟ್ಟು ಹಾಸ್ಟಲಿಗೆ ಬಂದೆ. ಆ ಕ್ಷಣವೇ ಕ್ಯಾಂಪಸ್ಸನ್ನು ತೊರೆದೆ. ಯಾರಿಗೂ ಹೇಳಲಿಲ್ಲ. ಇಷ್ಟು ಕಾಲ ಪೊರೆದ ಕ್ಯಾಂಪಸ್ಸೇ ನಿನ್ನನ್ನು ಬಿಟ್ಟು ಹೋಗುತ್ತಿರುವೆ. ನಿನ್ನ ಈ ನೆಲದ ಸಾರವನೆಲ್ಲ ತಾಯ ಎದೆ ಹಾಲ ಕುಡಿದಂತೆ ಹೀರಿ ಅರಗಿಸಿಕೊಂಡಿರುವೆ. ಹೋಗುವೆ ನನ್ನ ಮುದ್ದಿನ ನವಿಲುದಾರಿಗಳೇ ಎಂದು ಕತ್ತಲಲ್ಲಿ ಬಂದಿದ್ದೆ”
ʻನನ್ನ ಅನಂತ ಅಸ್ಪೃಶ್ಯ ಆಕಾಶʼ ಮೊಗಳ್ಳಿ ಗಣೇಶ್‌  ಆತ್ಮಕತೆಯ  ಮೂವತ್ತೇಳನೆಯ ಕಂತು. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ