Advertisement

Tag: sukanya kanaralli

ಒಂಟಿಹೆಣ್ಣು ಮತ್ತು ಹಂಪೆಯಾತ್ರೆ: ಸುಕನ್ಯಾ ಕನಾರಳ್ಳಿ ಅಂಕಣ

ಮೂರನೆಯ ದಿನದ ಹೊತ್ತಿಗೆ ಮನಸ್ಸನ್ನು ಉಲ್ಲಾಸಕ್ಕೆ ಹಚ್ಚುವ, ಹರಿಯುವ, ಸೆಳೆಯುವ ನದಿಯನ್ನು ನೋಡಬೇಕೆನ್ನಿಸಿತ್ತು. ತುಂಗಭದ್ರೆಯ ಹರವನ್ನು ಕಲ್ಪಿಸಿಕೊಳ್ಳುತ್ತಾ ಬೆಳಿಗ್ಗೆಯೇ ಹೋಗಿ ಒಂದು ಮೂಲೆ ಹಿಡಿದು ಕೂತು ಎಷ್ಟೋ ಹೊತ್ತು ಆಕೆಯನ್ನು ಕಣ್ತುಂಬಿಕೊಂಡ ಮೇಲೆ ಸ್ವಲ್ಪ ಸಮಾಧಾನವೆನ್ನಿಸಿತ್ತು. ಕೃಷ್ಣದೇವರಾಯ ತನ್ನ ಆಳ್ವಿಕೆಯನ್ನು ಪ್ರಾರಂಭಿಸಿದ್ದ ಆನೆಗುಂದಿಗೆ ಹೋಗಬೇಕು ಎಂದು ಹೇಳಿದ್ದರೂ ನಮ್ಮ ಆಟೋವಾಲ ಕರೆದುಕೊಂಡು ಹೋಗಿದ್ದು ಐನೂರ ಎಪ್ಪತ್ತೈದು ಮೆಟ್ಟಿಲು ಹತ್ತಬೇಕಿದ್ದ ಅಂಜನಾದ್ರಿಗೆ. ಕಡಿದರೆ ಎರಡು ಆಳಾಗುವ ಒಬ್ಬ ಧಡಿಯ ಮೈಮೂತಿ ತುಂಬ ಹನುಮಂತನ ಬಣ್ಣ ಬಳಿದುಕೊಂಡು, ಸೊಂಟದ ಹಿಂದೆ ಒಂದು ಬಾಲವನ್ನು ಅಂಟಿಸಿಕೊಂಡು, ಗದೆ ಹಿಡಿದು ನಡುದಾರಿಯಲ್ಲಿ ಹಾದಿಗುಪ್ಪೆಯ ಮೇಲೇ ನಿಂತಿದ್ದ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಭಯ, ಭಕ್ತಿ, ಮತ್ತು ಬೆರಗು!: ಸುಕನ್ಯಾ ಕನಾರಳ್ಳಿ ಅಂಕಣ

ಕತ್ತಲೆಯ ಭಯದಲ್ಲಿ ಲಬೋ ಲಬೋ ಬಾಯಿ ಬಡಿಯುವಾಗಲೇ ಕಣ್ಣಿನ ಅಂಚಿನಿಂದ ಬೀದಿ ಬೆಳಕಲ್ಲಿ ಎಳೆ ಎಳೆಯಾಗಿ ಬೀಳುತ್ತಿದ್ದ ಮಳೆ ಕಾಣಿಸಿ ಅಳು ಥಟ್ಟನೆ ನಿಂತೇ ಹೋಗಿತ್ತು. ಹಿಂದೆ ಕತ್ತಲೆಯ ಪರದೆ. ಅದರ ಮೇಲೆ ನೀಳವಾಗಿ ಬೀಳುತ್ತಿದ್ದ ಹೊಳೆವ ಮಳೆಯ ವೈಭವ! ನನ್ನ ಎಳೆಯ ಮನಸ್ಸಿಗೆ ಬೆರಗೋ ಬೆರಗು. ಬುದ್ಧಿ ಬೆಳೆಯುವ ಮುಂಚೆಯೇ ಕತ್ತಲೆ, ಗುಮ್ಮ, ದೆವ್ವ ಇತ್ಯಾದಿಗಳ ಬಗ್ಗೆ ಬೆಚ್ಚಿ ಬೀಳುತ್ತಿದ್ದ ಮನಸ್ಸಿಗೆ ಕತ್ತಲೆಯ ಸೌಂದರ್ಯ ಮತ್ತು ಮಳೆಯ ಲಾಲಿತ್ಯ ತಾಗಿ ಮೌನವಾಗಿ ನಿಂತುಬಿಟ್ಟಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಕಾಸರವಳ್ಳಿ, ಕಾಯ್ಕಿಣಿ ಮತ್ತು ಟ್ರಾಫಿಕ್!: ಸುಕನ್ಯಾ ಕನಾರಳ್ಳಿ ಅಂಕಣ

ನಮ್ಮ ಅಪಾರ್ಟ್ಮೆಂಟಿನ ತನಕವೂ ಇದ್ದ ಪೊಲೀಸರನ್ನು ಕಂಡಾಗ ಮಾತ್ರ ಇದು ಜಯಂತ ಎಫೆಕ್ಟ್ ಅಲ್ಲ ಅಂತ ಅರಿವಾಗಿತ್ತು. ಸೆಕ್ಯೂರಿಟಿ ಹತ್ತಿರ ನಿಲ್ಲಿಸಿ ಏನ್ರೀ ಇದು ಅವಾಂತರ ಎಂದು ವಿಚಾರಿಸಿದೆ. ‘ಅಯ್ಯೋ, ಮೇಡಮ್. ಸಿಎಂ ಬರ್ತಾ ಇದಾರೆ. ಪಕ್ಕದ ಹೋಟೆಲ್ಲಿನಲ್ಲಿ ಪ್ರಜಾವಾಣಿ ವಾರ್ಷಿಕ ಸಾಧಕಿಯರಿಗೆ ಅಭಿನಂದನೆ ಸಮಾರಂಭ ಇದೆ. ನಿಮ್ಮ ಹೆಸರು ಸಹ ಒಂದಲ್ಲಾ ಒಂದು ದಿನ ಬರುತ್ತೆ ನೋಡ್ತಾ ಇರಿ,’ ಎಂದು ರೇಗಿಸಿದಾಗ, ‘ಆ ಹೊತ್ತಿಗೆ ನಾನು ಇರೊಲ್ಲ. ಇದ್ದರೂ ಹೋಗೊಲ್ಲ,’ ಎಂದು ಉಡಾಫೆಯಿಂದ ನಕ್ಕು ಗೇಟನ್ನು ದಾಟಿ ಒಳಹೊಕ್ಕು ಸಮಾಧಾನದ ನಿಟ್ಟುಸಿರು ಬಿಟ್ಟೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಕನ್ನಡ ಸಿನಿಮಾದ ನಿಜವಾದ ‘ಹೊಸ ಹೆಣ್ಣು’ ಹುಟ್ಟಿದ್ದು ತ್ರಿವೇಣಿಯ ‘ಬೆಳ್ಳಿಮೋಡ’ದಲ್ಲಿ: ಸುಕನ್ಯಾ ಕನಾರಳ್ಳಿ ಅಂಕಣ

ಲೀಲಾಳ ಅಣ್ಣ ಈಗ ಮಧ್ಯ ಪ್ರವೇಶಿಸಿ ಕುಟುಂಬವೆಂಬ ಸಂಸ್ಥೆಯ ‘ಸಹಜತೆ’ಯನ್ನು ಮರಳಿಸುವ ಪ್ರಯತ್ನ ಮಾಡುತ್ತಾನೆ. ಎಲ್ಲದಕ್ಕೂ ತನ್ನ ಅಪ್ಪನೇ ಕಾರಣ ಎಂದು ದೂರುತ್ತಾನೆ. ಸಾಯುವ ಮುನ್ನ ಲೀಲಾ ತನ್ನ ತಾಯಿಯನ್ನು ಕಾಣುವ ಹಂಬಲದಲ್ಲಿ ಕೊರಗುತ್ತಾಳೆ. ಅಪ್ಪ ತಾನು ಮಾಡಿದ ತಪ್ಪಿನ ಅರಿವಾಗಿ ಹುಚ್ಚು ಹಿಡಿದು ಬೀದಿ ಬೀದಿ ಅಲೆಯುತ್ತಾ ಕೊನೆಯ ಉಸಿರೆಳೆಯುತ್ತಾನೆ. ಲೀಲಾಳ ಅಣ್ಣ ಅತ್ತಿಗೆ ಮಕ್ಕಳೆಲ್ಲರೂ ‘ಒಳ್ಳೆಯ’ ಕುಟುಂಬದಲ್ಲಿ ಬದುಕಬೇಕು ಎಂದು ನೀತಿಪಾಠ ಹೇಳುವುದರೊಂದಿಗೆ ಚಿತ್ರ ಮುಗಿಯುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೊಂದನೆ ಬರಹ

Read More

ಮುನ್ನೂರು ರಾಮಾಯಣಗಳು ಮತ್ತು…: ಸುಕನ್ಯಾ ಕನಾರಳ್ಳಿ ಬರಹ

ಶತಮಾನಗಳ ಅವಧಿಯಲ್ಲಿ ಈ ಭಾಷಾಪಟ್ಟಿಯಲ್ಲಿರುವ ಕೆಲವಂತೂ ಒಂದಕ್ಕಿಂತ ಹೆಚ್ಚು ರಾಮನ ಕಥೆಗಳನ್ನು ಹೊಮ್ಮಿಸಿವೆ. ಸಂಸ್ಕೃತ ಒಂದರಲ್ಲೇ ಕಾವ್ಯ, ಪುರಾಣಗಳ ರೂಪದಲ್ಲಿ ಇಪ್ಪತ್ತೈದಕ್ಕಿಂತಲೂ ಹೆಚ್ಚು ರಾಮಕಥೆಗಳಿವೆ. ಶಾಸ್ತ್ರೀಯ ಮತ್ತು ಜಾನಪದೀಯ ನೆಲೆಗಳೆರಡರಲ್ಲೂ ನಾಟಕ, ನೃತ್ಯ-ನಾಟಕ ಮತ್ತು ಇತರ ರೂಪಗಳನ್ನು ಸೇರಿಸಿದರೆ ಅದರ ಸಂಖ್ಯೆ ಇನ್ನೂ ಹೆಚ್ಚು. ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಸಂಸ್ಕೃತಿಗಳಲ್ಲಿ ಇರುವ ಎಲ್ಲ ಶಿಲ್ಪ, ಉಬ್ಬುಶಿಲ್ಪ, ಮುಖವಾಡ, ನೆರಳಿನಾಟ, ಮತ್ತು ಚಕ್ಕಳಗೊಂಬೆ ಪ್ರದರ್ಶನಗಳನ್ನೂ ಸೇರಿಸಬೇಕು.
ಎ. ಕೆ. ರಾಮಾನುಜನ್ನರ ಸಂಶೋಧನಾ ಲೇಖನ ‘ಮುನ್ನೂರು ರಾಮಾಯಣಗಳು, ಐದು ಉದಾಹರಣೆಗಳು ಮತ್ತು ಅನು-ವಾದದ ಬಗೆಗಿನ ಮೂರು ಚಿಂತನೆಗಳು’ ಕುರಿತು ಸುಕನ್ಯಾ ಕನಾರಳ್ಳಿ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ