Advertisement

Tag: woman

ಹೆಣ್ಣಿನ ನಾಲ್ಕು ಕಷ್ಟಗಳು – ಅಂದು, ಇಂದು: ಡಾ. ಎಲ್. ಜಿ. ಮೀರಾ ಅಂಕಣ

ಪಿತೃಪ್ರಧಾನ ವ್ಯವಸ್ಥೆಯ ಬೇರುಗಳು ನಾವು ಅಂದುಕೊಂಡದ್ದಕ್ಕಿಂತ ಬಹಳ ಆಳವಾಗಿರುತ್ತವೆ. ಅವು ಗಂಡಸರ ಮನಸ್ಸಿನಲ್ಲಿ ಮಾತ್ರವಲ್ಲ ಹೆಂಗಸರ ಮನಸ್ಸಿನಲ್ಲೂ ಇರುತ್ತವೆ! ಏಕೆಂದರೆ ಸಾಮಾಜಿಕ ಮೌಲ್ಯಗಳ ಅಂತರಂಗೀಕರಣದ ಸ್ವರೂಪ ಹಾಗಿರುತ್ತದೆ. ಹೀಗಾಗಿ `ಉರಿಯದ ಒಲೆ, ಏಳದ ದೋಸೆ, ಬಯ್ಯುವ ಗಂಡ, ಅಳುವ ಮಗು’, ಪದಪುಂಜಗಳು ಇಂದಿನ ಹೆಣ್ಣಿನ ಮಟ್ಟಿಗೆ ಅನ್ವಯಿಸುತ್ತವೆಯೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತನೆಯ ಬರಹ

Read More

ಹೆಣ್ಣಿನ ಉಡುಪು ಎಂಬ ಯುದ್ಧಭೂಮಿ: ಡಾ.ಎಲ್.ಜಿ.ಮೀರಾ

ನಾವು ಹೆಂಗಸರು ಹಲವು ಬಗೆಯಲ್ಲಿ ಸೃಷ್ಟಿಯಾಗಿರುತ್ತೇವೆ, ಅಲ್ಲದೆ ವಯಸ್ಸು, ಕಾಲ, ಸಂದರ್ಭ ಬದಲಾದಂತೆ ನಮ್ಮ ಆಯ್ಕೆಗಳು ಬದಲಾಗುತ್ತಿರುತ್ತವೆ. ನಮ್ಮಲ್ಲಿ ಅಲಂಕಾರದ ಗಾಢ ಅಭಿರುಚಿ ಇರುವವರು ಇದ್ದಂತೆ ಅದರ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲದವರೂ ಇರುತ್ತೇವೆ. ನಮಗೆ ಬೇಸರ ತರಿಸುವ ವಿಷಯ ಏನೆಂದರೆ ನಮ್ಮ ಒಳಗಿನ ಗುಣ, ಜೀವನದೃಷ್ಟಿ, ಚಿಂತನೆ ಇವುಗಳಿಗೆ ಪ್ರಾಮುಖ್ಯ ಕೊಡದೆ ಕೇವಲ ಸೀರೆ, ಒಡವೆ, ಮುಖಬಣ್ಣಗಳಿಂದ ನಮ್ಮನ್ನು ಅಳೆದುಬಿಡುವ ಸಮಾಜದ ಧೋರಣೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಯುವಸಂಧಾನಕಿ ಅನಲೆ ಮತ್ತು ಯುದ್ಧವಿರೋಧಿ ಆ್ಯನ್: ಸುಮಾವೀಣಾ ಬರಹ

ನಮಗಿಲ್ಲಿ ಅನಲೆ ಯುದ್ಧದ ನೇರ ಭಾಗಿತ್ವದಿಂದ ನೋವನ್ನು ಅನುಭವಿಸಿ ಹೆಣ್ಣಿನ ಸಲುವಾದ ಹೋರಾಟವನ್ನು ಮಾಡಲು ಆಲೋಚಿಸಿ ಯುದ್ಧವನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಾಳೆ. ಆ್ಯನ್ ಫ್ರಾಂಕ್ ನೇರವಾಗಿ ಯುದ್ಧಕ್ಕೆ ಮುಖಾಮುಖಿಯಾಗದೆ ಇದ್ದರು ಎರಡನೆ ಮಹಾಯುದ್ಧದ ದುಷ್ಟಪರಿಣಾಮಕ್ಕೆ ಮುಖಾಮುಖಿಯಾಗುತ್ತಾಳೆ. ತನ್ನ ಜನಾಂಗಕ್ಕಾದ ಶೋಷಣೆಯನ್ನು ತನಗಾದ ಯಾತನೆಯನ್ನು ಅಳಿಸಲಾಗುವ ನಾಶಪಡಿಸಬಹುದಾದ ಕಾಗದದ ಮೆಲೆ ಭರವಸೆ ಇಟ್ಟು ಬರೆಯುವುದು ಸಾಧನೆಯೇ ಅನ್ನಿಸುತ್ತದೆ.
ಅನಲೆ ಹಾಗೂ ಆನ್‌ ಫ್ರಾಂಕ್‌ ಎಂಬ ಇಬ್ಬರು ವಿಶಿಷ್ಟ ವ್ಯಕ್ತಿಗಳ ಕುರಿತು ಸುಮಾವೀಣಾ ಬರಹ

Read More

ಬನ್ನಿ.. ಸ್ವಯಂಪ್ರಭೆಯರನ್ನು ಸಂಭ್ರಮಾಚರಿಸೋಣ: ಎಲ್.ಜಿ.ಮೀರಾ ಅಂಕಣ

ಸಾಂಪ್ರದಾಯಿಕ ಸಮಾಜದ ಊಹೆಗೆ ನಿಲುಕದ ಇನ್ನೊಂದು ಜಿಗಿತವನ್ನು ನಮ್ಮ ಹೆಣ್ಣುಮಕ್ಕಳು ಈಗ ಮಾಡುತ್ತಿದ್ದಾರೆ. ಅದೇನೆಂದರೆ ಲಿಂಗ ಎಂಬುದು ಕೇವಲ ಗಂಡು-ಹೆಣ್ಣು ಎಂದು ಎರಡು ತುದಿಗಳಲ್ಲ, ಗಂಡಿನೊಳಗೆ ಹೆಣ್ಣು ಮತ್ತು ಹೆಣ್ಣಿನೊಳಗೆ ಗಂಡು ಬೇರೆ ಬೇರೆ ಪ್ರಮಾಣಗಳಲ್ಲಿ ಇರಬಹುದು, ಹೀಗಾಗಿ ಲಿಂಗ ಎಂಬುದು ಶ್ರೇಣಿ ಎಂಬ ಹೊಸ ತಿಳುವಳಿಕೆಯನ್ನು ತಮ್ಮ ನಡೆನುಡಿ, ಇರಿಸರಿಕೆ, ಹೋರಾಟಗಳಿಂದ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹತ್ತನೆಯ ಬರಹ

Read More

“ಹಾದಿಖರ್ಚಿಗೆ ನಿನ್ನ ಮುದ್ದಿರಲಿ ಸಾಕು”: ಎಸ್ ನಾಗಶ್ರೀ ಅಜಯ್ ಅಂಕಣ

ನೋಡಲು ಸುಂದರವಾಗಿದ್ದರೆ ಅವರು ಕೆಟ್ಟವರೇ ಆಗಿರಬೇಕು. ಅಹಂಕಾರಿ, ಸ್ವಾರ್ಥಿ, ಸಮಯಸಾಧಕಿ, ಅವಕಾಶವಾದಿಯೇ ಆಗಿರಬೇಕೆಂಬ ಮೌಢ್ಯ ಉಸಿರುಗಟ್ಟಿಸುತ್ತದೆ. ದೇವರು ಕೊಟ್ಟ ರೂಪ. ಅದರಲ್ಲಿ ಅವರದ್ದೇನು ತಪ್ಪು? ಎಂದು ನೋಡಲು ಸುಮಾರಾಗಿರುವವರ ಪರ ವಹಿಸುವ ಸಮಾಜವೇ, ಚೆಂದ ಇರುವವರನ್ನು “ದೇವರು ಕೊಟ್ಟ ರೂಪ. ಅವರನ್ನೇಕೆ ಶಿಕ್ಷಿಸಬೇಕು?” ಎಂದು ಯೋಚಿಸುವುದಿಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ