Advertisement

Tag: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್

 ಬಾಂಧವ್ಯದ ಕುಲುಮೆಯಲ್ಲಿ ಅರಳುವ ಸ್ವಾತಂತ್ರ್ಯದ ಓಟ…: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಶಿಬಿರದಲ್ಲಿನ ಜನರ ಆತಂಕ ಭಾರತ ಸರ್ಕಾರದ ಗಾಳಿಗೋಪುರದಂತ ಆಶ್ವಾಸನೆಗಳ ಜೊತೆಗೆ ‘ಬೋಲೋ ಭಾರತ್ ಮಾತಾ ಕಿ ಜೈ’ ಎಂಬ ಕೂಗು, ರಣಭೀಕರದಂತೆ ಕೇಳಿಸುತ್ತಿತ್ತು. ಪಾಕಿಸ್ತಾನದಲ್ಲಿ ಗಳಿಸಿದ ಆಸ್ತಿಯನ್ನು ಅಲ್ಲೇ ಬಿಟ್ಟು ಬಂದವರ ನೋವು ಹೇಳತೀರದು. ಮತ್ತೆ ಭಾರತದಲ್ಲಿ ಹೊಸ ಜೀವನ ಕಟ್ಟಿಕೊಳ್ಳಬೇಕೆಂಬ ಹೆಜ್ಜೆಯ ಭಾರ ಅಧಿಕವಾಗಿತ್ತು. ಆಸ್ತಿ ಪಾಸ್ತಿಗಿಂತ ಹಿರಿಯರು ಬಾಳಿ ಬದುಕಿದ ಮನೆಯನ್ನು ಬಿಟ್ಟು ಬಂದ ಹಿಂದೂ ಮುಸ್ಲಿಮರ ಸಂಕಟದ ಸ್ಥಿತಿ.
“ಸ್ವಾತಂತ್ರ್ಯದ ಓಟ…” ನಾಟಕದ ಕುರಿತು ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

Read More

“ಕಳೆದು ಹೋದವರ ಹಾಡು” ಗಾಳಿಗಿಟ್ಟ ದೀಪಗಳ  ಪ್ರತಿಬಿಂಬ!: ಡಾ. ರಾಜೇಂದ್ರಕುಮಾರ್  ಕೆ. ಮುದ್ನಾಳ್ ಯಾದಗಿರಿ

‘ನಾನು ಕುಣಿಯುತ್ತೇನೆ, ಬಾಗುತ್ತೇನೆ, ನಡೆಯುತ್ತೇನೆ, ನಾನು ಶೃಂಗಾರ ಮಾಡಿಕೊಳ್ಳುತ್ತೇನೆ ಏನ್ ಈವಾಗ್’ ಎಂಬ ಧೋರಣೆ ಬಲವಾಗುವುದಕ್ಕೆ ತೊಡಗಿದಾಗ ಸಮಾಜವನ್ನು ಎದುರಿಸುವ ಶಕ್ತಿ ನಿರ್ಮಾಣವಾಗುತ್ತಾ ಸಾಗುತ್ತದೆ. ಇಲ್ಲಿ ತಾವೇ ಆತ್ಮಸ್ಥೈರ್ಯವನ್ನು ತಂದುಕೊಳ್ಳಬೇಕು. ತಾವೇ ಸಂತೈಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅಲ್ಪಸಂಖ್ಯಾತರ ಬದುಕು ಕೆಂಡದ ಹಾದಿಯ ಮೇಲೆ ನಡೆದಂತೆ ಎಂಬ ನಿಲುವು ಪ್ರೇಕ್ಷಕರದಾಯಿತು.
ಮಂಗಳ ಎನ್. ನಿರ್ದೇಶನದ “ಕಳೆದು ಹೋದವರ ಹಾಡು” ನಾಟಕದ ಕುರಿತು ಡಾ. ರಾಜೇಂದ್ರಕುಮಾರ್ ಕೆ. ಮುದ್ನಾಳ್ ಬರಹ

Read More

ವಿಫುಲ ರೂಪ ಧಾರಿಣಿ ಹುಡುಕಾಡುತಿದೆ ಮನುಷ್ಯ ಪ್ರೀತಿಗಾಗಿ….: ಡಾ. ರಾಜೇಂದ್ರಕುಮಾರ್  ಕೆ. ಮುದ್ನಾಳ್ ಬರಹ

ಇಂದಿನ ಆಧುನಿಕ ತಂತ್ರಜ್ಞಾನ ಕೃತಕ ಬುದ್ಧಿಮತ್ತೆಯಲ್ಲಿ ನಿಸರ್ಗದ ಚೈತನ್ಯವನ್ನು ನೋಡುವುದನ್ನು ಮರೆತುಬಿಟ್ಟಿದ್ದೇವೆ. ಗುಬ್ಬಿ ಗೂಡು ಕಟ್ಟುವುದನ್ನು,ಸೂರ್ಯೋದಯ ಚಂದ್ರೋದಯಗಳ ನಯನ ಮನೋಹರ ದೃಶ್ಯವನ್ನು, ಕರು ಆಕಳ ಕೆಚ್ಚಲನ್ನು ಹುಡುಕುವ ಹೊತ್ತನ್ನು ಮರೆತುಬಿಟ್ಟಿದ್ದೇವೆ. ಆಕಾಶದಿಂದ ಜಾರುವ ಮಳೆ, ಕಾಮನಬಿಲ್ಲು, ಇಬ್ಬನಿಯ ರೂಪ, ಪ್ರೀತಿ -ವಿರಹಗಳ ನಡುವಿನ ಬಾಂಧವ್ಯ, ಮೌನ ರಹಸ್ಯಗಳ ನಡುವಿನ ವಿಸ್ಮಯ. ಇವುಗಳ ನಡುವಿನ ಪ್ರೀತಿಯನ್ನು ಗಳಿಸುವ, ಬೆಳೆಸುವ, ಉಳಿಸುವ ದಾಹ ನಮ್ಮದಾಗಲಿ ಎಂಬ ಆಶಯ ವಿಫುಲ ರೂಪ ಧಾರಣಿಯದು. ಏಕೆಂದರೆ ‘ದಾರಿ ನೂರಾರಿವೆ ಬಿಡುಗಡೆಯ ಬೆಳಕಿನ ಅರಮನೆಗೆ’ ಎಂಬ ಸಾಲುಗಳು ನಮ್ಮಲ್ಲಿ ಪ್ರೀತಿಯ ಬುಗ್ಗೆ ಚಿಮ್ಮುವಂತಾಗಲಿ.
ಜಿ.ಎಸ್.‌ ಶಿವರುದ್ರಪ್ಪನವರ ಕವಿತೆಗಳನ್ನು ಆಧರಿಸಿದ ‘ವಿಫುಲ ರೂಪ ದಾರಿಣಿ’ ಕಾವ್ಯ ಅಭಿನಯದ ಕುರಿತು ಡಾ. ರಾಜೇಂದ್ರಕುಮಾರ್ ಕೆ. ಮುದ್ನಾಳ್ ಬರಹ

Read More

ವಿಷಮಯ ವಿಶ್ವದ ವಿಷಾದ ಗಾಥೆ: ನಾಗೇಶ್‌ ಹೆಗಡೆ ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ತನ್ನ ಮಕ್ಕಳಿಗಾಗಿ ಆಸ್ತಿ, ಐಶ್ವರ್ಯ ಸಂಪತ್ತುಗಳನ್ನೆಲ್ಲ ಮಾಡುತ್ತಾನೆ. ಆದರೆ ಪ್ರಕೃತಿ ಮಾನವನಿಗೆ ಕೊಟ್ಟ ನಿಸರ್ಗದತ್ತವಾದ ಸಂಪತ್ತನ್ನೆಲ್ಲ ಲೂಟಿ ಮಾಡುತ್ತಿದ್ದಾನೆ. ನಾವು ಪ್ರಕೃತಿಗೆ ಕೊಡಬೇಕಾದ ಗೌರವವನ್ನು ಕೊಡದೆ ಅವಿಧೇಯತೆಯಿಂದ ನಡೆಸಿಕೊಳ್ಳುತ್ತಾ ಬಂದಿದ್ದೇವೆ. ಪ್ರಕೃತಿಯ ಮುನಿಸನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೇ, ಅದು ಸಾಧ್ಯವೇ? ಪ್ರಕೃತಿಯ ವಿರುದ್ಧ ಮನುಷ್ಯ ಗೆದ್ದಿದ್ದೇ ಆದರೆ ಮುಂದೆ ಅವನಿಗೆ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಚಿಂತಕ ಯೂಜಿನ್ ಶುಮಾಕರ್‌ರ ಮಾತನ್ನು ಲೇಖಕರು ಉಲ್ಲೇಖಿಸುತ್ತಾರೆ.
ನಾಗೇಶ್‌ ಹೆಗಡೆ ಬರೆದ ‘ಪರಿಸರದ ಮಹಾ ದುರಂತಗಳು’ ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ

Read More

ಸಾಂಸ್ಕೃತಿಕ ಸಂಘರ್ಷಗಳ ಕುಲುಮೆಯ ‘ರಕ್ತ ವಿಲಾಪ’: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಸತ್ಯ ಎಲ್ಲರಿಗೂ ಕಹಿಯಾಗಿರುವುದು. ಆದರೆ ಅದರ ಸತ್ವ ಅರಿತವನು ಸಂಶೋಧನೆಗೆ ನಿಷ್ಠೆ ತೋರಿಸುತ್ತಾನೆ. ಅರಿಯದವನು ಶತ್ರುವಾಗುತ್ತಾನೆ. ಇದೇ ಪರಿಸ್ಥಿತಿ ಯುವಕನದ್ದು ಹಾಗೂ ಸಮಾಜದ್ದು ಎಂದು ಘಂಟಿಯವರು ಹಾಗೂ ವಿಸಾಜಿಯವರು ಘಂಟಾಘೋಷವಾಗಿ ಪಾತ್ರಗಳ ಮೂಲಕ ಮಾತಾಡಿಸುತ್ತಾರೆ.
ವಿಕ್ರಮ ವಿಸಾಜಿ ರಚಿತ, ಶಂಕ್ರಯ್ಯ ಆರ್ ಗಂಟಿ ನಿರ್ದೇಶನದ ‘ರಕ್ತ ವಿಲಾಪ’ ನಾಟಕದ ಕುರಿತು ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ