Advertisement
ಆಶಾ ಜಗದೀಶ್‌ ಬರೆದ ಈ ದಿನದ ಕವಿತೆ

ಆಶಾ ಜಗದೀಶ್‌ ಬರೆದ ಈ ದಿನದ ಕವಿತೆ

ಬಿಟ್ಟು ಬಿಡು ನನ್ನನು…

ಒಂದು ಬಗೆಹರಿಯದ ಕದನ
ವಿರಾಮವಿಲ್ಲದೆ ನಡೆಯುತ್ತಿರುವಾಗ
ನೀನು ಮುಂಜಾವಿನ ಬೆಳಕಲ್ಲಿ
ಮಂಜಿನಂಥ ಹತ್ತಿಯಿಂದ ನೂಲ
ತೆಗೆಯುತ್ತಲಿದ್ದೆ
ಬೆಂದ ಬೀಜವನ್ನು ಉತ್ತು ಬೆಳೆಸುವ
ಹುಕಿ ಹುಟ್ಟಿದವನಂತೆ
ಸಂಧಾನ ಬಾವುಟದ ಬಟ್ಟೆಯ
ನೇಯುವ ಸಲುವಾಗಿ

ಬಾನಿಗೆ ತೂಗುಬಿಟ್ಟ ತೂಗುದೀಪದ
ಸೊಡರು ತುಯ್ಯುತ್ತಲಿರುವಾಗ
ಒಂದು ಜೀವಂತ ಗ್ರಹ ಮಂಡಲನ್ನು
ಬಯಸುತ್ತಿದೆ ಪ್ರತಿ ನಕ್ಷತ್ರವೂ
ಎಷ್ಟೇ ವೇಗವಿರಲಿ ಎಷ್ಟೇ ದೈತ್ಯನಿರಲಿ
ಒಂದು ಉಸಿರಿನ ಚಲನೆಯಿಲ್ಲದೆ
ಜೀವಂತವಾಗುವುದಾರೂ ಹೇಗೆ
ನಿನ್ನ ಒಂದು ಸ್ಪರ್ಶವಾದರೂ
ತಂಗಾಳಿಯ ಹೊಟ್ಟೆ ಹೊಕ್ಕು
ಮೈತಾಗದಿದ್ದರೆ…

ರೇಖೆಗಳೇ ಇಲ್ಲದ ಹಸ್ತಕ್ಕೆ ಯಾವ ಭವಿಷ್ಯ
ನೀನು ತೋರಿಸುವ ನೆತ್ತರಿನ ಕೂಪಕ್ಕೆ
ನಾ ಜಿಗಿಯಲಾರೆ..
ಬಿಟ್ಟು ಬಿಡು ನನ್ನನು ನನ್ನ ಪಾಡಿಗೆ
ಕನಸುಗಳಿಗೆ ಕನವರಿಕೆಯ ತೋರಣ ಕಟ್ಟಿ
ನಿಲುವುಗನ್ನಡಿಯ ಮುಂದೆ
ಹುಬ್ಬು ತೀಡಿಕೊಳ್ಳುತ್ತೇನೆ
ಸ್ವಲ್ಪವೇ ಲಿಪ್ಸ್ಟಿಕ್ ಹಚ್ಚಿಕೊಳ್ಳುತ್ತಾ
ಹರೆಯವನ್ನು ಹಾರಿಬಿಡುತ್ತೇನೆ
ಕ್ಷಣಕಾಲದ ಭಂಗುರವನ್ನು
ಹಿಡಿದಿಡುವ ಸಾಹಸಿಯಂತೆ

About The Author

ಆಶಾ ಜಗದೀಶ್

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ "ಮೌನ ತಂಬೂರಿ."

2 Comments

  1. ಫಯಾಜ್

    ತುಂಬಾ ಚೆನ್ನಾಗಿದೆ

    Reply
  2. Roopashri

    👌👌👌

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ