Advertisement
ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್

ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್

ಬದುಕಲು

ಬಡವಿ ನಾನು, ಗೊತ್ತು ಮಹಲು ಕಟ್ಟಿಸಲು ಅವನಲ್ಲೂ ಹಣವಿಲ್ಲ
ಸಾಕು ಕುಚಲಕ್ಕಿ ಗಂಜಿ, ನಂಜಲು ಸುಟ್ಟ ಒಣಮೀನು ಬದುಕಲು

ಕನಸಲ್ಲೂ ಹತ್ತಿರ ಸುಳಿಯುವುದಿಲ್ಲ ತಾಜ್ ಮಹಲಿನ ನೆರಳು
ಸಾರಿಸಿದ ಹಟ್ಟಿಗಿಂತ ಬೇಕೆ ಪ್ರೀತಿಯ ಪವನು ಬದುಕಲು

ಹೇಳದೇ ಹೊರಟು ಬಿಡಬೇಡ, ದಾರಿ ಕಾಯುತ್ತೇನೆ
ಮಾತೇನೂ ಬೇಕಿಲ್ಲ ಕಣ್ಣಂಚಿನ ನೋಟ ಸಾಕು ನಾನು ಬದುಕಲು

ವಸ್ತ್ರ ಒಡವೆ ಚಿನ್ನ ಬೆಳ್ಳಿ ಬೇಕಂದು ಕುರುಬುವುದಾದರೂ ಏಕೆ
ಯಾರೂ ಕಾಣದಂತೆ ಕೆನ್ನೆಗಿತ್ತ ಮುತ್ತಿನ ಬೆಲೆ ಕಡಿಮೆಯೇನು ಬದುಕಲು

ತಾಳೆ ಮರದಡಿ ಕುಳಿತು ಮಜ್ಜಿಗೆಯ ಕನಸು ಕಾಣಬೇಡ
ಮದಿರೆಯ ಹೊರತಾಗಿ ಮತ್ತೇನೂ ಬೇಡ ಅವನು ಬದುಕಲು

ಬಿಳಿಯ ಮೋಡವೊಂದು ತೇಲು ಬಂದಿದೆ ನಿನ್ನೂರಿಂದ
ಗರ್ಭದೊಳಗೆ ಮೊಳೆತ ಬಣ್ಣದ ಕನಸನು ಬದುಕಲು

ಬದುಕಿರುವ ನಾಕು ದಿನವಾದರೂ ಜೊತೆಗೆ ಹೆಜ್ಜೆಯಿಡು
ತಂದು ಕೊಡಲು ಕೇಳುವುದಿಲ್ಲ ಜಗ ಬೆಳಗುವ ಭಾನು ಬದುಕಲು

ಕವಯತ್ರಿ ಶ್ರೀದೇವಿ ಕೆರೆಮನೆ ಮೂಲತಃ ಅಂಕೋಲಾದವರು
ಈಗ ಕಾರವಾರದ ಚಿತ್ತಾಕ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ.
ಒಟ್ಟೂ ಹತ್ತು ಪುಸ್ತಕಗಳು ಪ್ರಕಟಗೊಂಡಿವೆ.
ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. Kotresh T A M

    ಚೆಂದ ಇದೆ ಮೇಡಂ

    Reply
    • Shreedevi Keremane

      ಥ್ಯಾಂಕ್ಯೂ

      Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ