Advertisement

ಅಂಕಣ

ಅಲ್ಪ ಕಾಲದ ಗೆಳೆಯರು: ಮಾರುತಿ ಗೋಪಿಕುಂಟೆ ಸರಣಿ

ಅಲ್ಪ ಕಾಲದ ಗೆಳೆಯರು: ಮಾರುತಿ ಗೋಪಿಕುಂಟೆ ಸರಣಿ

ಅವನು ಎರಡೂ ಬ್ಯಾಟುಗಳನ್ನು ನನಗೆ ಕೊಟ್ಟ. ಆ ಬ್ಯಾಟುಗಳೊಂದಿಗೆ ಮನೆಯಲ್ಲಿ ತಮ್ಮನೊಂದಿಗೆ ಆಡುತ್ತಿದ್ದೆ. ಹದಿನೈದು ದಿನವಾದರೂ ಶಾಲೆಗೆ ಆತ ಬರಲಿಲ್ಲ. ಹೊಸದುರ್ಗದ ಕಡೆ ಯಾವುದೊ ಊರಿಗೆ ಹೋದರು ಅಂತ ಗೊತ್ತಾಯ್ತು. ಅಲ್ಲಿನ ಶಾಲೆಗೆ ನೇರವಾಗಿ ವರ್ಗಾವಣೆ ಪತ್ರವನ್ನು ತರಿಸಿಕೊಂಡಿದ್ದರು. ಅಯ್ಯೋ ಆತನ ಪೂರ್ಣ ವಿಳಾಸವು ಇರಲಿಲ್ಲ. ಶಾಲೆಯಲ್ಲಿ ಕೇರಾಫ್‌ ವಿಳಾಸವನ್ನೆ ಕೊಟ್ಟಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೆಂಟನೆಯ ಕಂತು

read more
ನೋಡಿ ಕಲಿ…: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ನೋಡಿ ಕಲಿ…: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಎಷ್ಟೋ ವರ್ಷ ಹಳೆಯದಾದ ಮರಗಳನ್ನು ತೋಟ ಮಾಡುವಾಗ ಕಡಿದು ಹಾಕುವವರನ್ನು ಕಾಣುತ್ತೇವೆ. ಆ ಮರಗಳು ಹಿಂದಿನವರು ಹಾಕಿ ಪೋಷಿಸಿದ್ದು. ಅವುಗಳು ಗಾಳಿ ತಡೆಗೆ, ನೀರು ಭೂಮಿಯೊಳಕ್ಕೆ ಇಂಗುವುದಕ್ಕೆ, ಮಣ್ಣಿನ ಸವೆತದ ತಡೆಗೆ, ಗೊಬ್ಬರಕ್ಕೆ ಹಾಗೂ ಮುಚ್ಚಿಗೆಗೆ ಎಷ್ಟೊಂದು ಸಹಾಯ ಮಾಡಬಲ್ಲವು. ಆದರೂ ಅರಿಯದೆಯೋ, ಅರಿತೋ ಅವುಗಳನ್ನು ಉಳಿಸಿಕೊಳ್ಳುವ ಜನರು ತುಂಬಾ ಕಡಿಮೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

read more
ವಸಂತನು ತರುವ ಹಬ್ಬಗಳ ಬಣ್ಣದೋಕುಳಿ!: ವಿನತೆ ಶರ್ಮ ಅಂಕಣ

ವಸಂತನು ತರುವ ಹಬ್ಬಗಳ ಬಣ್ಣದೋಕುಳಿ!: ವಿನತೆ ಶರ್ಮ ಅಂಕಣ

ಈ ಸೌತ್ ಬ್ಯಾಂಕ್ ಎನ್ನುವುದು ಒಂದು ಮನರಂಜನಾ ತಾಣವಾಗಿ ರೂಪುಗೊಂಡಿದೆ. ಮಕ್ಕಳು, ದೊಡ್ಡವರು, ಕುಟುಂಬಗಳು, ಪ್ರೇಮಿಗಳು, ವಿಹಾರಿಗಳಿಗೆ ಎಲ್ಲರಿಗೂ ಇಲ್ಲಿ ಅವರವರಿಗೆ ಬೇಕಾದಂತೆ ಹುಲ್ಲುಗಾವಲು, ನಡಿಗೆ ಹಾದಿ, ತರಕಾರಿ ಕೈತೋಟ, ಹೂತೋಟ, ಮಕ್ಕಳನ್ನು ಮನರಂಜಿಸುವ ನೀರಿನ ಕಾರಂಜಿ, ಈಜುಕೊಳ ಮುಂತಾದವು, ದೊಡ್ಡವರಿಗೆ ಇರುವ ಸರೋವರ ಎಲ್ಲವೂ ಇದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”ದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ವಿವಿಧ ಹಬ್ಬಗಳ ಕುರಿತ ಬರಹ ನಿಮ್ಮ ಓದಿಗೆ

read more
ವಿಶ್ವ ಕಪ್ 2023ರ ಮಾಹಿತಿಗಳು: ಇ.ಆರ್.‌ ರಾಮಚಂದ್ರನ್‌ ಅಂಕಣ

ವಿಶ್ವ ಕಪ್ 2023ರ ಮಾಹಿತಿಗಳು: ಇ.ಆರ್.‌ ರಾಮಚಂದ್ರನ್‌ ಅಂಕಣ

ಭಾರತ ಮತ್ತು ಶ್ರೀಲಂಕದ ಮ್ಯಾಚ್ ಕಡಿಮೆ ಸ್ಕೋರ್‌ಗಳಾಗಿದ್ಯೂ ಆಟ ಬಹಳ ರೋಮಾಂಚನವಾಗಿತ್ತು. ಭಾರತ ಎಂದಿನಂತೆ ಚೆನ್ನಾಗಿ ಶುರುಮಾಡಿ ಇದ್ದಕ್ಕಿದಂತೆ ತನ್ನ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. 20 ವರ್ಷದ ದ್ಯೂನಿತ್ ವೆಲ್ಲಲಾಗೆ ತನ್ನ ಎಡಗೈ ಸ್ಪಿನ್ ಬೋಲಿಂಗ್‌ನಿಂದ ಕೇವಲ ಮೂರು ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸಿದನು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ

read more
ಹಳ್ಳಿಗೂ, ಪಟ್ಟಣಕ್ಕೂ ನಡುವೆ ಸೇತುವೆ ಕಟ್ಟಬೇಕಿದೆ : ಗುರುಪ್ರಸಾದ ಕುರ್ತಕೋಟಿ

ಹಳ್ಳಿಗೂ, ಪಟ್ಟಣಕ್ಕೂ ನಡುವೆ ಸೇತುವೆ ಕಟ್ಟಬೇಕಿದೆ : ಗುರುಪ್ರಸಾದ ಕುರ್ತಕೋಟಿ

ನಾವು ಮೊಟ್ಟ ಮೊದಲು ಬಂದಾಗ ನಮಗೆ ಆಶ್ರಯ ಕೊಟ್ಟ ಶಂಭುಲಿಂಗ ಹೆಗಡೆಯವರ ಜೊತೆಗಿನ ಒಡನಾಟದ ತರಹವೆ. ಅವರ ಮಕ್ಕಳ ತರಹವೆ ನಾವಿದ್ದೆವಲ್ಲ. ಮೊದಲು ಒಂದು ಒಪ್ಪಂದ ಅಂತ ಶುರುವಾದರೂ, ಮುಂದಿನ ದಿನಗಳಲ್ಲಿ ಅಲ್ಲೊಂದು ಬಾಂಧವ್ಯ ಏರ್ಪಡುವ ಸಾಧ್ಯತೆಗಳು ಜಾಸ್ತಿ ಇದ್ದವು. ಈಗಾಗಲೇ ವೃದ್ಧರಾಗಿರುವ ಮಾಲೀಕರ ಅವಶ್ಯಕತೆಗಳೂ ಕೂಡ ಅಷ್ಟೆಲ್ಲಾ ಇರುವುದಿಲ್ಲ.
ಗುರುಪ್ರಸಾದ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

read more
ಏಷ್ಯ ಕಪ್ ಕುರಿತ ಮಾಹಿತಿಗಳು: ಇ.ಆರ್. ರಾಮಚಂದ್ರನ್ ಅಂಕಣ

ಏಷ್ಯ ಕಪ್ ಕುರಿತ ಮಾಹಿತಿಗಳು: ಇ.ಆರ್. ರಾಮಚಂದ್ರನ್ ಅಂಕಣ

ಭಾರತ ಪಾಕಿಸ್ಥಾನ ಮತ್ತು ಶ್ರೀಲಂಕ 1984ರಿಂದ ಏಷ್ಯ ಕಪ್‌ನಲ್ಲಿ ಭಾಗವಹಿಸಿದೆ. 1986ರಲ್ಲಿ ಬಾಂಗ್ಲಾದೇಶ ಸೇರಿಕೊಂಡಿತು. ಹಾಂಕಾಂಗ್ ಮತ್ತು ಯುಏಇ 2004ರಲ್ಲಿ ಸೇರಿಕೊಂಡಿತು. ಆಫ್ಘಾನಿಸ್ಥಾನ 2014ರಲ್ಲಿ ಮತ್ತು ಈ ವರ್ಷ 2023ರಲ್ಲಿ ನೇಪಾಳ ಸೇರಲಿದೆ. ಬಹಳ ಕಡಿಮೆ ಸಮಯದಲ್ಲಿಯೇ ಆಫ್ಘಾನಿಸ್ಥಾನ ಒಳ್ಳೆಯ ಟೀಮ್ ಎಂದು ಹೆಸರು ಗಳಿಸಿದೆ.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಏಷ್ಯ ಕಪ್‌ ಕುರಿತ ಬರಹ ನಿಮ್ಮ ಓದಿಗೆ

read more
ಕೃಷಿ ಪೋಷಕರೂ ಇರುತ್ತಾರೆ ಅಲ್ಲಲ್ಲಿ!.. : ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಕೃಷಿ ಪೋಷಕರೂ ಇರುತ್ತಾರೆ ಅಲ್ಲಲ್ಲಿ!.. : ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ನನ್ನಂತೆಯೇ ಮೊದಲ ಸಲ ಕೃಷಿಗೆ ಇಳಿಯುವವರು ಮೊದಮೊದಲು ತುಂಬಾ ಹಿಂಸೆ ಪಡುವುದಂತೂ ನಿಜ, ಆದರೆ ಎಷ್ಟು ದಿನ ತಾಳುತ್ತಾರೆ, ಎಷ್ಟು ಯಶಸ್ವಿಯಾಗುತ್ತಾರೆ ಎಂಬುದು ಆ ನಶೆಯ ತೀವ್ರತೆಯ ಮೇಲೆ, ಹಾಗೂ ನಮ್ಮ ಯಶಸ್ಸಿನ ಮಾನದಂಡದ ಮೇಲೆ ಅವಲಂಬಿಸಿದೆ. ನಾನು ಕೂಡ ಕೃಷಿಯಲ್ಲಿ ಇನ್ನೂ ಎಷ್ಟು ವರ್ಷಗಳು ಉತ್ಸಾಹ ತೋರುತ್ತೇನೋ, ಎಷ್ಟು...

read more
ದಕ್ಷಿಣ ಆಫ್ರಿಕದ ಕ್ರಿಕೆಟ್ ಇತಿಹಾಸ: ಇ.ಆರ್. ರಾಮಚಂದ್ರನ್ ಅಂಕಣ

ದಕ್ಷಿಣ ಆಫ್ರಿಕದ ಕ್ರಿಕೆಟ್ ಇತಿಹಾಸ: ಇ.ಆರ್. ರಾಮಚಂದ್ರನ್ ಅಂಕಣ

1968ರಲ್ಲಿ ಒಬ್ಬ ದಕ್ಷಿಣ ಆಫ್ರಿಕಾದ ಆಟಗಾರ ಬಾಸಿಲ್ ಡಾಲಿವೀರ, ಇಂಗ್ಲೆಂಡಿನಲ್ಲಿ ಚೆನ್ನಾಗಿ ಆಡಿ ಅವರ ಪರಿಶ್ರಮದಿಂದ ಮುಂದೆ ಬಂದಾಗ ಇಂಗ್ಲೆಂಡ್ ಅವರನ್ನು ದಕ್ಷಿಣ ಆಫ್ರಿಕಾದ ಪ್ರವಾಸಕ್ಕೆ ಆಯ್ಕೆ ಮಾಡಿದರು. ಅವರನ್ನು ಆಯ್ಕೆ ಮಾಡಿದರೆ ಪ್ರವಾಸವನ್ನೇ ರದ್ದು ಮಾಡುವುದಾಗಿ ದಕ್ಷಿಣ ಆಫ್ರಿಕ ಬೆದರಿಕೆ ಹಾಕಿತು. ಅದಕ್ಕೆ ಸೊಪ್ಪುಹಾಕದೆ ಇಂಗ್ಲೆಂಡ್ ಡಾಲಿವೀರನನ್ನು ಟೀಮಿನಲ್ಲಿ ಉಳಿಸಿಕೊಂಡಿತು. ಆ ಕಾರಣದಿಂದ ಪ್ರವಾಸ ರದ್ದಾಯಿತು. ಇದಕ್ಕೆ ದಕ್ಷಿಣ ಆಫ್ರಿಕ ಬಹಳ ದೊಡ್ಡ ಪ್ರಮಾಣದಲ್ಲಿ ಬೆಲೆ ಕೊಡಬೇಕಾಯಿತು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ

read more
ಮಾಂತ್ರಿಕ ಫುಟ್ಬಾಲ್ ಹುಟ್ಟಿಸಿದ ಕನಸುಗಳು: ವಿನತೆ ಶರ್ಮ ಅಂಕಣ

ಮಾಂತ್ರಿಕ ಫುಟ್ಬಾಲ್ ಹುಟ್ಟಿಸಿದ ಕನಸುಗಳು: ವಿನತೆ ಶರ್ಮ ಅಂಕಣ

ಪಂದ್ಯದ ಎರಡನೇ ಅರ್ಧದಲ್ಲಿ ಆಸ್ಟ್ರೇಲಿಯಾ ತಂಡವು ಸೋಲುವುದು ಖಚಿತವಾಗಿತ್ತು. ಆದರೆ ನಮ್ಮ ಮಟಿಲ್ಡಾಸ್ ಬಗ್ಗೆ ಇದ್ದ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದರ ಜೊತೆಗೆ ಇಂಗ್ಲಿಷ್ ಪಟುಗಳು ಆಡಿದ ವೈಖರಿಗೆ, ಅವರ ಅಚ್ಚುಕಟ್ಟಾದ ಆಟದ ಶೈಲಿಗೆ ಎಲ್ಲರೂ ಮನಸೋತಿದ್ದರು. ಎರಡು ಬಾರಿ ಸ್ಯಾಮ್ ಕೆರ್ ತಮ್ಮ ಬಳಿಗೆ ಬೀಸಿಬಂದ ಫುಟ್ಬಾಲನ್ನು ತಲೆಯಿಂದ ಡಿಕ್ಕಿಕೊಟ್ಟು ಅದನ್ನು ಗೋಲ್ ನೆಟ್ ಕಡೆಗೆ ಚಿಮ್ಮಿಸಿದಾಗ ಅರೆಕ್ಷಣ ಎಲ್ಲರ ಹೃದಯ ಬಾಯಿಗೆ ಬಂದಿತ್ತು. ಆದರೆ ಗೋಲ್ ಆಗದೇ ನೆಟ್ ತಲೆಯಮೇಲೆ ಬಾಲ್ ಹಾರಿಹೋಗಿತ್ತು.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

read more

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಕಲ್ಯಾಣಕ್ರಾಂತಿ: ಡಾ. ಲತಾ ಗುತ್ತಿ ಕಾದಂಬರಿಯ ಪುಟಗಳು

ಬೆಳಗಿನ ಜಾವ ಕಣ್ಣುಬಿಟ್ಟಾಗ ಎಲ್ಲೆಲ್ಲೂ ಜಾತ್ರೆಯದೇ ಆದ ಒಂದು ಬೆಡಗಿನ ಸೊಬಗು. ತಣ್ಣನೆಯ ಗಾಳಿ-ಪಕ್ಷಿಗಳ ಕಲರವ. ಸೂರ್ಯೋದಯ. ದೇವಸ್ಥಾನದ ಆವರಣದಿಂದ ಕೇಳಿಬರುವ ಶರಣರ ವಚನಗಳ ಹಾಡುಗಳು. ಸುತ್ತೆಲ್ಲ…

Read More

ಬರಹ ಭಂಡಾರ