ನೋವಿನಲ್ಲೂ ನಗುವುದ ಕಲೀಬೇಕು: ನಾಗಶ್ರೀ ಅಜಯ್ ಅಂಕಣ
“ಕೆಲವೊಮ್ಮೆ ಈ ಗಂಡ, ಮಗು, ಸಂಸಾರ, ದುಡಿಮೆ, ಸಂಪಾದನೆ, ಕೊಂಕು ಮಾತು, ಅನಾರೋಗ್ಯ ಎಲ್ಲದರಿಂದ ಬಹಳ ದೂರ ಹೋಗಿ, ನಾನೊಬ್ಬಳೇ ಪ್ರಶಾಂತವಾಗಿ ಕೆಲಕಾಲ ಕಳೆಯಬೇಕನ್ನಿಸುತ್ತೆ. ಆದರೆ ಎಲ್ಲಿ ಹೋಗುವುದು? ಹೀಗೆ ವಾಸ್ತವ ಹಿಂಸೆಯೆನಿಸಿದಾಗೆಲ್ಲ, ಬೇಸರದಲ್ಲೇ ಕತ್ತಲಕೋಣೆಯಲ್ಲಿ ಉಳಿಯುವುದರ ಬದಲು, ಮನೆತುಂಬ ಬೆಳಕಾಗುವಂತೆ ಝಗಮಗಿಸಿ, ಸ್ನಾನ ಮಾಡಿ, ನಾನು ಹೊಸದಾಗಿ ಕೊಂಡ ಬಟ್ಟೆ ತೊಟ್ಟು, ನನಗೇ ಹೆಮ್ಮೆಯಾಗುವಷ್ಟು ಚೆಂದಕ್ಕೆ ಅಲಂಕರಿಸಿಕೊಂಡು ಅರ್ಧಗಂಟೆ ಕನ್ನಡಿಯ ಮುಂದೆ ನಗುಮುಖದಲ್ಲಿ ಕೂತಿರುತ್ತೇನೆ.”
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣದಲ್ಲಿ ಹೊಸ ಬರಹ
150 ವರ್ಷಗಳ ಕ್ರಿಕೆಟ್ ಟೆಸ್ಟ್ಗಳಲ್ಲಿ ಎರಡೇ ‘ಟೈ’ ಮ್ಯಾಚುಗಳು!: ಇ.ಆರ್. ರಾಮಚಂದ್ರನ್ ಅಂಕಣ
ಕೊನೆಯ ರನ್ – ಗೆಲುವಿನ ರನ್ ಇಯನ್ ಮೆಕಿಫ್ ಓಡುತ್ತಿದ್ದಾಗ ಜೊ ಸೊಲೊಮನ್ ಬಾಲನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಅದನ್ನು ವಿಕೆಟ್ಗೆ ಎಸೆದು ಮೆಕಿಫ್ಅನ್ನು ರನ್ ಔಟ್ ಮಾಡಿದರು. ಸೋಲೊಮನ್ ಬಾಲ್ ಎಸೆದಾಗ ಮೂರು ವಿಕೆಟ್ಗಳಿದ್ದರೂ ಅವರು ಸ್ಕೊಯರ್ ಲೆಗ್ನಲ್ಲಿ ಇದ್ದುದ್ದರಿಂದ ಆ ಜಾಗದಿಂದ ಅವರಿಗೆ ಕಾಣಿಸುತ್ತಿದ್ದ ವಿಕೆಟ್ ಒಂದೇ! ಅವರು ಗುರಿ ಇಟ್ಟು ಹೊಡೆದು ವಿಕೆಟ್ಗೆ ಬಿದ್ದು ಮೆಕಿಫ್ ರನ್ ಔಟಾದರು. ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಟೆಸ್ಟ್ಮ್ಯಾಚ್ಗಳಲ್ಲಿ ಇದುವರೆಗೂ ಆದ ಎರಡು ಟೈ ಮ್ಯಾಚುಗಳ ಕುರಿತ ಬರಹ ನಿಮ್ಮ ಓದಿಗೆ
ಕೇಂದ್ರೀಯ ಬಜೆಟ್ನ ಉಪಕಥೆಗಳು: ಡಾ. ವಿನತೆ ಶರ್ಮ ಅಂಕಣ
ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳು ಹೇಳಿದಂತೆ ಯೂನಿವರ್ಸಿಟಿಯ ಸಹಪಾಠಿಯೊಬ್ಬರು ತಮ್ಮ ಕಾರಿನಲ್ಲಿ ಬದುಕುತ್ತಿದ್ದರಂತೆ. ರಾತ್ರಿ ಸಮಯ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿಕೊಂಡಿರುವುದು, ಒಳಗೆ ಮುದುರಿಕೊಂಡು ಮಲಗುವುದು. ಬೆಳಿಗ್ಗೆ ಎದ್ದು ಯೂನಿವರ್ಸಿಟಿಗೆ ಬಂದು ಅಲ್ಲಿದ್ದ ಟಾಯ್ಲೆಟ್, ಶವರ್ ಸೌಲಭ್ಯಗಳನ್ನು ಬಳಸಿಕೊಂಡು, ಕೆಫೆಯಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕುವ ರಿಯಾಯ್ತಿ ದರದಲ್ಲಿ ಕಾಫಿ, ಸ್ಯಾಂಡ್ವಿಚ್ ಮತ್ತು ಉಚಿತ ಹಣ್ಣು ಪಡೆಯುವುದು. ದಿನಪೂರ್ತಿ ಯೂನಿವರ್ಸಿಟಿ ಕಟ್ಟಡದೊಳಗೇ ಇದ್ದುಕೊಂಡು ಒಂದಷ್ಟು ವ್ಯಾಸಂಗ, ನಿದ್ದೆ ಮಾಡುವುದು. ರಾತ್ರಿ ಪುನಃ ಕಾರಿಗೆ ವಾಪಸ್.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ
ಕೊನೆಗೂ ಕೈಗೆ ಬಂದ ಭತ್ತ!: ಗುರುಪ್ರಸಾದ ಕುರ್ತಕೋಟಿ ಅಂಕಣ
ಎರಡು ಟ್ರಾಕ್ಟರ್ ಮೇಲೆ ಸ್ವಲ್ಪ ಹೆಚ್ಚು ಭತ್ತ ಸಿಕ್ಕಿತ್ತು. ಅದು ಹೆಚ್ಚು ಕಡಿಮೆ 25 ಚೀಲ ಆಗುತ್ತೆ ಎಂಬ ಅಂದಾಜು ಸಿಕ್ಕಿತು. ಒಂದು ಚೀಲ ಅರವತ್ತು ಕೆಜಿ ತೂಕ. ಹೀಗಾಗಿ ನಮಗೆ ಸಿಕ್ಕಿದ್ದು 1500 ಕೆಜಿ ಭತ್ತ. ಅದನ್ನು ಅಕ್ಕಿ ಮಾಡಿಸಿದರೆ ಹೆಚ್ಚು ಕಡಿಮೆ 1೦೦೦ ಕೆಜಿ ಅಕ್ಕಿ ಸಿಕ್ಕೀತು. ಅದು ಪ್ರಥಮ ಬಾರಿ ಬೆಳೆದ ನಮ್ಮ ಮಟ್ಟಿಗೆ ತುಂಬಾ ಹೆಮ್ಮೆಯ ಸಂಗತಿಯೇ ಆಗಿತ್ತು. ಆದರೆ ಅಲ್ಲಿಯವರೆಗೆ ಬರಲಿಕ್ಕೆ ಇನ್ನೂ ತುಂಬಾ ಸಮಯ ಇತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ಸಂತೃಪ್ತಿಯೆನ್ನುವುದು ಅಂತರಂಗದ ಸಮಾಚಾರ: ನಾಗಶ್ರೀ ಅಜಯ್ ಅಂಕಣ
ಪ್ರತಿ ಸಣ್ಣ ವಿಷಯವನ್ನು ದೊಡ್ಡದಾಗಿ ಚಿಂತಿಸುತ್ತಾ, ಹಳಹಳಿಕೆಯನ್ನೇ ವ್ಯಸನವಾಗಿಸಿಕೊಂಡವರು, ಇರುವಷ್ಟು ಕಾಲ ತೃಪ್ತಿಯಿಂದ ಬದುಕುವವರು,ಸಾಧಕರು, ಸಾಮಾನ್ಯರು, ಪೀಡಕರು, ಪುಣ್ಯಕೋಟಿಯಂತಹವರು ಹೀಗೆ ತರಹೇವಾರಿ ಜನರು. ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ರೀತಿಯ ಸಮಸ್ಯೆಗಳಿದ್ದೇ ಇರುತ್ತವೆ. ಆದರೆ ಹಳ್ಳಿಯವರೆಲ್ಲ ಮುಗ್ಧರು, ಸಿಟಿಯವರೆಲ್ಲ ಸ್ಥಿತಿವಂತರು, ಓದಿದವರು ಪೆದ್ದರು, ಕಡಿಮೆ ಓದಿದವರು ವ್ಯವಹಾರ ಚತುರರು, ಮಕ್ಕಳೆಲ್ಲಾ ದೇವರಂತಹವರು…. ಈ ರೀತಿಯ ಜನಪ್ರಿಯ ಕುರುಡು ನಂಬಿಕೆಗಳ ಪಟ್ಟಿಯಲ್ಲಿ ಹಿರಿಯರೆಲ್ಲ ಒಂದೇ ಎಂಬುದು ಕೂಡ ಸೇರಿದೆ ಅಲ್ಲವೆ. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣದಲ್ಲಿ ಹೊಸ ಬರಹ ಇಂದಿನ ಓದಿಗೆ.
ಗುಡುಗು, ಮಿಂಚು ಸುರಿಸುವ ಮಾಂತ್ರಿಕರು: ಇ.ಆರ್. ರಾಮಚಂದ್ರನ್ ಅಂಕಣ
ಆ ಪಂದ್ಯದಲ್ಲಿ ವಿವಿಎಸ್ 167 ರನ್ ಹೊಡೆದರು… ಚಚ್ಚಿದರು ಅನ್ನುವ ಪದ ಇನ್ನೂ ಸರಿಹೋಗಬಹುದು. ಮಿಕ್ಕವರ ಸ್ಕೋರ್? ಗಂಗೂಲಿ 25, ಬೋಲರ್ಗಳಾದ ಕುಂಬ್ಳೆ, ಶ್ರಿನಾಥ್ ತಲಾ 15! ಮಿಕ್ಕವರೆಲ್ಲರೂ ಒಂದು ಅಂಕಕ್ಕೆ ಔಟಾದರು! ಎಕ್ಸ್ಟ್ರಾಸ್ 21! ವಿಶೇಷವೆಂದರೆ ಆಸ್ಟ್ರೇಲಿಯಾದ ಹೆಸರಾಂತ ಬೋಲರ್ಗಳಾದ ಶೇನ್ ವಾರ್ನ್ 13 ಓವರ್ಗಳಿಗೆ 60 ರನ್ ಮತ್ತು ಫಾಸ್ಟ್ ಬೋಲರ್ ಬ್ರೆಟ್ ಲೀ 11 ಓವರ್ಗೆ 67 ರನ್ ಕೊಟ್ಟಿದ್ದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ವಿವಿಎಸ್ ಲಕ್ಷ್ಮಣ್ ಮತ್ತು ವೀರೇಂದ್ರ ಸೆಹ್ವಾಗ್ ಕುರಿತ ಬರಹ ನಿಮ್ಮ ಓದಿಗೆ
ಸಂಗೀತ-ನೃತ್ಯ ರೂಪಕದೊಳಗೆ ಎಲ್ಲರಿಗೂ ಸಲ್ಲುವ ಅಮೆರಿಕೆಯ
ಹೊಸ ದೇಶವನ್ನು ರೂಪಿಸಲು ಹೆಣಗಾಡುತ್ತಿದ್ದ ತನ್ನ ನಾಯಕ ಜಾರ್ಜ್ ವಾಷಿಂಗ್ಟನ್ ಅವರಿಗೆ ತೋಳ್ಬಲ ಕೊಟ್ಟು ರಾಜಕೀಯದಲ್ಲಿನ ಭುಜಬಲನಾದ. ಹೊಸ ಅಮೆರಿಕಾದ ಮೊಟ್ಟಮೊದಲ ಅಧ್ಯಕ್ಷರಾದ ವಾಷಿಂಗ್ಟನ್ ಅವರ ಸರಕಾರದಲ್ಲಿ ಪ್ರಮುಖ ಪದವಿಗಳನ್ನು ನಿರ್ವಹಿಸುತ್ತಾ ತನ್ನನ್ನು ತಾನೇ ದೇಶೀಯ ಮಟ್ಟದಲ್ಲಿ ಒಬ್ಬ ನಂಬಿಕೆಯ ರಾಜಕಾರಣಿ, ರಾಜನೀತಿ ತಜ್ಞನಾಗಿ ರೂಪಿಸಿಕೊಂಡ ಹ್ಯಾಮಿಲ್ಟನ್ ತನ್ನ ಅಲ್ಪಾಯಸ್ಸಿನ ಕಾಲದಲ್ಲಿ ಅಮೆರಿಕಾವನ್ನು ಒಂದು ಸುಸಂಸ್ಥಿತ ದೇಶವನ್ನಾಗಿ ರೂಪಿಸಲು ಅನೇಕ ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ
ಎಗ್ ರೈಸ್ ತಿಂತೀರಿ ಸರ್ರ…?
ಮನೆ ಸೇರಿದಾಗ ಹಲವು ಯೋಚನೆಗಳು ಮುತ್ತಿಕೊಂಡವು. ಪಟ್ಟಣದಲ್ಲಿ ಇದ್ದ ನಾವುಗಳು ಅಲ್ಲಿನ ಒತ್ತಡದ ಬದುಕು ಸಾಕಾಗಿ, ಒಂದಿಷ್ಟು ಶುದ್ಧ ಹವೆ, ಹಸಿವಾದಾಗ ವಿಷರಹಿತ ಆಹಾರ ಸಿಕ್ಕರೆ ಅದೇ ಸ್ವರ್ಗ ಅಂತ ಅಲ್ಲಿಂದ ಇಲ್ಲಿಗೆ ನೆಮ್ಮದಿಯನ್ನು ಅರಸಿ ಬರುತ್ತೇವೆ. ಆದರೆ ಶ್ಯಾಮನಂತಹ ಗ್ರಾಮವಾಸಿ ಯುವಕರು ಕೈತುಂಬಾ ದುಡ್ಡು ಮಾಡಿದರೆ ಮಾತ್ರ ಸುಖ ಅಂತ ಅಂದುಕೊಳ್ಳುತ್ತಾರೆ. ಹೌದು ದುಡ್ಡು ಬೇಕು.. ಆದರೆ ಬೆಂಝ್ ಕಾರೆ ಆಗಬೇಕೇ? ಇದ್ದುದರಲ್ಲೇ ಸುಖ ನೆಮ್ಮದಿ ಕಾಣಲು ಸಾಧ್ಯವಿಲ್ಲವೇ?
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ಸಂಬಂಧಗಳಿಗೂ ಒಂದು ಕೊನೆಯ ದಿನ ಇದ್ದರೆ….!
ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಮತ್ತಷ್ಟು ಆತ್ಮೀಯ, ಅಪ್ಯಾಯ ಬಂಧವಾಗಿ ಬದುಕು ಹಿತವೆನಿಸುವ ದಿನಗಳಲ್ಲಿ ಯಾರಿಗಾದರೂ ಅಂತಹದ್ದೊಂದು ಸಂಬಂಧ ಜಡವಾಗಬಹುದೆಂಬ ಸುಳಿವು ಸಿಕ್ಕಿರುವುದಿಲ್ಲ. ಈ ದಿನ, ಈ ಕ್ಷಣ, ಈ ಕಾಲ ಸದಾ ಹೀಗೆಯೇ ಇರುವುದೆಂಬ ನಂಬಿಕೆ, ಆಶಯದ ಬುನಾದಿಯ ಮೇಲೆ ಕಟ್ಟಿದ ಕನಸಿನ ಗೋಪುರ ಕುಸಿಯತೊಡಗಿದಾಗ ಶುರು ಸತ್ವಪರೀಕ್ಷೆ. ಜೊತೆಯಾಗಿ ಎದುರಿಸಿದ ಕಷ್ಟ ಸುಖ, ಕೂಡಿಟ್ಟ ನೆನಪುಗಳು, ಜೋಳಿಗೆ ತುಂಬಿದ ಅನುಭವಗಳು ಮಸುಕಾಗುವವರೆಗೂ ಮುಗಿಯದ ಉಮ್ಮಳಿಕೆ. ಇದು ಬರಿಯ ಪ್ರೇಮಿಗಳಿಗೆ ಸಂಬಂಧಿಸಿದ ವಿಷಯವಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ










