Advertisement

ಅಂಕಣ

ರೇನ್ಬೋ ಬೀಚ್: ರಾಣಿರಾಜ್ಯದ ಕಾಮನಬಿಲ್ಲು

ರೇನ್ಬೋ ಬೀಚ್: ರಾಣಿರಾಜ್ಯದ ಕಾಮನಬಿಲ್ಲು

ಬಣ್ಣಗಳು ತುಂಬಿದ ರೇನ್ಬೋ ಬೀಚಿನ ಆಕರ್ಷಕ ಮರಳುದಿಬ್ಬಗಳ ಮೇಲೆ ಹತ್ತಿ, ಒಂದು ಮರದ ತುಂಡನ್ನು ಹಿಡಿದು ಜಾರುಬಂಡೆ ಮಾಡಿಕೊಂಡು, ಎದುರಿಗಿರುವ ನಿರ್ಮಲ ನೀಲ ಸಾಗರವನ್ನು ದೃಷ್ಟಿಸುತ್ತ ಜಾರುವಾಗ ಅದೇನೋ ಒಂದು ದೈವೀಕ ಅನುಭೂತಿಯುಂಟಾಗುತ್ತದೆ. ಯಿನಿಂಗೀ ಇರುವ ಆ ಪ್ರಕೃತಿಯೆ ದೇವರಾದಂತೆ ಭಾಸವಾಗುತ್ತದೆ. ಆನಂತರ ದಿಬ್ಬಗಳ ಕೆಳಗೆ ನಿಂತು ಮರಳನ್ನು ಬೊಗಸೆಯಲ್ಲಿ ಹಿಡಿದು ಬಣ್ಣಬಣ್ಣದ ಕಣಗಳನ್ನು ಸ್ಪರ್ಶಿಸಿದಾಗ ಮತ್ತದೇನೋ ಮಾಯೆ! ದಿವ್ಯದರ್ಶನದ ಕ್ಷಣಗಳು!
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ

read more
ಬದುಕೆಂದರೆ ಬರೀ ಗೆದ್ದು ಬೀಗುವುದಷ್ಟೇ ಅಲ್ಲ….

ಬದುಕೆಂದರೆ ಬರೀ ಗೆದ್ದು ಬೀಗುವುದಷ್ಟೇ ಅಲ್ಲ….

ಮನೆಯ ಮಂಚದ ಮೇಲೆ ಕಾಲು ಚಾಚಿ ಮಲಗಿಯೋ ಓದುತ್ತಿರುವಾಗ ತೇಜಸ್ವಿಯವರ ಮೂಡಿಗೆರೆ, ಚಿತ್ತಾಲರ ಹನೇಹಳ್ಳಿ, ಭೈರಪ್ಪರ ಚೆನ್ನರಾಯಪಟ್ಟಣ- ಮೈಸೂರು, ಕಾಯ್ಕಿಣಿಯವರ ಮುಂಬೈ-ಗೋಕರ್ಣ, ವಸುಧೇಂದ್ರರ ಬಳ್ಳಾರಿ- ಬೆಂಗಳೂರು… ಹೀಗೆ ಅವರ ಬೆರಳತುದಿಯ ಜಗತ್ತು ನಮ್ಮ ಪ್ರಪಂಚವಾದ ದಿನಗಳಿದ್ದವು. ಪುಸ್ತಕದ ಹಿಂಬದಿಯಲ್ಲಿ ಪ್ರಕಟವಾದ ಅವರ ಚಿತ್ರವೊಂದನ್ನು ಬಿಟ್ಟು ವೈಯಕ್ತಿಕ ಇಷ್ಟ- ಕಷ್ಟ, ನಿಲುವುಗಳ ಸುದ್ದಿಯೇ ತಿಳಿಯದ ಆನಂದಮಯ ಸ್ಥಿತಿ.
ಎಸ್. ನಾಗಶ್ರೀ ಅಜಯ್‌ ಬರೆಯುವ ಲೋಕ ಏಕಾಂತ ಅಂಕಣ

read more
ನನ್ನ ನಾನಿಯೂ… ಸಕ್ಕರೆ ಪುಟಾಣಿಯೂ….

ನನ್ನ ನಾನಿಯೂ… ಸಕ್ಕರೆ ಪುಟಾಣಿಯೂ….

ಮಸೀದಿಯಲ್ಲಿ ಶುಕ್ರವಾರಕ್ಕೊಮ್ಮೆ ಸಿಗುತ್ತಿದ್ದ ಪುಟಾಣಿ ಸಕ್ಕರೆಯ ರುಚಿ ನನ್ನ ಬೆಂಬಿಡದೆ ಕಾಡತೊಡಗಿ ದಿನವೂ ತಿನ್ನಬೇಕೆನಿಸುತ್ತಿತ್ತು. ಆದರೆ ನನಗೆ ತಿನ್ನಬೇಕೆನಿಸಿದಾಗ ಎಲ್ಲಿಂದ ಪಡೆಯುವುದು? ಶುಕ್ರವಾರ ಬರುವವರೆಗೂ ಕಾದು ಅವರು ಕೊಡುವ ಒಂದು ತುತ್ತಿನಷ್ಟು ಪುಟಾಣಿ ಸಕ್ಕರೆ ನನ್ನ ಹೊಟ್ಟೆಗೆ ಸಾಕಾಗುತ್ತಿರಲಿಲ್ಲ. ತಿಂದರೆ ಹೊಟ್ಟೆ ತುಂಬುವಷ್ಟು ಅದನ್ನೇ ತಿನ್ನಬೇಕೆನ್ನುವ ಆಸೆ. ಅಪ್ಪನ ಹತ್ತಿರನೋ ಅವ್ವನ ಬಳಿಯೋ ರೊಕ್ಕ ಕೇಳಿದರೆ ಆಗ ಎಂಟಾಣೆಯೋ ಒಂದು ರೂಪಾಯಿಯೋ ಸಿಗುತ್ತಿತ್ತಷ್ಟೆ.
ಇಸ್ಮಾಯಿಲ್ ತಳಕಲ್‌ ಬರೆಯುವ “ತಳಕಲ್‌ ಡೈರಿ”ಯಲ್ಲಿ ಹೊಸ ಬರಹ

read more
ಇ.ಆರ್. ರಾಮಚಂದ್ರನ್ ಹೊಸ ಅಂಕಣ “ಕ್ರಿಕೆಟಾಯ ನಮಃ” ಇಂದಿನಿಂದ ಶುರು

ಇ.ಆರ್. ರಾಮಚಂದ್ರನ್ ಹೊಸ ಅಂಕಣ “ಕ್ರಿಕೆಟಾಯ ನಮಃ” ಇಂದಿನಿಂದ ಶುರು

‘ನೋಡಿ. ಇಂಗ್ಲೆಂಡಿನಲ್ಲೂ ಇದೆ ಪ್ರಾಬ್ಲಮ್ ಆಗಿತ್ತು. ಅದಕ್ಕೆ ಅಲ್ಲಿ ಸೋತರು. ನನಗೆ ಒಂದು ಐಡಿಯಾ ಹೊಳೆದಿದೆ. ರಾಣಿ ಎಲಿಜಬೆತ್ ಕಾಲವಾದಮೇಲೆ ಬಕಿಂಗ್ಹ್ಯಾಮ್ ಪ್ಯಾಲೇಸ್ ಅರ್ದಕ್ಕರ್ಧ ಖಾಲಿ ಇರುತ್ತೆ. ಮುಂದಿನ ಟೂರ್ನಲ್ಲಿ ನಮ್ಮ ಪ್ಲೇಯರ್ಸ್ ಅಲ್ಲಿ ತಂಗಿದರೆ ಸೇಫ್ ಮತ್ತು ಕಿರಿಕಿರಿ- ಫ್ರಿ. ಅಲ್ಲಿ ಕರೀಪ್ಯಾಂಟು ಕೆಂಪು ಕೋಟು ಮತ್ತು ಮೂತಿ ಮುಚ್ಚಿತೋ ಅನ್ನುವ ಹಾಗೆ ಕರಿ ಟೋಪಿ ಹಾಕಿರುವ ‘ರಾಯಲ್ ಗಾರ್ಡ್ಸ್’ ನ ಸೆಕ್ಯುರಿಟಿಗೆ ಹಾಕಬಹುದು.
ಆಂಗ್ಲ ಭಾಷೆಯ ಹಿರಿಯ ಕ್ರಕೆಟ್ ಅಂಕಣಕಾರ ಇ. ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಲಘು ಬರಹಗಳ ಅಂಕಣ ಇಂದಿನಿಂದ ಹದಿನೈದು ದಿನಗಳಿಗೊಮ್ಮೆ…

read more
ಕೃಷಿಯ ಖುಷಿ ಬಲ್ಲವರೇ ಬಲ್ಲರು…

ಕೃಷಿಯ ಖುಷಿ ಬಲ್ಲವರೇ ಬಲ್ಲರು…

ಬೆಂಗಳೂರಿನಲ್ಲಿ ಇನ್ನೂ ಕೆಲಸದಲ್ಲಿದ್ದ ಅವರಿಗೆ ಕೃಷಿಯ ಹುಚ್ಚು. ಅವರಿಗೆ ಮನೆಯಲ್ಲಿ ಹೊಲ ಇದ್ದರೂ ಕೂಡ ಮಾಡಲಾಗದ ಪರಿಸ್ಥಿತಿ. ಅವರ ತಂದೆ ಹೊಲ ಮಾಡಲು ಕೊಡುತ್ತಿರಲಿಲ್ಲ. ಬೆಂಗಳೂರಿನಲ್ಲಿ ಆರಾಮಾಗಿ ಇರು, ನಮ್ಮ ಹಾಗೆ ಯಾಕೆ ಕಷ್ಟ ಪಡುತ್ತೀಯ ಎಂಬುದು ಒಂದು ಕಾರಣವಾದರೆ, ಅವರಿಗೆ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದರು ಅನ್ನುವುದು ಇನ್ನೊಂದು ಬಲವಾದ ಕಾರಣ! ಕೃಷಿಕ ಅಂತ ಗೊತ್ತಾದರೆ ಅವರ ಮದುವೆ ಆಗಲು ಸಾಧ್ಯವೇ ಇರಲಿಲ್ಲ! ಅರೆ ಯಕಶ್ಚಿತ ಒಬ್ಬ ರೈತನನ್ನು ಮದುವೆಯಾಗಲು ಹುಡುಗಿಯರಿಗೇನು ಹುಚ್ಚೆ?!
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

read more
ಹಾಯ್‌ ಅಂಗೋಲಾ!

ಹಾಯ್‌ ಅಂಗೋಲಾ!

ಅಂಗೋಲಾದ ಜನರ ಬಗ್ಗೆ ಹೇಳುವುದು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವುದು, ಅಲ್ಲಿನ ಊಟ ತಿಂಡಿ ಬಗ್ಗೆ ಹೇಳುವುದು ಇದೆಲ್ಲಾ ಸಹಜ. ನಿರೂಪಣೆ ಅದ್ಭುತವಾಗಿದೆ, ಹೊಸ ವಿಷಯ ತಿಳಿಯುತ್ತದೆ ಎಲ್ಲಾ ನಿಜವೇ. ಆದರೆ ಅತ್ಯಂತ ವಿಶಿಷ್ಟವಾದ ಅಧ್ಯಾಯವಿದೆ. ಮೊದಲ ಬಾರಿ ಓದಿದಾಗ ಬಹಳ ವಿಚಿತ್ರ ಅನ್ನಿಸಿತ್ತು‌. ಒಂದು ಕ್ಷೌರ ಮಾಡಿಸಿಕೊಳ್ಳಲು ಮುನ್ನೂರು ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದ ಪ್ರಸಾದರ ಅವಸ್ಥೆ ಬಗ್ಗೆ ಕೇಳಿದಾಗ ನಗುವುದೋ ಅಳುವುದೋ ಗೊತ್ತಾಗುವುದಿಲ್ಲ. ಆಫ್ರಿಕನ್ನರ ಕೂದಲ ರೀತಿಗೂ ಭಾರತೀಯರ ಕೂದಲ‌ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದು ಗೊತ್ತಿರುವ ಸಂಗತಿ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

read more
ಆವರ್ತನ…

ಆವರ್ತನ…

ಏನೇನೋ ಅನ್ನುವಂಥದ್ದು ನಾನು ಮಾಡಲಿಲ್ಲ. ನಾನೂ ಕೂಡ ಏನೇನೋ ಆಗಲಿಲ್ಲ. ಕಡಿಮೆ ಭ್ರಷ್ಟ ಅನಿಸಿಕೊಳ್ಳಲಿಕ್ಕೆ ಮೇಷ್ಟ್ರಾದೆ. ಮಕ್ಕಳಿಗೆ ಕವಿತೆ ಹೇಳಿಕೊಟ್ಟೆ. ಆದರೆ ಯಾಕೋ ನನ್ನ ಕೈಯಲ್ಲಿ ಬರೆಯಲಾಗಲೇ ಇಲ್ಲ. ನಿತ್ಯದ ಯಾಂತ್ರಿಕತೆ ನುಂಗಿಕೊಂಡುಬಿಟ್ಟಿತು. ನನಗೆ ಗೊತ್ತು. ಈ ಸುದೀರ್ಘ ಸ್ವಗತಗಳನ್ನು ಬರೆಯುವುದರ ಭಯವೆಂದರೆ ಓದುಗ ಒಂದು ಹಂತದ ನಂತರ ಕತೆಗಾರನ ಪ್ರಾಮಾಣಿಕತೆಯನ್ನು ಅನುಮಾನಿಸತೊಡಗುತ್ತಾನೆ. ನಿಜ. ಪ್ರಾಮಾಣಿಕತೆಯನ್ನು ಒಪ್ಪಿಸಲು ನಮ್ಮ ಬಳಿಯಿರುವ ಪರಿಮಾಣಗಳಾದರೂ ಏನು? ಆಣೆ ಹಾಕಬಹುದು. ನಂಬಿ ಎಂದು ಕೈ ಜೋಡಿಸಬಹುದು.
ದಾದಾಪೀರ್‌ ಜೈಮನ್‌ ಬರೆಯುವ ಜಂಕ್ಷನ್‌ ಪಾಯಿಂಟ್‌ ಅಂಕಣ

read more
ವಸತಿ ಸಮಸ್ಯೆ, ರಾಜಕೀಯ ಪ್ರಶ್ನೆಗಳ ಕಥೆಗಳು

ವಸತಿ ಸಮಸ್ಯೆ, ರಾಜಕೀಯ ಪ್ರಶ್ನೆಗಳ ಕಥೆಗಳು

ಆಸ್ಟ್ರೇಲಿಯಾದಲ್ಲಿ ಕೋವಿಡ್-೧೯ ನಂತರದ ಪರಿಸ್ಥಿತಿ ಸುಧಾರಿಸಿದೆ, ಜನರ ಹರಿದಾಟ ಸುಗಮವಾಗಿದೆ. ಆದರೆ ಧುತ್ತೆಂದು ದೇಶದಾದ್ಯಂತ, ಅದರಲ್ಲೂ ನಮ್ಮ ರಾಣಿರಾಜ್ಯದಲ್ಲಿ ಇನ್ನೂ ನಿಚ್ಚಳವಾಗಿ, ವಸತಿ ಸಮಸ್ಯೆ ಎನ್ನುವುದು ಹೊಸದಾಗಿ ತಲೆದೋರಿದೆ. ಪ್ರಪಂಚದ ಬೇರೆಬೇರೆ ಭಾಗಗಳಿಂದ ದೇಶದೊಳಕ್ಕೆ ಬರುತ್ತಿರುವವರ ಮತ್ತು ಅಂತರಾಜ್ಯ ವಲಸೆಗಾರರ ಸಂಖ್ಯೆ ಹೆಚ್ಚಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದ ಕೇಂದ್ರ ಸರಕಾರವು ಇತ್ತೀಚೆಗೆ ಹೆಚ್ಚು ಸಂಖ್ಯೆಯ ವಿದ್ಯಾರ್ಥಿ ಮತ್ತು ಉದ್ಯೋಗ ವೀಸಾಗಳನ್ನು ಕೊಡುತ್ತ ಉತ್ತೇಜನಕಾರಿಯಾಗಿದೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಅಂತಃಕರಣದ ಹಣತೆ ಬೆಳಗುವ ಸಮಯ

ಅಂತಃಕರಣದ ಹಣತೆ ಬೆಳಗುವ ಸಮಯ

ಮಕ್ಕಳು ಈಗಲ್ಲದೆ ಮತ್ಯಾವಾಗ ತಂಟೆ ಮಾಡಬೇಕು? ಇನ್ನೆಂದು ಮನಸೋ ಇಚ್ಚೆ ತಿಂದು ಕುಡಿದು ಖುಷಿಪಡಬೇಕು? ಎಂದು ಅಪ್ಪನಿಗೆ ಎದುರಾಡುತ್ತಿದ್ದ ಅವಳಿಗೆ ನಮ್ಮ ಬಾಲ್ಯ ಅವಳ ಬಾಲ್ಯದ ಕಿಟಕಿಯಾಗಿತ್ತು. ಮಕ್ಕಳನ್ನು ಓದಿಸುವ, ಬೆಳೆಸುವ, ಜವಾಬ್ದಾರಿಯಲ್ಲಿ ಮುಳುಗಿಹೋದ ಆಕೆ ಬಿಡುವು ಮಾಡಿಕೊಂಡು ಹೊಲಿಯುತ್ತಿದ್ದ ಬಟ್ಟೆ, ಹಾಕುತ್ತಿದ್ದ ರಂಗೋಲಿ, ಕಸೂತಿ, ಓದುತ್ತಿದ್ದ ಪುಸ್ತಕಗಳು ದಿನಕಳೆದಂತೆ ಕಡಿಮೆಯಾಯಿತು. ಸ್ವಂತಕ್ಕೆ ಸಮಯ ಕೊಟ್ಟುಕೊಳ್ಳಲಾಗದ ಸಾದಾ ಗೃಹಿಣಿಯಾಗಿ ಹಲವು ಕಾಲ ಕಳೆದಳು.
ಎಸ್. ನಾಗಶ್ರೀ ಅಜಯ್‌ ಬರೆಯುವ ಲೋಕ ಏಕಾಂತ ಅಂಕಣ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ