ಅಸಾಧ್ಯತೆಗಳ ಕಲ್ಪನೆಯಲ್ಲಿ ಕತೆಗಾರ: ಇಟಾಲೋ ಕ್ಯಾಲ್ವಿನೋ
ಪುಸ್ತಕದ ಮೊದಲ ಮತ್ತು ಅಂತಿಮ ಭಾಗದಲ್ಲಿ ಹತ್ತು ಕಾಲ್ಪನಿಕ ನಗರಗಳ ವರ್ಣನೆಗಳಿದ್ದರೆ, ಮಧ್ಯದ ಭಾಗಗಳಲ್ಲಿ ಐದೈದು ನಗರಗಳ ವರ್ಣನೆಗಳಿವೆ. ಪೋಲೋ ವರ್ಣಿಸುವ 55 ನಗರಗಳನ್ನು, ನಗರ ಮತ್ತು ಸ್ಮೃತಿ, ನಗರ ಮತ್ತು ಬಯಕೆ, ನಗರ ಮತ್ತು ಸಂಜ್ಞೆ, ಸಪೂರ ನಗರ, ವ್ಯಾಪಾರದ ನಗರ, ಕಂಗಳು ಮತ್ತು ನಗರ, ಇತ್ಯಾದಿ ಹನ್ನೊಂದು ವಿಷಯ-ಕೇಂದ್ರಿತ ಗುಂಪುಗಳಾಗಿ ವರ್ಣಿಸಲಾಗಿದೆ. ಅಲ್ಲದೇ ಪ್ರತಿ ಅಧ್ಯಾಯದಲ್ಲಿಯೂ ಪೋಲೋ ಮತ್ತು ಕುಬ್ಲಾ ಖಾನರ ನಡುವಿನ..”
ಈಕೆ ಕಲಿತಿದ್ದು ಪರ್ವತದ ನೀರವತೆಯಿಂದ
ಮನೆಯವರೊಂದಿಗೆ ಹೋರಾಡಿ ತಾರಾ ಕಾಲೇಜೊಂದಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ಇಂಗ್ಲಂಡಿನ ಕೇಂಬ್ರಿಡ್ಜಿನಲ್ಲಿರುವ ಪ್ರತಿಷ್ಠಿತ ಟ್ರಿನಿಟಿ ಕಾಲೇಜಿನಲ್ಲಿ ಪಿಎಚ್ಡಿ ಪದವಿಯನ್ನೂ ಪಡೆಯುತ್ತಾಳೆ. ಈ ಪಯಣದಲ್ಲಿ ತಂದೆ ತಾಯಿಯರಿಂದ ಯಾವುದೇ ಭಾವನಾತ್ಮಕ ಆಶ್ರಯವೂ, ಸ್ಪಂದನೆಯೂ ಅವಳಿಗೆ ದಕ್ಕುವುದಿಲ್ಲ. ಹಿಂತಿರುಗಿ ನೋಡಿದಾಗ ತನ್ನ ತಂದೆ ಯಾವುದೋ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರಬಹುದೇ ಎಂದು ಅವಳಿಗೆ ಸಂದೇಹವಾಗುತ್ತದೆ. ಎಲ್ಲರಂತೆ ತನಗೂ ಒಂದು ಸಹಜ ಬಾಲ್ಯವಿರಬೇಕಿತ್ತು..”
‘ಮೇಲು ಕೀಳಿನ ನಡತೆ ಹಾದಿ ತಪ್ಪಿದ ಜಡತೆ’
ಶತಮಾನಗಳು ಕಳೆದಂತೆ, ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳು ಆದಂತೆ, ನಗರೀಕರಣ ಹೆಚ್ಚಾದಂತೆ, ಅಧೀಕೃತವಾಗಿ ಜನಾಂಗಭೇದವನ್ನು ನಿಷೇಧಿಸಲಾಗಿದೆ, ಜನಾಂಗಭೇದವನ್ನು ಮಾಡಿದವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಕಾನೂನುಗಳು ಬಂದಿವೆ. ‘ಪಾಕಿʼಎನ್ನುವ ಶಬ್ದ, ಪಾಕಿಸ್ಥಾನೀ ಎನ್ನುವ ಅರ್ಥಕೊಡುತ್ತದೆ ಎಂದು ಕಂಡರೂ, ಅದೊಂದು ರೇಸಿಸ್ಟ್ ಶಬ್ದ, ಆ ಶಬ್ದವನ್ನು ಯಾರಾದರೂ ಭಾರತ-ಉಪಖಂಡದಿಂದ ಬಂದವರಿಗೆ ಹೇಳಿದರೆ…”
ಕಾರು ಬಂಗಲೆಯ ಲೆಕ್ಕಾಚಾರ ಮೀರಿದ ಜೀವನದೃಷ್ಟಿ
ಪಾಶ್ಚಿಮಾತ್ಯದ ಜನರು ಯಾರೇ ಸಿಗಲಿ, ಅವರು ನನ್ನ ಹವ್ಯಾಸ ಗಳ ಬಗ್ಗೆ ಕೇಳುತ್ತಾರೆ, ನನ್ನ ಆಸಕ್ತಿ ಬಗ್ಗೆ ಕೇಳುತ್ತಾರೆ, ದೇಶ-ವಿದೇಶಗಳ ಪರ್ಯಟನೆ ಬಗ್ಗೆ ಕೇಳುತ್ತಾರೆ ವಿನಃ, ನನಗೆ ಮದುವೆ ಆಗಿದೆಯ? ಮಕ್ಕಳು ಎಷ್ಟು? ನನ್ನ ಸಂಬಳ ಎಷ್ಟು? ಈ ರೀತಿಯ ವೈಯಕ್ತಿಯ ವಿಷಯಗಳ ಮೇಲೆ ನನ್ನನ್ನು ಅಳೆಯುವುದೂ ಇಲ್ಲ ಮತ್ತು ಅದರ ಬಗ್ಗೆ ಅವರಿಗೆ ಆಸಕ್ತಿಯೂ ಇಲ್ಲ. ಪ್ರತಿಯೊಬ್ಬ ಮನುಷ್ಯನನ್ನು ಕೇವಲ ಮತ್ತು ಕೇವಲ ಮನುಷ್ಯನನ್ನಾಗಿ ನೋಡಬೇಕೆ ಹೊರತು ಅವನ ಆಸ್ತಿ ಅಂತಸ್ತಿನಿಂದಲ್ಲ ಎನ್ನುವುದನ್ನು ಕಲಿಸಿದರು.
ಪ್ರಶಾಂತ್ ಬೀಚಿ ಅಂಕಣ
‘ಹೆರ್ಚಟಿಗಿ’ ಎಂಬ ನಾನು…
ಕೀಲೆಣ್ಣೆ ಅಥವಾ ಹೆರೆಣ್ಣಿ ಹಾಕುವ ಚಟಗಿ ಅಂದರೆ ಬಾಟಲಿಯು ಸಂಧಿಯೋ ಸಮಾಸವೋ ಆಗಿ ಈ ‘ಹೆರ್ಚಟಗಿ’ ಎಂಬ ಪದವೊಂದು ನಮ್ಮೂರ ಜನರ ಬಾಯಲ್ಲಿ ರೂಪುಗೊಂಡಿತ್ತು. ಊರಲ್ಲಿ ಹೀಗೆ ಎಲ್ಲರಿಗೂ ಒಂದೊಂದು ಅನ್ವರ್ಥ ನಾಮ ಅಂಟಿಕೊಂಡಿರುತ್ತದಲ್ಲ. ನನ್ನ ಅನ್ವರ್ಥನಾಮ ‘ಹೆರ್ಚಟಗಿ’. ಹಾಗೆ ಊರಲ್ಲಿ ಹಾಗೆ ಕರೆಸಿಕೊಂಡಾಗ, ನನ್ನ ಮನದೊಳಗೆ ಮೂಡುವ ಭಾವಕ್ಕೆ ಮಾತ್ರ ನಾಮಕರಣ ಮಾಡುವುದು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಒಳಗೊಳಗೇ ನಗು ಮೂಡುತ್ತದೆ. -ವೀರಣ್ಣ ಮಡಿವಾಳರ ಬರೆಯುವ ತಾರೆಗಳ ಹಿಡಿಯುವೆವು ಅಂಕಣ ಇಂದಿನ ಓದಿಗಾಗಿ.
ಅಗಲಿದ ನಮ್ಮ ರಂಗಕಲಾವಿದರ ಜೊತೆಗೆ ರೊಟಿಮಿ ನೆನಪು…
ಕಿಂಗ್ ಲಯಸ್ ಆಫ್ರಿಕದ ದೊರೆ ‘ಅಡೆಟುಸ’ ಆಗುತ್ತಾನೆ. ರಾಣಿ ಜೊಕಾಸ್ತ ಆಫ್ರಿಕದ ರಾಣಿ ‘ಒಜೋಲ’ ಆಗುತ್ತಾಳೆ. ಕ್ರಯಾನ್ ಅಡ್ರೆಪೊ ಆಗುತ್ತಾನೆ. ಟೈರೀಷಿಯಸ್ ಬಾಬ ಫಕನುಲ್ – ಕುರುಡು ತತ್ವಜ್ಞಾನಿ ಆಗುತ್ತಾನೆ. ಮೂಲ ಪಠ್ಯದಲ್ಲಿನ ಕುರಿಗಾಹಿ, ಘೂಂಕ ಆಗುತ್ತಾನೆ. ಥೀಬ್ಸ್ ಎನ್ನುವುದು ಆಫ್ರಿಕನ್ ಹಿನ್ನೆಲೆಯಲ್ಲಿ ಕುಟುಂಜೆ ಆಗಿ ‘ಇಡೆ’ ಎನ್ನುವುದು ಮಾತಾಪಿತೃಗಳ ವಧಾ ಸ್ಥಾನವಾಗುತ್ತದೆ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ
ಸೊಂಟಕ್ಕೆ ಕೆಂಪು ದುಪಟ್ಟಾ ಕಟ್ಟಿಕೊಂಡ ಹುಡುಗಿ
ಅದ್ಯಾವ ಗಳಿಗೆಯಲ್ಲಿ ನಮ್ಮೂರಿನ ಮಂದಿಯ ತಲೆಯೊಳಗೆ ‘ಟೈಟಾನಿಕ್’ ಹುಳು ಬಿಟ್ಟಿದ್ದರೋ ಕಾಣೆ. “ಹಡಗು ಮುಳುಗೋ ಸಿನ್ಮಾ ನೋಡೋಕೆ ಹೋಗ್ತಿದ್ದೀವಿ,” ಅಂತ ಹಲ್ಕಿರಿಯುತ್ತ, ಕೂಲಿಯನ್ನೂ ಬಿಟ್ಟು ಬಸ್ಸು ಹತ್ತಿದ್ದ ನಮ್ಮೂರ ಮಂದಿಯ ಹುರುಪು ನೆನೆದರೆ ಹೆಮ್ಮೆ, ಪ್ರೀತಿ. ಆ ಸಿನಿಮಾ ತರೀಕೆರೆಯ ಟಾಕೀಸಿನಲ್ಲಿ ಇದ್ದ ಅಷ್ಟೂ ದಿನ ಊರಿನ ಒಂದಲ್ಲ ಒಂದು ತಲೆ ಮಾರ್ನಿಂಗ್ ಶೋ ಕಂಡದ್ದಿದೆ.
ಸೊಗದೆ ಅಂಕಣದಲ್ಲಿ ಸಹ್ಯಾದ್ರಿ ನಾಗರಾಜ್ ಬರಹ.
ಗಾಲಿಬ್ : ದಿಲ್ಲಿಯ ವೈಭವ ಮತ್ತು ದುರಂತ
ಎಲ್ಲ ಬಗೆಯ ಅಧಿಕಾರ, ದರ್ಪವನ್ನು ಧಿಕ್ಕರಿಸುವ ಕಾರಣಕ್ಕಾಗಿಯೇ ಗಾಲಿಬ್ ಕುಡಿತ, ಜೂಜು ಮತ್ತು ಸಾಂಪ್ರದಾಯಿಕ ಇಸ್ಲಾಮಿಗೆ ಹೊರತಾದ ಪಾಷಂಡಿತನವನ್ನು ಬೆಳೆಸಿಕೊಂಡ. ದಿಲ್ಲಿಯಿಂದ ಕಲ್ಕತ್ತೆಗೆ ಹೋದರೂ ಪಿಂಚಣಿ ಸಿಗದೆ ಫಕೀರನಾಗಿದ್ದ ಗಾಲಿಬ್ ಪರ್ಶಿಯನ್ ಫ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ್ದ. ಆ ಹುದ್ದೆಯ ಸಂದರ್ಶನಕ್ಕೆ ಹೋದಾಗ ನಡೆದ ಘಟನೆ ಗಾಲಿಬ್ನ ಆತ್ಮಾಭಿಮಾನ-ಸ್ವಂತಿಕೆಗೆ ಸಂಕೇತದಂತಿದೆ.”
ಕಲಿಸು ಪ್ರಭು; ಕರಗುವುದನ್ನು, ಮುಳುಗದೇ ಇರುವುದನ್ನು
ಎ ಕೆ ರಾಮಾನುಜನ್ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿ ಕೊಂಡವರು. ಅವರ ದಿನಚರಿಯನ್ನು ಆಧರಿಸಿದ ಪುಸ್ತಕ ‘ಜರ್ನೀಸ್, ಅ ಪೋಯಟ್ಸ್ ಡೈರಿ’ ಎರಡು ವರ್ಷಗಳ ಹಿಂದೆ ಪ್ರಕಟವಾಯಿತು. ಈ ಜೀನಿಯಸ್ ಬರಹಗಾರ
ಐದು ದಶಕಗಳ ಕಾಲ ಬರೆದ ದಿನಚರಿ ಪುಟಗಳನ್ನು ತಮ್ಮ ಓದಿನಲ್ಲಿ ಕಾಣಿಸಿದ್ದಾರೆ, ಕಾವ್ಯಾ ಕಡಮೆ ಈ ಬಾರಿಯ ಅಂಕಣದಲ್ಲಿ.









