ಮಕ್ಕಳನ್ನು ಹೇಗೆ ಬೆಳೆಸೋದು!: ಜಯಲಕ್ಷ್ಮಿ ಪಾಟೀಲ್ ಅಂಕಣ
ಮಕ್ಕಳನ್ನು ಮಕ್ಕಳಂತೇ ಬೆಳೆಸೋಣ. ನಮಗೆ ತೋಚಿದಷ್ಟು, ಅಥವಾ ಅವರ ಮುಗ್ಧತೆಗೆ ಧಕ್ಕೆ ಬಾರದಷ್ಟು ಉತ್ತರಿಸಲು ಸಾಧ್ಯವಾದಲ್ಲಿ ಉತ್ತರಿಸಬೇಕು. ನನ್ನ ಬಲವಾದ ವಿರೋಧವಿರೋದು ಬಾಲ್ಯದಲ್ಲಿಯೇ ವ್ಯಕ್ತಿ ಸ್ವಾತಂತ್ರ್ಯದ, ಪ್ರಗತಿಯ ಹೆಸರಲ್ಲಿ ಮಕ್ಕಳ ಮುಗ್ಧತೆಯನ್ನು ಕಸಿಯುವುದರ ಬಗ್ಗೆ. ಮಕ್ಕಳು ಬೆಳೆದಂತೆ ಅವರೊಂದಿಗಿನ ನಮ್ಮ ವರ್ತನೆಯೂ ಅದೇ ಹದದಲ್ಲಿ ಬದಲಾಗುತ್ತಾ ಹೋಗುತ್ತದೆ. ನನ್ನ ಮಕ್ಕಳು ಚಿಕ್ಕವರಿದ್ದಾಗ ಅವರ ಎಲ್ಲ ಪ್ರಶ್ನೆಗಳಿಗೆ ನಾನು ಅಥವಾ ನಾವಿಬ್ಬರೂ ಉತ್ತರಿಸಿಲ್ಲ. ಕೇಳಿದ್ದೆಲ್ಲವನ್ನೂ ಅವರಪ್ಪ ತೆಗೆಸಿಕೊಡಲು ಮುಂದಾಗುತ್ತಾರೆ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ಐದನೆಯ ಬರಹ
ಸಂತಾಲಿ ಕವಿಯ ಸ್ತ್ರೀ ಸಂವೇದಿ ಕಾವ್ಯ: ಸುಕನ್ಯಾ ಕನಾರಳ್ಳಿ ಅಂಕಣ
ಇಲ್ಲಿ ನಾನು-ನೀನು ಅಂದರೆ ಸಮುದಾಯ ಉಳಿಯಬೇಕು, ಅವರಿಂದ ಅಂದರೆ ಹೊರಗಿನವರಿಂದ ನನ್ನನ್ನು ಕಾಪಾಡು ಎಂಬ ಬೇಡಿಕೆ ಇದೆ. ನಿನ್ನಿಂದ ಅಂದರೆ ದೌರ್ಜನ್ಯದ ಮೂಲವಾದ ಕುಟುಂಬ ಎಂಬ ವ್ಯವಸ್ಥೆಯಲ್ಲಿರುವ ಲಿಂಗ ತಾರತಮ್ಯದಿಂದ ತನ್ನನ್ನು ಕಾಪಾಡಿಕೊಳ್ಳಬೇಕು ಎನ್ನುವ ಆಗ್ರಹವಿಲ್ಲ. ಇದು ನನ್ನ ಗ್ರಹಿಕೆಗೆ ದಕ್ಕುವ ರೀತಿಯಲ್ಲಿ ಕಾಡನ್ನು ನಂಬಿದ, ಕೃಷಿಯ ಮೇಲೆಯೇ ಬದುಕುತ್ತಿರುವ ಸಮುದಾಯಕ್ಕೆ ಕುಟುಂಬ ಹೇಗಾದರೂ ಬದುಕಿ ಉಳಿಯಬೇಕು ಎನ್ನುವ ನೆಲೆಯಿಂದ ಹೊಮ್ಮಿದ ಒಂದು ಸತ್ಯ. ಕೃಷಿ ಕೆಲಸಕ್ಕೆಂದೇ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ಕೃಷಿಕ ಕುಟುಂಬಕ್ಕೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಉಪದೇಶ ಮಾಡುವುದು ಅಧಿಕಪ್ರಸಂಗತನ ತಾನೇ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ..: ವಿನಾಯಕ ಅರಳಸುರಳಿ ಅಂಕಣ
ಕೆಲವೊಮ್ಮೆ ಅಚಾನಕ್ಕಾಗಿ ಬೆಂಗಳೂರಿನ ಮೇಲೆ ಪ್ರೀತಿಯುಕ್ಕುತ್ತದೆ. ಈ ಶಹರ ನಮಗೆ ಬದಕು ಕೊಟ್ಟಿದೆ, ಇದಿನ್ನು ನಮ್ಮ ಊರು, ನಾನಿನ್ನು ಇಲ್ಲಿಯವನು ಎಂದು ನಂಬಲು ಪ್ರಯತ್ನಿಸುತ್ತೇವೆ. ಆಗಲೇ ನಾವು ಪ್ರತಿದಿನ ವ್ಯವಹರಿಸುವ ಅಂಗಡಿಯವನು ಇದ್ದಕ್ಕಿದ್ದಂತೆ ಹತ್ತು ರೂಪಾಯಿಗಾಗಿ ಬಿರುಮಾತಾಡುತ್ತಾನೆ. ವರ್ಷದಿಂದ ಪಕ್ಕದ ಮನೆಯಲ್ಲೇ ವಾಸವಿರುವ ಹೆಂಗಸು ಯಕಶ್ಚಿತ್ ನ್ಯಾಲೆಯ ಮೇಲಿನ ಬಟ್ಟೆ ತೆಗೆದಿಲ್ಲವೆಂಬ ಕಾರಣಕ್ಕೆ ಜಗಳಕ್ಕೆ ನಿಲ್ಲುತ್ತಾಳೆ. ಹೆಗಲ ಮೇಲೆ ಕೈ ಹಾಕಿಕೊಂಡು ಜೊತೆಗೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಮಿತ್ರ ಆಫೀಸು ಬದಲಿಸಿದ ಮರುಕ್ಷಣ ಕರೆ ಸ್ವೀಕರಿಸದೇ, ಮೆಸೇಜೂ ಮಾಡದೇ ಮಾಯವಾಗಿಬಿಡುತ್ತಾನೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”
ಒಗ್ಗಟ್ಟು, ಒಡಕುಗಳ ವಿಚಲತೆ: ಡಾ. ವಿನತೆ ಶರ್ಮ ಬರೆಯುವ ಅಂಕಣ
ಆಂಗ್ಲೋ-ಆಸ್ಟ್ರೇಲಿಯನ್ ಅಂದರೆ ಬಿಳಿ-ವಸಾಹತುಶಾಹಿ-ಸೆಟ್ಟ್ಲರ್ ಸಮಾಜಕ್ಕೆ ಸೇರಿದ ಪೌಲಿನ್ ಹ್ಯಾನ್ಸನ್ ತನ್ನನ್ನು ಕಟ್ಟಾ ಆಸ್ಟ್ರೇಲಿಯನ್ ಎಂದು ಕರೆದುಕೊಳ್ಳುತ್ತಾರೆ. ಅಂದರೆ ಬ್ರಿಟಿಷರು ಹುಟ್ಟುಹಾಕಿದ ಬಿಳಿ ಆಸ್ಟ್ರೇಲಿಯಾ. ಆಸ್ಟ್ರೇಲಿಯಾದಲ್ಲಿ ಬದುಕುತ್ತಿರುವವರು ಕಡ್ಡಾಯವಾಗಿ ಆಸ್ಟ್ರೇಲಿಯನ್ ಸಂಸ್ಕೃತಿಯನ್ನು ಅಂದರೆ ಬಿಳಿಯರ ಸಂಸ್ಕೃತಿಯನ್ನು ಪಾಲಿಸಬೇಕು, ಇಲ್ಲವಾದರೆ ದೇಶ ತೊರೆದು ಹೋಗಬೇಕು, ಎನ್ನುತ್ತಾರೆ. ಹಿಂದೊಮ್ಮೆ ಇಲ್ಲಿನ ಮೂಲನಿವಾಸಿಗಳು ಆಸ್ಟ್ರೇಲಿಯನ್ನರಲ್ಲ ಎಂದು, ನಂತರ ಏಷ್ಯನ್ನರಿಗೆ ಈ ದೇಶದಲ್ಲಿ ಪ್ರವೇಶ ಇಲ್ಲ ಎಂದು ಹೇಳಿ ಎಲ್ಲರ ಗಮನ ಸೆಳೆದಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
“ಶಿಲ್ಪಕ್ಕೆ ತುಟಿಯುಂಟು, ಇಲ್ಲ ಮಾತು”: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ
ಪ್ರೀತಿ ಅಭಿಮಾನ ಗೌರವದಿಂದ ಸೀತೆಯನ್ನು ಬರಮಾಡಿಕೊಳ್ಳಬೇಕಾಗಿದ್ದ ಕ್ಷಣ ಅದು. ಎಲ್ಲರೂ ಅಂತಹದೊಂದು ಕ್ಷಣಕ್ಕೆ ಸಾಕ್ಷಿಯಾಗಲು ಅಲ್ಲಿ ನಿಂತವರು. ಆದರೆ ತುಂಬು ನಿರೀಕ್ಷೆಯಿಂದ ರಾಮನ ಎದುರು ಬಂದು ನಿಲ್ಲುವ ಸೀತೆಗೆ ಸಿಕ್ಕಿದ ಸ್ವಾಗತವಾದರೂ ಎಂಥದ್ದು? ಪ್ರೀತಿ ಮತ್ತು ಸಂಭ್ರಮದಲ್ಲಿ ಅರಳಬೇಕಾಗಿದ್ದ ರಾಮನ ಮುಖ ಸಿಟ್ಟಿನಿಂದ ಉಗ್ರವಾಗುತ್ತದೆ. ಲಕ್ಷ್ಮಣ, ವಿಭೀಷಣ, ಆಂಜನೇಯರಿಗೆ ಇದು ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ಮುಂದೆ ರಾಮ ಆಡುವ ಮಾತುಗಳನ್ನು ಕೇಳಿಸಿಕೊಂಡ ಸೀತೆಗೆ ಅಗ್ನಿ ಪ್ರವೇಶ ಮಾಡುವುದು ಬಿಟ್ಟು ಬೇರೆ ವಿಕಲ್ಪವೇನೂ ಉಳಿಯುವುದಿಲ್ಲ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”
ಕೋಟಿ ಯೋಜನವಿರಲಿ, ದಾಟಿ ಬರುವೆನು… ಬಿಳಿಮಲೆಗೆ: ಸುಕನ್ಯಾ ಕನಾರಳ್ಳಿ ಅಂಕಣ
ಸುಖವಾದ ಊಟವಾದ ಮೇಲೆ ಸುಮಾರು ಎರಡು ರಾತ್ರಿಗಳಿಂದ ನಿದ್ದೆಯಿಲ್ಲದೇ ಬಳಲಿದ್ದ ನನ್ನ ಕಣ್ಣುಗಳನ್ನು ಇನ್ನಿಲ್ಲದಂತೆ ಅಗಲವಾಗಿ ತೆರೆದು ಇರಿಸಿದ್ದು ‘ಕೃಷ್ಣಸಂಧಾನ’ ಪ್ರಸಂಗದ ತಾಳಮದ್ದಳೆ ಕಾರ್ಯಕ್ರಮ. ಸುಮಾರು ಎರಡು ಗಂಟೆಗಳ ಕಾಲ ಆ ಭಾಷೆ, ವಾಗ್ವೈಖರಿ, ಹಾಸ್ಯ, ಅಭಿನಯಗಳು ಅದೆಂತಹ ಬೌದ್ಧಿಕ ಸಾಂತ್ವನವನ್ನು ನೀಡಿದವೆಂದರೆ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಸತತವಾಗಿ ಮೂರು ಗಂಟೆಗಳ ಉಪನ್ಯಾಸವನ್ನು ತಲ್ಲೀನಳಾಗಿ ಕೇಳಿಸಿಕೊಂಡು ನಂತರ ಅದನ್ನು ಅರಗಿಸಿಕೊಳ್ಳಲು ಮುಂದಿನ ಒಂದು ವಾರದ ಮಟ್ಟಿಗೆ ಹೆಣಗುತ್ತಿದ್ದೆನಲ್ಲ, ಇದು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಇನ್ನೊಂದು ಹತ್ತು ದಿನವಾದರೂ ನಿನ್ನ ತಲೆಗೆ ಬಿಡುವಿರುವುದಿಲ್ಲ, ಬಿಡು ಎಂದು ಕಣ್ಣು ಹೊಡೆಯುತ್ತಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ನಾಕವೋ? ನರಕವೋ?!: ಜಯಲಕ್ಷ್ಮಿ ಪಾಟೀಲ್ ಅಂಕಣ
ಕಾಶ್ಮೀರವನ್ನು ನೋಡಿಯೇ ಇಲ್ಲದ ಆದರೆ ಮತ್ತೂ ಮತ್ತೂ ಆತಂಕವಾದಿಗಳ ದಾಳಿಗೆ, ಧರ್ಮಗಳ ಮೂಲಕ ಅಲ್ಲಿನ ಜನರನ್ನು ಒಡೆದು ಆಳುತ್ತಿರುವವರ ದಾಳಿಗೆ ಒಳಗಾಗುತ್ತಲೇ ಇರುವ ಕಾಶ್ಮೀರ ಕುರಿತು ನನಗೆ ಯಾವಾಗಲೂ ಭಯ ಮಿಶ್ರಿತ ಕುತೂಹಲ. ಕಾಶ್ಮೀರ ನನಗೆ ರಮ್ಯವಾಗಿ ಎಂದಾದರೂ ಕಂಡಿದ್ದರೆ ಅದು ಅದು ಶಮ್ಮಿ ಕಪೂರ್, ಶಶಿ ಕಪೂರ್ ಅವರ ಸಿನಿಮಾಗಳಲ್ಲಿ. ಇತ್ತೀಚಿನ ಪೆಹಲ್ಗಾಮ್ ಅಟ್ಯಾಕ್ವರೆಗೂ ಉಗ್ರಗಾಮಿಗಳ ಅಟ್ಟಹಾಸದ ಪ್ರಕರಣಗಳನ್ನೆ ಕೇಳುತ್ತಾ ಬಂದಿದ್ದೇನೆ. ಹೊರಗಿನವರು ಸಾಲದು ಅಂತ ನಮ್ಮ ರಾಜಕಾರಣಿಗಳ ಧರ್ಮದಾಟ ಬೇರೆ! ಅಯ್ಯೋ ಭಾರತಮಾತೆ…
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ನಾಲ್ಕನೆಯ ಬರಹ
ಪುರಂದರದಾಸರು ಕನ್ನಡಮಾತೆಯ ಸುಪುತ್ರರಾಗಬಹುದು, ಕನಕದಾಸರಿಗೆ ಆ ಭಾಗ್ಯವಿಲ್ಲ!: ಸುಕನ್ಯಾ ಕನಾರಳ್ಳಿ ಅಂಕಣ
ಕನ್ನಡ ಸಿನೆಮಾ ಪುರಂದರದಾಸ ಮತ್ತು ಕನಕದಾಸರನ್ನು ಅರಿವಿಗೆ ದಕ್ಕಿಸಿಕೊಂಡ ರೀತಿಯಲ್ಲಿ ವ್ಯತ್ಯಾಸವಿರುವುದನ್ನು ಗಮನಿಸದೇ ಇರುವುದು ಕಷ್ಟ. ಎರಡೂ ಕಥಾನಕಗಳಲ್ಲಿ ಸಾಮಾನ್ಯ ಅಂಶಗಳಿರುವುದೂ ಸರಿಯೆ. ಉದಾಹರಣೆಗೆ ಬ್ರಾಹ್ಮಣ, ಬ್ರಾಹ್ಮಣೀಯತೆ, ಬ್ರಾಹ್ಮಣಿಕೆ ಮುಂತಾದ ಪರಿಕಲ್ಪನೆಗಳು ಎರಡರಲ್ಲೂ ಸಾಕಷ್ಟು ಲೇವಡಿಗೆ ಒಳಗಾಗುತ್ತವೆ. ಹಾಗೆ ನೋಡಿದರೆ ಕನ್ನಡದ ಹೆಚ್ಚಿನಂಶ ಎಲ್ಲ ಸಂತಚರಿತೆಗಳಲ್ಲಿ ಅದು ಸಾಮಾನ್ಯವೇ. ಕನಕ ಒಬ್ಬ ಅಬ್ರಾಹ್ಮಣ. ಕ್ಷತ್ರಿಯನೊ ಕುರುಬನೋ ಆಗಿದ್ದಿರಬೇಕು. ಚಿತ್ರದ ಹೆಚ್ಚಿನಂಶ ಅವನು ಬ್ರಾಹ್ಮಣ ವಿರೋಧವನ್ನು ನಿಭಾಯಿಸುವುದಕ್ಕೇ ಮೀಸಲಾಗುತ್ತದೆ. ಅವರಿಗಿಂತ ಅವನು ಹೇಗೆ ‘ಹೆಚ್ಚು’ ಬುದ್ಧಿವಂತ, ವಿವೇಕಿ, ಮತ್ತು ಅವನೂ ಸಹ ತನ್ನ ಪರಮಭಕ್ತಿಯ ಕಾರಣದಿಂದ ಮೋಕ್ಷಕ್ಕೆ ಅರ್ಹ ಎನ್ನುವುದನ್ನು ಸಾಬೀತುಪಡಿಸಲು ಚಿತ್ರ ಉದ್ದಕ್ಕೂ ಹೆಣಗುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ
ಕುದಿಯದ ಕಡಲು: ವಿನಾಯಕ ಅರಳಸುರಳಿ ಅಂಕಣ
ಇಂದಿಗೂ ನನ್ನನ್ನು ಇದೊಂದು ಪ್ರಶ್ನೆ ಕಾಡುತ್ತಲೇ ಇದೆ: ನಾವು ಓದಿಕೊಳ್ಳುವ ಸಾಹಿತ್ಯ, ಕೇಳಿಸಿಕೊಳ್ಳುವ ಕಿವಿ ಮಾತು, ಪ್ರತಿ ದಿನ ನೋಡುವ ಯಾರದ್ದೋ ಬದುಕಿನ ನಿದರ್ಶನಗಳು, ತತ್ವ, ಸಿದ್ಧಾಂತ, ಆದರ್ಶ, ಭಾಷಣಗಳು… ವೈಯಕ್ತಿಕ ಬದುಕಿನ ತಿರುವುಗಳಿಗೆ ಇವು ಹೇಗೆ ಅನ್ವಯವಾಗುತ್ತವೆ? ಯಾರದೋ ವಿಷಯದಲ್ಲಿ ಎಷ್ಟೆಲ್ಲ ಪ್ರಬುದ್ಧವಾಗಿ ದಾರಿ ಹೇಳುವ ನಾವು ನಮ್ಮ ಪ್ರಯಾಣದಲ್ಲಿ ಮಾತ್ರ ಏಕೆ ಓಲಾಡುತ್ತ ನಡೆಯುತ್ತೇವೆ?
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ









