Advertisement

ಪುಸ್ತಕ ಸಂಪಿಗೆ

ಮೊಟ್ಟೆಕೋಳಿಯೇ ಬೇಕೆಂದ ಅಳಿಯರು!: ಸೂರ್ಯಕೀರ್ತಿ ಪ್ರಬಂಧ

ಮೊಟ್ಟೆಕೋಳಿಯೇ ಬೇಕೆಂದ ಅಳಿಯರು!: ಸೂರ್ಯಕೀರ್ತಿ ಪ್ರಬಂಧ

‘ಏನೇ ನಿಮ್ಮವ್ವ ಅಳಿಯಂದ್ರ ನೋಡೋ ಹುಟ್ಟೇನೆ ಇದು, ಇದೊಂದು ಬಾಳಾಟ ಅಂತ ನಾನು ಅಂದುಕೊಂಡಿರಲಿಲ್ಲ, ಅಕ್ಕಪಕ್ಕದವರೆಲ್ಲ ಎಷ್ಟು ಚೆಂದವಾಗಿ ಅಳಿಯರನ್ನು ಕರ್ದು ಕಳಿಸ್ತಾರೆ ಅನ್ನೋದ್ನ ನೋಡಿ ಕಲಿಬೇಕು’ ಎಂದೆಲ್ಲ ಅಂದಿದ್ದನ್ನು ನೋಡಿ. ಮೇಯಲು ಹೋದ ಕೋಳಿಗಳ ಬಿಡದೆ ಅಟ್ಟಾಡಿಸಿಕೊಂಡು ಹಿಡಿದು ಕೂಯ್ದು ತಿಂದು ತಮ್ಮ ಹೆಂಡತಿಯರ ಜೊತೆ ಹೊರಟು ನಿಂತರು. ಅಜ್ಜಿ ಮಕ್ಕಳ ಖುಷಿಯ ನೋಡಿ ತನ್ನೆರಡು ಕೈಗಳ ಎತ್ತಿ ಆಶೀರ್ವಾದದ ಜೊತೆ ಒಂದಿಷ್ಟು ಕಣ್ಣೀರು ಹಾಕಿದಳು. ಎಲ್ಲರಿಗೂ ತಿಂಡಿ ತಿನಸುಗಳ ಕಟ್ಟಿ ‘ಜೋಪಾನ’ ಎಂದು ಹೇಳಿದಳು.
ಇತ್ತೀಚೆಗೆ ಬಿಡುಗಡೆಯಾದ ಸೂರ್ಯಕೀರ್ತಿ ಅವರ ಪ್ರಬಂಧಗಳ ಸಂಕಲನ “ಮಳೆ”ಯ ಒಂದು ಪ್ರಬಂಧ ನಿಮ್ಮ ಓದಿಗೆ

read more
ಲಂಡನ್‌ ಮತ್ತು ಟಿಪ್ಪೂ ಸುಲ್ತಾನ್:  ಜೆ. ಬಾಲಕೃಷ್ಣ ಬರಹ

ಲಂಡನ್‌ ಮತ್ತು ಟಿಪ್ಪೂ ಸುಲ್ತಾನ್: ಜೆ. ಬಾಲಕೃಷ್ಣ ಬರಹ

ಬ್ರಿಟಿಷರಿಗೆ ಆ `ವ್ಯಾಘ್ರಸ್ವಪ್ನ’ ಎಷ್ಟು ನಿದ್ರೆ ಕೆಡಿಸಿತ್ತೆಂದರೆ ಅವರು ಆ ಸಿಟ್ಟನ್ನು ಕಾಡಿನಲ್ಲಿನ ನಿಜವಾದ ಹುಲಿಗಳನ್ನು ಕೊಂದು ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು. ಟಿಪ್ಪು ಹುಲಿಯೊಂದಿಗೆ ಸೆಣಸುತ್ತಿರುವ ಹಲವಾರು ಚಿತ್ರಗಳು ಟಿಪ್ಪೂನ ಕಾಲದ ನಂತರ ರಚಿತವಾಗಿವೆ. ಟಿಪ್ಪೂ ನಿಜವಾಗಿ ಹುಲಿಯೊಂದಿಗೆ ಸೆಣಸಿದ ದಾಖಲೆಗಳಿಲ್ಲವೆನ್ನುತ್ತಾರೆ ಚರಿತ್ರಕಾರರು. ಆದರೆ, ಟಿಪ್ಪೂನ ಕಾಲದ್ದೇ ಆದ ದಂತ ಕತೆಯೊಂದರಲ್ಲಿ ಹೈದರಾಲಿ ಟಿಪ್ಪೂನನ್ನು ಹೈದರಾಬಾದ್‌ಗೆ ಒಪ್ಪಂದವೊಂದರೆ ವಿಚಾರಕ್ಕೆ ಕಳುಹಿಸಿದ್ದಾಗ ಅಲ್ಲಿನ ಕಾಡೊಂದರಲ್ಲಿ ಹುಲಿಯೊಂದನ್ನು ಎದುರಿಸಿದ್ದನಂತೆ.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಬರಹ ನಿಮ್ಮ ಓದಿಗೆ

read more
ಐವತ್ತು ಪದ್ಯ, ಮೂವತ್ತಮೂರು ವರ್ಷ…: ದೀಪಾ ಗೋನಾಳ ಬರಹ

ಐವತ್ತು ಪದ್ಯ, ಮೂವತ್ತಮೂರು ವರ್ಷ…: ದೀಪಾ ಗೋನಾಳ ಬರಹ

ಹೀಗೆ ತೇಲಿ ಹೋದ ಮತ್ತು ಕವಿತೆಯಾಗಿ ಉಳಿದು ಹೋದ ಜೀವ ಕೆತ್ತಿದ ಮೆತ್ತನೆ ಪದಗಳು ಬದುಕನ್ನ ಅವನು ಪಳಗಿಸ ಹೊರಟ ದಾರಿ ನಡುವೆ ನಿಂತು ನಕ್ಕ ದಾರಿಗಲ್ಲು. ಆ ಕಲ್ಲಿಗೂ ಕರುಳುಂಟು ಎನ್ನುವ ಅವನೊಳಗಿನ ಜೀವನಪ್ರೀತಿ. ಕವಿ ತಾನು ಇಲ್ಲದಾಗ ನಾವು ಅವನ ಮನೆಗೆ ಹೋದ್ರೆ ಏನು ಮಾಡಬೇಕು ಅಂತ ಹೇಳಿದ್ದಾನೆ, ಹೇಳಿ ಹೋಗಿದ್ದಾನೆ. ಅವನು ಇದನ್ನೆಲ್ಲ ಯಾಕೆ ಮೊದಲೇ ಇಷ್ಟು ನಿಖರವಾಗಿ ಹೇಳಿದ ಅನ್ನೊ ಪ್ರಶ್ನೆ ನನ್ನದು, ಆದರೆ ಅವನು ಹೇಳಿದ ಮಾತಿಗೆ ಬೆರಗೂ ಹಿಂಬಾಲಿಸೋದು ಕಂಡು ಆಶ್ಚರ್ಯವೂ..
ಎರಡು ವರ್ಷಗಳ ಹಿಂದೆ ತೀರಿಕೊಂಡ ಯುವಕವಿ ಅನಿಲ ಹುಲಮನಿ ಅವರ ಕವನ ಸಂಕಲನ “ಹೊಸ ಅಧ್ಯಾಯ”ವನ್ನು ಧಾರವಾಡದ ಕ್ರಾಂತಿ ಪ್ರಕಾಶನ ಪ್ರಕಟಿಸಿದ್ದು, ಈ ಸಂಕಲನದ ಕುರಿತು ದೀಪಾ ಗೋನಾಳ ಬರಹ

read more
ಕೊನಾರ್ಕ್‌ನ ಮಿಥುನ ಶಿಲ್ಪಗಳು: ಡಾ. ಜೆ. ಬಾಲಕೃಷ್ಣ ಬರಹ

ಕೊನಾರ್ಕ್‌ನ ಮಿಥುನ ಶಿಲ್ಪಗಳು: ಡಾ. ಜೆ. ಬಾಲಕೃಷ್ಣ ಬರಹ

ಒರಿಸ್ಸಾದ ದೇವಾಲಯಗಳ ಹೊರಭಾಗದಲ್ಲಿ ಯಥೇಚ್ಛವಾಗಿ ಶಿಲ್ಪಕಲೆ ಇರುವಂತೆ ಅದಕ್ಕೆ ತದ್ವಿರುದ್ಧವಾಗಿ ದೇವಾಲಯಗಳ ಒಳಭಾಗ ಭಣ ಭಣಗುಟ್ಟುವಂತೆ ಖಾಲಿಯಾಗಿರುತ್ತದೆ. ಇದನ್ನು ಗಮನಿಸಿದ ಖ್ಯಾತ ಕಲೆ-ಸಂಸ್ಕೃತಿಯ ವಿದ್ವಾಂಸ ಆನಂದ ಕೂಮಾರಸ್ವಾಮಿ, `ಬದುಕೆಂಬುದು ಒಂದು ಮಾಯಾ ಪರದೆ ಇದ್ದಂತೆ. ಅದರ ಹಿಂಭಾಗದಲ್ಲಿ ದೇವರಿದ್ದಾನೆ. ದೇವಾಲಯದ ಹೊರಭಾಗದಲ್ಲಿ ನಮ್ಮ ಬದುಕಿನ, ಸಂಸಾರದ ಚಿತ್ರಣವಿರುತ್ತದೆ. ಅಲ್ಲಿನ ಕೆತ್ತನೆ, ಚಿತ್ರಣಗಳು ಬದುಕೆಂಬ ಮಾಯಾಲೋಕವನ್ನೂ, ಹುಟ್ಟು-ಸಾವುಗಳ ಬದುಕಿನ ಚಕ್ರಕ್ಕೆ ಮನುಷ್ಯನನ್ನು ಬಂಧಿಸಿರುವ ಆತನ ಆಸೆ ಆಕಾಂಕ್ಷೆಗಳನ್ನೂ, ನೋವು ನಲಿವುಗಳನ್ನೂ ಪ್ರತಿಬಿಂಬಿಸುತ್ತವೆ.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಬರಹ ನಿಮ್ಮ ಓದಿಗೆ

read more
ಪಪ್ಪುನಾಯಿ ಮತ್ತು ದೆಯ್ಯದ ಚಪ್ಪಲಿ: ವಿಜಯಶ್ರೀ ಹಾಲಾಡಿ ಪ್ರಬಂಧ

ಪಪ್ಪುನಾಯಿ ಮತ್ತು ದೆಯ್ಯದ ಚಪ್ಪಲಿ: ವಿಜಯಶ್ರೀ ಹಾಲಾಡಿ ಪ್ರಬಂಧ

ಮಲೆನಾಡು, ಕರಾವಳಿ ಭಾಗದ ಹಳ್ಳಿಯ ಮನೆ ಮನೆಗಳಲ್ಲಿ ನಾಯಿಗಳಿರುವುದು ಕಡ್ಡಾಯ. ಕಾಡು, ಹಾಡಿ, ಗುಡ್ಡ, ಬಯಲುಗಳ ನಡುವೆ ಫರ್ಲಾಂಗುಗಳ ಅಂತರದಲ್ಲಿ ಅವಿತುಕೊಂಡಿರುವ ಮನೆಗಳ ರಕ್ಷಣೆಗೆ, ಜೀವಂತಿಕೆಗೆ ನಾಯಿಗಳು ಅನಿವಾರ್ಯ. ಕಳ್ಳಕಾಕರು, ಜೀವಾದಿಗಳು, ದೆವ್ವ-ಭೂತ-ಪೀಡೆ-ಕುಲೆಗಳನ್ನು ಕೂಡಾ ನಾಯಿಗಳು ದೂರವಿಡುತ್ತವೆಂಬ ನಂಬಿಕೆಯಿದೆ! ಮನುಷ್ಯರ ಕಣ್ಣಿಗೆ ಕಾಣದ ದೆವ್ವ ಭೂತಗಳು ನಾಯಿಗಳಿಗೆ ಕಾಣುತ್ತವಂತೆ, ಇದರಿಂದಾಗಿಯೇ ಅವು ರಾತ್ರಿಯಿಡೀ ಬೊಗಳುವುದಂತೆ! ನಮ್ಮ ಹಳ್ಳಿಯವರ ಈ ತರದ ಕಲ್ಪನೆಗಳಿಗೆ ಯಾವುದೇ ಆಧಾರವಿಲ್ಲವಾದರೂ ಇಂತವುಗಳನ್ನು ಕೇಳುವುದು ರೋಮಾಂಚನಕಾರಿಯಾಗಿತ್ತು.
ವಿಜಯಶ್ರೀ ಹಾಲಾಡಿ ಹೊಸ ಪ್ರಬಂಧ ಸಂಕಲನ “ಕಣ್ಣ ಕಾಡಿದ ಹಾಡು” ಒಂದು ಪ್ರಬಂಧ ನಿಮ್ಮ ಓದಿಗೆ

read more
ಭುವನೇಶ್ವರದ ಭವ್ಯ ಲಿಂಗರಾಜ ದೇವಾಲಯ: ಡಾ. ಜೆ. ಬಾಲಕೃಷ್ಣ ಬರಹ

ಭುವನೇಶ್ವರದ ಭವ್ಯ ಲಿಂಗರಾಜ ದೇವಾಲಯ: ಡಾ. ಜೆ. ಬಾಲಕೃಷ್ಣ ಬರಹ

ಭುವನೇಶ್ವರದಲ್ಲಿ 500ಕ್ಕೂ ಹೆಚ್ಚು ದೇವಾಲಯಗಳಿದ್ದರೂ ಸಹ ಅವುಗಳಲ್ಲಿ ಲಿಂಗರಾಜ ದೇವಾಲಯ ವಾಸ್ತುಶೈಲಿಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ. ಒರಿಸ್ಸಾದಲ್ಲಿ ನಿರ್ಮಿತವಾಗಿರುವ ಮೊಟ್ಟಮೊದಲ ಅತಿ ದೊಡ್ಡ ದೇವಾಲಯವಾಗಿರುವುದಲ್ಲದೆ, ಒರಿಸ್ಸಾದ ಶೈವ ದೇವಾಲಯಗಳಲ್ಲಿಯೇ ದೊಡ್ಡ ದೇವಾಲಯವಾಗಿರುವ ಲಿಂಗರಾಜ ದೇವಾಲಯ `ಕಳಿಂಗ ವಾಸ್ತುಶೈಲಿ’ಯ ಅತಿ ಸುಂದರ ಉದಾಹರಣೆಯಾಗಿದೆ. ಕ್ರಿ.ಶ. 6-7ನೇ ಶತಮಾನದಲ್ಲಿ ಆರಂಭವಾದ ಒರಿಸ್ಸಾ ದೇವಾಲಯಗಳ ವಾಸ್ತು ಶಿಲ್ಪ ನಿರ್ಮಾಣ 11ನೇ ಶತಮಾನದಲ್ಲಿ ಲಿಂಗರಾಜ ದೇವಾಲಯದ ನಿರ್ಮಾಣದ ಹೊತ್ತಿಗೆ ಉತ್ತುಂಗಕ್ಕೇರಿತ್ತು. ಆ ವಾಸ್ತು ನಿರ್ಮಾಣ 13ನೇ ಶತಮಾನದ ನಂತರ ಕ್ರಮೇಣ ಕಡಿಮೆಯಾಯಿತು.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಮತ್ತೊಂದು ಬರಹ ನಿಮ್ಮ ಓದಿಗೆ

read more
‘ಮೋಹಿತ’ನ ಮೋಹಕ ಕವಿತೆಗಳು: ಅಬ್ದುಲ್‌ ರಶೀದ್‌ ಕವನ ಸಂಕಲನಕ್ಕೆ ಎಸ್‌. ಮಂಜುನಾಥ್‌ ಮುನ್ನುಡಿ

‘ಮೋಹಿತ’ನ ಮೋಹಕ ಕವಿತೆಗಳು: ಅಬ್ದುಲ್‌ ರಶೀದ್‌ ಕವನ ಸಂಕಲನಕ್ಕೆ ಎಸ್‌. ಮಂಜುನಾಥ್‌ ಮುನ್ನುಡಿ

ಕರಗಿ-ಹರಿಯುವ- ಈ ಶಬ್ದಗಳನ್ನು ಬಳಸಬೇಕಾಗುವುದರಿಂದ ರಶೀದರದ್ದು ಒಂದು ‘ದ್ರವ ಪ್ರತಿಭೆ’! ತನ್ನನ್ನು ಪೂರಾ ಬಿಟ್ಟುಕೊಟ್ಟೇ ಹರಿದುಹೋಗುವಂತಿರುವುದು ನದಿಯ ಜೀವಂತಿಕೆ ತಾನೇ? ಇಷ್ಟು ಹೇಳಿದರೆ ರಶೀದರ ಕವಿತೆಯ ಗುಣವನ್ನು ಪೂರ್ತಿ ಹೇಳಿದಂತಾಗುವುದಿಲ್ಲ. ಅಷ್ಟು ವೈಚಿತ್ರ್ಯಗಳನ್ನು ಒಳಗೊಂಡುದು ಅದು. ಮಾತಿನಲ್ಲಿ ಪ್ರತಿಮೆಯಲ್ಲಿ ಚಿಂತನೆಯಲ್ಲಿ ಭಾವನೆಯಲ್ಲಿ ಹಾಗೆ ವಿಚಿತ್ರವಾದುದು. ಒಂದು ಕಾರಣ: ಇದು ಕವಿತೆಗೆ ಸೇರುವುದು. ಇದು ಸೇರಲಾರದ್ದು ಎಂಬ ಭೇದವಿರದೆ ಏನೆಲ್ಲವನ್ನು ಬೇಕಾದರೂ ಒಳಗೊಳ್ಳುವಂಥದು. ಹಾಗಿದ್ದೂ ಅಂತಿಮವಾಗಿ ಸಹಜತೆಯೇ ಹೆಗ್ಗುರುತಾದ್ದು.
ಅಬ್ದುಲ್‌ ರಶೀದ್‌ ಕವನ ಸಂಕಲನ “ನರಕದ ಕೆನ್ನಾಲಿಗೆಯಂಥ ನಿನ್ನ ಬೆನ್ನ ಹುರಿ”ಗೆ ಎಸ್‌. ಮಂಜುನಾಥ್‌ ಬರೆದ ಮುನ್ನುಡಿ

read more
ಒರಿಸ್ಸಾ ವಾಸ್ತುಕಲೆ: ಡಾ. ಜೆ. ಬಾಲಕೃಷ್ಣ ಬರಹ…..

ಒರಿಸ್ಸಾ ವಾಸ್ತುಕಲೆ: ಡಾ. ಜೆ. ಬಾಲಕೃಷ್ಣ ಬರಹ…..

ಒರಿಸ್ಸಾದ ವಾಸ್ತು ಶಿಲ್ಪಿಗಳು ದೇಗುಲಗಳನ್ನು ದೇವರ ಅಥವಾ ಮಾನವನ ದೇಹಕ್ಕೆ ಹೋಲಿಸಿದ್ದರು. ಆದುದರಿಂದಲೇ ದೇಗುಲದ ವಿವಿಧ ಭಾಗಗಳಿಗೆ ದೇಹದ ಅಂಗಗಳ ಹೆಸರುಗಳನ್ನೇ ನೀಡಿದ್ದಾರೆ: ಪಾಭಗ (ಪಾದ), ಜಂಘ (ಮೊಣಕಾಲು), ಗಂಡಿ, ಮಸ್ತಕ ಮುಂತಾದವು. ಮುಖ್ಯ ಶಿಖರವುಳ್ಳ ದೇಗುಲವನ್ನು ಗಂಡು ಅಥವಾ ಮದುಮಗನೆಂದೂ ಹಾಗೂ ಜಗಮೋಹನ ದೇಗುಲವನ್ನು ಹೆಣ್ಣು ಅಥವಾ ಮದುಮಗಳೆಂದೂ ಭಾವಿಸಲಾಗುತ್ತಿತ್ತು. ಒರಿಸ್ಸಾದ ದೇಗುಲಗಳಲ್ಲಿ ವಾಸ್ತು ಕಲೆ ಹಾಗೂ ಶಿಲ್ಪಕಲೆಯನ್ನು ಪ್ರತ್ಯೇಕವಾಗಿ ನೋಡುವುದು ಸಾಧ್ಯವೇ ಇಲ್ಲ. ಆದುದರಿಂದಲೇ ಕಲಾ ಸಂಶೋಧಕಿ ಡಾ.ಸ್ಟೆಲ್ಲಾ ಕ್ರಮರೀಷ್ `ಒರಿಸ್ಸಾದ ವಾಸ್ತುಕಲೆ ದೈತ್ಯಾಕಾರದ ಶಿಲ್ಪಕಲೆ’ ಎಂದಿದ್ದಾರೆ.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಮತ್ತೊಂದು ಬರಹ ನಿಮ್ಮ ಓದಿಗೆ

read more
ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ: ಸಂಗೀತ ರವಿರಾಜ್ ಬರಹ

ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ: ಸಂಗೀತ ರವಿರಾಜ್ ಬರಹ

ಇಲ್ಲಿನ ಕವಿತೆಗಳಲ್ಲಿ ಅತಿರಂಜಿತ ಕಲ್ಪನೆಗಳಿಗಿಂತ ತನ್ನ ನಡುವಿನ ಬದುಕನ್ನೇ ಭಿನ್ನವಾಗಿ ಅವಲೋಕಿಸುತ್ತ, ಆ ಮೂಲಕವೇ ತನ್ನ ಭಾವನೆಗಳನ್ನು ಮಿಳಿತಗೊಳಿಸಿ ಕವಿತೆಯಲ್ಲಿ ಸ್ಪುರಿಸುತ್ತಾರೆ. ಕಾವ್ಯದಿಂದಲೇ ಏನನ್ನೋ ಗೆಲ್ಲಬಯಸುತ್ತೇನೆ ಎಂಬ ಸಣ್ಣ ಆಸೆಯಿಂದ, ಜೊತೆಗೆ ಆಸ್ಥೆಯಿಂದ ಹೇಳುವಂಥದನ್ನು ಹೇಳಿಕೊಂಡಿದ್ದಾರೆ. ಮಾತಿಗಿಂತ ಕಾವ್ಯವೇ ತನ್ನ ಅಭಿವ್ಯಕ್ತಿ ಮಾಧ್ಯಮ ಎನಿಸುವಂತಹ ಜೀವಂತಿಕೆಯ ಸಾಲುಗಳು ಕವಿತೆಗಳಲ್ಲಿವೆ.
ಜಗದೀಶ್‌ ಜೋಡುಬೀಟಿ ಕವನ ಸಂಕಲನ “ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ” ಕುರಿತು ಸಂಗೀತ ರವಿರಾಜ್‌, ಚೆಂಬು ಬರಹ

read more

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

“ಚದುರಂಗ”ದ ಕುರಿತು ತೇಜಸ್ವಿನಿ ಹೆಗಡೆ ಬರಹ

ಹೀಗೇ ಎಲ್ಲವನ್ನೂ ಓದುತ್ತಾ, ಮಥಿಸುತ್ತಾ ಹೋದರೆ, ಆ ಕಾಲಕ್ಕೆ ಹುಟ್ಟಿದ್ದ ಉತ್ತಮ ಗುರಿಯುಳ್ಳ ಸಿದ್ಧಾಂತಗಳು ಕ್ರಮೇಣ ಅಧಿಕಾರದ ಲಾಲಸೆ ಹೇಗೆ ಬದಲಾದವು, ಹೋರಾಟವೇ ಬದುಕಾಗಿದ್ದ ಒಂದು ಪರ್ವ…

Read More

ಬರಹ ಭಂಡಾರ