Advertisement

ಸಂಪಿಗೆ ಸ್ಪೆಷಲ್

ಶಾಂತಿನಾಥರೊಂದಿಗೆ ಸ್ಕಾಚ್…

ಶಾಂತಿನಾಥರೊಂದಿಗೆ ಸ್ಕಾಚ್…

ಶಾಂತಿನಾಥರ ಸಾಹಿತ್ಯ ಆಗಿನ ಕಾಲಕ್ಕೂ ಹೊಸ ಮತ್ತು ಯಾರೂ ಪ್ರಯತ್ನಿಸಿರದ ಆಯಾಮಗಳನ್ನು ತೆರೆದಿಡುತ್ತಿತ್ತು ಎನ್ನುವುದು ನಿಜ. ಹೀಗೆ ಮಡಿವಂತಿಕೆಯೇ ಇಲ್ಲದೇ ಬರೆಯುತ್ತಿದ್ದ ಶಾಂತಿನಾಥರು ಯಾವುದೇ ವಿವಾದಕ್ಕೆ ಒಳಗಾಗಲಿಲ್ಲ. ತಮ್ಮಷ್ಟಕ್ಕೆ ತಾವು ನಿರ್ಭಿಢೆಯಿಂದ ಬರೆದರು. ತಮ್ಮ ವಿಸ್ತಾರವಾದ ಸಾಹಿತ್ಯ- ಮಾನಸಶಾಸ್ತ್ರ – ಸಮಾಜಶಾಸ್ತ್ರ – ರಾಜಕೀಯದ ಓದು ಮತ್ತು ಒಳನೋಟಗಳ ಹಿನ್ನೆಲೆ ಅವರ ಕಥೆಯ ಕಟ್ಟುವಿಕೆಯಲ್ಲಿದೆ.
“ಶಾಂತಿನಾಥ ದೇಸಾಯಿ ಸಾಹಿತ್ಯ-ವ್ಯಕ್ತಿತ್ವ” ಕೃತಿಯಲ್ಲಿ ಎಂ.ಎಸ್.ಶ್ರೀರಾಮ್ ಬರೆದ ಲೇಖನ ನಿಮ್ಮ ಓದಿಗೆ

read more
ಕಳೆದುಕೊಂಡದ್ದಕ್ಕಿಂತ ಪಡೆದುಕೊಂಡದ್ದರ ತೂಕವೇ ಹೆಚ್ಚು…

ಕಳೆದುಕೊಂಡದ್ದಕ್ಕಿಂತ ಪಡೆದುಕೊಂಡದ್ದರ ತೂಕವೇ ಹೆಚ್ಚು…

ನನ್ನ ಉದ್ದ ಕೂದಲನ್ನು ಮೂರು ನಾಲ್ಕುದಿಕ್ಕಿನಲ್ಲಿ ಇಳಿಬಿಟ್ಟು ಒಂದೊಂದೇ ಭಾಗವನ್ನು ತಿಕ್ಕಿ ತಿಕ್ಕಿ ಚಂದ ಮಾಡಿ ಸ್ನಾನ ಮಾಡಿಸಿದ ಕೂದಲು ಒಣಗಿದ ಮೇಲೆ ಹಗುಹಗುರಾಗಿ ಇಮ್ಮಡಿಸುತ್ತಿತ್ತು, ಕೆಲವೊಮ್ಮೆ ಈ ಸ್ನಾನದ ನಂತರ ಊಟ ಮಾಡಿ ಪಪ್ಪನ ಕೈಮೇಲೆ ಕಥೆ ಕೇಳುತ್ತ ಮಲಗಿದರೆ ಏಳುತ್ತಿದ್ದುದು ಸಂಜೆ ಆರಕ್ಕೆ. ಅದೊಂದು ದಿನ ಮಧ್ಯಾಹ್ನ ಮಲಗಲು, ನಮಗೆ ಅವಕಾಶ ಇತ್ತಾದರೂ, ನಾವು ತಪ್ಪಿಸಿಕೊಳ್ಳುವ ಎಲ್ಲ ಉಪಾಯ ಮಾಡುತ್ತಿದ್ದೆವು.
ಅಮಿತಾ ರವಿಕಿರಣ್‌ ಬರಹ ನಿಮ್ಮ ಓದಿಗೆ

read more
ಸದ್ದು… ಇಲ್ಲಿ ಯುದ್ಧ ಕತೆ ಹೇಳುತ್ತಿದೆ…

ಸದ್ದು… ಇಲ್ಲಿ ಯುದ್ಧ ಕತೆ ಹೇಳುತ್ತಿದೆ…

ಮೇಲ್ನೋಟಕ್ಕೆ ಇದು ಪೌಲ್ ಮತ್ತು ಆತನ ಸ್ನೇಹಿತರ ಜೀವನದ ಕತೆ ಆದರೂ, ಅದರ ಜೊತೆಯಲ್ಲಿ ಯುದ್ಧವನ್ನು ಒಳಗಿನಿಂದ ಹೊರಗಿನಿಂದ ತೋರಿರುವ ರೀತಿ ಅನನ್ಯ. ಯುದ್ಧವೆಂದರೆ ಹಸಿವು. ನೆಲದ ಹಸಿವು. ಇದರ ಜೊತೆಯಲ್ಲಿ ದೇಹದ ಹಸಿವು ಹೆಣ್ಣಿನ ಹಸಿವು ಹೆಚ್ಚಾಗಿ ಯುದ್ಧದಲ್ಲೇ ಇದ್ದು ಬದುಕಿನ ಹಸಿವನ್ನು ಅದ್ಭುತವಾಗಿ ತೋರಿಸಿದ್ದಾರೆ, ಪ್ರತಿ ಸೈನಿಕನು ಕೊನೆ ಗಳಿಗೆಯಲ್ಲಿ ಬದುಕಲು ಒದ್ದಾಡುವ ಕ್ಷಣಗಳಿವೆ.
‘ಆಲ್ ಕ್ವೈಯೆಟ್ ಆನ್ ದ ವೆಸ್ಟರ್ನ್‌ ಫ್ರಂಟ್’ ಸಿನಿಮಾದ ಕುರಿತು ಜಯರಾಮಾಚಾರಿ ಬರಹ

read more
ತೀರಿಹೋದ ತಿರುಮಲೇಶರ ಕುರಿತು

ತೀರಿಹೋದ ತಿರುಮಲೇಶರ ಕುರಿತು

ಇದೇನು ನನ್ನ ವೈಯುಕ್ತಿಕ ಅನಿಸಿಕೆ ಅಲ್ಲ. ಕಾವ್ಯ ಪ್ರತಿಭೆಯ ಜೊತೆಜೊತೆಗೇ ಅದರ ದುಪ್ಪಟ್ಟು ವ್ಯಾಮೋಹಗಳೂ ಇದ್ದರೆ ಮಾತ್ರ ಕವಿಗಳು ಇಂತಹ ಖಿನ್ನತೆಗಳಿಂದ ಪಾರಾಗುತ್ತಾರೆ ಎಂದು ನಾನು ಯೌವನದಲ್ಲಿ ಓದಿರುವ ಸಂಸ್ಕೃತ ಕಾವ್ಯಮೀಮಾಂಸೆಗಳು ಹೇಳಿದ್ದವು. ಬಹುಶಃ ತಿರುಮಲೇಶರು ಪಾಶ್ಚಾತ್ಯ ಕಾವ್ಯ ಮೀಮಾಂಸೆಗೆ ಹೆಚ್ಚು ಒತ್ತುಕೊಟ್ಟಿದ್ದರು ಅನಿಸುತ್ತದೆ ಇರಲಿ ಬಿಡಿ.
ಕೆ.ವಿ. ತಿರುಮಲೇಶರ ಕುರಿತು ಅಬ್ದುಲ್‌ ರಶೀದ್‌ ಬರಹ ನಿಮ್ಮ ಓದಿಗೆ

read more
ತಿರುಮಲೇಶರ ಸೀಕ್ರೆಟ್ ಸಂಚಿ

ತಿರುಮಲೇಶರ ಸೀಕ್ರೆಟ್ ಸಂಚಿ

ನೆನ್ನೆ ಬೆಳಿಗ್ಗೆ ಕವಿ-ಕಥೆಗಾರ, ಭಾಷಾಶಾಸ್ತ್ರಜ್ಞ ಕೆ.ವಿ.ತಿರುಮಲೇಶ್ ತೀರಿಹೋದರು. ಇಳಿವಯಸ್ಸಿನ ಅನಾರೋಗ್ಯದ ನೆವದಲ್ಲಿ ಈ ಸೂಕ್ಷ್ಮ ಸ್ವಭಾವದ ಆರ್ದ್ರಜೀವಿ ನಮ್ಮಿಂದ ಭೌತಿಕವಾಗಿ ದೂರಹೋದರು. ಧಾವಿಸಿದರು.. ಆದರೆ ನಿಧಾನವಾಗಿ. ಅವರು ಹೋದ ಮೇಲೆ ಅವರು ಧಾವಿಸಿದರು ಎಂದು ನಮಗನ್ನಿಸುವಂತೆ ನಮ್ಮನ್ನು ಬಿಟ್ಟು ಹೋದರು.
ಕೆ.ವಿ. ತಿರುಮಲೇಶ್‌ ಅವರ ವ್ಯಕ್ತಿತ್ವ ಹಾಗೂ ಬರಹದ ಕುರಿತು ಬರೆದಿದ್ದಾರೆ ಸಿಂಧೂರಾವ್‌ ಟಿ.

read more
ಕೆ. ಎಸ್.ನ ಅವರ ಕವಿತೆಗಳಲ್ಲಿ ಮಣ್ಣಿನ ಹಾಡು

ಕೆ. ಎಸ್.ನ ಅವರ ಕವಿತೆಗಳಲ್ಲಿ ಮಣ್ಣಿನ ಹಾಡು

‘ನಿನ್ನ ಕಾಣದೆಯೆ ಬೆಳೆದೆ, ನಾ ಕಂಡಿಹೆ ತಾಯ ಸಂಪ್ರೀತಿಯನು ಚೆಲುವನು’ ಎನ್ನುವ ನಿರೂಪಕನಿಗೆ ತಂದೆ ಇಲ್ಲಿ ಅದೃಶ್ಯ ವ್ಯಕ್ತಿ ಅಥವಾ ಯಾವಾಗಲಾದರೊಮ್ಮೆ ಕಂಡರೂ, ಮಗ ‘ಕೈಬೀಸಿ ಕರೆದರೂ ರಾಜಾಧಿರಾಜನೆನ್ನುವ ಸೊಕ್ಕಿನಿಂದ’ ಮಗನ ಮೈಮುಟ್ಟದೆಯೇ ನಡೆವನು. ಆದರೆ ತಾಯಿಯಾದರೋ ‘ಮರುಭೂಮಿಯಲಿ ಮುಗಿಲ ತೊಟ್ಟಿಲ ಕಟ್ಟಿ, ಹಿಮ ಬೆಂಕಿ ಬಿರುಗಾಳಿ’ ಯ ವಿಕೋಪದ ನಡುವೆಯೂ ಹರುಷದಿಂದ ಅಮೃತವನ್ನೇ ಸೋಸಿ ಪೊರೆದವಳು.
ಇಂದು ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಗಳ ಕುರಿತು ಗಿರಿಜಾ ಶಾಸ್ತ್ರಿ ಬರಹ

read more
ಟೆಂಟ್ ಸಿನಿಮಾನೂ ಮತ್ತು ಪೊರಕೆ ನ್ಯೂಸೂ

ಟೆಂಟ್ ಸಿನಿಮಾನೂ ಮತ್ತು ಪೊರಕೆ ನ್ಯೂಸೂ

ಮಲ್ಲೇಶ್ವರದ ಹದಿನೆಂಟನೇ ಕ್ರಾಸಿನಲ್ಲಿ ಅವರ ಮನೆಗೆ ಯಾವುದೋ ಸಮಾರಂಭಕ್ಕೆ ಹೋದ ನೆನಪಿದೆ. ಅಲ್ಲಿ ಅಪ್ಪ ಮಡಿಯಲ್ಲಿ ಪುಟ್ಟ ಪಂಚೆ ಕಚ್ಚೆ ಹಾಕಿಕೊಂಡು ಊಟ ಬಡಿಸಿದ ನೆನಪು; ಅಲ್ಲಿ ಮೊಟ್ಟ ಮೊದಲಬಾರಿಗೆ ಊಟದ ಎಲೆಗೆ ಹಳದಿ ಕೆಂಪು ಮಿಶ್ರಣದ ದೊಡ್ಡದಾಗಿ ಹೆಚ್ಚಿದ ಮಾವಿನ ಹಣ್ಣಿನ ಸಿಪ್ಪೆ ಇಲ್ಲದ ಹೋಳು ಬಡಿಸಿದ್ದು, ಅದನ್ನು ನಾನು ಗಬಗಬಾ ತಿಂದಿದ್ದು, ಎದುರು ಕೂತ ರೇಷ್ಮೆ ಸೀರೆ ಉಟ್ಟಿದ್ದ ಚಿಕ್ಕಮ್ಮನ ಹಾಗೆ ಕಾಣಿಸುತ್ತಿದ್ದ ದಪ್ಪನೆ ಹೆಂಗಸರೊಬ್ಬರು ಬಡಿಸುವವರನ್ನು ಕರೆದು ಮಗೂಗೆ ಇನ್ನೊಂದು ಸ್ವಲ್ಪ ಹಣ್ಣು ಬಡಿಸಿ ಅಂತ ಹೇಳಿದ್ದು…. ಎಚ್. ಗೋಪಾಲಕೃಷ್ಣ ಬರಹ

read more
ಅಜ್ಜಿ ಮತ್ತು ಹರಿದ ಹೋಳಿಗೆಯ ತುಂಡುಗಳು…

ಅಜ್ಜಿ ಮತ್ತು ಹರಿದ ಹೋಳಿಗೆಯ ತುಂಡುಗಳು…

ಅಜ್ಜಿ ಹೋಳಿಗೆಯ ಮೇಲಿನ ಆಸೆ ಎಂದೂ ಬಿಟ್ಟಿರಲೆ ಇಲ್ಲ. ಯುಗಾದಿ ಹಬ್ಬದ ದಿನಗಳಲ್ಲಿ ಹೋಳಿಗೆ ಸಿಹಿ ಮಾಡುವುದು ವಾಡಿಕೆ. ಬಹುಃಶ ನಾವೆಲ್ಲಾ ಬಾಲ್ಯದ ದಿನಗಳಲ್ಲಿ ಸಿಹಿಯೂಟ ಸವಿಯುತ್ತಿದ್ದುದೆ ವರ್ಷಕ್ಕೊಮ್ಮೆ. ಮನೆಯಲ್ಲಿ ಸಿಹಿ ಮಾಡುವಷ್ಟು ಆರ್ಥಿಕ ಅನುಕೂಲತೆಯ ಕೊರತೆಯಿಂದಾಗಿ ಪಾಯಸವನ್ನಷ್ಟೇ ಮಾಡುತ್ತಿದ್ದರು. ಅಜ್ಜಿ ಎಂಬತ್ತರ ಆಸು ಪಾಸಿನಲ್ಲಿದ್ದರೂ ಇನ್ನೂ ಗಟ್ಟಿಯಾಗಿದ್ದರು ನಡಿಗೆಯಲ್ಲಿ ಸ್ವಲ್ಪ ನಿಧಾನವಿತ್ತು ಅಷ್ಟೇ.
ಮಾರುತಿ ಗೋಪಿಕುಂಟೆ ಬರೆದ ಪ್ರಬಂಧ ನಿಮ್ಮ ಓದಿಗೆ

read more
ಚೊಕ್ಕಾಡಿಯ ಹಕ್ಕಿ

ಚೊಕ್ಕಾಡಿಯ ಹಕ್ಕಿ

ಅವರ ಓರಗೆಯ ಹಿರಿಯ ಲೇಖಕರಿರಲಿ, ಇತ್ತೀಚಿನ ಹೊಸ ಕವಿ ಲೇಖಕರಿರಲಿ ಚೊಕ್ಕಾಡಿಯವರು ಕಾಮನ್ ಫ್ಯಾಕ್ಟರ್ ಹಾಗೆ. ಅವರಿಗೆ ಹಳತು ಹೊನ್ನಿನ ಸಮುದ್ರವೂ ಗೊತ್ತು. ಹೊಸ ಹರಿವಿನ ಹಳ್ಳದೊರತೆಗಳೂ ಗೊತ್ತು. ವಿಮರ್ಶಿಸುವಾಗ ಸ್ಪಷ್ಟ ಮಾತುಗಳನ್ನು ಹೇಳುವ ನೇರವಂತಿಕೆ, ಹಾಗೆಂದು ಬರೆದವರ ಮನಸ್ಸು ಕುಗ್ಗಿಸದ ಹಾಗೆ ಆ ಬರಹದಲ್ಲಿನ ಒಳಿತನ್ನು ಮತ್ತೆ ಹುಡುಕಿ ಹೇಳಿ ಮುಂದಿನ ದಾರಿಗೊಂದು ಬೆಳಕು ಚೆಲ್ಲುವ ಹೃದಯವಂತಿಕೆ ಇವೆರಡೂ ಚೊಕ್ಕಾಡಿಯವರದ್ದು.
ಸುಬ್ರಾಯ ಚೊಕ್ಕಾಡಿಯವರ ಬದುಕು-ಬರಹದ ಕುರಿತು ಸಿಂಧುರಾವ್‌ ಟಿ. ಬರಹ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ