Advertisement

ಸರಣಿ

ಕ್ವಾಲಿಫಿಕೇಷನ್ ಇದ್ದ ಮಾತ್ರಕ್ಕೆ ವ್ಯಕ್ತಿ ಶ್ರೇಷ್ಠವೆಂದು ಅಲ್ಲ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಹೆಚ್ಚೆಚ್ಚು ಓದಿದಂತೆ ಶಿಕ್ಷಣವು ನಮ್ಮಲ್ಲಿ ಉದಾರತೆಯನ್ನು ಬೆಳೆಸಬೇಕಿತ್ತು. ಹೃದಯ ವೈಶಾಲ್ಯತೆಯನ್ನು ಬೆಳೆಸಬೇಕಿತ್ತು. ಎಲ್ಲರೊಡನೆ ಹೊಂದಿಕೊಂಡು ಹೋಗುವ ಗುಣವನ್ನು ಬೆಳೆಸಬೇಕಿತ್ತು. ಆದರೆ ಕ್ವಾಲಿಫಿಕೇಶನ್ ಅನ್ನುವುದು ನಮ್ಮಲ್ಲಿ ಅಹಂಕಾರವನ್ನು ಬೆಳೆಸುತ್ತಿದೆ. ನಮ್ಮಲ್ಲಿ ಸಂಕುಚಿತತೆಯನ್ನು ಮೂಡಿಸುತ್ತಿದೆ. ಹೊಂದಾಣಿಕೆಯ ಕೊರತೆಯನ್ನು ಮೂಡಿಸುತ್ತಿದೆ. ಕೆಲವರು ಈ ಮನೋಭಾವ ತೋರುವುದಿಲ್ಲವಾದರೂ ಬಹುತೇಕರು ಇದೇ ರೀತಿಯ ಮನೋಭಾವ ತೋರುತ್ತಾರೆಂಬುದು ನನ್ನ ಅನುಭವಕ್ಕೆ ಬಂದಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ಮೂರನೆಯ ಕಂತು ನಿಮ್ಮ ಓದಿಗೆ

read more

ಕತೆಗಳ ಬೆನ್ನತ್ತಿ….: ಎಚ್.‌ ಗೋಪಾಲಕೃಷ್ಣ ಸರಣಿ

ಕವನಗಳು ನನ್ನ ಮನೆ ಅಡ್ರೆಸಿಗೆ ಬಂದು ಸೇರುವ ಹಾಗೆ ಯೋಜಿಸಿದ್ದೆವು. ಕವನಗಳ ಮಹಾಪೂರ ಹೇಗೆ ಬಂದವು ಅಂದರೆ ಪ್ರಪಂಚದಲ್ಲಿ ಪ್ರತಿ ಮೂರನೇ ಮನುಷ್ಯ ಒಂದು ಕವಿ ಅನಿಸುವ ಮಟ್ಟಿಗೆ! ಅದರ ಆಯ್ಕೆ, ಅವುಗಳಲ್ಲಿ ಯಾವುದಕ್ಕೆ ಬಹುಮಾನ ಮೊದಲಾದವುಗಳನ್ನು ನಾವು ನಾವೇ ನಿರ್ಧಾರ ಮಾಡುತ್ತಿದ್ದೆವು. ಕವನ ಸಂಕಲನದ ಹಸ್ತಪ್ರತಿ ಹಿಡಿದು ಬೆಂಗಳೂರಿನ ಅರಳೆ ಪೇಟೆಯ ಹಲವು ಮುದ್ರಣಾಲಯ ಮತ್ತು ಪೇಪರ್ ಮಾರಾಟದ ಅಂಗಡಿಗಳ ಸರ್ವೇ ಮಾಡಿದೆವು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

read more

ಸುಂದರ ಕಾಡಿನ ರೋಚಕ ಕಥೆಗಳು-5: ರೂಪಾ ರವೀಂದ್ರ ಜೋಶಿ ಸರಣಿ

ನಮ್ಮಲ್ಲಿ ತಂಪು ಜಾಸ್ತಿಯಾದ್ದರಿಂದ ಹಾವುಗಳು ಹೆಚ್ಚಾಗಿ ಇರಲಿಲ್ಲವೆನ್ನಿಸುತ್ತದೆ. ಒಂದು ನಿರುಪದ್ರವಿ ಹಾವಿನ ಬಗ್ಗೆ ಹೇಳಬೇಕು ಅದೆಂದರೆ ಹಸಿರು ಹಾವು. ಹಸಿರು ದಂಟಿಗೆ ಸುತ್ತಿಕೊಂಡು, ಸಪೂರ ಕೋಲಿನಂತೇ ಡೊಂಕಾಗಿ ನಿಂತು ಹುಳ ಹುಪ್ಪಡಿ ಹಿಡಿಯುವ ಈ ಹಾವನ್ನು ಗುರುತಿಸುವುದೇ ಕಷ್ಟ. ನಾವೇ ಅದೆಷ್ಟೋ ಸಲ, ಮುಳ್ಳಣ್ಣು ಕೊಯಿದು ಕೊಳ್ಳುವಾಗಲೋ, ಜಾಜಿ ಹೂ ಕೊಯ್ಯುವಾಗಲೋ ಟೊಂಗೆಯ ಜೊತೆಗೇ ಎಳೆದು ಬಿಡುತ್ತಿದ್ದೆವು. ಆಗ ಅದು ಗಾಬರಿಬಿದ್ದು, ಸರಕ್ಕನೆ ಕೆಳಗಿಳಿದು ಓಡುತ್ತಿತ್ತು. ಅದು ಹೋಗಿ ಎಷ್ಟು ಹೊತ್ತಿನ ತನಕ, ನಾವು ಜೀವ ಬಾಯಿಗೆ ಬಂದವರಂತೇ ಭಯದಿಂದ ಇಷ್ಟಗಲ ಕಣ್ಣುಮಾಡಿ ಮಾತು ಮರೆತು ನಿಂತಿರುತ್ತಿದ್ದೆವು!!
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

read more

ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ” ಇಂದಿನಿಂದ

ಆ ಕತಿ ಮತ್ತೆ ಆ ಬಾಯೊಳಗೆ ಮುರಿದ ಕಾಲಿಟ್ಟ ಚಿತ್ರ ನನ್ನೊಳಾಗ ಒಂದಷ್ಟು ಪ್ರಶ್ನೆಗಳನ್ನ ಹುಟ್ಟಿಸಿತು. ಅದನ್ನೆ ಯೋಚಿಸ್ತಿರುವಾಗ ಊರೊಳಾಗ ದೇವಿ ಮೆರವಣಿಗೆ ಬಂದಿತ್ತು, ನೋಡೊಕಂತ ಹೋದಾಗ ಹಳೆ ಗೆಳತ್ಯಾರೆಲ್ಲ ಸಿಕ್ಕಿದ್ದು, ಮನಿಯೊಳಾಗ ಕೆಲಸ ಮಾಡಿ ಅಲ್ಲೆ ಇರ್ತಿದ್ದ ಹೆಣ್ಮಕ್ಕಳು ಜಾತ್ರಿ ನೆಪದಾಗ ಹೊರಾಗ ಬಂದು ಒಬ್ರನ್ನೊಬ್ರು ಖುಷಿಯಿಂದ ಮಾತಾಡಿಸ್ತಾ ನಿಂತಿದ್ದು, ಊರಿನ ಹಾದಿಯೊಳಾಗ ಜಾತಿ ಜನಾಂಗ ಎಲ್ಲಾ ಮರತು ಎಲ್ಲಾರೂ ಒಟ್ಟಾಗಿ ಸೇರಿ ಒಂದೆ ಮನ್ಯಾರೇನೊ ಅನ್ನುವಂಗ ಜಾತ್ರಿ ಕೆಲಸಾನ ಎಲ್ಲಾರೂ ಸೇರಿ ಹಂಚಿಗ್ಯಂಡು ಮಾಡಿದ್ದು ನೋಡಿ, ಎಲ್ಲಾರೂ ಒಟ್ಟಿಗೆ ಸೇರಾಕ ನಾವೆಲ್ಲಾರೂ ಒಂದSS ಅನ್ನೊದು ಮನದಟ್ಟು ಮಾಡಿಕ್ಯಳಾಕ ಜಾತ್ರಿ ಒಂದು ನೆಪ… ಅದ್ರಲ್ಲಿರೊ ಆಕಿ ಕೂಡ!
ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ”

read more
ಡಾ. ಎಸ್.ವಿ. ನರಸಿಂಹನ್‌ ಹೊಸ ಸರಣಿ “ಹಕ್ಕಿಪಕ್ಷಿ ಚಿತ್ರ ಸಂಪುಟ” ಇಂದಿನಿಂದ

ಡಾ. ಎಸ್.ವಿ. ನರಸಿಂಹನ್‌ ಹೊಸ ಸರಣಿ “ಹಕ್ಕಿಪಕ್ಷಿ ಚಿತ್ರ ಸಂಪುಟ” ಇಂದಿನಿಂದ

ಸ್ವಭಾವತಃ ಚಲನಾಶಕ್ತಿಯಿಲ್ಲದ ಮರ-ಗಿಡ ಸಸ್ಯಗಳು ತಮ್ಮ ಸಂತಾನೋತ್ಪತ್ತಿಗಾಗಿ ಅವಶ್ಯವಿರುವ ಬೀಜಪ್ರಸರಣ ಕಾರ್ಯಕ್ಕಾಗಿ ಇತರ ಜೀವಿಗಳನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ವಿವಿಧ ಬಣ್ಣಗಳಿಂದ ಕೂಡಿದ, ರುಚಿಕರವಾದ, ಮತ್ತು ಇವೆಲ್ಲಕಿಂತ ಮಿಗಿಲಾಗಿ ಎಲ್ಲ ಪೌಷ್ಟಿಕ ಅಂಶಗಳಿಂದಲೂ ಕೂಡಿದ ಸುಮಧುರ ಹಣ್ಣುಗಳ ಮೂಲಕ ಆಕರ್ಷಿಸುತ್ತವೆ. ಈ ಕಾರ್ಯದಲ್ಲಿ ಕೂಡ ಉಳಿದ ಜೀವಿಗಳಿಗಿಂತ ಹಕ್ಕಿಗಳ ಪಾತ್ರ ಗಮನೀಯ. ತಿಂದ ಹಣ್ಣಿನ ಬೀಜವನ್ನು ದೂರದೂರದೆಡೆಗಳಲ್ಲಿ ಉಗಿಯುವುದು ಒಂದು ರೀತಿಯಾದರೆ, ತಿಂದ ಹಣ್ಣಿನ ಬೀಜ ಹಕ್ಕಿಯ ಉದರ ಸೇರಿ, ಹಿಕ್ಕೆಯ ಮೂಲಕವೂ ಹರಡಬಲ್ಲದು.
ಡಾ. ಎಸ್.ವಿ. ನರಸಿಂಹನ್‌ ಹೊಸ ಸರಣಿ “ಹಕ್ಕಿಪಕ್ಷಿ ಚಿತ್ರ ಸಂಪುಟ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

read more

ಗೋಹರ್‌ಬಾಯಿ ಕತೆ ಹೇಳಿದ ‘ಪ್ರತಿಗಂಧರ್ವʼ: ಚಿತ್ರಾ ವೆಂಕಟರಾಜು ಸರಣಿ

‘ಪ್ರತಿಗಂಧರ್ವʼ ದಂತಹ ನಾಟಕದ ಅಭಿನಯ ಬಹಳ ಸವಾಲಿನದು. ಏಕೆಂದರೆ ಹೆಚ್ಚಿನ ಪಾತ್ರಗಳು ಕಲಾವಿದರದ್ದು. ಗೋಹರ್‌ ಬಾಯಿ ಪಾತ್ರ ಮಾಡುವ ಕಲಾವಿದೆ, ನಾಟಕದ ಪಾತ್ರ ಮಾಡುವುದರ ಜತೆಗೆ ನಾಟಕದೊಳಗಿರುವ ರಂಗಸ್ಥಳದಲ್ಲಿ ಅಭಿನಯ ಮಾಡಬೇಕಾಗುತ್ತದೆ. ಅಂದರೆ ನಾವು ನೋಡುತ್ತಿರುವ ಪಾತ್ರ ಗೋಹರ್‌ ಬಾಯಿ. ಗೋಹರ್‌ ಬಾಯಿ ನಾಟಕದೊಳಗೆ ಮಾಡಿದ ಪಾತ್ರ ಗೂಢಾಚಾರಿಣಿಯದು. ಗೂಢಾಚಾರಿಣಿಯ ಪಾತ್ರ ಮಾಡಿದ ಗೋಹರ್‌ ಬಾಯಿ ಪಾತ್ರಧಾರಿ, ಅದು ಮುಗಿದ ಮೇಲೆ ಮತ್ತೆ ಗೋಹರ್‌ ಆಗಬೇಕು. ಆಗ ಅಲ್ಲಿನ ಅಭಿನಯಗಳೆರಡೂ ಬೇರೆಯಾಗಬೇಕಾಗುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

read more
ಪೋಸ್ಟರ್ ಬಳಿಯೋ ಕೆಲಸದಾಗಿನ ಕೆಲ ಅನುಭವಗಳು… ಬಸವನಗೌಡ ಹೆಬ್ಬಳಗೆರೆ ಸರಣಿ

ಪೋಸ್ಟರ್ ಬಳಿಯೋ ಕೆಲಸದಾಗಿನ ಕೆಲ ಅನುಭವಗಳು… ಬಸವನಗೌಡ ಹೆಬ್ಬಳಗೆರೆ ಸರಣಿ

ನಾವು ಪೋಸ್ಟರನ್ನು ಅಂಟಿಸುತ್ತಾ ಲಕ್ಷ್ಮೀ ಮೆಕ್ಕೆಜೋಳದ ಬೀಜಗಳ ಬಗ್ಗೆ ಪ್ರಚಾರ ಮಾಡುತ್ತಾ ಹೋಗುತ್ತಿದ್ದಾಗ ಒಂದು ಹಳ್ಳಿಯವರು ನಮ್ಮನ್ನು ಸುತ್ತುವರೆದು “ಕಳೆದ ವರ್ಷ ಇದೇ ಬೀಜಗಳನ್ನು ಬಿತ್ತಿದ್ದೆವು. ನಮಗೆ ಬೆಳೆ ಲಾಸ್ ಆಗಿದೆ. ಅವು ಸರಿಯಾಗಿ ಹುಟ್ಟಿಲ್ಲ. ಆದ್ದರಿಂದ ಆ ನಷ್ಟವನ್ನು ನೀವೇ ಭರಿಸಬೇಕು” ಎಂದು ನಮ್ಮನ್ನು ಕೇಳಲು ಶುರು ಮಾಡಿದರು. ಅದೇನೋ ಹೇಳ್ತಾರಲ್ಲಾ. ‘ಮದುವೆ ಆಗೋ ತಿಮ್ಮ ಅಂದ್ರೆ ನೀನೇ ನನ್ನ ಹೆಂಡ್ತಿ ಆಗೋ ಅಂದ್ನಂತೆ’ ಅನ್ನೋ ಹಾಗಾಯ್ತು ನಮ್ಮ ಪರಿಸ್ಥಿತಿ. ನಮ್ಮನ್ನು ಹಳ್ಳಿಯವರು ಹಾಗೇ ಕೇಳಿದಾಗ ನಾವು ನಮ್ಮ “ಮ್ಯಾನೇಜರ್‌ನ ಕರೆದುಕೊಂಡು ಬರ್ತೀವಿ” ಎಂದು ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಓಡಿದೆವು!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

read more
ಭಾರತಕ್ಕೆ ಬಂದ ಕಾಫಿ: ದರ್ಶನ್‌ ಜಯಣ್ಣ ಸರಣಿ

ಭಾರತಕ್ಕೆ ಬಂದ ಕಾಫಿ: ದರ್ಶನ್‌ ಜಯಣ್ಣ ಸರಣಿ

ಮೊದಮೊದಲು ಇದನ್ನು ಶೈತಾನನ ಪೇಯವೆಂದು ನಿರ್ಬಂಧಿಸಿದ್ದ ಒಟ್ಟೋಮನ್ ಸುಲ್ತಾನ ನಂತರದ ದಿನಗಳಲ್ಲಿ ಇದು ಮದ್ಯ ಅಥವಾ ಮದಿರೆಯಂತಲ್ಲ ಎಂದು ಮನಗಂಡು ಸ್ವತಃ ತಾನೇ ಅದನ್ನು ಕುಡಿದು ಪರೀಕ್ಷಿಸಿ ಆ ನಿರ್ಬಂಧವನ್ನು ಸಡಿಲಿಸುತ್ತಾನೆ. ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಎಲ್ಲಕಾಲಕ್ಕೂ ಇದು ಸಿಗುವಂತಿರಲಿಲ್ಲ. ಸೂಫಿಗಳು, ಸೈನಿಕರು, ಸಮಾಜದ ಗಣ್ಯರು, ಆಸ್ಥಾನ ವಿದ್ವಾಂಸರು, ಅಧಿಕಾರಿಗಳಿಗೆ ಮತ್ತು ಸಮರಕ್ಕೆ ಹೊರಟವರಿಗೆ ಮಾತ್ರ ಇದು ಸೀಮಿತವಾಗಿತ್ತು ಎಂದರೆ ಇವತ್ತಿಗೆ ನಂಬಲು ಕಷ್ಟವಾಗಬಹುದೇನೋ! ಇದರ ಕಾರಣವೇ ಇಂದು ನಾವು “ಟರ್ಕಿಶ್ ಕಾಫಿಯ” ಬಗ್ಗೆ ಆಗಾಗ ಕೇಳುತ್ತಿರುತ್ತೇವೆ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಹದಿಮೂರನೆಯ ಕಂತು

read more
ಕಥಾ ಗಾಳಕ್ಕೆ ಸಿಕ್ಕ ಮೀನು…: ಎಚ್. ಗೋಪಾಲಕೃಷ್ಣ ಸರಣಿ

ಕಥಾ ಗಾಳಕ್ಕೆ ಸಿಕ್ಕ ಮೀನು…: ಎಚ್. ಗೋಪಾಲಕೃಷ್ಣ ಸರಣಿ

ಆರ್ಥಿಕ ಸಂಪನ್ಮೂಲದ ವಿಷಯಕ್ಕೆ ಬಂದಾಗ ನಮ್ಮ ಕನಸುಗಳು ಯೋಜನೆಗಳು ಶ್ರಿಂಕ್ ಆಗುತ್ತಿದ್ದವು! ಒಂದು ವಾರದ ದೊಡ್ಡಮಟ್ಟದ ಕಾರ್ಯಕ್ರಮಗಳು ಕೆಲವು ಗಂಟೆಗಳಿಗೆ ಕುಗ್ಗುತ್ತಿದ್ದವು. ನಮ್ಮ ಬಜೆಟ್‌ಗೆ ನಿಲುಕುವಂತಹ ಸಭಾಭವನ ಅಂದರೆ ಆಗ ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದ ಹಾಲ್ ಒಂದೇ. ಇಪ್ಪತ್ತೈದು ರೂಪಾಯಿ ಅದರ ಬಾಡಿಗೆ. ಅದರಲ್ಲೇ ಎಲ್ಲವೂ ಅಂದರೆ ಮೈಕು, ಲೈಟು ಸೇರುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೫ನೇ ಬರಹ ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ