Advertisement
ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

ಕಣ್ಣು ಹಚ್ಚುವುದೆಂದರೆ
ಇವಳ
ಲೋಕದಲ್ಲಿ ಕನಸುಗಳ
ಕರೆಯುವುದು ಎಂದರ್ಥ

ಎಷ್ಟೊಂದು ಕನಸುಗಳು!

ನದೀತಟದ ಕನಸು
ಮಾಯಾವಿ ತುಟಿಯ ಕನಸು
ಅಂಗೈ ಗೆರೆಯ ಕನಸು
ಮುಂದಲೆ ನೇವರಿಸಿದ ಕನಸು
ಕತ್ತಲಾಚೆಯ ಕನಸು
ಕೈತುತ್ತಿನ ಕನಸು
ಹೂಹೊತ್ತ ಮರದ ಕನಸು…

ಹುಚ್ಚು ಹೊಳೆಯ ಮಟ್ಟ
ಈ ಲೋಕದಲ್ಲಿ
ಗದ್ದಲವೆಬ್ಬಿಸುತ್ತಿದೆ
ಘಳಿಗೆಗೊಮ್ಮೆ
ಏರಿಳಿವ ಎದೆಗೆ
ಸಾಂತ್ವನದ ಪರದೆ
ಬಿಡಲಾಗಿದೆ

ನಿನ್ನೆಗಳ ಕಣ್ಣ ತುಂಬಾ
ಹೊದ್ದವಳು
ಇವಳು
ಇವಳ ಪಾಲಿನ ನಾಳೆ
ಅವನ ಮೆದುನುಡಿಯ
ಮಡಿಲು

ಈ ಹಗಲು ಕೆರೆ ದಿಕ್ಕಿಗೆ
ಮಳೆಬಿಲ್ಲು
ಕಟ್ಟಬಹುದೇ?
ನೆರೆ ನುಗ್ಗಿದರೆ
ಈ ಬೇಲಿ
ಮುರಿಯಬಹುದೇ?

About The Author

ನಂದಿನಿ ಹೆದ್ದುರ್ಗ

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿ ಬೆಳೆಗಾರ್ತಿ ಮತ್ತು ಕೃಷಿ ಮಹಿಳೆ. ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.

3 Comments

  1. ಎಂ.ಜವರಾಜ್

    ಪದ್ಯ ಚೆನ್ನಾಗಿದೆ.
    ಅದರಲ್ಲು ಕವಿತೆಯ ಗಹನವಾದ ಸಾಲುಗಳಿವು..

    “ಹುಚ್ಚು ಹೊಳೆಯ ಮಟ್ಟ
    ಈ ಲೋಕದಲ್ಲಿ
    ಗದ್ದಲವೆಬ್ಬಿಸುತ್ತಿದೆ
    ಘಳಿಗೆಗೊಮ್ಮೆ
    ಏರಿಳಿವ ಎದೆಗೆ
    ಸಾಂತ್ವನದ ಪರದೆ
    ಬಿಡಲಾಗಿದೆ”

    ಅಭಿನಂದನೆಗಳು ನಂದಿನಿ ಹೆದ್ದುರ್ಗ ಅವರಿಗೆ

    Reply
  2. Shobha hirekai

    Waaaaaaa….

    Reply
  3. Lingaraj sottappanavar

    ಏರಿಳಿವ ಎದೆಗೆ ಸಾಂತ್ವನದ ಪರದೆ.. 👌

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ