Advertisement
ಶೂದ್ರರಾಗ: ಎಂ.ವಿ. ಶಶಿಭೂಷಣ ರಾಜು ಕವಿತೆ

ಶೂದ್ರರಾಗ: ಎಂ.ವಿ. ಶಶಿಭೂಷಣ ರಾಜು ಕವಿತೆ

ಶೂದ್ರರಾಗ

ಹೊರಡಿಹಿದು ಶೂದ್ರರಾಗ
ಕೆಂಪನೆಯ ದನಿಯಲಿ
ಮರಳುತಿಹಿದು ಎದೆಯ ಯೋಗ
ತಂಪನೆಯ ಜಗದಲಿ

ಸಾಲು ಸಾಲು ಪಂಜುಗಳಲಿ
ಕಪ್ಪನೆಯ ನೆರಳು
ಕೀಳು ಎಂದ ಎದೆಯಲಿ
ಸಪ್ಪಳದ ಉರುಳು

ಹಿಡಿದಿಹಿದು ತನ್ನ ಹಾದಿ
ಒಂಟಿಯಾದ ತಮಟೆ
ತುಂಬಿಹಿದು ಎಲ್ಲ ಬೀದಿ
ಮನವ ಒಡೆದ ಕಟ್ಟೆ

ತುಳಿದಿರುವ ಹೃದಯ ಅರಳಿ
ಹೊಸತು ಭಾವ ತುಂಬಿದೆ
ಕಳೆದಿರುವ ದಿನವು ಉರುಳಿ
ಕಸುವು ಈಗ ಬಂದಿದೆ

ಎತ್ತಿ ಹಿಡಿದ ಕಹಳೆಯಲಿ
ಜಗದ ನೋವು ಮೊಳಗಿದೆ
ಸುತ್ತುವರೆದ ಕೋಟೆಯಲಿ
ರಾಗ ಹೂವು ಅರಳಿದೆ

ಎಂ.ವಿ. ಶಶಿಭೂಷಣ ರಾಜು, ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ
ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸಿ.
ಮೌನದ ಮೊರೆಹೊಕ್ಕಾಗ(ಕವನ ಸಂಕಲನ), ಐ ಸೀ ಯು  ಗಾಡ್, ಲೈಫ್, ಅಂಡ್ ಡೆತ್  (ಕವನ ಸಂಕಲನ), “ಇಮಿಗ್ರೇಷನ್ ದಿ ಪೈನ್ (ನಾಟಕ) ಪ್ರಕಟಿತ ಕೃತಿಗಳು.
“ಲಾಸ್ಟ್ ಲೈಫ್” ಕಥನ ಕವನ ಮತ್ತು “ದ್ವಂದ್ವ” ಕವನ ಸಂಕಲನ ಅಚ್ಚಿನಲ್ಲಿವೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ