Advertisement

ಸರಣಿ-2

ಯಾರು ಹಚ್ಚಿದರು ಈ ಹಣತೆಯ..

ಯಾರು ಹಚ್ಚಿದರು ಈ ಹಣತೆಯ..

ಹೀಗೆ ಯೋಚಿಸುತ್ತಿರುವ ಒಂದು ದಿನ ಒಂದು ಘನಘೋರ ವಿದ್ವತ್ ಸಭೆಯಲ್ಲಿ ಮೂಕನಾಗಿ ಕೂತಿದ್ದೆ. ಆ ವಿದ್ವಾಂಸರ ವೈಖರಿಗೆ ಮೈಕೇ ಕಿತ್ತುಹೋಗುತಿತ್ತು. ಯಾವ ಯಕ್ಷಗಾನದ ರುದ್ರ ರಾಕ್ಷಸ ಪಾತ್ರವೂ ಅವರ ಮುಂದೆ ನಾಚುವಂತಿತ್ತು. ಪೋಸ್ಟ್ ಮ್ಯಾನ್  ಅಲ್ಲಿಗೇ ಬಂದು ಹುಡುಕಿ ಪತ್ರ ಕೊಟ್ಟು ಸಹಿ ಪಡೆದು ಹೋದ. ತೆರೆದು ನೋಡಿದೆ. ನಿಜವೇ ಎನಿಸಿತು. ಇದು ಏಪ್ರಿಲ್ ತಿಂಗಳಲ್ಲ… ನನ್ನನ್ನು ಮೂರ್ಖನನ್ನಾಗಿಸಲು ಸಾಧ್ಯವಿಲ್ಲ ಎಂದು ಮತ್ತೆ ಓದಿದೆ. ಈ ಪತ್ರ ನಿಜವೇ ಎಂದು ಆ ಪತ್ರದಲ್ಲೇ ಇದ್ದ ನಂಬರಿಗೆ ಫೋನಾಯಿಸಿದೆ. ಕರೆ ಸ್ವೀಕರಿಸಿದವರು ‌ʻಕಂಗ್ರಾಜುಲೇಷನ್ʼ ಎಂದರು. ಮೊಗ‍ಳ್ಳಿ ಗಣೇಶ್‌ ಆತ್ಮಕತೆ  ಸರಣಿ

read more
ನಿಂಬೆಗಿಡಕ್ಕೇನು ಮನಸ್ಸಿದೆಯೇ?

ನಿಂಬೆಗಿಡಕ್ಕೇನು ಮನಸ್ಸಿದೆಯೇ?

ಆ ಭವ್ಯ ಮನೆಗೆ ಇಸ್ರೇಲಿನ ರಕ್ಷಣಾ ಮಂತ್ರಿಯ ಜೊತೆಗೆ ಅವನ ಹೆಂಡತಿ ಮೀರಾ ನವಾನ್‌  ಮತ್ತು ಅವನ ಅಧಿಕಾರಿ ವರ್ಗದಲ್ಲಿ, ರಕ್ಷಣಾ ಮಂತ್ರಿಯಲ್ಲಿ ಅನುರಾಗದಲೆಗಳನ್ನು ಹುಟ್ಟಿಸುವ ಸುಂದರಿಯೊಬ್ಬಳು ಇರುತ್ತಾಳೆ. ಜೊತೆಗೆ ಹತ್ತಾರು ಜನ ಸಹಾಯಕ ವರ್ಗದವರು. ನೋಡನೋಡುತ್ತಿದ್ದಂತೆ ತಾನು ಅತ್ತಿತ್ತ ಓಡಾಡಿ ಇಟ್ಟಿದ್ದ ಹೆಜ್ಜೆಗಳ ಮೇಲೆ ಬೇರೆ ಬೇರೆ ಹೆಜ್ಜೆಗಳು ಕಾಣುತ್ತವೆ. ಜೊತೆಗೆ ಅಷ್ಟುದ್ದಕ್ಕೂ ಬೇಲಿ ಹಬ್ಬಲು ಪ್ರಾರಂಭವಾಗುತ್ತದೆ. ಇಸ್ರೇಲಿನ ಸೀಕ್ರೆಟ್‌ ಪೊಲೀಸ್‌ನವರು ರಕ್ಷಣಾ ಮಂತ್ರಿಯ ಹಿತ ದೃಷ್ಟಿಯಿಂದ ಮತ್ತು ಉಗ್ರರ ಆಕ್ರಮಣದ ಸಂಭಾವ್ಯದ ಕಾರಣ ಇಡೀ ನಿಂಬೆ ಗಿಡದ ತೋಟವನ್ನು ಕಡಿಯಬೇಕೆಂದು ಯೋಚಿಸುತ್ತಾರೆ.

read more
ನಿಜಾರ್ಥದಲ್ಲಿ ಯಾರಿಗೂ ಗೆಲುವಿಲ್ಲ ಯುದ್ಧದಲ್ಲಿ…

ನಿಜಾರ್ಥದಲ್ಲಿ ಯಾರಿಗೂ ಗೆಲುವಿಲ್ಲ ಯುದ್ಧದಲ್ಲಿ…

ಮಾಸ್ಕೋ ಸಮೀಪದ ಬೊರೊದಿನೊ ಎಂಬ ಗ್ರಾಮದಲ್ಲಿ ನೆಪೊಲಿಯನ್ ಬೊನಾಪಾರ್ಟೆ ಸೈನ್ಯದ ವಿರುದ್ಧ ನಡೆದ ಯುದ್ಧದಿಂದ ಆ ಗ್ರಾಮ ಹೇಗೆ ನಾಶವಾಯಿತು ಎಂಬುದನ್ನು ರಷ್ಯನ್ ಪನೋರಮಾದಲ್ಲಿ ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಸೃಷ್ಟಿಸಲಾಗಿದೆ. ದಾಳಿಗೊಳಗಾಗಿ ಸಾಯುತ್ತಿರುವ ಸೈನಿಕರು, ಬಿದ್ದು ಒದ್ದಾಡುತ್ತಿರುವ ಯುದ್ಧ ಕುದುರೆಗಳು, ಸುಡುತ್ತಿರುವ ಮನೆಗಳು, ಸುಟ್ಟು ಹೊಗೆಯಾಡುತ್ತಿರುವ ಪ್ರದೇಶಗಳು, ಹಾಹಾಕಾರದ ವಾತಾವರಣ ಹೀಗೆ ಎಲ್ಲವೂ ನಮ್ಮ ಮುಂದೆ ನಡೆಯುತ್ತಿರುವ ಹಾಗೆ ಅನಿಸುತ್ತದೆ. ನೆಪೊಲಿಯನ್ ಬೋನಾಪಾರ್ಟೆ ವಿನಾಶಕಾರಿ ಯುದ್ಧನೃತ್ಯ ಮಾಡುತ್ತಿರುವ ಹಾಗೆ ಅನಿಸುತ್ತದೆ. ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿ

read more
ಅವನಿಗೆ ಒಂದು ಹಿಡಿ ಮಣ್ಣನ್ನೂ ಕೊಡಲಿಲ್ಲ.

ಅವನಿಗೆ ಒಂದು ಹಿಡಿ ಮಣ್ಣನ್ನೂ ಕೊಡಲಿಲ್ಲ.

ಆ ಮನೆಯ ಅಂಗಳದಲ್ಲಿ ಎಷ್ಟೊಂದು ದೊರೆಯಂತೆ ಮೆರೆದಿದ್ದವನು… ಎಷ್ಟು ಬಡಿದಾಡಿ ರಕ್ತ ಹರಿಸಿದ್ದವನು. ಈಗ ಅದೇ ಅಂಗಳವ ಹಾದು ಹೋಗುವ ಹಾದಿ ಹೋಕರತ್ತ ಕ್ಷೀಣ ದನಿ ಹೊರಡಿಸಿ ಕೈ ಒಡ್ಡಿ ತಿನ್ನಲು ಏನಾದರೂ ಕೊಡಿ ಎಂದು ಬೇಡುತ್ತಿದ್ದ. ಕೊಡುವವರು ಕೊಡುತ್ತಿದ್ದರು. ಅವನ ಮೂರನೇ ಹೆಂಡತಿ ಮೈಸೂರು ಸೇರಿದ್ದವಳು ತನ್ನ ಮಗಳ ಸಮೇತ ನಾಪತ್ತೆ ಆದವಳು ಮತ್ತೆ ಎಲ್ಲೂ ಕಂಡಿರಲಿಲ್ಲ. ಶಾಂತಿ ಮಾತ್ರ ಬಚಾವಾಗಿ ಗಂಡನ ಮನೆಯಲ್ಲಿ ಅನುಕೂಲವಾಗಿ ಇದ್ದಳು.
ಮೊಗಳ್ಳಿ ಗಣೇಶ್‌ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 39ನೇ ಕಂತು

read more
ರಾಜರ ಸ್ವಭಾವ, ರಾಜ್ಯವಿಸ್ತಾರದ ಪ್ರೇರಣೆ

ರಾಜರ ಸ್ವಭಾವ, ರಾಜ್ಯವಿಸ್ತಾರದ ಪ್ರೇರಣೆ

ಪ್ರಾಚೀನ ಭಾರತದ ಪ್ರಸಿದ್ಧ ರಾಜರು ಮತ್ತು ರಾಜವಂಶಗಳನ್ನು ಪಟ್ಟಿ ಮಾಡಿ ಅರ್ಥೈಸಿಕೊಳ್ಳುವುದು ಒಂದು ಸವಾಲೇ ಸರಿ. ಒಂದೊಂದು ಕಾಲದಲ್ಲಿ ಒಂದೊಂದು ರೀತಿಯ ಸವಾಲುಗಳನ್ನು ಎದುರಿಸುತ್ತ, ಪ್ರಜೆಗಳಿಗೆ ಸುವ್ಯವಸ್ಥೆಯನ್ನುಕಲ್ಪಿಸಿದ ಕತೆಗಳು ಸಾವಿರಾರು. ಈ ರಾಜವಂಶಗಳನ್ನು ಅರಿಯುವುದಕ್ಕಾಗಿ  ಆ ನಿಟ್ಟಿನಲ್ಲಿ ನಾನು ಮಾಡಿಕೊಂಡ ಒಂದು ಪಟ್ಟಿಯನ್ನು ಇಲ್ಲಿ ಕೊಟ್ಟಿರುವೆ. ಅದರ ಪ್ರಕಾರ, ವಿವರಗಳನ್ನು ಕೊಡುತ್ತ ಹೋಗುತ್ತಿದ್ದೇನೆ.  ವೈವಿಧ್ಯತೆಯ ಮಹಾಸಾಗರದತ್ತ ಹರಿದು ಬಂದ ನದಿಗಳೆಷ್ಟೋ, ನದಿಗಳು ನಡೆದು ಬಂದ ದಿಕ್ಕುಗಳೆಷ್ಟೋ.
ಕೆ.ವಿ.ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಬರಹ ಇಲ್ಲಿದೆ.

read more
ಇಲ್ಲಿ ಉಳಿದರು ಹೀಗೆ ನಡೆದರು ಅಂಬೇಡ್ಕರ್

ಇಲ್ಲಿ ಉಳಿದರು ಹೀಗೆ ನಡೆದರು ಅಂಬೇಡ್ಕರ್

ಗಾಂಧೀಜಿ ಹಳ್ಳಿಗಳನ್ನು ಭಾರತದ ಬೆನ್ನೆಲುಬು, ನಾಗರಿಕತೆಯ ತೊಟ್ಟಿಲು ಎಂದು ವೈಭವೀಕರಿಸಿದರೆ ಅಂಬೇಡ್ಕರರಿಗೆ ಅವು ಜಾತ್ಯಾಧಾರಿತ ತಾರತಮ್ಯವನ್ನು ಸ್ಥಿರಗೊಳಿಸಿ ಆಳುವ ಕೂಪಗಳಾಗಿ ಕಾಣುತ್ತಿದ್ದವು. ಒಡಹುಟ್ಟಿದವರಿಗೆ ಸೇವೆಗಳು ನಿರ್ಬಂಧಿಸಲಾದ, ಕೆಲವು ಜಾತಿಗಳವರನ್ನು ಹೀನರೆಂದು ತಿಳಿಯುವ ಹಳ್ಳಿಯಲ್ಲಿ ಅವರು ವಾಸಿಸಿದವರು. ಪಟ್ಟಣಗಳು ಅವಕಾಶಗಳನ್ನು ಒದಗಿಸುವ, ಶಿಕ್ಷಣಕ್ಕೆ ಉತ್ತೇಜನ ನೀಡುವ ಜಾತಿಯನ್ನು ಆಧರಿಸದೇ ಉದ್ಯೋಗ ಬದುಕು ನೀಡುವ ತಾಣಗಳಾಗಿ ಕಂಡಿದ್ದವು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಲಂಡನ್‌ ವಾಸದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

read more
ತಾಷ್ಕೆಂಟ್‌ಗೆ ವಿದಾಯ

ತಾಷ್ಕೆಂಟ್‌ಗೆ ವಿದಾಯ

ಯುದ್ಧದ ಹಿಂಸೆ ಮತ್ತು ಅಸಹಾಯಕತೆಯನ್ನು ಸಹಿಸುತ್ತ, ಸಾವು ನೋವು ಅನುಭವಿಸುತ್ತ ಮುನ್ನಡೆಯುವ ಛಲ ಲೋಕದ ಜನಸಮುದಾಯಗಳಿಗೆ ಅದು ಹೇಗೆ ಬರುವುದೊ! ಬಹುಶಃ ಅನುಭವಿಸಿದಾಗಲೇ ಗೊತ್ತಾಗುವುದು. ಇದೇ ಉಜ್ಬೆಕಿಸ್ತಾನ ಮೂಲದ ಮೊಘಲ ಸಂತತಿಯ ಔರಂಗಜೇಬ್, ನನ್ನ ಜನ್ಮಸ್ಥಳ ವಿಜಯಪುರದ ಮೇಲೆ ದಂಡೆತ್ತಿ ಬಂದು ಆದಿಲಶಾಹಿ ಸಾಮ್ರಾಜ್ಯವನ್ನು ಹಾಳುಗೆಡವಿದ. ಅನೇಕ ಸೂಫಿಸಂತರ ಕೊಲೆ ಮಾಡಿದ. ಯುದ್ಧದಲ್ಲಿ ಯಾರು ಮುಸ್ಲಿಮರು? ಯಾರು ಹಿಂದುಗಳು? ಯಾರು ಕ್ರೈಸ್ತರು? ಯುದ್ಧದಲ್ಲಿ ಧರ್ಮವಿಲ್ಲ, ನೀತಿಯಿಲ್ಲ, ನ್ಯಾಯವಿಲ್ಲ. ಅದು ಕೇವಲ ಯುದ್ಧ. ಗೆದ್ದವರನ್ನೂ ಆರ್ಥಿಕವಾಗಿ ಮತ್ತು ನೈತಿಕವಾಗಿ ಸೋಲಿಸುವ ಯುದ್ಧ.
ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ 47ನೇ ಕಂತು ಇಲ್ಲಿದೆ.

read more
ಚಿತೆಯ ಜೊತೆ ಚಿತೆಯಾಗಿದ್ದೆ

ಚಿತೆಯ ಜೊತೆ ಚಿತೆಯಾಗಿದ್ದೆ

ಆ ಹೆಂಗಸು ನನ್ನತ್ತ ಎರಡು ಮೂರು ಬಾರಿ ನೋಡಿತು. ಅವಳ ಕಣ್ಣಲ್ಲಿದ್ದ ನೀರೆಲ್ಲ ತೀರಿ ಹೋಗಿದ್ದವೇನೊ! ಸ್ಮಶಾನದ ಮೂಲೆಯಲ್ಲಿ ಶವದತ್ತ ನೋಡುತ್ತಲೇ ಕೂತು ಕೂಸಿಗೆ ಎದೆ ಕಚ್ಚಿಸಿದ್ದಳು. ಆ ಕೂಸಿನ ಹೆಜ್ಜೆಗಳಿನ್ನೂ ಮೂಡಿಯೇ ಇಲ್ಲಾ… ಅವನು ನಡೆ ನಡತೆ ನುಡಿಗಳ ಮುಗಿಸಿದ್ದ. ಆ ಹೆಂಗಸಿನ ಹೆಜ್ಜೆಗಳು ಬಾಕಿ ಇದ್ದವು. ಸ್ಮಶಾನ ಬಿಟ್ಟು ಬೇಗ ಮನೆಗೆ ತೆರಳಲು ಮುಂದಾಗಿದ್ದರು. ಸ್ಮಶಾಸನದಲ್ಲಿ ಸಂಸಾರವೇ! ಆಕೆಯೂ ಆ ಜನರ ಜೊತೆ ಎದ್ದು ಹೊರಟಳು ಏನೂ ಆಗಿಯೇ ಇಲ್ಲ ಎಂಬಂತೆ.
ಮೊಗಳ್ಳಿ ಗಣೇಶ್‌ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 38ನೇ ಕಂತು

read more
ಚೆಗೆವಾರನನ್ನು ನೆನಪಿಸುವ ʻಮೋಟಾರ್ ಸೈಕಲ್ ಡೈರೀಸ್ʼ

ಚೆಗೆವಾರನನ್ನು ನೆನಪಿಸುವ ʻಮೋಟಾರ್ ಸೈಕಲ್ ಡೈರೀಸ್ʼ

1952ರಲ್ಲಿ ಅದೊಂದು ದಿನ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಒಂದಾದ ಅರ್ಜಂಟೀನಾದಲ್ಲಿ ಮೆಡಿಕಲ್ ಓದುತ್ತಿದ್ದ ಸ್ನೇಹಿತರಾದ ಅರ್ನೆಸ್ಟೋ ಚೆಗೆವಾರ ಮತ್ತು ಆಲ್ಬರ್ಟೋ ಗ್ರೆನಾಡೋಗೆ ಒಂದು ಅಪೂರ್ವವಾದ ಉಮೇದು ಉಂಟಾಗುತ್ತದೆ. ಅದು ಎಂಥವರನ್ನೂ ಬೆಚ್ಚಿಬೀಳಿಸುವಂಥಾದ್ದು. ಸುಮಾರು ಎಂಟು ಸಾವಿರ ಮೈಲಿ ವಿಸ್ತಾರದ ಇಡೀ ದಕ್ಷಿಣ ಅಮೆರಿಕವನ್ನು 1939ನೇ ಮಾಡೆಲ್ಲಿನ ಮೋಟಾರ್ ಬೈಕಿನಲ್ಲಿ ಸುತ್ತಾಡಿಕೊಂಡು ಬರಬೇಕು, ಎಂದು. ಹಾಗೆಂದೇ ಪ್ರಯಾಣ ಹೊರಟ ಗೆಳೆಯರಿಬ್ಬರ ಸ್ವಭಾವ, ನಡವಳಿಕೆ ಒಂದಕ್ಕೊಂದು ತಾಳಮೇಳವಿಲ್ಲದ್ದು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಬ್ರೆಜಿ಼ಲ್‌ನ ʻಮೋಟಾರ್ ಸೈಕಲ್ ಡೈರೀಸ್ʼ ಸಿನಿಮಾದ ವಿಶ್ಲೇಷಣೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ