ನನ್ನ ತಾಯಿ ವೆಂಕೂಬಾಯಿ: ರಂಜಾನ್ ದರ್ಗಾ ಸರಣಿ
ವೆಂಕೂಬಾಯಿ ನನ್ನ ಪಾಲಿನ ಮಹಾತಾಯಿ ಆಗಿದ್ದರು. ನಾನು ಅವರ ಮಗನೇ ಎನ್ನುವಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದರು. ನನಗಾಗಿ ಅವರು ಬ್ರಾಹ್ಮಣ ಸಂಪ್ರದಾಯದ ಎಲ್ಲ ಕಟ್ಟಳೆಗಳನ್ನು ಮೀರುತ್ತಿದ್ದರು. ಖುಷಿಯ ವಿಚಾರವೆಂದರೆ “ನಾನು ಮೀರುತ್ತಿದ್ದೇನೆ” ಎಂಬ ಭಾವವೂ ಅವರಲ್ಲಿ ಇರಲಿಲ್ಲ. ನಾನು ಬಿಸಿಬಿಸಿ ರೊಟ್ಟಿ ಪ್ರಿಯ. ಊಟದ ಸಮಯಕ್ಕೆ ಹೋದಾಗಲೆಲ್ಲ ನನಗಾಗಿ ರೊಟ್ಟಿ ಬಡಿಯುತ್ತಿದ್ದರು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 76ನೇ ಕಂತು ನಿಮ್ಮ ಓದಿಗೆ
ನೀನೆ ಕೊನೆ-ಮೊದಲೆಂಬ ಕಾಲಾತೀತ ಪ್ರೇಮಗಾಥೆ: ರಾಮ್ ಪ್ರಕಾಶ್ ರೈ ಕೆ ಸರಣಿ
ಅವಳ ಹಾಡು, ಭೇಟಿಗೆ ಸಾಕ್ಷಿಯಾಗುತ್ತಿದ್ದ ಸೇತುವೆ ಎಲ್ಲವೂ ಪ್ರತ್ಯಕ್ಷವಾಗಿ ಮಾಯವಾಗುತ್ತದೆ. ಸಂವಾದ ಸಾಗುತ್ತಿರಬೇಕಾದರೆ ವಿದ್ಯುತ್ ರೆಪ್ಪೆಯ ಮುಚ್ಚುತ್ತದೆ. ದೀಪ ತರಲೆಂದು ರಾಮ್ ಹೋದಾಗ, ಜಾನು ಹಾಡನೊಂದು ಹಾಡುತ್ತಾಳೆ. ಬೇರೆ ಯಾವ ಹಾಡೂ ಅಲ್ಲ. ಪ್ರತಿ ಬಾರಿ ಅವಳು ವೇದಿಕೆಯೇರಿದಾಗ, ಅವನು ಕೋರಿಕೆಯಿಡುತ್ತಿದ್ದದ್ದೇ ಆ ಹಾಡಿಗಾಗಿ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
ಸಂಪಿಗೆಯ ಹಾದಿ, ಸಂಸ್ಕೃತಿಯ ಬೀದಿ: ಎಚ್. ಗೋಪಾಲಕೃಷ್ಣ ಸರಣಿ
ಸಂಪಿಗೆ ರಸ್ತೆಯ ಸಂಪಿಗೆ ಹೂವು, ಬೇವಿನ ಮರದ ರಸ್ತೆಯ ಬೇವನ್ನೂ ನಾವು ಖಂಡಿತಾ ಮರೆತಿಲ್ಲ. ನಿತ್ಯ ವಸಂತ. ನಿತ್ಯ ಯುಗಾದಿ ಈ ಬಡಾವಣೆಯ ವೈಶಿಷ್ಟ್ಯ. ಸಿಹಿ ನೀರಿನ ಬಾವಿಗಳಿಂದ ನೆಲದ ಮಟ್ಟದಲ್ಲಿ ನೀರು ಸಿಗುತ್ತಿದ್ದ ದಿನಗಳನ್ನು ನಾವೇ ನೋಡಿದ್ದೇವೆ. ಅದು ಬಾವಿಯೋ ಅಥವಾ ನೀರು ತುಂಬಿಸಲು ನಿರ್ಮಿಸಿರುವ ನೀರಿನ ತೊಟ್ಟಿಯೋ ಎಂದು ಆಶ್ಚರ್ಯ ಪಟ್ಟಿದ್ದೇವೆ. ಊಟ ತಿಂಡಿ, ಮಲ್ಲೇಶ್ವರಂ ಅಡ್ಡೆಗಳ ಬಗ್ಗೆ ಬರೆಯುವುದು ಸಾಧ್ಯವೇ ಇಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ಮೂರನೆಯ ಕಂತು ನಿಮ್ಮ ಓದಿಗೆ
ಬಡತನದ ಬದುಕು ಮತ್ತು ಶಾಲೆಯ ನೆನಪು: ಮಾರುತಿ ಗೋಪಿಕುಂಟೆ ಸರಣಿ
ಅವರು “ನಾವು ಬೆಳಿಗ್ಗೆ ಹೊತ್ತು ಮುಂಚೆನೆ ಹೋಗ್ತೀವಿ ನಮಗೆ ಬೆಳಗ್ಗೆ ಏನು ಅಡಿಗೆ ಮಾಡುವುದು ಬೇಡ ಎಂದರು”. ಅಮ್ಮ ನಿರಾಳವಾದಳು. ಏಕೆಂದರೆ ಬೆಳಗಿನ ಅಡಿಗೆಗೆ ಮನೆಯಲ್ಲಿ ಅಕ್ಕಿಯೆ ಇರಲಿಲ್ಲ. ಅಕ್ಕಿ ತಗೋಬೇಕು ಅಂದರೆ ಬೀಡಿಯ ಮಾಲೀಕ ಬರಬೇಕಿತ್ತು. ಹಣ ಕೊಡಬೇಕಿತ್ತು ಅನ್ನುವ ಪರಿಸ್ಥಿತಿ ನಮ್ಮದು. ಆದರೆ ಬೆಳಿಗ್ಗೆ ಸಂಬಂಧಿಕರು ಹೋಗುವುದು ತಡವಾಗಿದ್ದರಿಂದ ಬೆಳಗಿನ ಉಪಹಾರವನ್ನು ಮಾಡಬೇಕಾದ ಪರಿಸ್ಥಿತಿ ಅಮ್ಮನದಾಗಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ
ಅಂತ್ಯವಿಲ್ಲದ ವಾಕ್ಯಗಳಲ್ಲಿನ ಕಾವ್ಯ…: ಎಸ್. ಜಯಶ್ರೀನಿವಾಸ ರಾವ್ ಸರಣಿ
ಅವರ ವಿಷಯಾಧಾರಿತ ಆಯ್ಕೆಗಳ ಹೊರತಾಗಿಯೂ, ಅವರ ಕವಿತೆಗಳ ಭಾಷೆ ಸೊಗಸಾದ ಮತ್ತು ಬಹುತೇಕ ಹರ್ಷದಿಂದ ಕೂಡಿರುತ್ತದೆ. ಅವರ ಕವಿತೆಗಳು ಸಾಮಾನ್ಯವಾಗಿ ವಿನೋದಸ್ವಭಾವದಿಂದ ಕೂಡಿರುತ್ತೆ ಹಾಗೂ ಆಕರ್ಷಕವಾದ ವಿರೋಧಾಭಾಸದ ರೂಪಕಗಳ ಬಳಕೆಯನ್ನು ಪ್ರದರ್ಶಿಸುತ್ತವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಡೆನ್ಮಾರ್ಕ್ ದೇಶದ ಕವಿ ಹೆನ್ರಿಕ್ ನೊರ್ಡ್ಬ್ರಾಂಡ್ಟ್-ರ (Henrik Nordbrandt, 1945 – 2023) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಬೇಸಿಗೆಯ ಬೇಗೆಗೆ ನೆನಪುಗಳ ಸಿಂಚನ: ಚಂದ್ರಮತಿ ಸೋಂದಾ ಸರಣಿ
ವಸಂತ ಋತುಗಳನ್ನು ಎಲ್ಲ ಕಾಲಕ್ಕೂ ಕವಿಗಳು ಹಾಡಿಹೊಗಳುತ್ತ ಬಂದಿದ್ದಾರೆ. ಮಾವಿನ ಚಿಗುರು, ಕೋಗಿಲೆಯ ಕುಕಿಲು, ಮುಂಗಾರಿನ ಆರ್ಭಟ ಎಲ್ಲವೂ ಅವರ ವರ್ಣನೆಗೆ ಕಾರಣವಾಗಿವೆ. ಅದೇಕೋ ಬಿರುಬೇಸಗೆಯ, ಸುಡುಬಿಸಿಲಿನ ಅನಭವಗಳು ಅವರನ್ನು ಕಾಡಿದಂತೆ ಕಾಣುತ್ತಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಭೂಮಿಯ ದಗೆಯನ್ನು ಮೀರಿಸುವಂತೆ ಚುನಾವಣೆಯ ಕಾವು ಏರುತ್ತಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ
ಮೂಕ ವೇದನೆ…: ಗುರುಪ್ರಸಾದ ಕುರ್ತಕೋಟಿ ಸರಣಿ
ಅದು ಇದು ಮಾತಾಡುತ್ತ ತನ್ನ ಮಗ ಫಿಲಿಪ್ ಕೂಡ ತುಂಬಾ ಚೆನ್ನಾಗಿ ಸ್ನೂಕರ್ ಆಡುತ್ತಾನೆ ಇಲ್ಲಿದೆ ನೋಡಿ ಅಂತ ಒಂದು ವೀಡಿಯೊ ತೋರಿಸಿದ. ಅದರಲ್ಲಿ ಅವನ ಮಗ ಸ್ನೂಕರ್ ಹೊಡೆತಗಳನ್ನು ತುಂಬಾ ಚೆನ್ನಾಗಿಯೇ ಹೊಡೆಯುತ್ತಿದ್ದುದು ಗಮನಿಸಿದೆ. ಅದರ ಜೊತೆಗೆ ಇನ್ನೊಂದು ವಿಚಿತ್ರವನ್ನೂ ಆಲಿಸಿದೆ. ಆ ವೀಡಿಯೊದಲ್ಲಿ ಅವನ ಮಗ ನಿಚ್ಚಳವಾಗಿ ಮಾತಾಡುತ್ತಿದ್ದ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನಾಲ್ಕನೆಯ ಬರಹ
ಮಡಿಕೇರಿ ಟು ಬೇಲೂರು: ಸುಮಾವೀಣಾ ಸರಣಿ
ರಿಸಲ್ಟ್ ಮುಗಿದ ನಂತರ ಒಂದು ದಿನವೂ ಮಡಿಕೇರಿಯಲ್ಲಿ ಇರುತ್ತಿರಲಿಲ್ಲ. ಅಷ್ಟರಲ್ಲಿ ಬೇಲೂರಿನ ರಥೋತ್ಸವದ ಸಂದರ್ಭ ಸಂಭ್ರಮ ಎರಡೂ ಆಗಿರುತ್ತಿದ್ದ ಕಾರಣ ಬೇಲೂರಿಗೆ ಹೋಗುತ್ತಿದ್ದೆವು. ಹೋದ ನಂತರ ನಾವು ಯಾರ ಅಣತಿಯನ್ನೂ ಒಪ್ಪುತ್ತಿರಲಿಲ್ಲ. ಪೇರೋಲ್ನಿಂದ ಆಚೆ ಬಂದ ಖೈದಿಗಳಂತೆ ಆಡುತ್ತಿದ್ದೆವು. ಬೇಲೂರು ದೇವಸ್ಥಾನದಲ್ಲಿ ಘಂಟೆ ಬಾರಿಸಿದರೆ ನಮ್ಮಜ್ಜಿ ಮನೆಗೆ ಕೇಳಿಸುತ್ತಿತ್ತು. ಮಹಾಮಂಗಳಾರತಿ ಘಂಟೆ, ನೈವೇದ್ಯದ ಘಂಟೆಗಳು ಒಂದು ನಮೂನೆ ಅಲರಾಂ ಇದ್ದಂತೆ. ಬೇಸಗೆ ಎಂದರೆ ಎಲ್ಲ ಕಡೆ ನೀರಿಗೆ ತೊಂದರೆಯಿರುವಂತೆ ಬೇಲೂರಿನಲ್ಲಿಯೂ ಇತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ
ಇಂಗ್ಲೀಷ್ ಪಾಠ ಹಾಗೂ ಜಲಕಂಟಕದ ಕಹಿ ನೆನಪು: ಬಸವನಗೌಡ ಹೆಬ್ಬಳಗೆರೆ ಸರಣಿ
ಇವರ ಸ್ವಂತ ಮಕ್ಕಳು ಆಗಿನ ಕಾಲಕ್ಕೆ ಡಾಕ್ಟರ್, ಇಂಜಿನಿಯರ್, ಲೆಕ್ಚರ್ ಸ್ಥಾನ ಅಲಂಕರಿಸಿದ್ದರೂ ಇವರು ಮಾತ್ರ ತುಂಬಾ ಸಿಂಪಲ್ ಆಗಿ ಇದ್ರು. ಮನೇಲಿದ್ದಾಗ ವ್ಯವಸಾಯದ ಕೆಲಸವನ್ನು ಮಾಡ್ತಿದ್ರು. ಟ್ಯೂಷನ್ ಬಗ್ಗೆ ಇವರು ‘ಸ್ವ ಅಧ್ಯಯನವೇ ಮುಖ್ಯ’ ಎಂದು ಹೇಳುತ್ತಿದ್ದರು. ಇಂಗ್ಲೀಷ್ ಪದದ ಕನ್ನಡ ಅರ್ಥ ಬರೆಸಿ ಅರ್ಥ ಸಮೇತ ಸ್ಪೆಲ್ಲಿಂಗ್ ಕೇಳೋದು, ಪಾಠ ಓದಿಸೋದು, ಪ್ರಶ್ನೋತ್ತರ ಕೇಳೋದು ಹೀಗೆ ಪ್ರಾಮಾಣಿಕವಾಗಿ ಬೋಧಿಸ್ತಾ ಇದ್ರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹನ್ನೆರಡನೆಯ ಕಂತು ನಿಮ್ಮ ಓದಿಗೆ