Advertisement

ಸಾಹಿತ್ಯ

ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

ನವತೀರದಲ್ಲಿ, ಒಂದು ಸಂಜೆ ಮೀರಾ ದಿಬ್ಬದ ಮೇಲೆ ನಿಂತು, ಲೈಟ್‌ಹೌಸ್ ಇದ್ದ ಜಾಗವನ್ನೇ ನೋಡುತ್ತಿದ್ದಳು. ನಮಗೆ ಪ್ರಿಯವಾದವರನ್ನು ಕಳೆದುಕೊಂಡಾಗ ನಾವು ಲೆಕ್ಕ ಹಾಕುತ್ತೇವಲ್ಲಾ – ಅವರು ನಮಗೆ ಏನು ಕೊಟ್ಟರು, ಏನನ್ನು ಅರ್ಧಕ್ಕೇ ಬಿಟ್ಟುಹೋದರು, ಅವರನ್ನು ನೋಡಿಯೇ ನಾವು ಏನೇನು ಕಲಿತೆವು ಎಂದು – ಹಾಗೆ ಅವಳೂ ಲೆಕ್ಕ ಹಾಕುತ್ತಿದ್ದಳು. ತನ್ನ ಅಣ್ಣನ ಕೆಲಸದ ರೀತಿ, ಆತನ ಏಕಾಗ್ರತೆ, ಸಮಸ್ಯೆ ಕಂಡರೆ ಬಿಡದೆ ಅಂಟಿಕೊಳ್ಳುವ ಅವನ ಛಲ – ಎಲ್ಲವನ್ನೂ ನೆನಪಿಸಿಕೊಂಡಳು.
ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

read more
ಆರ್.‌ ಪವನ್‌ ಕುಮಾರ್‌ ಬರೆದ ಈ ಭಾನುವಾರದ ಕತೆ “ಗುರುತು”

ಆರ್.‌ ಪವನ್‌ ಕುಮಾರ್‌ ಬರೆದ ಈ ಭಾನುವಾರದ ಕತೆ “ಗುರುತು”

ಸರೋಜಮ್ಮ ಇದನ್ನು ಸರಿ ತಪ್ಪು ಎಂದು ತರ್ಕ ಮಾಡಲು ಹೋಗಲಿಲ್ಲ. ಅವಳೊಳಗೆ ಹೆಣ್ಣಿನ ಅಂತರಂಗದ ತುಮುಲಗಳ ಬಗ್ಗೆ ಗೌರವವಿದ್ದು, ಅದಕ್ಕೆ ಗಂಡು ಸೂಕ್ತವಾಗಿ ಪ್ರತಿಕ್ರಿಯಿಸದೆ ಹೋದರೆ ಇಂಥವೆಲ್ಲಾ ಘಟಿಸಿ ಹೋಗುತ್ತವೆ ಎಂದುಕೊಂಡಿದ್ದಳು. ತನ್ನ ಮಗ ಇದರಲ್ಲಿ ಸಂಪೂರ್ಣ ಸೋತವನೆಂದು ಅರಿವಾಗಿತ್ತು. ಇನ್ನೂ ಮಗನೂ ಅಷ್ಟೇ ತನ್ನ ಚಟಗಳಿಗೆ ಇದನ್ನೆ ಮತ್ತೊಂದು ನೆಪ ಮಾಡಿಕೊಂಡವನು ಮನೆ ಮರೆತು ತನಗೆ ಅನುಕೂಲವಾದ ಕಡೆ ತಿರುಗುತ್ತ ಎಂದಾದರೊಮ್ಮೆ ಮನೆಗೆ ಬರುತ್ತಿದ್ದ.
ಆರ್.‌ ಪವನ್‌ ಕುಮಾರ್‌ ಬರೆದ ಕತೆ “ಗುರುತು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

read more
ಗುರುರಾಜ್‌ ಕೆ. ಕುಲಕರ್ಣಿ ಬರೆದ ಈ ಭಾನುವಾರದ ಕತೆ “ಕಾಕಮಂಡಲ ಮಧ್ಯದೊಳಗೆ…”

ಗುರುರಾಜ್‌ ಕೆ. ಕುಲಕರ್ಣಿ ಬರೆದ ಈ ಭಾನುವಾರದ ಕತೆ “ಕಾಕಮಂಡಲ ಮಧ್ಯದೊಳಗೆ…”

“ಧರ್ಮರಾಜನೇ, ಕರಣಿಕರೇ, ಕ್ಷಮಿಸಿ. ನಿಮ್ಮ ದೂತರಾದ ನಮಗೆ ನಿಮ್ಮ ನಿಯಮವೇ ವೇದವಾಕ್ಯ. ಆದರೆ ಕಾಕಮಂಕ ಮಾಡಿದ್ದು ಕೇವಲ ಹಸಿವಿನ ಅಚಾತುರ್ಯವಲ್ಲ, ಅದರ ಹಿಂದೆ ಒಂದು ಭಾವನಾತ್ಮಕ ಸತ್ಯವಿದೆ. ಸತ್ಯಪ್ಪ ಮಾಸ್ತರರು ಬದುಕಿದ್ದಾಗ ಕೇವಲ ಮನುಷ್ಯರಿಗೆ ಮಾತ್ರವಲ್ಲ, ನಮ್ಮಂತ ಪಶು-ಪಕ್ಷಿಗಳಿಗೂ ಅಕ್ಕರೆ ತೋರಿಸಿದವರು. ಅವರು ಪಾಠ ಮಾಡುವಾಗ ಮರದ ಮೇಲೆ ಕುಳಿತು ಪಾಠ ಕೇಳುತ್ತಿದ್ದವರಲ್ಲಿ ಈ ಮಂಕನೂ ಒಬ್ಬ.”
ಗುರುರಾಜ್‌ ಕೆ. ಕುಲಕರ್ಣಿ ಬರೆದ ಕತೆ “ಕಾಕಮಂಡಲ ಮಧ್ಯದೊಳಗೆ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

read more
ಸಿಡ್ನಿ ಶ್ರೀನಿವಾಸ್ ಬರೆದ ಈ ಭಾನುವಾರದ ಕತೆ “ಎರವಲು ಗೆಳತಿ”

ಸಿಡ್ನಿ ಶ್ರೀನಿವಾಸ್ ಬರೆದ ಈ ಭಾನುವಾರದ ಕತೆ “ಎರವಲು ಗೆಳತಿ”

ಸಾಮಾನ್ಯವಾಗಿ ಇಂತಹ ದಿನಗಳಂದು ವಿದ್ಯಾರ್ಥಿಗಳು ತಮ್ಮ ಗೆಳತಿಯರೊಡನೆ ರಾತ್ರಿ ಸಂಚಾರ ಮಾಡುವುದು ಪದ್ಧತಿ. ಬೀದಿಗಳಲ್ಲಿ ತಿರುಗಿ ಯಾವುದಾದರೂ ಪಾರ್ಕಿನಲ್ಲಿ ಎಲ್ಲರೂ ಕುಳಿತು ಮೋಜುಮಾಡುವ ಪರಿಪಾಠ. ಕೆಲವರು ಕದ್ದು ಪಾನೀಯಗಳನ್ನು ತಂದು ಎಲ್ಲರೂ ಕುಡಿದು ಸಂತೋಷ ಪಡುತ್ತಾರೆ. ಸಿನೆಮಾ ನೋಡುತ್ತಾರೆ. ಹಿಂದೆ ಸುರೇಶ್ ಕೂಡ ಇಂತಹ ಹುಡುಗರನ್ನು ಕೂಡಿದ್ದುಂಟು. ಆದರೆ ಇಂದು ಅವನಿಗೆ ಏನೂ ಬೇಕಾಗಿರಲಿಲ್ಲ.
ಸಿಡ್ನಿ ಶ್ರೀನಿವಾಸ್ ಬರೆದ ಈ ಕತೆ “ಎರವಲು ಗೆಳತಿ” ನಿಮ್ಮ ಈ ಭಾನುವಾರದ ಓದಿಗೆ

read more
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ಎನುಗಂಟಿ ವೇಣುಗೋಪಾಲ್ ತೆಲುಗು ಕತೆ

ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ಎನುಗಂಟಿ ವೇಣುಗೋಪಾಲ್ ತೆಲುಗು ಕತೆ

“ಬಹಳ ದೂರ ಬಂದ ಮೇಲೆ ನೀವು ಎದುರಾದಿರಿ” ಎಂದು ಹೇಳುವುದು ಮುಗಿದ ಮೇಲೆ ಉಳಿದ ಅರ್ಧ ಗ್ಲಾಸ್ ಮದ್ಯವನ್ನು ಖಾಲಿ ಮಾಡಿದ ರಂಜಿತ್. “ಇಗೋ ಪುರಾವೆ… ನನ್ನ ಕೈ ಮೇಲಿನ ಗಾಯ” ಎನ್ನುತ್ತಾ ಬಲಗೈಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ತೋರಿಸಿದ ರಂಜಿತ್. “ಹೌದು, ಆಗ ನೀವು ಬಲಗೈಯಿಂದ ಲಿಫ್ಟ್ ಕೇಳಿದಾಗ ಬೀದಿ ದೀಪದ ಬೆಳಕಿನಲ್ಲಿ ಗಮನಿಸಿದೆ. ಆ ಗಾಯ ನೋಡಿಯೇ ಲಿಫ್ಟ್ ಕೊಟ್ಟೆ” ಎಂದ ವಾಸುದೇವ ರಾವ್. ರಂಜಿತ್ ಒಮ್ಮೆಲೇ ದಂಗಾದನು. “ಆತಂಕ ಪಡಬೇಡಿ.
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಕತೆಗಾರ ಎನುಗಂಟಿ ವೇಣುಗೋಪಾಲ್ ಅವರ ಕತೆ “ಚೋರಿ”

read more
ಪ್ರವೀಣ್ ಕುಮಾರ್ ಜಿ. ಬರೆದ ಈ ಭಾನುವಾರದ ಕತೆ “ಈಡು ಜೋಡು”

ಪ್ರವೀಣ್ ಕುಮಾರ್ ಜಿ. ಬರೆದ ಈ ಭಾನುವಾರದ ಕತೆ “ಈಡು ಜೋಡು”

ಇತ್ತ ಬಾಮೈದನು ತನ್ನ ಬಲಗೈಯಲ್ಲಿ ಉಂಗುರ ಹಿಡಿದು, ಎಡಗೈಯಲ್ಲಿ ಮಂಜನ ಕೈ ಹಿಡಿದು ತೊಡಿಸಲು ಮುಂದಾದಾಗ ಮೊದಲಿಗೆ ಮಂಜನ ಕೈ ಮೇಲೇಳಲಿಲ್ಲ. ಅಕ್ಕನ ಅಳುವಿನಲ್ಲಿ ತಾನೂ ಕಣ್ತುಂಬಿಕೊಂಡಿದ್ದ ಬಾಮೈದ ಉಂಗುರವನ್ನು ಮತ್ತೆ ಬೆರಳ ಹತ್ತಿರ ಹೊಯ್ದಾಗ ಮಂಜನ ಕೈ ಇನ್ನಶ್ಟು ಹಟ ಮಾಡಿತು. ಬಾಮೈದ ಮಂಜನನ್ನು ನೋಡಿದ, ಮಂಜನ ಮಾರಿ ನೆಲ ನೋಡುತ್ತಾ, ಬೇಡ ಬೇಡ ಎಂಬಂತೆ ಅತ್ತಿತ್ತ ಒದರಾಡುತ್ತಿತ್ತು. ಬಾಮೈದ ಮಾವನವರನ್ನು ನೋಡಿದ, ಸುತ್ತಿನವರು ಇನ್ನೂ ಬೆರಳು ಏರದ ಉಂಗುರವನ್ನೇ ನೋಡುತ್ತಿದ್ದರು.
ಪ್ರವೀಣ್ ಕುಮಾರ್ ಜಿ. ಬರೆದ ಕತೆ “ಈಡು ಜೋಡು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

read more
ನಾಗರೇಖಾ ಗಾಂವಕರ ಬರೆದ ಈ ಭಾನುವಾರದ ಕತೆ “ಸೋಡಿನಾಟ”

ನಾಗರೇಖಾ ಗಾಂವಕರ ಬರೆದ ಈ ಭಾನುವಾರದ ಕತೆ “ಸೋಡಿನಾಟ”

ನೌಕರಿ ಸೇರಿದ ಹೊಸದರಲ್ಲಿ ಅಪ್ಪನ ಉಮೇದಿಗೆ ಕಡಿಮೆ ಇರಲಿಲ್ಲ. ಸಾಯುವವರೆಗೂ ಮನೆಯ ಜವಾಬ್ದಾರಿ ನಿಭಾಯಿಸುತ್ತಾ ಬದುಕಿದ ಜೀವ ತನ್ನಪ್ಪ. ಸಾಯುವ ಹಿಂದಿನ ದಿನವೂ “ಅಪ್ಪಾ!! ಸುಸ್ತಾಗಿದೆ ನಿಂಗೆ. ಮನಿಕಾ” ಎಂದು ಹಾಸಿಗೆ ಜಾಡಿಸಿ ತಲೆದಿಂಬು ಸರಿ ಮಾಡಿಕೊಟ್ಟರೆ “ಮಾಬ್ಲೂ ಮಲಗುಲಾ ಮನೇ!! ಆ ಹಾಳೆ ಕಟ್ಟು ತಕಂಡ ಬಾ!!” ಎಂದು ತಮ್ಮ ಲೆಕ್ಕದ ಪುಸ್ತಕ ತರಿಸಿಕೊಂಡು ಆ ವರ್ಷದ ಖರ್ಚು ವೆಚ್ಚ ಬರೆದುದನ್ನು ಮತ್ತೊಮ್ಮೆ ಚೆಕ್ ಮಾಡಿದ್ದರು. “ಮಾಬ್ಲು ಗಿಡವಕ್ಕೆ ಈ ಸಲ ಗೊಬ್ಬರ ಹಾಕಬೇಕಾಗತ. ಯಾರಿಗರೂ ಹೇಳ.
ನಾಗರೇಖಾ ಗಾಂವಕರ ಬರೆದ ಕತೆ “ಸೋಡಿನಾಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

read more
ಎಸ್. ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ “ಭಿನ್ನ”

ಎಸ್. ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ “ಭಿನ್ನ”

ಹೀಗೆ ಅಚಾನಕ್ಕಾಗಿ ಕೆಲಸ ಬಿಡುವ ನಿರ್ಧಾರ ತಿಳಿಸಿ ಹಿಂತಿರುಗಿ ನೋಡದೆ ಬೀಸುನಡಿಗೆಯಲ್ಲಿ ಎದ್ದು ಬರಬೇಕೆನ್ನುವ ತೀರ್ಮಾನ ಹಿಂದಿನ ರಾತ್ರಿ ಮೊಳಕೆಯೊಡೆದು ಬೆಳೆದು ಬೆಳೆದು ಬೃಹದಾಕಾರವಾಗಿ ಇವತ್ತು ಹರಿಣಿಯ ಮುಂದೆ ಕುಳಿತಾಗ ಹೇಳಲೇಬೇಕಾದ ಒತ್ತಡ ಸೃಷ್ಟಿಸಿತ್ತು. ಎಂದಿನಂತೆ ಮೀಟಿಂಗ್ ರೂಮಲ್ಲಿ ಸಿಗದೆ ತನ್ನ ಕ್ಯಾಬಿನ್ನಿಗೆ ಕರೆಸಿ ಕೂರಿಸಿದಾಗಲೇ ಹರಿಣಿ ತನ್ನ ಅಧಿಕಾರ ಪ್ರದರ್ಶನ ಮಾಡಿಯೇ ತೀರುವ ಸೂಚನೆ ಸಿಕ್ಕಿತ್ತು.
ಎಸ್. ನಾಗಶ್ರೀ ಅಜಯ್ ಹೊಸ ಕಥಾ ಸಂಕಲನ “ಕಡೆ ಹಾಯ್ವ ದೋಣಿ”ಯ ಒಂದು ಕತೆ “ಭಿನ್ನ”

read more
ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ”

ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ”

ಸಿದ್ದಪ್ಪ ಮಾಸ್ತರರ ಮನೆಯ ದೃಶ್ಯ ಮಾತ್ರ ಸಂಪೂರ್ಣ ಬೇರೆಯಾಗಿತ್ತು.ಅಲ್ಲಿ ಯಾವುದೇ ಗಡಿಬಿಡಿಯಿರಲಿಲ್ಲ, ಹೊಗೆಯಿರಲಿಲ್ಲ, ಕೆಮ್ಮಿನ ಸದ್ದಿರಲಿಲ್ಲ. ಮಾಸ್ತರು ಬೆಳಿಗ್ಗೆ ಐದು ಗಂಟೆಗೆ ಎದ್ದು ತಣ್ಣೀರಿನ ಸ್ನಾನ ಮುಗಿಸಿ, ಶುಭ್ರವಾದ ಬಟ್ಟೆ ಧರಿಸಿ ಅಡುಗೆಮನೆಗೆ ಬರುತ್ತಿದ್ದರು. ಹಳೆಯ ಸ್ಟವ್‌ನ ನಾಬ್ ಅನ್ನು ಮೃದುವಾಗಿ ತಿರುಗಿಸುತ್ತಿದ್ದರು. ‘ಚಿಕ್’ ಎಂಬ ಸದ್ದಿನೊಂದಿಗೆ, ಅಲ್ಲಿ ನೀಲಿ ಜ್ವಾಲೆ ಮೃದುವಾಗಿ, ತಾಳಬದ್ಧವಾಗಿ ಉರಿಯಲು ಶುರುವಾಗುತ್ತಿತ್ತು. ಅವರ ಪತ್ನಿ ಶಾಂತಮ್ಮ, ಆ ನೀಲಿ ಜ್ವಾಲೆಯ ಮೇಲೆ ಹಬೆಯಾಡುವ ಮೃದುವಾದ ಇಡ್ಲಿ ಮತ್ತು ಪರಿಮಳ ಬೀರುವ ಸಾಂಬಾರ್ ಮಾಡುತ್ತಿದ್ದರು.
ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ” ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ