Advertisement
ಮಂಜುಳ ಭದ್ರಸ್ವಾಮಿ ಬರೆದ ಈ ದಿನದ ಕವಿತೆ

ಮಂಜುಳ ಭದ್ರಸ್ವಾಮಿ ಬರೆದ ಈ ದಿನದ ಕವಿತೆ

ಕನಸಿನೂರು

ಅವನು ಗುಬ್ಬಾರಗಳ ಹೊತ್ತು ನನ್ನ ಬಾಗಿಲಿಗೆ ಬಂದಿದ್ದ
ಕೆಂಪು ನೀಲಿ ಹಸಿರು ಹಳದಿ ಕಿತ್ತಳೆ
ಕಾಮನಬಿಲ್ಲಿನ ಬಣ್ಣಗಳನ್ನೆಲ್ಲ ಹೊತ್ತು ತಂದಿದ್ದ
ನಸುನಗುತ್ತ ನನ್ನ ಬಳಿ ಬಂದ
“ಚೆಂದದ ಹುಡುಗಿ ನೀ, ಇಕೋ ಈ ಕೆಂಪು ಗುಬ್ಬಾರ” ಎಂದ
ಬಂದ ಹಾಗೇ ಸರಸರನೆ ನಡೆದ
ನನ್ನನ್ನು ತನ್ನೊಳಗೆ ಸೆಳೆದ
ಮೊರೆವ ಗಾಳಿ ಕೊರೆವ ಚಳಿ
ಭೋರ್ಗರೆವ ಕಡಲು ನಲಿವ ನವಿಲು
ಅರಿಯದ ನಾಡು ತಿಳಿಯದ ಜನ
ಕನಸ ಕಟ್ಟುತ್ತ ನೆನಪನುಳಿಸುತ್ತ
ಒಮ್ಮೆ ಅವನ ಹಿಂದೆ ಮತ್ತೊಮ್ಮೆ ಅವನ ಮುಂದೆ
ಅಲೆಯುತ್ತಿದ್ದೇನೆ ಕನಸುಗಳ ಬೆಂಬೆತ್ತಿ ಓಡುತ್ತಲೇ ಇದ್ದೇನೆ

ಮಂಜುಳಾ ಮೂಲತಃ ಮೈಸೂರಿನವರು. ಸದ್ಯ ಕ್ಯಾಲಿಫೋರ್ನಿಯಾವಾಸಿ
ಮೈಸೂರು ವಿಶ್ವ ವಿದ್ಯಾನಿಲಯ ಹಾಗು ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಟ್ ಯೂನಿವರ್ಸಿಟಿಯಿಂದ ಅರ್ಥಶಾಸ್ತ್ರದಲ್ಲಿ ಮಾಸ್ಟರ್ಸ್ ಪದವಿ.
ಕಥೆ, ಲೇಖನಗಳು ಕನ್ನಡ ಹಾಗು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
‘ಕಥಾಗುಚ್ಛ’ (ಕಥಾ ಸಂಗ್ರಹ), ‘ಇನ್ ದ ಲ್ಯಾಂಡ್ ಆಫ್ ಗೋಲ್ಡನ್ ಗೇಟ್ ಬ್ರಿಜ್’ (ಲೇಖನಗಳ ಸಂಗ್ರಹ) ಪ್ರಕಟಿತ ಪುಸ್ತಕಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ