ಶಬ್ದ ಸಂವೇದನೆಯ ಒಳ ವಿನ್ಯಾಸ “ಘಾಚರ್ ಘೋಚರ್”: ದೇವಿಕಾ ನಾಗೇಶ್ ಬರಹ
“ಘಾಚರ್ ಘೋಚರ್” ಒಂದು ‘ನೀಳ್ಗತೆ ಎಂದು ಕೃತಿಯ ಲೇಖಕ ವಿವೇಕ ಶಾನಭಾಗ ಕರೆದರೂ ಇದು ಎರಡು ತಲೆಮಾರಿನ ಜೀವನಪಯಣದ ಓಟದಲ್ಲಿನ ಏಳುಬೀಳುಗಳನ್ನು ಪಲ್ಲಟವನ್ನೂ ಅಮೂಲಾಗ್ರವಾಗಿ ದಾಖಲಿಸುತ್ತದೆ. ‘ಘಾಚರ್ ಘೋಚರ್ʼ ಈ ಯುಗಳ ಪದ ನಮ್ಮ ಇಡೀ ಬದುಕೆ ಗೋಜಲಾಗಿರುವ ಕ್ರಮಕ್ಕೆ ಭಾವ ಪ್ರತಿನಿಧಿಯಂತೆ ಅನುರಣನಗೊಳ್ಳುತ್ತದೆ’ ಎಸ್. ಆರ್. ವಿಜಯಶಂಕರ್ ಮಾತಿದು. ಆದರೆ ಎಪ್ಪತ್ತು ಪುಟಗಳ ಕಿರು ಕಾದಂಬರಿ ಗಾತ್ರದ ಈ ಕಥೆಯ ಪಾತ್ರಗಳು ಒಂದು ಕುಟುಂಬದ ಭೂಮಿಕೆಯಿಂದ ಹೊರ ಜಗತ್ತಿಗೆ ವಿಸ್ತರಿಸಿಕೊಳ್ಳುತ್ತ ಸಾಗುವ ಚಲನೆ ಮೂಡಿಸುವ ತಲ್ಲಣ ದಂಗು ಬಡಿಸುವಂತಿದೆ.
ವಿವೇಕ ಶಾನಭಾಗ ಕಥಾಸಂಕಲನ “ಘಾಚರ್ ಘೋಚರ್” ಕುರಿತು ದೇವಿಕಾ ನಾಗೇಶ್ ಬರಹ
