Advertisement

ಕೆಂಡಸಂಪಿಗೆ

ದೀಪಾವಳಿ ಹಬ್ಬದ ಆ ದಿನದ ನೆನಪು: ಮಾರುತಿ ಗೋಪಿಕುಂಟೆ ಬರಹ

ಅಂತೂ ಈಡಿಗೆ ಬೆಂಕಿ ತಾಕಿಸಿ ಅದು ಉರಿಯುವುದರೊಳಗೆ ನನ್ನನ್ನು ಅಲ್ಲಿಂದ ಮನೆಗೆ ಕಳಿಸಿದ್ದರು. ಅದಾದ ಮೇಲೆ ಎಂದೂ ನಾನು ಬಾನ ಹೊತ್ತಿದ್ದು ನೆನಪಿಲ್ಲ. ನನಗೆ ದೇವರನ್ನು ಹೊತ್ಕೋಬೇಕು ಅಂತ ಆಸೆ ಇತ್ತು. ಆದರೆ ನಾವು ದೇವರನ್ನು ತಲೆಮೇಲೆ ಹೊರಬಾರ್ದು ಅನ್ನುತ್ತಿದ್ದರು. ಅದಕ್ಕೆ ಅನೇಕ ನಿಯಮಗಳಿರುತ್ತವೆ ಅನ್ನುತ್ತಿದ್ದರು. ನಾವ್ಯಾಕೆ ಹೊತ್ಕೋಬಾರ್ದು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೆ ಇತ್ತು. ಅಂತೂ ಆ ವರ್ಷದ ದೀವಣ್ಗೆ ಹಬ್ಬ ಮುಗಿದುಹೋಗಿತ್ತು. ಪ್ರತಿ ದೀಪಾವಳಿ ಹಬ್ಬದಲ್ಲೂ ಅಂತಹ ನೆನಪುಗಳು ಮತ್ತೆ ಮತ್ತೆ ಮರುಕಳಿಸುತ್ತಲೆ ಇರುತ್ತವೆ.
ಮಾರುತಿ ಗೋಪಿಕುಂಟೆ ನೆನಪುಗಳು

Read More

ತುಳುನಾಡಿನ ದೀಪಾವಳಿ: ಫಕೀರ್ ಮುಹಮ್ಮದ್ ಕಟ್ಪಾಡಿ ನೆನಪುಗಳು

ಪಟಾಕಿ ಸುಡುವುದರ ಬಗ್ಗೆ ಕ್ಲಾಸಿನಲ್ಲಿ ಪಾಠದ ಮಧ್ಯೆ ಸುಮ್ಮನೆ ದಂಡಕ್ಕೆ ಎಂದು ಬೋಧಿಸಿದ್ದ ನಮ್ಮ ನೆರೆಮನೆಯ ದೇಜು ಮಾಸ್ಟ್ರು ತಮ್ಮ ಮಕ್ಕಳು ಕೃಷ್ಣ, ಲಕ್ಷ್ಮಣ, ಪುಟ್ಟ ಮಗು ಮಾರುತಿಯರನ್ನು ಕರೆದುಕೊಂಡು ಬಂದು ನಮ್ಮ ತಂದೆಯವರ ಜೊತೆಗೆ ನಿಂತು ಉತ್ಸವವನ್ನು ನೋಡಿದಂತಾಯಿತೆಂದು ಹೇಳಿಕೊಂಡು, ಖುಷಿ ಪಟ್ಟುಕೊಂಡು, ನಮ್ಮ ಸಂತೋಷದಲ್ಲಿ ಭಾಗಿಯಾಗಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ನಮ್ಮ ಸುಡು ಮದ್ದು ಬಿರುಸು ಬಾಣಗಳ ವೈಭವವನ್ನು ಸವಿದ ಊರವರು ಮುಂದೆ ವರ್ಷಗಟ್ಟಲೆ ಈ ದೀಪಾವಳಿಯನ್ನು `ಗುರುಕುಲೆ ಇಲ್ಲದ ದೀಪೋಲಿ’ ಎಂತಲೇ ನೆನಸಿ ಕೊಳ್ಳುತ್ತಿದ್ದರು.
ತುಳುನಾಡಿನ ದೀಪಾವಳಿಯ ಆಚರಣೆಗಳ ಕುರಿತು ಫಕೀರ್ ಮುಹಮ್ಮದ್ ಕಟ್ಪಾಡಿ ನೆನಪುಗಳು ನಿಮ್ಮ ಓದಿಗೆ

Read More

ಅನುರೂಪ ವಸ್ತುಗಳ ಸಂಚಯನ ಎಲೆ ಅಡಿಕೆ ಚೀಲ: ಸುಮಾವೀಣಾ ಸರಣಿ

ನಮ್ಮ ಮೊಬೈಲ್‌ಗೆ ಈಗ ಫಿಂಗರ್ ಪ್ರಿಂಟ್ಸ್ ಲಾಕ್ ಇದೆಯಲ್ಲಾ ಹಾಗೆ ಅಜ್ಜಿ ತನ್ನ ಚೀಲಕ್ಕೆ ಹಾಕುತ್ತಿದ್ದ ನ್ನಾಟಿ ನ್ನಾಟ್ ಅನ್ನು ಯಾರಿಗು ಬಿಚ್ಚಲಾಗುತ್ತಿರಲಿಲ್ಲ. ಮುರಿದ ಆಭರಣದ ಚೂರುಗಳು ಬೆಳ್ಳಿಯ ಚೂರುಗಳನ್ನು ಚಿಕ್ಕ ಪ್ಲಾಸ್ಟಿಕ್‌ನಲ್ಲಿ ಹಾಕಿ ಚೀಲದ ಒಳ ಪದರದ ಒಳ ಪದರದಲ್ಲಿ ಇಡುವುದು, ಅವರ ಇವರ ತೋಟಕ್ಕೆ ಹೋದಾಗ ಅಪರೂಪದ ತರಕಾರಿ ಬೀಜ ಸಿಕ್ಕರೆ ಅದನ್ನು ಅದರಲ್ಲೆ ಇಡುವುದು, ಅಲ್ಲೇ ಬಿಡಿಸಿ ಅಲ್ಲೇ ಮುಡಿದುಕೊಳ್ಳಲು ಹೂ ಕಟ್ಟುವ ದಾರವೂ ಅಲ್ಲೇ ಇರುತ್ತಿತ್ತು. ದೇವಸ್ಥಾನಕ್ಕೆ ಹೋದರೆ ಕುಂಕುಮ ಪ್ರಸಾದ, ಗಂಧ ಅದರಲ್ಲೇ ಇಡುವುದು. ತಲೆಸುತ್ತುವಿಕೆಗೆ, ಅಜೀರ್ಣಕ್ಕೆ, ಬಾಯಿ ವಾಸನೆ ಬರದಂತೆ ತಡೆಯಲು, ಹಲ್ಲು ನೋವಿಗೆ, ಶೀತಕ್ಕೆ ನಶ್ಯ ಎಲ್ಲಾ ಅದರಲ್ಲೇ ಇರುತ್ತಿತ್ತು.ಸುಮಾವೀಣಾ ಬರೆಯುವ “ಮಾತು ಖ್ಯಾತೆ” ಸರಣಿ ಸರಣಿ

Read More

ಜಿ. ಎಸ್. ಶಿವರುದ್ರಪ್ಪ ಬರೆದ ಕವಿತೆ: “ನನ್ನ ಹಣತೆ”

“ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ,
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.” -ಜಿ. ಎಸ್. ಶಿವರುದ್ರಪ್ಪ ಬರೆದ ಕವಿತೆ: “ನನ್ನ ಹಣತೆ”

Read More

ಹೊಸ ಮನೆ… ಹೊಸ ಏರಿಯಾ.. ಹೊಸ ಸಮಸ್ಯೆಗಳು…: ಎಚ್. ಗೋಪಾಲಕೃಷ್ಣ ಸರಣಿ

ಅವತ್ತು ಜೋರು ಮಳೆ. ಮಳೆ ಬಂದು ನಿಂತ ನಂತರ ನಮ್ಮ ಸೈಕಲ್ ಜಾಥಾ ಶುರು ಆಯಿತು. ರಾಮಚಂದ್ರಪುರದ ಕಿರು ರಸ್ತೆಗೆ ಬಂದೆವು. ಕತ್ತಲಿನಲ್ಲಿ ಒಬ್ಬ ಮಧ್ಯ ವಯಸ್ಕರು ಕೈಯಲ್ಲಿ ಒಂದು ಟಾರ್ಚ್ ಹಿಡಿದು ನಿಂತಿದ್ದರು. ಸ್ವಾಮೀ ನಿಲ್ಲಿ, ನಿಲ್ಲಿ ಸಾರ್ ಅಂತ ನಮ್ಮನ್ನು ತಡೆದರು. ಎಲೆಕ್ಟ್ರಿಕ್ ವೈರ್ ರಸ್ತೆ ಮೇಲೆ ಅಲ್ಲೆಲ್ಲಾ ಬಿದ್ದು ಕರೆಂಟ್ ಹರಿತಾ ಇದೆ. ಈ ರೋಡಿನಲ್ಲಿ ಹೋಗಬೇಡಿ ಅಂತ ಹೇಳಿ ಎಂ ಎಸ್ ಪಾಳ್ಯದ ಮೂಲಕ ಹೋಗಿ ಅಂತ ಸೂಚಿಸಿದರು. ಇದು ನಾಲ್ಕು ಕಿಮೀ ಹೆಚ್ಚು ದೂರ. ಆದರೂ ಜೀವ ನಮ್ಮದು ತಾನೇ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೦ನೇ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ