ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ
“ಮುಂದಾಗುವುದನು
ಇಂದೇ ಅರಿಯುವ
ತ್ರಿಕಾಲ ಜ್ಞಾನವು
ನನಗೊಲಿದಿಲ್ಲ
ಒಂದೇ ಬಣ್ಣದ
ಬಟ್ಟೆಯ ತೊಟ್ಟ
ಅವಳಿ ಮಕ್ಕಳು
ಸರಿ ತಪ್ಪುಗಳು”-ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 6, 2025 | ದಿನದ ಕವಿತೆ |
“ಮುಂದಾಗುವುದನು
ಇಂದೇ ಅರಿಯುವ
ತ್ರಿಕಾಲ ಜ್ಞಾನವು
ನನಗೊಲಿದಿಲ್ಲ
ಒಂದೇ ಬಣ್ಣದ
ಬಟ್ಟೆಯ ತೊಟ್ಟ
ಅವಳಿ ಮಕ್ಕಳು
ಸರಿ ತಪ್ಪುಗಳು”-ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 5, 2025 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ನಾಗರಿಕ ಸೌಜನ್ಯಕ್ಕಾಗಿ ಬಲು ಬೆಲೆ ತೆರಬೇಕಾದ ಆಧುನಿಕ ಬದುಕಿನ ಪಂಚಾಂಗ ಇಲ್ಲಿದೆ. ಹಾಗಿದ್ದರೆ, ಆಧುನಿಕತೆಯು ಹಳೆಯ ವರ್ಗೀಕೃತ ತಪ್ಪುಗಳನ್ನು ಮೀರಿಸಿಕೊಂಡಿದೆಯೇ? ಸಾಮಾಜಿಕ ಸಾಂಕ್ರಾಮಿಕಗಳಾಗಿದ್ದ ಜಾತಿ, ಧರ್ಮ, ವರ್ಗ, ಲಿಂಗಗಳೀಗ ಇಲ್ಲವಾಗಿವೆಯೇ? ಖಂಡಿತ ಇಲ್ಲ. ಈಗಲೂ ಈ ಎಲ್ಲ ತರತಮಗಳು ಹಾಗೆಯೇ ಮುನ್ನಡೆಯುತ್ತಿವೆ. ರೂಪಾಂತರಗೊಂಡು ವಿವರಣೆಗೆ ನಿಲುಕದಷ್ಟು ಸಂಕೀರ್ಣ ಸ್ಥಿತಿಯನ್ನು ಪಡೆದಿವೆ. ಪ್ರೀತಿಯ ರಾಜಕಾರಣದಿಂದ ಮತ್ತೆ ಬಲವರ್ಧನೆಗೊಳ್ಳುತ್ತಿವೆ. ಯಾಜಮಾನ್ಯವು ಯಾಜಮಾನ್ಯವೇ ಆಗಿ ಮುನ್ನಡೆಯುತ್ತಿದೆ.
ಎಡೆಯೂರು ಪಲ್ಲವಿ ಕಥಾ ಸಂಕಲನ “ಕುಂಡದ ಬೇರು” ಕೃತಿಗೆ ವಿನಯಾ ಒಕ್ಕುಂದ ಮುನ್ನುಡಿ
Posted by ಕೆಂಡಸಂಪಿಗೆ | Jun 5, 2025 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ರವಿಶಂಕರ ಪಾಟೀಲ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದವರಾದ ರವಿಶಂಕರ ಅವರು ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರು. ಸಣ್ಣಕತೆ ಪದ್ಯ ಅವರ ಆಸಕ್ತಿಯ ಸಾಹಿತ್ಯ ಪ್ರಕಾರಗಳು. “ದೃಷ್ಟಿಕೋನ” (2012) ಇವರ ಪ್ರಕಟಿತ ಕಥಾ ಸಂಕಲನ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | May 30, 2025 | ಸಾಹಿತ್ಯ |
ಕನ್ನಡದ ಹಿರಿಯ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಇಂದು ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಸುಮಾರು ಆರು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದ ಅವರು ಕಾವ್ಯ, ನಾಟಕ, ಮಕ್ಕಳ ಸಾಹಿತ್ಯ, ವಿಮರ್ಶಾ ರಂಗದಲ್ಲೂ ತಮ್ಮ ಸಾಹಿತ್ಯ ಕಾರ್ಯವನ್ನು ವಿಸ್ತರಿಸಿಕೊಂಡಿದ್ದರು. ಭಾವಗೀತೆಗಳೆಂದರೆ ಎಚ್.ಎಸ್.ವಿ. ಎನ್ನುವಷ್ಟು ಜನಪ್ರಿಯತೆಯನ್ನು ಹೊಂದಿ, ಭಾವಕವಿಯೆಂದೇ ಪ್ರಸಿದ್ಧರಾಗಿದ್ದರು.
Read MorePosted by ಕೆಂಡಸಂಪಿಗೆ | May 26, 2025 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಕತೆಗಾರಿಕೆಯ ಕೌಶಲವನ್ನು, ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಇನ್ನಷ್ಟು ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು. ಆ ಘಮಲನ್ನೂ ಕ್ರೂರ ವಾಸ್ತವವನ್ನೂ ಜೊತೆಜೊತೆಯಾಗಿ ಕಟ್ಟಿಕೊಡುವ ‘ಕಂಡಾಯದೊಡೆಯ ಉಘೇಉಘೇ, ಐರನ್ ಆನೆಗಳು, ನಿಗಿನಿಗಿಕೆಂಡ ಮುಂತಾದ ಕತೆಗಳಲ್ಲದೆ ಭಿನ್ನಮಾದರಿಯ ಕತೆಗಳೂ ಈ ಸಂಗ್ರಹದಲ್ಲಿವೆ.. ಸಂಕಲನದ ಅತ್ಯುತ್ತಮ ಕತೆಗಳಲ್ಲಿ ಆ ಸತ್ವವೇ ಮೈದುಂಬಿದೆ.
ಪ್ರಕಾಶ್ ಪುಟ್ಟಪ್ಪ ಕಥಾಸಂಕಲನ ‘ಗಾಂಧಿಜೋಡಿನ ಮಳಿಗೆ’ಗೆ ಡಾ. ಮಹೇಶ್ವರಿ ಯು. ಮುನ್ನುಡಿ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
