Advertisement

ಕೆಂಡಸಂಪಿಗೆ

ರಾಜಲಕ್ಷ್ಮಿ ಎನ್. ರಾವ್ ಬರೆದ ಕತೆ “ಆಗಸ್ಟ್ ಹದಿನೈದು”

ಎಲ್ಲಿಂದಲೋ ಸಿನೆಮಾ ಹಾಡು ಕೇಳಿ ಬಂತು. ಕಡೆಯ ಆಟ ಮುಗಿಯಿತೇನೋ ‘ತಾರಾ ಗಗನಮೇ…’ ತಲೆಯೆತ್ತಿ ನೋಡಿದ. ಆಕಾಶದಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ. ಲಕ್ಷೋಪಲಕ್ಷ ನಕ್ಷತ್ರಗಳು, ಬೊಂಬಾಯಿನಲ್ಲಿ ವಿದ್ಯುದ್ದೀಪಮಾಲೆಗಳ ನಡುವಿನಲ್ಲಿ ಇವುಗಳನ್ನು ಗಮನವಿಟ್ಟು ನೋಡಿರಲಿಲ್ಲ. ಇಲ್ಲಿ ನಿಸರ್ಗಕ್ಕೆ ಮಾನವನ ಸ್ಪರ್ಧೆಯಿಲ್ಲ. ಬೊಂಬಾಯಿನಲ್ಲಿ ವಿದ್ಯುದ್ದೀಪಗಳ ಗೊಂದಲಕ್ಕೆ ಸಿಕ್ಕಿ ಆಕಾಶ ಕೆಂಪಾಗಿತ್ತು.
ಹಿರಿಯ ಕತೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಬರೆದ ಸಮಗ್ರ ಕತೆಗಳನ್ನು ಚಂದನ್‌ ಗೌಡ “ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಈ ಸಂಕಲನದ “ಆಗಸ್ಟ್ ಹದಿನೈದು” ಕತೆ ನಿಮ್ಮ ಓದಿಗೆ

Read More

ಬಾವಿಯೊಳಗೆ `ಪುಣ್ಯಕೋಟಿ’: ನಟರಾಜ್‌ ಅರಳಸುರಳಿ ಕೃತಿಯ ಬರಹ

ತಂಡೋಪತಂಡವಾಗಿ ಜನ ನಮ್ಮ ಮನೆಕಡೆ ಬರುತ್ತಿರುವುದು ಕಾಣಿಸಿತು. ಹಲವಾರು ಬ್ಯಾಟರಿ ಬೆಳಕುಗಳೂ ಒಂದೆರಡು ಪೆಟ್ರೋಮ್ಯಾಕ್ಸ್‌ಗಳೂ ಆ ಗುಂಪಿನಲ್ಲಿದ್ದವು. ಎಲ್ಲರೂ ಮನೆಯಂಗಳಕ್ಕೆ ಬಂದವರೇ ನೇರವಾಗಿ ಬಾವಿಯಕಡೆ ನಡೆದರು. ನೋಡನೋಡುತ್ತಿದ್ದಂತೆ ಮೂರ್ನಾಲ್ಕು ಜನ ಬಾವಿ ಇಳಿದರು. ಕೆಲವರು ಮೇಲಿನಿಂದ ನೇಣು ಇಳಿಬಿಟ್ಟರು. ದನಗಳ ಹೊಟ್ಟೆ ಕೆಳಗೆ ನೇಣು ತೂರಿಸಿ ಬಾವಿಯ ಇನ್ನೊಂದು ಭಾಗದಲ್ಲಿದ್ದವರಿಗೆ ತಲುಪಿಸಿದರು. ನೋಡ ನೋಡುತ್ತಿದ್ದಂತೆಯೇ ಒಂದೊಂದೇ ದನಗಳನ್ನು ಬಾವಿಯಿಂದ ಮೇಲೆತ್ತಿದರು.
ನಟರಾಜ್‌ ಅರಳಸುರಳಿ ಬರೆದ ತಮ್ಮ ತಂದೆಯವರ ಕುರಿತ ಬರಹಗಳ ಸಂಕಲನ “ಆಕಾಶಬುಟ್ಟಿ” ಕೃತಿಯ ಒಂದು ಬರಹ ನಿಮ್ಮ ಓದಿಗೆ.

Read More

ಪ್ರವೀಣ್‌ ಕುಮಾರ್‌ ಜಿ. ಬರೆದ ಈ ಭಾನುವಾರದ ಕತೆ

ರಾಜಣ್ಣನ ಕೊನೆಯ ಮಾತುಗಳನ್ನು ಕೇಳಿಸಿಕೊಂಡು ಕವಿತಾಳ ಕಣ್ಣುಗಳು ಗಾಬರಿಯಲ್ಲಿ ಅಗಲವಾದವಾ? ಅವನಿಗದು ಗೊತ್ತಾಗಲಿಲ್ಲವಾದರೂ ಉಸಿರು ಎಳೆಯುತ್ತಿದ್ದ ಕವಿತಾ “ನೀನಾದ್ಮ್ಯಾಲೆ ನನ್ನ ಯಾರೂ ಮುಟ್ಟಿಲ್ಲ.” ಎಂದು ಗೊಗ್ಗರು ದನಿಯಲ್ಲಿ ಹೇಳಿದ ಮಾತಿಗೆ ಬೇಕಾದ ಉಸಿರು ಪೂರ್ತಿ ಗಂಟಲಿನಿಂದಲೇ ಹೊರಗೆ ಹೋಗುತ್ತಿತ್ತು. “ನೀನಾದ್ಮ್ಯಾಲೆ ನನ್ನ…” ಎಂಬ ಶಬ್ದವೊಂದೇ ಅವನಿಗೆ ಅರ್ಧಂಬರ್ಧ ಕೇಳಿಸಿದ್ದು, ಅದೂ ಬರೀ ಗೊರಗೊರ. ಅವಳನ್ನೇ ದಿಟ್ಟಿಸುತ್ತಿದ್ದ ರಾಜಣ್ಣ ಕೆಲವೇ ಕ್ಷಣಗಳಲ್ಲಿ ಅವಳ ಉಸಿರು ನಿಂತಿದ್ದನ್ನು ಗೊತ್ತುಮಾಡಿಕೊಂಡು ತನ್ನ ಕುತ್ತಿಗೆಗೂ ಚಾಕು ಹಾಕಿಕೊಂಡ.
ಪ್ರವೀಣ್‌ ಕುಮಾರ್‌ ಜಿ. ಕಥಾ ಸಂಕಲನ “ಬಯಲು” ಕೃತಿಯ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಮುಕ್ತ ಹಾಜರಿ: ಮುಕುಂದ ಜೋಷಿ: ಜಯಂತ ಕಾಯ್ಕಿಣಿ ಕೃತಿಯ ಬರಹ

ಅವರ ಆ ಪುಸ್ತಕಕ್ಕೆ ಅವರ ಹಕ್ಕೊತ್ತಾಯದ ಮೇಲೆ ನಾನು ಬ್ಲರ್ಬ್ ಬರೆದಿದ್ದೆ. ಈ ಬಗ್ಗೆ ನಮ್ಮ ನಡುವೆ ಒಂದು ಜೋಕ್ ಇತ್ತು. ಏನೆಂದರೆ ಆ ಪುಸ್ತಕ ಮುದ್ರಣ ಶುರುವಾಗುವ ಹಂತದಲ್ಲಿದೆ ಎಂದು ತಿಳಿದು ಅಜಿತ್ ಪಂಜಾಬ್‌ನಲ್ಲಿ ಸೇರಿ ನಾವು ಬೀರೋಚಿತವಾಗಿ ಸಿಲೆಬ್ರೇಟ್ ಮಾಡುವಾಗ, ಅವರು ಚೂರು ತೊದಲುತ್ತ, “ಈ ಪುಸ್ತಕ ಯಾವಾಗರೆ ಬರ್ಲಿ, ಅದಕ್ಕೆ ಬಲ್ಬ್ ಮಾತ್ರ ನೀವೇ ಬರೀಬೇಕ್ರಿ’’ – ಎಂದರು. ಅಂದಿನಿಂದ ಬ್ಲರ್ಬ್ ಪದಕ್ಕೆ ಪರ್ಯಾಯವೆಂಬಂತೆ ನಾವು ಬಲ್ಬ್ ಎಂದೇ ಬಳಸುತ್ತಿದ್ದೆವು. ಎಷ್ಟು ಕ್ಯಾಂಡಲಿಂದು ಇತ್ಯಾದಿ ವಿವರಗಳೊಂದಿಗೆ. ಯಾವುದಾದರೂ ಹೊಸ ಪುಸ್ತಕದ ಹಿನ್ನುಡಿಯಲ್ಲಿ ಹುರುಳಿಲ್ಲದಿದ್ದರೆ, ‘‘ಝೀರೋ ಕ್ಯಾಂಡಲ್ ಬಲ್ಬ್ರೀ” ಅಂತಿದ್ರು.
ಜಯಂತ ಕಾಯ್ಕಿಣಿ ಕೃತಿ “ತಾರಿ ದಂಡೆ”ಯ ಮತ್ತೊಂದು ಬರಹ ನಿಮ್ಮ ಓದಿಗೆ

Read More

‘ಮಾವಿನ ತುಮಕಿʼ: ಮಾಮಾ ಶಾಂತಾ: ಜಯಂತ ಕಾಯ್ಕಿಣಿ ಕೃತಿಯ ಬರಹ

ಯಾವುದೇ ಬಸ್ಸು ಹಿಡಿಯಲು ಸರಿಯಾದ ಸಮಯಕ್ಕೆ ಅಥವಾ ಚೂರು ಮುಂಚಿತವಾಗಿ ಆಕೆ ಹೋಗಿದ್ದೇ ಇಲ್ಲ. ಬಸ್ಸು ಹೊರಡುವ ಟೈಮಿಗೆ ಆಕೆ ಮಹಾರಾಣಿಯಂತೆ ನಿಧಾನಕ್ಕೆ ಮನೆಯಿಂದ ಹೊರಡುತ್ತಿದ್ದಳು. ಮತ್ತು ಮನೆಯಲ್ಲಿದ್ದ ನನ್ನನ್ನೋ ರಾಜೇಂದ್ರನನ್ನೋ ರಮಾನಂದನನ್ನೋ “ಹೋಗು ಬಸ್ ನಿಲ್ಲಿಸು” ಎಂದು ಬಸ್ ಸ್ಟ್ಯಾಂಡಿಗೆ ಅಟ್ಟುತ್ತಿದ್ದಳು. ನಾವ್ಯಾರೂ ಇರದಿದ್ದರೆ ಹಾದಿಯಲ್ಲಿ ಸಿಗುವ ಯಾವುದಾದರೂ ಸೈಕಲ್ ಸವಾರರನ್ನು ಓಡಿಸುತ್ತಿದ್ದಳು. ಸಣ್ಣ ಊರಿನ ಬಸ್‌ಸ್ಟ್ಯಾಂಡ್ ಕಂಟ್ರೋಲರ್ ಎಲ್ಲರಿಗೂ ಪರಿಚಿತರಾಗಿದ್ದರಿಂದ ಒಮ್ಮೊಮ್ಮೆ ನಿಲ್ಲಿಸುತ್ತಿದ್ದರು. ಕೆಲವೊಮ್ಮೆ ಬಸ್ಸು ಹೋಗಿಬಿಟ್ಟಿರುತ್ತಿದ್ದವು. ಆಗ ಎಲ್ಲರೂ ಬೈಸಿಕೊಳ್ಳುತ್ತಿದ್ದೆವು.
ಜಯಂತ ಕಾಯ್ಕಿಣಿ ಕೃತಿ “ತಾರಿ ದಂಡೆ”ಯ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ