Advertisement

ಕೆಂಡಸಂಪಿಗೆ

ರಾಜಲಕ್ಷ್ಮಿ ಎನ್. ರಾವ್ ಬರೆದ ಕತೆ “ಸ್ವಾತಂತ್ರ್ಯ ದಿನ”

ಮತ್ತೆ ದೃಷ್ಟಿ ಜನರಿಂದ ದೂರ ಹೋಯಿತು. ಇಬ್ಬನಿಯ ಅವಕುಂಠನವನ್ನು ಕಳೆದುಕೊಂಡು ಹೂಗಳು ಮುಗ್ಧತೆಯನ್ನು ಕಳೆದುಕೊಂಡು ಕಠಿಣರಾದ ನಿರಸನಿಗಳಂತೆ ರಾವು ಬಡಿಯುವ ಬಣ್ಣಗಳನ್ನು ತೋರುತ್ತಿದ್ದವು. ಬಾವುಟ ಬಿಸಿಲಿನ ತೀಕ್ಷ್ಣತೆಗೆ ಸೋತು ಮಲಗಿತ್ತು. ಆಕಾಶದ ಒಂದು ಭಾಗದಲ್ಲಿ ಬೂದು ಬಣ್ಣದ ಮೋಡಗಳು ಇಕ್ಕಟ್ಟಾಗಿ ಮಲಗಿದ್ದವು. ಸ್ಲಮ್ ಪ್ರದೇಶ, ಇಂದೊಂದೇ ದಿನ ಆಕಾಶದಲ್ಲಿ ಈ ಮೋಡಗಳಿಗೆ ಜಾಗ, ಮತ್ತೆ ನಾಳಿನಿಂದ ಆಕಾಶದ ತುಂಬ ಕಾರ್ಖಾನೆ ಹೊಗೆಯ ಮೋಡಗಳು, ನಾಳಿನಿಂದ ಆಕಾಶ ತಿಪ್ಪೆ…
ಹಿರಿಯ ಕತೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಬರೆದ ಸಮಗ್ರ ಕತೆಗಳನ್ನು ಚಂದನ್‌ ಗೌಡ “ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದು, ಈ ಸಂಕಲನದ “ಸ್ವಾತಂತ್ರ್ಯ ದಿನ” ಕತೆ ನಿಮ್ಮ ಓದಿಗೆ

Read More

“ಮಿಥ್ಯಸುಖ”: ಕಾವ್ಯಾ ಕಡಮೆ ಹೊಸ ಕಾದಂಬರಿಯ ಆಯ್ದ ಭಾಗ

ಖಾಲಿ ಡಬರಿಯಲ್ಲಿ ಕಲ್ಲು ಗಲಗಲಿಸಿದಂತೆ ವಟವಟ ಎನ್ನುವ, ಹೊಕ್ಕಿದ ಕೋಣೆಯಲ್ಲೆಲ್ಲ ಹೀರೋ ಆಗುವ ಶತಪ್ರಯತ್ನ ನಡೆಸುತ್ತಲೇ ಒದ್ದಾಡುವ ಗಂಡಸರಿಂದ ನಾನು ಎಂದಿಗೂ ದೂರವೇ ಸರಿದಿದ್ದೇನೆ. ನಿಮಗೆ ನನ್ನ ಮೇಲೆ ಪ್ರಭಾವ ಬೀರುವುದಿದೆಯೇ? ಹಾಗಿದ್ದರೆ ದಯವಿಟ್ಟು ಮಾತು ನಿಲ್ಲಿಸಿ. ಪ್ರಪಂಚದಲ್ಲಿ ಹೇಳಲೇ ಬೇಕಿರೋದನ್ನೆಲ್ಲ ಶಬ್ದಗಳಿಲ್ಲದೇ ಸಂವಹಿಸಬಹುದು ಎಂಬುದನ್ನು ಮನಸಾ ಪಾಲಿಸಿದ್ದೇನೆ. ಸುಹಾಸನ ಬಳಿ ಮೊದಲ ಸಲ ಫೋನಿನಲ್ಲಿ ಮಾತನಾಡಿದಾಗ ಅವನು ಇಂಟರ್‌ವ್ಯೂಗೆ ತಯಾರಿ ಮಾಡಿಕೊಂಡು ಬಂದವನ ಹಾಗೆ ಒಂದು ಕ್ಷಣವನ್ನೂ ಬಿಡದೇ ತನ್ನ ಬದುಕಿನ ಎಲ್ಲ ಮೈಲುಗಲ್ಲುಗಳ ಪ್ರವರ ಒಪ್ಪಿಸಿದ್ದ.
ಕಾವ್ಯಾ ಕಡಮೆ ಹೊಸ ಕಾದಂಬರಿ “ಮಿಥ್ಯಸುಖ” ಇದೇ ಶನಿವಾರ ಬಿಡುಗಡೆಯಾಗಲಿದ್ದು, ಈ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

Read More

ಸೌಮ್ಯಶ್ರೀ ಎ.ಎಸ್. ಬರೆದ ಈ ದಿನದ ಕವಿತೆ

“ಕತ್ತರಿಸಿ ಹೋದ ಕರುಳಬಳ್ಳಿ
ಅದ್ಯಾರದೋ ತಾಯಿಯ ರಕ್ತ ಕುಡಿದ
ಇಳೆಯು ರುಚಿಯೇರಿ ಮತ್ತದೇ ಬಳ್ಳಿಗಾಗಿ
ಕಾಯ್ದು ಕುಳಿತಂತಿದೆ!
ಒಂದು ಎರಡು ಹೀಗೆ ಅಗಣಿತ
ಆಗಷ್ಟೇ ಚಿಗುರಿದ ನಳನಳಿಸುವ ಚಿಗುರನ್ನು ಚಿವುಟಿ
ಮರದ ಬುಡವೇ ಬಾಡಿ ನೆಲವನ್ನಪ್ಪಿದೆ”-ಸೌಮ್ಯಶ್ರೀ ಎ.ಎಸ್. ಬರೆದ ಈ ದಿನದ ಕವಿತೆ

Read More

“ಗೇದುಣ್ಣುವವರೇ ಬದುಕದ ಕಾಲದಲ್ಲಿ ಹುಟ್ಟುವ ಕತೆಗಳಾದರೂ ಉಳಿಯುತ್ತವೆ”: ಹೃದಯ ಶಿವ ಕಥಾಸಂಕಲನಕ್ಕೆ ಸ್ವಾಮಿ ಪೊನ್ನಾಚಿ ಬರಹ

ಹೃದಯಶಿವ ಅವರ ಕಥೆಗಳನ್ನು ಓದುವ ಕುತೂಹಲದ ಮಜವೇ ಬೇರೆ. ಕನಕಪುರದ ಕೆಬ್ಬರೆ ಗ್ರಾಮದಲ್ಲಿ ಶುರುವಾದ ಕಥೆ ಬೆಂಗಳೂರಿನ ಸಿನಿಮಾರಂಗದಲ್ಲಿ ಬಂದು ನಿಲ್ಲುತ್ತದೆ. ವೈಯಕ್ತಿಕ ದನಿಯ ಆಚೆಗೆ ಕತೆಗಳು ವಿಸ್ತಾರಗೊಳ್ಳುತ್ತಾ ಸಮಷ್ಟಿಯೆಡೆಗೆ ಹೋಗುತ್ತವೆ. ಬದುಕಿನ ಪರಸ್ಪರ ವೈರುಧ್ಯಗಳೇ ಹೆಚ್ಚು ಕಥೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕಥೆ ಓದುವಾಗ ಶುರುವಾಗುವ ನೆಗೆಟಿವ್ ಕಾಂಪ್ಲೆಕ್ಸ್ ಕೊನೆಯಲ್ಲಿ ಪಾಸಿಟಿವ್ ಆಗಿರುತ್ತದೆ. ಭರವಸೆ, ಆಶಾಭಾವ ಕಥೆಗಳಲ್ಲಿ ವ್ಯಕ್ತವಾಗುತ್ತವೆ.
ಹೃದಯ ಶಿವ ಹೊಸ ಕಥಾಸಂಕಲನ “ಸೂಪರ್ ಗಾಡ್ ಸಣ್ಣಯ್ಯ” ಕೃತಿಗೆ ಸ್ವಾಮಿ ಪೊನ್ನಾಚಿ ಮುನ್ನುಡಿ

Read More

ಅಂತ್ಯವಿಲ್ಲದೊಂದು ಕತೆ: ನಿ”ಶಾಂತ” ಬರಹ

ಆಮೇಲೆ ಬರುಬರುತ್ತಾ ನಮ್ಮ ಭೇಟಿಯ ದಿನಗಳು ಕ್ಷೀಣಿಸಿದವು. ಆದರೂ ಯಾಕೋ ಆ ಕಾರಣಕ್ಕೆ ಇಬ್ಬರೂ ಜಗಳ ತೆಗೆಯುವುದನ್ನು ನಿಲ್ಲಿಸಿದ್ದೆವು. ಒಬ್ಬರು ಸಿಗ್ತಿಯಾ ಅಂದಾಗ, ಬೆಂಗಳೂರಿನ ಆ ತುದಿಯಲ್ಲಿದ್ದರೂ ಬಂದು ಭೇಟಿ ಮಾಡಿಹೋಗುತ್ತಿದ್ದೆವು. ಮತ್ತೆ ಮುಂದಿನ ಭೇಟಿ ಬಗ್ಗೆ ಮಾತೇ ಇಲ್ಲ… ಸುಮ್ಮನೇ ನಮ್‌ನಮ್ಮ ಕೆಲಸಗಳ ಕುರಿತು, ಮನೆಯ ಪರಿಸ್ಥಿತಿಗಳ ಕುರಿತ ಮಾತಷ್ಟೇ. ಅಲ್ಲಿ ಯಾವುದೇ ಕವಿತೆಗೂ, ಗಜಲ್‌ಗೂ ಅವಕಾಶವಿರುತ್ತಿರಲಿಲ್ಲ. ಅದು ಇಬ್ಬರಿಗೂ ಬೇಕಾಗೂ ಇರಲಿಲ್ಲವೆನ್ನಿಸುತ್ತೆ. ಹಾಗಾಗಿ ಮೂರು ವರ್ಷಗಳ ಒಡನಾಟದ ಸಲುವಾಗಿಯಾದರೂ ಒಂದು ಗುಡ್‌ಬೈ ಸಹ ಹೇಳದೇ ನಮ್ಮ ನಮ್ಮ ಬದುಕಿನ ಹಾದಿಯಲ್ಲಿ ಸಿಕ್ಕ ತಿರುವುಗಳಲ್ಲಿ ನಡೆದುಹೋಗಿಬಿಟ್ಟಿದ್ದೆವು.
 “ದಡ ಸೇರದ ದೋಣಿ” ಹೊಸ ಸರಣಿಯಲ್ಲಿ ಅಂತ್ಯ ಸಿಕ್ಕದ ಪ್ರೇಮವೊಂದರ ಕುರಿತು ನಿ”ಶಾಂತ” ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ