Advertisement

ಕೀರ್ತಿ ಬೈಂದೂರ್

ಸಹಜತೆಯ ಚೆಲುವಿನ ಕಥೆಗಳು: ಅನುಪಮಾ ಪ್ರಸಾದ್‌ ಕೃತಿಗೆ ಕೇಶವ ಮಳಗಿ ಮಾತುಗಳು

ಸಂಕಲನದ ಕಥೆಗಳು ವಿಷಯ, ವ್ಯಾಪ್ತಿ ಹಾಗೂ ಹರಹುಗಳ ದೃಷ್ಟಿಯಿಂದಲೂ ಗಮನಾರ್ಹ. ಅನುಭವದಿಂದ ಮಾಗಿದ ಕಥೆಗಾರ್ತಿಯ ಈ ಬಗೆಯ ಸೂಕ್ಷ್ಮ ಆಯ್ಕೆಯಿಂದಾಗಿ ಸಂಕಲನಕ್ಕೊಂದು ಸಹಜ ವೈವಿಧ್ಯತೆ ದೊರಕಿ ಓದುಗರು ಪ್ರತಿ ಕಥೆಯ ವಾಚನದಲ್ಲಿಯೂ ಹೊಸ ಅನುಭವವನ್ನು ಪಡೆಯಬಲ್ಲರು. ಯಾವುದೇ ಸಂವೇದನಾಶೀಲ ಲೇಖಕ ಇಂಥದ್ದನ್ನು ಸಾಧಿಸುವುದು ಗರಿಮೆಯ ಸಂಗತಿಯೇ. ಇಲ್ಲಿನ ಹದಿಮೂರು ಕಥೆಗಳು ಓದುಗರಿಗೆ ನೀಡುವ ಅನುಭವ, ಲೋಕದೃಷ್ಟಿ, ಆರ್ದ್ರತೆಯ ಸ್ಪರ್ಶದಿಂದಾಗಿ ಅವರು ನಮ್ಯವಾಗಬಲ್ಲರು. ಅರೆಚಣ ಚಿಂತಿತರಾಗಬಲ್ಲರು.
ಅನುಪಮಾ ಪ್ರಸಾದ್‌ ಕಥಾ ಸಂಕಲನ “ಚೋದ್ಯ”ಕ್ಕೆ ಕೇಶವ ಮಳಗಿ ಬರೆದ ಮಾತುಗಳು

Read More

ಎಚ್ ವಿ ಶ್ರೀನಿಧಿ ಬರೆದ ಈ ದಿನದ ಕವಿತೆ

“ಪೇಟೆಯ ಧಾರಣೆ ದುರಾಸೆಗೆ
ಬಟವಾಡೆ ಆಗದೆ ಬೀದಿಪಾಲಾದ
ಹೂವುಗಳೆ, ಕೊಂಡು ತಂದು
ವಾರಕ್ಕೆ ಬೋರಾದ ವಸ್ತುಗಳೆ
ಹಣದ ಅರ್ಥವೇನು

ಷೇರುಪೇಟೆಯ ಗುಡ್ಡಗೆರೆಗಳೆ
ಹಾಳುಕೋಟೆಯ ಟಂಕಸಾಲೆಗಳೆ
ಯಾರು ಮುಟ್ಟದ ಹರಿದ ನೋಟುಗಳೆ
ಹಣದ ಅರ್ಥವೇನು”- ಎಚ್ ವಿ ಶ್ರೀನಿಧಿ ಬರೆದ ಈ ದಿನದ ಕವಿತೆ

Read More

‘ದಾರಿ ತಪ್ಪಿಸುವ ಗಿಡʼಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಮುನ್ನುಡಿ

ಆಚಾರ ಕೆಟ್ಟರೂ ಆಕಾರ ಕೆಡಬಾರದು ಅನ್ನುವ ಗಾದೆಯನ್ನು ನಾನು ಚಿಕ್ಕಂದಿನಲ್ಲಿ ಕೇಳುತ್ತಿದ್ದೆ. ಸಂಸ್ಕೃತಿ ಅನ್ನುತ್ತೇವಲ್ಲ ಅದರ ಆಕಾರ, ವ್ಯವಸ್ಥೆಗೆ ಇರುವ ಆಕಾರ ಇವು ಕೆಡದೆ ಮುಂದುವರೆಯಬೇಕು, ವರ್ತನೆ ಕೆಟ್ಟರೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಬೇಕು ಅನ್ನುವ ಮನೋಧರ್ಮವೇ ನಮ್ಮನ್ನು ‘ದಾರಿ ತಪ್ಪಿಸುವ ಗಿಡʼ ಆಗಿರಬಹುದು. ಈ ಆಕಾರವನ್ನು ಕಾಪಾಡಿಕೊಳ್ಳುವ ಒತ್ತಡವೇ ವ್ಯಕ್ತಿಗಳನ್ನು ದುರ್ಬಲರನ್ನಾಗಿಸಿ ರಾಜಿಗೆ ಒಲಿಯುವಂತೆ ಮಾಡುತ್ತದೆ ಅನಿಸುತ್ತದೆ. ಹಾಗೆ ನೋಡಿದರೆ ಆಳು ಕೂಗಿನ ಹಕ್ಕಿಗಿಂತ ದಾರಿ ತಪ್ಪಿಸುವ ಗಿಡ ಹೆಚ್ಚು ಅರ್ಥವ್ಯಾಪ್ತಿ ಇರುವ ರೂಪಕ.
ಕತೆಗಾರ ಸ್ವಾಮಿ ಪೊನ್ನಾಚಿ ಹೊಸ ಕಥಾ ಸಂಕಲನ “ದಾರಿ ತಪ್ಪಿಸುವ ಗಿಡ”ಕ್ಕೆ ಓ ಎಲ್‌ ನಾಗಭೂಷಣ ಸ್ವಾಮಿ ಬರೆದ ಮುನ್ನುಡಿ

Read More

ಹೆಗ್ಗೋಡಿನ ಪ್ರಾಣೇಶಾಚಾರ್ಯ, ನಾರಣಪ್ಪ: ಟಿ.ಎನ್.‌ ಸೀತಾರಾಮ್‌ ಬದುಕಿನ ಪುಟಗಳು

ಆಗ ಎನ್‌ಎಸ್‌ಡಿಯಲ್ಲಿ ಅಲ್ಕಾಜೀ ಎನ್ನುವವರು ಮುಖ್ಯಸ್ಥರಾಗದ್ದಿರು. ಶ್ರೀರಂಗರ ಕಾಗದದಿಂದಾಗಿ ಪ್ರಸನ್ನನಿಗೆ ಎನ್‌ಎಸ್‌ಡಿಯಲ್ಲಿ ಪ್ರವೇಶ ಸಿಕ್ಕಿತು. ಎನ್‌ಎಸ್‌ಡಿ ಎಂದರೆ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮ. ದೆಹಲಿಯಲ್ಲಿರುವ ಅತಿ ಪ್ರತಿಷ್ಠಿತ ನಾಟಕ ಕಲಿಸುವ ಶಾಲೆ. ಅದಕ್ಕೆ ಸೀಟುಗಳು ಬಹಳ ಕಡಿಮೆ ಇರುತ್ತದ್ದಿವು. ಇಡಿಯ ಭಾರತಕ್ಕೆ 8-10 ಸೀಟುಗಳು ಮಾತ್ರ ಇರುತ್ತದ್ದಿವು. ನಮ್ಮ ಈಗಿನ ಕಾಲದ ಅನೇಕ ಹೊಸ ಬಗೆಯ ಚಿತ್ರಗಳನ್ನು ಮಾಡುವ ನಿರ್ದೇಶಕರು ಮತ್ತು ನಟರು ಅಲ್ಲಿಂದಲೇ ಬಂದವರು. ಈಗ ಎನ್‌ಎಸ್‌ಡಿಯ ಬ್ರಾಂಚ್‌ಗಳು ದೇಶದ ನಾನಾ ಕಡೆ ಇವೆ. ಬೆಂಗಳೂರಿನಲ್ಲೂ ಒಂದಿದೆ.
ಟಿ.ಎನ್.‌ ಸೀತಾರಾಮ್‌ ಅವರ ಆತ್ಮಕಥನ “ಬದುಕಿನ ಪುಟಗಳು” ಕೃತಿಯ ಕೆಲವು ಪುಟಗಳು

Read More

ಜೀವಜಾಲದ ಪ್ರೋಗ್ರಾಮಿಂಗ್‌ನ ವಿಸ್ಮಯ: ಸತೀಶ್‌ ತಿಪಟೂರು ಬರಹ

ವ್ಯಕ್ತಿ ಪ್ರಕೃತಿಯು ತನ್ನ ಪರಿಸರದ ಪ್ರಭಾವದ ವಿರುದ್ಧ ಪ್ರತಿಭಟಿಸಿ, ಸೆಣೆಸಿ ತನ್ನದೇ ನಡೆಗಳ ದಾರಿಯಲ್ಲಿ ಚಲಿಸಲು ಯಾವುದೋ ಒಂದು ಆಂತರಿಕ ಸೆಳೆತವಿರಬೇಕು. ಈ ಸೆಳೆತ ಇಂದು ನೆನ್ನೆಯದಲ್ಲ; ಇನ್ನೂ ಹಿಂದಿನದು, ಬಹುದೂರ ಕಾಲ ಹಿಂದಿನದು. ಎಂದೋ ಯಾವ ಕಾಲದಲ್ಲೋ ಯರ‍್ಯಾರ ಕಾಲ-ದೇಶ-ಪ್ರಭಾವ-ಪ್ರವಾಹಗಳ ಹರಿವಿನಲ್ಲೋ ಮೊಳೆತಿದ್ದಿರಬೇಕು. ಹೀಗೆ ಕಾಲಾಂತರ ಕಾದು ಕಾದು ತನ್ನನ್ನು ತಾನು ಅರಿವಿನಲ್ಲಿ ಕಂಡುಕೊಂಡುದುದು. ಇದು ಮೊಳೆತು ಬೆಳೆದು ವಿಕಾಸವಾಗಬಹುದಾದ ಬೀಜರೂಪ ಮಾತ್ರ. ಇದು ಬೆಳೆದು ಬೃಹತ್ ವೃಕ್ಷವಾಗಲು ಏನೆಲ್ಲಾ ಒದಗಿ ಬರಬೇಕೋ?
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿ ಸರಣಿಯ ಕೊನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ