ಶಾಂತಾ ಜಯಾನಂದ ಬರೆದ ಈ ದಿನದ ಕವಿತೆ
“ಬಿಡಿಸಿ ನೆನಸಿ,
ಬೀಜವಾಗಿಸಿ,
ಒಣಗಿಸಿ ಹುರಿದು,
ಲಿಂಗ ತತ್ವದಲ್ಲಿ ಮುಳುಗಿ
ಶರಣನಾದಂತೆ,
ಕಪ್ಪಾಗಿ ಕಡೆಗೆ
ಪುಡಿಯಾದ,
ಕಾಫಿಯ ತತ್ವ, ಅದೂ,
ಇದೂ, ಅನುಭೂತಿ,” -ಶಾಂತಾ ಜಯಾನಂದ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 6, 2023 | ದಿನದ ಕವಿತೆ |
“ಬಿಡಿಸಿ ನೆನಸಿ,
ಬೀಜವಾಗಿಸಿ,
ಒಣಗಿಸಿ ಹುರಿದು,
ಲಿಂಗ ತತ್ವದಲ್ಲಿ ಮುಳುಗಿ
ಶರಣನಾದಂತೆ,
ಕಪ್ಪಾಗಿ ಕಡೆಗೆ
ಪುಡಿಯಾದ,
ಕಾಫಿಯ ತತ್ವ, ಅದೂ,
ಇದೂ, ಅನುಭೂತಿ,” -ಶಾಂತಾ ಜಯಾನಂದ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 4, 2023 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ನನ್ನ ಅಮ್ಮನ ಪ್ರಾಯದ ಊರಿನ ಹುಡುಗಿಯರಿಗಿಂತ ಹೆಚ್ಚು ಚಟುವಟಿಕೆ, ಸೂಕ್ಷ್ಮಬುದ್ಧಿ, ಇನ್ನೊಬ್ಬರ ಜತೆ ನಡೆದುಕೊಳ್ಳುವ ರೀತಿ ಅನೇಕರಿಗೆ ವಿಸ್ಮಯವನ್ನು ಉಂಟುಮಾಡುತ್ತಿತ್ತು. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಅಮ್ಮನನ್ನು ನನ್ನ ಅಪ್ಪ ಕೂಡಿಕೆ ಮಾಡಿಕೊಂಡಾಗ ಮೂವತ್ತು ವರ್ಷಗಳ ಅಂತರವಿತ್ತು. ನನ್ನ ಅಪ್ಪ ಆರಡಿ ಎತ್ತರದ ಬೃಹದ್ದೇಹಿ! ಆದರೆ, ಅಮ್ಮ ಐದಡಿ ಎತ್ತರದ ಪೀಚಲು ಹೆಂಗಸು! ದೈಹಿಕವಾಗಿ ಇಬ್ಬರದೂ ಅಜ-ಗಜಾಂತರ. ಆದರೆ, ಆ ಕಾಲಕ್ಕೆ ಈ ಬಗೆಯ ಕೂಡಿಕೆಯೊ ವಿವಾಹವೊ ನಡೆಯುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು!
ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಆತ್ಮಕಥನ “ದಿಟದ ದೀವಿಗೆ”ಯ ಕೆಲವು ಪುಟಗಳು ನಿಮ್ಮ ಓದಿಗೆ
Posted by ಕೆಂಡಸಂಪಿಗೆ | Dec 2, 2023 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ನಮ್ಮ ಅಜ್ಜಿಯರಿಂದ ಬಳುವಳಿಯಾಗಿ ಬಂದ ನಿವೇಶನದಲ್ಲಿ ಅರವತ್ತು ವರ್ಷಗಳ ಹಿಂದೆ ನಮ್ಮ ತಂದೆಯವರು ಕಟ್ಟಿದ್ದ ಈ ಮನೆಯಲ್ಲಿ ಇವರೆಲ್ಲರ ವೈವಿಧ್ಯಮಯ ಸ್ಮೃತಿ ಕಥನಗಳು ನೆಲೆಗೊಂಡಿವೆ. ಇಷ್ಟಲ್ಲದೇ ಈ ಮನೆಯೇ ಕೇಂದ್ರವಾಗಿ ಇಷ್ಟು ವರ್ಷಗಳಲ್ಲಿ ನಡೆಯುತ್ತಿರುವ ನೃತ್ಯಶಾಲೆ, ಸಂಗೀತ ಶಾಲೆ, ನಾಟಕ ಶಾಲೆಯ ನೂರಾರು ಹುಡುಗ ಹುಡುಗಿಯರು ಈ ಮನೆಯ ಒಡನಾಟದಲ್ಲಿ ಬೆಳೆದಿದ್ದಾರೆ. ಮತ್ತು ಹೋರಾಟ, ಚಳುವಳಿ, ಕ್ರಾಂತಿ ಎನ್ನುವ ಕಾಮ್ರೇಡ್ಗಳು, ಕವಿಗಳೂ, ಲೇಖಕರು, ಪತ್ರಕರ್ತರು, ಪ್ರಗತಿಪರ ರಾಜಕೀಯ ನೇತಾರರೂ ಅಟ್ಟದ ಮೇಲಿನ ಸಭೆಗಳಿಂದಾಗಿ ಈ ಮನೆಯ ಭಾಗವಾಗಿದ್ದಾರೆ. ಅಂದಿನ ದಿನಗಳ ಈ ಮನೆಯನ್ನು ಕೆಲವು ಸ್ನೇಹಿತರು ಜಾತ್ಯಾತೀತ ಮಠವೆಂದೂ; ಅಲ್ಲಿ ನಿತ್ಯ ದಾಸೋಹವೆಂದು ನೆನಪಿಸಿಕೊಂಡು ಮಾತನಾಡುತ್ತಿದ್ದುದುಂಟು.
ಸತೀಶ್ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಅಧ್ಯಾಯ ನಿಮ್ಮ ಓದಿಗೆ
Posted by ಕೆಂಡಸಂಪಿಗೆ | Dec 1, 2023 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ವೀರೇಂದ್ರ ವರ್ತಮಾನಕ್ಕೆ ಬೆನ್ನುಹಾಕುವ ಕಥೆಗಾರರಲ್ಲ; ಹಾಗೆಯೇ ಭೂತದ ವೈಭವದಲ್ಲಿ ಮೈಮರೆಯುವವರೂ ಅಲ್ಲ. ಭವಿಷ್ಯದ ಕನಸುಗಳಲ್ಲಿ, ಕಲ್ಪನೆಗಳಲ್ಲಿ ತೇಲುವ ಭಾವಜೀವಿಯೂ ಅಲ್ಲ. ಸುಡು ಸುಡು ವರ್ತಮಾನವೇ ಅವರ ಪ್ರಧಾನ ಅಖಾಡ. ಭೂತ-ಭವಿಷ್ಯತ್ತುಗಳಿಗೆ ಹೋಗಿ ಬಂದರೂ, ಅವರು ಸೆಣಸುವುದು, ಪಟ್ಟಿಗೆ ಪಟ್ಟು ಹಾಕುವುದು ಈ ಡಂಕಲ್ಪೇಟೆಯಲ್ಲಿಯೇ. ಕುಂವೀ ಅವರಂಥ ಸೃಜನಶೀಲರಲ್ಲಿ ಬಳ್ಳಾರಿ ಉಸಿರಾಡುವುದು ಒಂದು ಚೆಲುವಾದರೆ, ಇಲ್ಲಿ ಬಳ್ಳಾರಿ ಕೊಸರಾಡುವುದು ಇನ್ನೊಂದು ಸೊಗಸು. ನೆಲದಲ್ಲಿ ಬೇರಿಳಿಸಿದ ಮರವೇ ಆಕಾಶಕ್ಕೆ ರೆಂಬೆಕೊಂಬೆ ಚಾಚುವುದು ಸಾಧ್ಯ. ವೀರೇಂದ್ರರ ಕತೆಗಳಲ್ಲಿ ಈ ಸತ್ಯ ಗೋಚರವಾಗುತ್ತದೆ.
ವೀರೇಂದ್ರ ರಾವಿಹಾಳ್ ಕಥಾ ಸಂಕಲನ “ಡಂಕಲ್ಪೇಟೆ”ಗೆ ಜಿ.ಪಿ. ಬಸವರಾಜು ಬರೆದ ಮುನ್ನುಡಿ
Posted by ಕೆಂಡಸಂಪಿಗೆ | Nov 27, 2023 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಅವತ್ತು ಎಗ್ಸಿಬಿಶನ್ ಇತ್ತು. ನಾವೆಲ್ಲ ಕ್ಲಾಸ್ ರೂಮಲ್ಲಿ ಮಾಡೆಲ್ ಜೋಡಿಸ್ಕೊಂಡು ನಿಂತಿದ್ವಿ. ನನ್ ಪಕ್ಕ ಹಾಸನದೋನು ಇದ್ದ. ಯೂಕಲಿಪ್ಟಸ್ ಆಯಿಲ್ನಿಂದ ಸೊಳ್ಳೆ ಓಡಿಸ್ತೀನಿ ಅನ್ನೊ ಪ್ರಾಜೆಕ್ಟ್ ಮಾಡ್ಕಂಡ್ ಬಂದಿದ್ದ. ಹೆದರಬೇಡಿ ಅಂಗಂದ್ರೆ ನೀಲಗಿರಿ ಎಣ್ಣೆ ಆಟೆಯಾ. ನಾನು ಇಂಗ್ಲೀಷಲ್ಲಿ ಏನೇನು ಒದರಬೇಕು ಅಂತ ಮನ್ಸಲ್ಲೆ ಮಗ್ ಹೊಡಿತಿದ್ದೆ. ಬರಂಗಿಲ್ವಲ್ಲ. ಆ ಕ್ಷಣಕ್ಕೆ ಒಳ್ಳೆ ಸಿನಿಮಾ ಸೀನ್ ತರಹ ಈ ಹುಡುಗಿ ಬಂದ್ ಬಿಡ್ತು. ಎಗ್ಸಿಬಿಶನ್ ಇದ್ದಾಗ ಸ್ಪೋರ್ಟ್ಸ್ ಇರಲ್ಲ. ಹಂಗಾಗಿ ನಾನು ಯುನಿಫಾರ್ಮಲ್ಲಿದ್ರೆ ಅದು ಟ್ರ್ಯಾಕ್ ಸೂಟಲ್ಲಿ ಮಿಂಚ್ತಾ ಇತ್ತು.
ಮಧು ವೈ.ಎನ್. ಬರೆದ ಹೊಸ ಕಾದಂಬರಿ “ಕನಸೇ ಕಾಡುಮಲ್ಲಿಗೆ”ಯ ಕೆಲವು ಪುಟಗಳು ನಿಮ್ಮ ಓದಿಗೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
