Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

‘ತವರಿಗೂ ಒಂದು ತವರು ಹಿಂಬಾಗಿಲು’

ಆಧುನಿಕ ಮನೆಗಳಲ್ಲಿ ಹಿಂಬಾಗಿಲಿಗೆ ಜಾಗವೇ ಇರುವುದಿಲ್ಲ. ಒಂದುವೇಳೆ ಹಿಂಬಾಗಿಲು ಇದ್ದರೂ, ಅದರ ವಿನ್ಯಾಸದಲ್ಲಿ ಎಷ್ಟೊಂದು ಒಪ್ಪ ಓರಣ ಇರುತ್ತದೆ. ಕಾಲ ಬದಲಾದಂತೆ ಹಿಂಬಾಗಿಲ ಅವಶ್ಯಕತೆಯೂ ಇಲ್ಲವಾಗಿದೆ. ಆದರೆ ಹಿಂದಿನ ಕಾಲದ ಮನೆಗಳಲ್ಲಿ ಒಪ್ಪ ಓರಣಕ್ಕೆ ಆದ್ಯತೆಯಿಲ್ಲದ ಹಿಂಬಾಗಿಲುಗಳ ಬಳಿಯೇ ಹೃದಯ ಬಿಚ್ಚಿ ಮಾತನಾಡುವ ‘ತಾವು’ ಇರುತ್ತಿತ್ತು. ಹಿಂಬಾಗಿಲುಗಳ ಈ ಲೋಕವು…

Read More

ಈ ಜೋರು ಮಳೆಯೂ, ಬೊಬ್ಬೆಯೂ.. ನಿಮಗೇನಾದರೂ ಕೇಳಿಸುತ್ತಿದೆಯಾ ?

ಸುಂದರವಾದ ಇಂಟೀರಿಯರ್ ಡೆಕೊರೇಶನ್ ಮಾಡಿದ ಅಡುಗೆ ಮನೆಯಲ್ಲಿ ದಿನಸಿ ಸಾಮಾನು ತುಂಬಿಡಲು ಎಷ್ಟೊಂದು ಚಂದದ ಡಬ್ಬಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆದರೆ ಅತ್ತ ಸುರಿಯುತ್ತಿರುವ ಭಾರೀ ಮಳೆಯೂ, ಕೃಷಿ ಕ್ಷೇತ್ರದ ಕುರಿತು ನಡೆಯುತ್ತಿರುವ ಚರ್ಚೆಗಳು, ಏರುಪೇರಾದ ಹವಾಮಾನದ ಆತಂಕಗಳು ಯಾಕೋ ಕಂಗಾಲು ಮಾಡುತ್ತಿವೆ. ಅಂತಹುದೇ ಆತಂಕಗಳನ್ನು ನಮ್ಮ ನಡುವಿನ ಕತೆ…

Read More

ಸಜ್ಜನಿಕೆಯ ಋಣವೊಂದು ಹೃದಯದಲ್ಲಿ ಉಳಿದಿದೆ

ಒಳ್ಳೆಯತನವನ್ನು ನಾವು ಎಷ್ಟೇ ಸದರದಿಂದ ನೋಡಿದರೂ, ಸ್ವಂತ ಮಕ್ಕಳ ವಿಷಯಕ್ಕೆ ಬಂದಾಗ ಅವರಿಗಾಗಿ ನಾವು ಒಳ್ಳೆಯತನದ ಮಾದರಿಗಳನ್ನು ಹುಡುಕಲು ಶುರು ಮಾಡುತ್ತೇವೆ. ದೊಡ್ಡವರಿಗೂ ಮಕ್ಕಳಿಗೂ ಸಮಾನವಾಗಿ ಇಷ್ಟವಾಗುವವರು ಬಹಳಿಲ್ಲ. ಕೆಲವರು ಗೊತ್ತಿಲ್ಲದಂತೆಯೇ ನಮಗೂ ಇಷ್ಟವಾಗುತ್ತಾರೆ, ಮಕ್ಕಳಿಗೂ ಮೆಚ್ಚುಗೆಯಾಗುತ್ತಾರೆ. ನಮಗರಿವಿಲ್ಲದಂತೆಯೇ ಅವರು ನಮ್ಮ ಜೀವನದಲ್ಲಿ ಮುಖ್ಯವಾಗಿರುತ್ತಾರೆ. ಅವರು ಅಗಲಿದಾಗ ಉಮ್ಮಳಿಸಿ ಬರುವ ದುಃಖವೂ, ಇದ್ದಕ್ಕಿದ್ದಂತೆಯೇ ಕಾಡಲು ಶುರುವಾಗುವ…

Read More

ನಮ್ಮ ಚಿತ್ರಗಳಿಗೆ ಅವರು ಬಣ್ಣ ತುಂಬುತ್ತಿದ್ದಾರೆ

ಕೋವಿಡ್ ಸೋಂಕಿನ ಭಯದಿಂದ ಕಳೆದೆರಡು ವರ್ಷಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಕಲರವವೇ ಇರಲಿಲ್ಲ. ಇದೀಗ ಮತ್ತೆ ಪುಟಾಣಿ ಮಕ್ಕಳು ಶಾಲೆಯ ತರಗತಿಗಳನ್ನು ಪ್ರವೇಶಿಸಿದ್ದಾರೆ. ಹಾಗಾಗಿ ಮನೆಯೊಳಗೂ ಜೀವನೋತ್ಸಾಹ ತುಂಬಿದೆ. ಮಕ್ಕಳಿಗಾಗಿ ಶಾಪಿಂಗ್, ಸ್ಪರ್ಧೆಗಳಿಗಾಗಿ ತಯಾರಿ, ಪರೀಕ್ಷೆಗಳಿಗಾಗಿ ಓದು, ಆಟೋಟಗಳಿಗಾಗಿ ಸಿದ್ಧತೆಗಳನ್ನು ಮಾಡುವುದರಲ್ಲಿ ಮಕ್ಕಳೂ, ಅವರ ಜೊತೆಗೆ ಪೋಷಕರೂ ಬ್ಯುಸಿಯಾಗಿದ್ದಾರೆ.

Read More

ಪ್ರೇಯಸಿ ವಿಷವುಣಿಸುತ್ತಾಳೆ ಎಂದು ಅಳುವ ಆ ಪುಟ್ಟ ಪೋರ

ಯಕ್ಷಗಾನದಲ್ಲಿ ಅಬ್ಬರ, ವೈಭವ, ರಂಪಾಟಗಳು ಬೇಕೋ ಬೇಡವೋ ಎಂಬ ಚರ್ಚೆಗಳೆಲ್ಲ ಔಪಚಾರಿಕ ವೇದಿಕೆಗಳಲ್ಲಿ ನಡೆಯುತ್ತಲೇ ಇರುತ್ತವೆ. ಇತ್ತ ಯಕ್ಷಗಾನ ಪ್ರದರ್ಶನಗಳೋ, ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಗಮನಿಸುತ್ತಾ ಸ್ವತಃ ಬದಲಾವಣೆಗಳನ್ನು ಕಾಣುತ್ತಾ ನಡೆಯುತ್ತಿರುತ್ತವೆ. ಕಳೆದ ಮೇ ತಿಂಗಳಲ್ಲಿ ಲಾಕ್ ಡೌನ್ ಎಂಬ ತೆರೆಯ ಮರೆಯಲ್ಲಿ ಪ್ರದರ್ಶನಗಳನ್ನು…

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ