Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಈ ದಿನದ ಕವಿತೆ

“ಜಂಗುಳಿಯಲಿ ಅಚಾನಕ್ಕಾಗಿ ನೆದರಿಗೆ ಬಿದ್ದ ಅಪರೂಪವೆ
ವಯಸಿಗೂ ಹುರಿಗೆಜ್ಜೆ ಕಟ್ಟಿ ಕುಣಿದ ಹರೆಯವೇ
ನೀನು ಎರಡೇ ಎರಡು ಹಲ್ಲು ತೆರೆದು
ನಕ್ಕ ನಗುವನ್ನು ಹಾಗೆ ಬಾಚಿ ಎದೆಯಲ್ಲಿ ಕಾಪಿಟ್ಟುಕೊಂಡಿದ್ದೇನೆ
ಲೋಕದ ಕತ್ತಲೆ ಎದೆಗಳಲಿ ನಿನ್ನ ನಗುವ ದೀಪ ಹಚ್ಚಿಡುತ್ತೇನೆ
ಆ ಪ್ರತಿ ಬೆಳಗಿಗೂ ನಿನ್ನ ಹೆಸರಿಟ್ಟು ಕರೆಯುತ್ತೇನೆ”-ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಈ ದಿನದ ಕವಿತೆ

Read More

ಚಿಗರಿ ಬಸ್ಸಿನ ಗಂಧರ್ವ: ಲಿಂಗರಾಜ ಸೊಟ್ಟಪನವರ್‌ ಪ್ರಬಂಧ

ನಾನು ಸರ್‌ಗೆ ಐದುನೂರು ಕೊಟ್ಟೆ.. ಅವರು ಮಡಚಿ ಇಟ್ಟುಕೊಂಡರು. ಆಯ್ತು ಎಂದರು.. ನಾನು ನಿಂತೇ ಇದ್ದೆ. ಯಾಕೋ ಅಂದರು.. ನಾನು ಮತ್ತೆ ಐದು ನೋಟು ಕೊಟ್ಟೆ. ಅವರು ಹೈರಾಣ. ಪ್ರಯೋಗ ಮಾಡಿದ್ದು ಅರ್ಥವಾಯಿತು. ಅವರು ಏನೊಂದು ಹೇಳದೆ ಮೌನವಾದರು. ಹೋಗಿ ಕುತ್ಕೋ ಅಂದರು ಡೆಸ್ಕ್‌ನಲಿ ಕೂತೆ. ಸ್ವಲ್ಪ ಹೊತ್ತು ಹಾಗೇ ನೋಡಿದರು. ಹೀಗೆಲ್ಲ ಮಾಡಬಾರದು.. ಎಂದರು ಅಷ್ಟೇ. ನಾನು ಹಾಗೆಲ್ಲ ಮಾಡಿಯೂ ಐದು ನೋಟುಗಳನ್ನು ಅವರಿಗೆ ಕೊಟ್ಟಿದ್ದೆ. ಅವರು ತಪ್ಪನ್ನು ಮಾತ್ರ ತಿದ್ದುವ ಪ್ರಯತ್ನ ಮಾಡಿದ್ದರು.
ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಲಿಂಗರಾಜ್‌ ಸೊಟ್ಟಪ್ಪನವರ್‌ ಬರೆದ ಈ ದಿನದ ಕವಿತೆ

“ನಿನಗಿಷ್ಟು
ಮತ್ತೆ ನನಗೇಷ್ಟೋ ಹೇಳಲಿಕ್ಕಿದೆ
ನನ್ನೆದೆಯ ನಿನ್ನೆದೆಯ ಮದ್ದಳೆ ಸದ್ದಿನಲಿ ಗದ್ದಲಕೆ ಬಿದ್ದಿದ್ದೇವೆ
ಒಂದು ರಿದಂ ನಮ್ಮನು ಕುಣಿಸುತ್ತಿದೆ”- ಲಿಂಗರಾಜ್‌ ಸೊಟ್ಟಪ್ಪನವರ್‌ ಬರೆದ ಈ ದಿನದ ಕವಿತೆ

Read More

ನನ್ನ ಉಂಡೆ ಪಂಚಮಿ ಕತೆ!

ಪಾಕ ಹದಕ್ಕೆ ಬಂದಂತೆನಿಸಿತು. ಅಷ್ಟೂ ಸಾಮಾಗ್ರಿ ಸುರುವಿ ಗೊಟ.. ಗೊಟ.. ಗೊಟಾಯಿಸಿ ಪರಾತಕ್ಕೆ ಸುರುವಿದೆ. ಈಗಲೆ ಕಟ್ಟುವದೋ.. ಆರಿದ ನಂತರವೋ..? ಮತ್ತೆ ಓವರ್ ಟು ಅವ್ವಾ.. ತಲೆ ಇದ್ದಲ್ಲಿಂದಲೆ ಓಡಿತು. ಆರಿದ ಮೇಲೆ ಉಂಡೆಯಾಗುವದಿಲ್ಲವೋ ಮಂಕೆ. ಉಂಡೆ ಬಂಡೆಯಾಗುತ್ತದೆ.. ಅವ್ವ ತಿಳಿ ಹೇಳಿದಂತಾಯಿತು. ಅಂಗೈಗೆ ಎಣ್ಣೆ ನೀರು ಸವರಿಕೊಂಡು ಸುಡು ಸುಡುವದನ್ನೆ ಎಳೆದುಕೊಂಡೆ. ಬರೆ ಕೊಟ್ಟಂತಾಯಿತು. ಹಾ.. ಎಂದಿತು ಜೀವ. ಅದು ನೋವೋ ಸುಖವೋ ಅಂತೂ ಉಂಡೆಗಳೆಂಬ ಗುಂಡುಗಳು ತಯಾರಾದವು.
ಲಿಂಗರಾಜ ಸೊಟ್ಟಪ್ಪನವರ್ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ನಂಜುಂಡಿ ಕಲ್ಯಾಣವೂ ಮತ್ತು ‘ಮಿಲ್ಟ್ರೀ’ ಗ್ಯಾಂಗೂ

ಅಂತೂ ನಮ್ಮೂರಿಗೆ ನಂಜುಂಡಿ ಕಲ್ಯಾಣದ ಭಾಗ್ಯ. ಬರೋಬ್ಬರಿ ಒಂದು ವರ್ಷದ ನಂತರ. ಆದರೂ ನಮ್ಮ ಜನಕ್ಕೆ ಅದು ರಿಲೀಜ್ ಪಿಕ್ಚರ್. ಜಟಕಾ ಲೌಡ್ ಸ್ಪೀಕರ್ ಕಟ್ಟಿಕೊಂಡು ಸುತ್ತ ಹತ್ತೂರುಗಳಿಗೆ ಹೋಗಿ… “ಪ್ರೀಯ ಕಲಾಭಿಮಾನಿಗಳೆ.. ಕಲಾ ರಸಿಕರೆ.. ಒಮ್ಮೆ ನೋಡಿದರೆ ಮತ್ತೊಮ್ಮೆ ಮಗದೊಮ್ಮೆ.. ಮತ್ತೆ ಮತ್ತೆ ನೋಡಲೇಬೇಕಾದ ಸಿನೇಮಾ..” ಎನ್ನುತ್ತ.. “ಮರೆಯದಿರಿ.. ಮರೆತು ನಿರಾಶರಾಗದಿರಿ..…” ಎನ್ನುವ ನೊಟೀಸ್ ನೀಡಿ ಮರಳಿತು. ಸೈಕಲ್ ರಂಗ ಬಸ್ ಸ್ಟಾಪು ಸಲೂನು ಕೂಟು ಸರ್ಕಲ್‌ಗಳಲ್ಲಿ ಪೋಸ್ಟರ್ ಅಂಟಿಸಿದ.
ಲಿಂಗರಾಜ ಸೊಟ್ಟಪ್ಪನವರ ಬರೆದ ಪ್ರಬಂಧ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ