Advertisement
ರವಿ ಮಡೋಡಿ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರವಿ ಮಡೋಡಿ ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿಟ್ಟೂರು ಬಳಿಯ ಮಡೋಡಿ ಗ್ರಾಮದವರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕಳೆದ 15 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ತಮ್ಮ ತಂಡದೊಂದಿಗೆ ನೀಡಿದ್ದಾರೆ. ‌‘ಯಕ್ಷಸಿಂಚನ’ ಎನ್ನುವ ಹವ್ಯಾಸಿ ಯಕ್ಷಗಾನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಅವರು ಸಂಸ್ಥೆಯ ಈಗಿನ ಅಧ್ಯಕ್ಷರೂ ಹೌದು.  ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿರುವ ಇವರು ಮಲೆನಾಡಿನ ಒಂದು ಶತಮಾನದ ಯಕ್ಷಗಾನ ಇತಿಹಾಸವನ್ನು ತಿಳಿಸುವ  ‘ಮಲೆನಾಡಿನ ಯಕ್ಷಚೇತನಗಳು’  ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದರ ಜೊತೆಗೆ ʼನಮ್ಮಲ್ಲೇ ಮೊದಲು’, ’ಪ್ರಸಂಗಕರ್ತ ಶ್ರೀಧರ ಡಿ.ಎಸ್’ ಇವರ ಇತರ ಕೃತಿಗಳು. ಅವರ ಹಲವಾರು ಕಥೆ, ಲೇಖನ, ಲಲಿತ ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪಟ್ಟಣ ಪುರಾಣ – ಇವಳು ಗದ್ದ ನೆಕ್ಕಿ ಮುದ್ದಿಟ್ಟ ಮಹಾರಾಣಿ

ಎರಡಕ್ಕೂ ಜೋತು ಬೀಳುವ ಉದ್ದನೆ ಕಿವಿ. ಮೊಂಡು ಬಾಲ. ದೂರದಿಂದ ನೋಡಿದರೆ ಮೇಕೆ ಮರಿ ಅನಿಸೀತು. ಇಳೀ ಬಿದ್ದ ಕಿವಿಗಳಿಂದಲೇ ಇವಕ್ಕೆ ಶೋಭೆ. ತೇಜಸ್ವಿಯವರ ಕರ್ವಾಲೋದಲ್ಲಿ ಬರುವ ‘ಕಿವಿ’ಯೂ ಈ ಇಬ್ಬರ ದಾಯಾದಿಯೇ ಇದ್ದಿರಬೇಕು.

Read More

ಪಟ್ಟಣ ಪುರಾಣ – ಮಾಸ್‌ಡ್ರಿಲ್, ಏರೋಬಿಕ್ಸ್ ಮತ್ತು ಎಂಪಿಥ್ರೀ

ಮನಸ್ಸು ತೊಡಗಿಸಿದರೆ ಏನೇನೂ ಸಾಧ್ಯ ಅಂದುಕೊಳ್ಳುವ ಮತ್ತು ನಂಬಿರುವ ನನಗೆ- ನನ್ನೀ ಹಾಳು ಕಾಲುಗಳು ಎಷ್ಟೆಲ್ಲ ತೂಗು, ಬಾಗುಗಳ ಸಾಧ್ಯತೆಗಳಿಗೆ ಈವರೆಗೆ ಅನುವುಗೊಂಡಿಲ್ಲವೆನ್ನುವುದು ಇನ್ನಿಲ್ಲದ ಖೇದ ಹುಟ್ಟಿಸಿತು.

Read More

ವಸ್ತಾರೆ ಪಟ್ಟಣ ಪುರಾಣ-ಚಂದ ಎಂಬುದರ ಮೀಮಾಂಸೆ

ಬರೇ ನಾದವಿರುವ, ಪದವೇ ಇಲ್ಲದ ಆಲಾಪವನ್ನು ಕೇಳಿದಾಗಲೊಮ್ಮೊಮ್ಮೆ ಹಾಗೇ ಕೇಳುತ್ತಲೇ ಇರಬೇಕೆನಿಸುತ್ತದೆ. ಅದನ್ನೇ ಸುಶ್ರಾವ್ಯವೆನ್ನುತ್ತೇವೆ. ಆ ಸಂಗೀತಕ್ಕೆ ಆಗ ಮಾತು ಅಡಚಣೆಯೆನಿಸುತ್ತದೆ. ಮೌನ ಸಂಪನ್ನವೆನಿಸುತ್ತದೆ. ತಲೆದೂಗುತ್ತೇವೆ. ಅವಾಕ್ಕಾಗುತ್ತೇವೆ.

Read More

ವಸ್ತಾರೆ ಬರೆಯುವ ಪಟ್ಟಣ ಪುರಾಣ – ಹೇ… ಅಪರ್ಣೇ…!

ಸಮಾರಂಭದ ಬಳಿಕ ಇವಳ ಬದಿಯಲ್ಲಿ ನಾನು ಕಾರಿನತ್ತ ಸರಿಯುತ್ತಿರುವಾಗ ಮುಖ್ಯಮಂತ್ರಿಗಳ ಕಾರು ನಮ್ಮನ್ನು ಬಳಸಿತು. ಇವಳನ್ನು ನೋಡಿದ್ದೇ ಅವರು ಕಾರು ನಿಲ್ಲಿಸಲು ಹೇಳಿ, ಇಳಿದು ಅವತ್ತಿನ ನಿರೂಪಣೆಯನ್ನು ಹೊಗಳಿದರು. ಸುಮಾರು ಹತ್ತು ನಿಮಿಷ.

Read More

ವಸ್ತಾರೆ ಪಟ್ಟಣ ಪುರಾಣ – ಹಕ್ಕಿಯ ಹಿಕ್ಕೆ ಮತ್ತು ಆರ್ಕಿಟೆಕ್ಚರ್

‘ನಿನ್ನೆ ಏನಾಯಿತು ಗೊತ್ತಾ ಸರ್?  ಕಾಲೇಜಿನಲ್ಲಿ ಟ್ಯಾಂಜೇನಿಯಾದ ಪ್ರೈಮ್ ಮಿನಿಸ್ಟರ್ ವಿಸಿಟ್ ಇತ್ತು. ಪಿಎಮ್ ಅಂದಮೇಲೆ ಗೊತ್ತಲ್ಲ- ಎಷ್ಟು ಪ್ರೋಟೋಕಾಲೂ.. ಏನು ಕತೇ? ಈ ಮನುಷ್ಯ ಆಡ್ಮಿನ್ ಒಳಗೆ ಬಂದಿದ್ದಷ್ಟೆ- ಈ ಹಕ್ಕಿ ಮೇಲಿಂದ ಗಲೀಜು ಮಾಡಿಬಿಡ್ತು!

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ