Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಕರೋನ ಕಾಟದ ಮಧ್ಯೆ ಉಪ್ಪಿನಕಾಯಿ ಭರಾಟೆ: ವಿನತೆ ಶರ್ಮ ಅಂಕಣ

“ನಮ್ಮ ಬ್ರಿಸ್ಬನ್ ನಗರದ ಪೂರ್ವ ಭಾಗದಲ್ಲಿ ಕಲ್ಲು ಕುಟ್ಟಿ ಒಡೆದು ಅದಕ್ಕೆ ಬಗೆಬಗೆಯ ರೂಪಗಳನ್ನು ಕೊಡುವ ತರಬೇತಿ ಶಿಬಿರಗಳನ್ನು ನಡೆಸುತ್ತಾರೆ. ಓದಿದ ಕ್ಷಣದಲ್ಲಿ ನಗು ಬಂತು. ಅಯ್ಯೋ, ಬೆಂಗಳೂರಿನಲ್ಲಿ ನಮ್ಮವರೆಲ್ಲ ಒಬ್ಬೊಬ್ಬರಾಗಿ ಮನೆ ಕಟ್ಟಿಸುತ್ತಿದ್ದಾಗ ಕಲ್ಲೊಡೆಯುವವರು ಬರುತ್ತಿದ್ದರು. ಅಷ್ಟೇಕೆ, ಪ್ರತಿದಿನವೂ ಬಿಟಿಎಸ್ ಬಸ್ಸಿನಲ್ಲಿ…”

Read More

‘ಮರೆತುಹೋದ ಆಸ್ಟ್ರೇಲಿಯನ್’ ಗ್ರೆಗೊರಿ ಸ್ಮಿತ್ ಆತ್ಮಕಥನ: ವಿನತೆ ಶರ್ಮ ಅಂಕಣ

“ಚಿಕ್ಕ ಪಟ್ಟಣದಲ್ಲಿ ಆಗಾಗ ಸಿಕ್ಕುವ ತಾತ್ಕಾಲಿಕ ಕೆಲಸಗಳನ್ನು ಮಾಡುತ್ತಾ ಒಂದಷ್ಟು ಸಂಪಾದಿಸಿದರೂ ಒಂದೊಂದೇ ತನ್ನ ಕನಸುಗಳು ನೆಲವನ್ನಪ್ಪುವುದನ್ನು ಸಹಿಸಲಾರದ ತಾಯಿ ಗಂಡನನ್ನು ಸದಾ ಕಾಲ ಮೂದಲಿಸುವುದು, ಅವನಿಂದ ಹೊಡೆತ ತಿನ್ನುವುದು ದಿನನಿತ್ಯದ ಕಥೆಯಾಗಿತ್ತು.”

Read More

ಮರೆತುಹೋದ ಆಸ್ಟ್ರೇಲಿಯನ್ನರ ನೋವಿನ ನೈಜ ಕಥೆಗಳು: ವಿನತೆ ಶರ್ಮ ಅಂಕಣ

“ತಮ್ಮ ನಲವತ್ತನೇ ವಯಸ್ಸಿನಿಂದ ಹೀಗೆ ಕಾಡೊಳಗಿನ ಬೈರಾಗಿಯಾಗಿ ಬದುಕಿದ ಗ್ರೆಗೊರಿ ಐವತ್ತನೇ ವಯಸ್ಸಿನಲ್ಲಿ ಕಾಡಿನಿಂದ ಸಂಪೂರ್ಣ ಹೊರಬಿದ್ದರು. ಅವರಿಗೆ ಅಗೋಚರವಾದ ಹಿರೀಕರು ಕಾಡಿನಿಂದ ಅವರನ್ನು ಹೊರನೂಕಿದರಂತೆ….”

Read More

ವಿರೋಧಾಭಾಸಗಳ ಗೊಬ್ಬರದಲ್ಲಿ ಇಣುಕುವ ಆಶಾಜೀವಿಗಳು: ವಿನತೆ ಶರ್ಮಾ ಅಂಕಣ

“ನಮ್ಮ ಗಿಡಗಳಿಗೆ, ನೆಲಕ್ಕೆ, ನೆಲದಲ್ಲಿರುವ ಬಗೆಬಗೆಯ ಜೀವ ವೈವಿಧ್ಯಕ್ಕೆ ನಾವು ನೀಡುವ ಇವೆಲ್ಲಾ ಗೊಬ್ಬರ ಬಗೆಗಳು ಹಾಗೆಯೇ ಭಾರಿ ಭೋಜನ ಇರಬೇಕೇನೋ, ಮದುವೆ ಊಟದಂತೆ ಅಂದೆನ್ನಿಸಿ ಖುಷಿಯಾಯ್ತು. ಬೆಳೆದ ತರಕಾರಿ ನಮ್ಮ ಕೈಗೆ ಬರುವ ಮುಂಚೆಯೇ ಹುಳಹುಪ್ಪಟೆಗಳು…”

Read More

ಬಿಳಿ, ಕರಿ ಪ್ರಪಂಚಗಳಲ್ಲಿ ಅಲೆವ ಪುರಾತನ ಆತ್ಮ ಗಲ್ಪಿಲಿಲ್: ವಿನತೆ ಶರ್ಮಾ ಅಂಕಣ

“ನಿಜವಾಗಿಯೂ ಡೇವಿಡ್ ಎರಡು ಪ್ರಪಂಚಗಳಿಗೆ ಸೇರಿದ ಆತ್ಮವೇ? ಈ ಪ್ರಶ್ನೆಗೆ ಉತ್ತರಿಸಿದ್ದು ಮತ್ತೊಬ್ಬ ಆಸ್ಟ್ರೇಲಿಯನ್ ನಟ ಜಾಕ್ ಥಾಮ್ಸನ್. ಈತ ಬಿಳಿಯ. ಚಿಕ್ಕಂದಿನಿಂದಲೂ ತನಗೆ ಅಬರಿಜಿನಲ್ ಎಂಬ ಪದದ ಬಗ್ಗೆಯೇ ಅದೇನೋ ಸೆಳೆತವಿತ್ತು.:

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ