Advertisement

ಕೆಂಡಸಂಪಿಗೆ

ಬಚ್ಚಲಿನ ಬಗೆಗೊಂದು ಭಾವಸ್ಫುರಣ: ವಿಶ್ವನಾಥ ಎನ್‌ ನೇರಳಕಟ್ಟೆ ಬರಹ

ಹಾಗೆ ನೋಡಿದರೆ ಮನೆಯ ಉಳಿದ ಎಲ್ಲಾ ಅಂಗಗಳಿಗಿಂತ ಮಿಗಿಲಾಗಿ ಬಚ್ಚಲುಮನೆ ರಾಜಮರ್ಯಾದೆಯನ್ನು ಪಡೆದುಕೊಳ್ಳುತ್ತದೆ. ಅಡುಗೆ ಕೋಣೆ ಎನ್ನುತ್ತೇವೆ. ಮಲಗುವ ಕೋಣೆ ಎನ್ನುತ್ತೇವೆ. ದೇವರ ಕೋಣೆ ಎನ್ನುತ್ತೇವೆ. ಆದರೆ ಬಚ್ಚಲನ್ನು ಬಚ್ಚಲು ಮನೆ ಎನ್ನುತ್ತೇವೆ. ಮನೆಯ ಒಂದು ಭಾಗವಾಗಿರುವ ಬಚ್ಚಲನ್ನು ಇನ್ನೊಂದು ಮನೆಯೇ ಎಂಬಂತೆ ಪರಿಗಣಿಸುತ್ತೇವೆ. ಮನೆಯ ಬೇರಾವ ಕೋಣೆಗಳಿಗೂ ಸಿಗದ ಪ್ರಾಶಸ್ತ್ಯ ಬಚ್ಚಲುಮನೆಗಿದೆ. ಉಳಿದ ಕೋಣೆಗಳು ಈ ತಾರತಮ್ಯವನ್ನು ಒಪ್ಪಿಕೊಳ್ಳದೆ ಪ್ರತಿಭಟಿಸದಿರುವುದೇ ಆಶ್ಚರ್ಯ!
ಬಚ್ಚಲಿನ ಕುರಿತ ಹಲವು ವಿಚಾರಗಳನ್ನು ಬರೆದಿದ್ದಾರೆ ವಿಶ್ವನಾಥ ಎನ್‌ ನೇರಳಕಟ್ಟೆ

Read More

ಮನಸ್ಸೆಂಬೊ ಮಾಯಾವಿ..: ವಿಶ್ವನಾಥ ನೇರಳೆಕಟ್ಟೆ ಬರಹ

ಮನಸ್ಸು ಎನ್ನುವುದೇ ಹಾಗೆ, ಅನೂಹ್ಯವಾದದ್ದು, ಅಸದೃಶವಾದದ್ದು. ಮನುಷ್ಯನಲ್ಲಿರುವ ಅತ್ಯಂತ ಶಕ್ತಿಶಾಲಿ ಹಾಗೂ ಅತೀ ದುರ್ಬಲ ಅಸ್ತ್ರವೆಂದರೆ ಅದು ಮನಸ್ಸು. ನಮ್ಮ ಬದುಕಿನಲ್ಲಿ ಯಾವತ್ತೋ ನಡೆದ ಘಟನೆಗಳು, ನೋಡಿದ ಸನ್ನಿವೇಶಗಳು ಬದುಕಿನ ಇನ್ಯಾವುದೋ ಕಾಲಘಟ್ಟದಲ್ಲಿ ನಮ್ಮ ಮನಸ್ಸನ್ನು ನಿಯಂತ್ರಿಸುವ ಬಗೆಯಂತೂ ಅತ್ಯದ್ಭುತ. ಮನಸ್ಸನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಂಡರೆ ಮನುಷ್ಯ ಯಶಸ್ಸನ್ನು ಗಳಿಸಿಕೊಳ್ಳುವುದು ಸುಲಭವಾಗುತ್ತದೆ. ಹಾಗೆಂದು ಈ ಪ್ರಯತ್ನದಲ್ಲಿ ಎಡವಿದರೆ ಬದುಕು ಸಮಸ್ಯೆಗಳ ಗೂಡಾಗುತ್ತದೆ.
ನೇರಳೆಕಟ್ಟೆ ಅವರು ಮನಸ್ಸಿನ ಅಗಾಧತೆಯ ಕುರಿತು ಬರೆದ ಲೇಖನ ಇಂದಿನ ಓದಿಗಾಗಿ.

Read More

ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ವಿಭಾಗಿಸಿ ಒಡೆದುಹಾಕುವ ವ್ಯಾಸಕ್ಕೆ ಬೆದರದೆ
ತ್ರಿಜ್ಯದ ಸಂಪರ್ಕವನ್ನು ಅತಿಯಾಗಿ ಹಚ್ಚಿಕೊಳ್ಳದೆ-
ಹಾಗೆಂದು ದೂರವೂ ಉಳಿಯದೆ
ಸುತ್ತ ಆವರಿಸಿ ನಿಂತ ಪರಿಧಿಗಳೆಲ್ಲವನ್ನೂ ಮೀರಿದ
ನಗುಮುಖದ ವೃತ್ತವಾಗಬೇಕು”- ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ವಿಶ್ವನಾಥ ಎನ್‌ ನೇರಳಕಟ್ಟೆ ಬರೆದ ಈ ಭಾನುವಾರದ ಕಥೆ

ಮಾರನ ಕನಸು ನನಸಾಗಲಿಲ್ಲ. ಮಣ್ಣು ಸೇರಿತ್ತು. ಮಾರನ ತತ್ಕಾಲದ ಜನಪ್ರಿಯತೆಯನ್ನು ಮಾತ್ರವೇ ನಂಬಿಕೊಂಡಿದ್ದ ಆ ಸಿನಿಮಾ ಚೆನ್ನಾಗಿ ಓಡಲಿಲ್ಲ. “ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿಯೇ ಮಾಡುತ್ತದೆ. ಸಿನಿಮಾ ಹಿಟ್ ಆದಮೇಲೆ ನಿನಗೆ ಎಂಟು ಲಕ್ಷ ಕೊಡುತ್ತೇವೆ” ಎಂದು ನಂಬಿಸಿದ್ದ ನಿರ್ದೇಶಕ- ನಿರ್ಮಾಪಕರು ಆಮೇಲೆ ಕೈ ಕೊಟ್ಟಿದ್ದರು. ಸಿನಿಮಾ ಆರಂಭದ ಸಂದರ್ಭದಲ್ಲಿ ಕೊಟ್ಟಿದ್ದ ಹನ್ನೆರಡು ಸಾವಿರ ಮಾತ್ರ ಮಾರನ ಪಾಲಿಗೆ ದಕ್ಕಿದ್ದು.
ವಿಶ್ವನಾಥ ಎನ್‌ ನೇರಳಕಟ್ಟೆ ಬರೆದ ಕಥೆ “ಮಾರ”

Read More

ಸರಳ ಸತ್ಯಗಳ ಮರೆತು ಹಸಿರ ಹರಿಯುವ ನಾವು..

ಕಾಡನ್ನೇ ಆಶ್ರಯಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಆದಿವಾಸಿ ಸಮುದಾಯಗಳು ಅರಣ್ಯ ಪರಿಸರದ ವಿಶಿಷ್ಟತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ಮಹತ್ತರ ಪಾತ್ರವನ್ನು ಹೊಂದಿವೆ. ಔಪಚಾರಿಕ ಶಿಕ್ಷಣವನ್ನು ಪಡೆಯದೆಯೂ ಇಂತಹ ಸಮುದಾಯಗಳ ಜನರು ಹೊಂದಿರುವ ಜ್ಞಾನ ವಿಸ್ತಾರವಾದುದು. ಅವರಿಗೆ ದೊರೆತ  ತಿಳಿವಳಿಕೆಯು ಅರಣ್ಯಜನ್ಯವಾದುದು.  ಈ ಸಮುದಾಯಗಳ ಆಚರಣೆ- ನಂಬಿಕೆಗಳು ಅರಣ್ಯಕೇಂದ್ರಿತವಾಗಿವೆ ಮತ್ತು ಅರಣ್ಯಪರವಾಗಿವೆ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಪರಿಸರ ಕುರಿತ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ