Advertisement

Category: ದಿನದ ಪುಸ್ತಕ

ಕಥನಗಾರಿಕೆಯ ಬೈನಾಕ್ಯುಲರ್ ನಲ್ಲಿ ಕಂಡ ಗತ ಮತ್ತು ವರ್ತಮಾನಗಳು:ವಿಕ್ರಮ್ ಕಥೆಗಳ ಕುರಿತು ಗೀತಾ ವಸಂತ

ಹಮಾರಾ ಬಜಾಜ್ ನ ಕತೆಗಳಲ್ಲಿ ಅಸ್ತಿತ್ವ ಶೋಧದ ಆಯಾಮವು ಅಂತರಗಂಗೆಯಂತೆ ಒಳಗೊಳಗೇ ಹರಿಯುತ್ತ ಎಲ್ಲ ಕತೆಗಳನ್ನು ಒಂದು ಹರಿವಿನಲ್ಲಿ ಬೆಸೆಯುತ್ತದೆ. ದೇಹ, ಪ್ರಜ್ಞೆಗಳಲ್ಲಿ ಯಾವುದು ನಿಜ ಎಂಬ ತೊಡಕುಗಳನ್ನು ಅನುಭವಿಸುತ್ತಲೇ ಅದನ್ನು ನಿಧಾನವಾಗಿ ಬಿಡಿಸುವ ತರ್ಕದ ನಾಜೂಕು ಹೆಣಿಗೆಯನ್ನು ಕತೆಗಳು ನಿರ್ಮಿಸುತ್ತವೆ. ದೇಹದ ಐಂದ್ರಿಕ ಅನುಭವಗಳನ್ನು ಕಾಮದ ಮೂಲಕ ಶೋಧಿಸುವ ಕತೆಗಳು ಪ್ರಜ್ಞೆಯ ಅನುಭವವನ್ನು ವಿಶ್ಲೇಷಿಸಲು ತರ್ಕದ ಮೊರೆ ಹೋಗುತ್ತವೆ.

Read More

ಭಾರವಿಲ್ಲದ ಸಹಜತೆಯಲ್ಲಿ ಮನುಷ್ಯರ ಸಾಮಾನ್ಯತನವನ್ನು ಹೇಳುವ ಕಥೆಗಳು

“ಇವರ ಕತೆಗಳಲ್ಲಿ ಬರುವ ಪಾತ್ರಗಳು ಹೆಚ್ಚು ಸಾಚಾ ಆಗಿ, ರೊಮ್ಯಾಂಟಿಸಂ ಇಲ್ಲದ ಒರಟುತನದಿಂದ, ಒಬ್ಬ ಹಳ್ಳಿಗನ ಇವಿಲ್ ಕೂಡ ಸಹಜ ಎಂದು ಅನಿಸುವಂತೆ ಮೂಡಿ ಬರುತ್ತವೆ. ಇಲ್ಲಿ ಕೊಲೆ ಮಾಡಬಲ್ಲ ಭಾವ, ಮೈದುನರು, ಯಕ್ಷಗಾನ ಬಯಲಾಟದ ಟೆಂಟಿಗೆ ಬೆಂಕಿ ಹಚ್ಚಬಲ್ಲ ಕಟ್ಟಾ ಜಿದ್ದಿನ ಊರ ಮಂದಿ, ಕಳ್ಳನಾಟ ಸಾಗಿಸುವ ದಂಧೆಯನ್ನು ಹೊಟ್ಟೆಪಾಡಿನ ಅನಿವಾರ್ಯ ಎಂದು ಕಂಡುಕೊಳ್ಳುವ ಮತ್ತು …”

Read More

ದೀಪ್ತಿ ಭದ್ರಾವತಿ ಕಥಾಸಂಕಲನಕ್ಕೆ ಎಸ್.ಎನ್.ಸೇತುರಾಮ್ ಬರೆದ ಮುನ್ನುಡಿಯ ಮಾತುಗಳು

“ಕಾಲಕಾಲಕ್ಕೆ ಸನ್ನಿವೇಶಕ್ಕೆ ಅನುಗುಣವಾಗಿ ಸಾಹಿತಿಯ ಬಣ್ಣ, ಭಾಷೆ ಬದಲಾಗಬಾರದು ಅನ್ನುವುದಾದ್ರೆ ಪ್ರದರ್ಶನಕ್ಕೆ ಇಟ್ಟ ಸರಕೇ ಒಳಗೂ ತುಂಬಿರಬೇಕಾಗುತ್ತದೆ. ಅಲ್ಲದಿದ್ರೆ ಅಭಾಸ ಖಂಡಿತ. ದೀಪ್ತಿಯವರ ಕಥೆಗಳಲ್ಲಿ ಸಾಹಿತಿ ಮತ್ತು ಸಾಹಿತ್ಯ ಬೇರೆ ಅನ್ನಿಸಲ್ಲ. ಗುಮಾನಿಗಳಿಲ್ಲದೆ ಓದಿ ದಿಕ್ಕು ತಪ್ಪುವ ಭಾವನೆಗಳಿಲ್ಲದೆ ಸ್ವಂತವೆಂದು ಅಪ್ಪಿಕೊಳ್ಳಬಹುದಾದಂತಹ ಪಾತ್ರಗಳು. ಇಲ್ಲಿಯ ಹೆಣ್ಣು ಪಾತ್ರಗಳು ಸೋತು ನಶಿಸಿದಾಗ ಅಪರಾಧಿ ಮನೋಭಾವ…”

Read More

ಮೋಹದ ಪಥದಲ್ಲಿ ರಿಂಗಣಿಸುವ ಇಹಲೋಕ: ಶ್ರೀದೇವಿ ಕೆರೆಮನೆ ಬರಹ

“ಕೆಲವೊಮ್ಮೆ ಆತ್ಮ ಸಾಕ್ಷಿಯನ್ನು ಕೊಂದುಕೊಂಡು ಪ್ರಭುತ್ವದ ಆಯುಧವಾಗಬೇಕಾಗುತ್ತದೆ. ಹೀಗಾದಾಗ ಸಹಜವಾಗಿಯೇ ಒಂದು ಪ್ರಭುತ್ವದ ಜೊತೆ ಹೊಂದಾಣಿಕೆ ಮಾಡಿಕೊಂಡು ಸುಖದ ಬದುಕಿರಲಿ ಎಂದು ಹೊರಡಬೇಕು ಅಥವಾ ಪ್ರಭುತ್ವವನ್ನು ಎದುರು ಹಾಕಿಕೊಂಡು ಕೊಡುವ ಕಿರುಕುಳವನ್ನು ಸಹಿಸಿಕೊಳ್ಳಬೇಕು. ಪ್ರಾಣಾಂತಕ ಕಿರಿಕಿರಿಯನ್ನು ಅನುಭವಿಸಲಾಗದೇ ಸೋತು ಸುಣ್ಣವಾಗಬೇಕು.”

Read More

ನಿರ್ಗಮಿಸಿದ ಗೆಳೆಯನ ನೆನಪಿನಲ್ಲಿ ತಾಳ್ಯ ಮತ್ತು ಮಳಗಿ ಬರೆದ ಮುನ್ನುಡಿ

“ಕಾಲ ನಿಗೂಢ ವಿಸ್ಮಯವಾಗಿರುವಂತೆಯೇ ನಿರ್ದಯವೂ ಆಗಿದೆ. ಅದು ಯಾರನ್ನು, ಯಾವಾಗ ಅಪ್ಪಳಿಸುತ್ತದೊ ಯಾರೂ ಅರಿಯರು. ಅನೇಕ ಸಾಕ್ಷ್ಯಚಿತ್ರಗಳ ರಫ್ ಕಟ್ ಗಳ ರಾಶಿಯನ್ನು ಹೊಂದಿದ್ದ, ತಮ್ಮ ನೋಟ್ ಪುಸ್ತಕದಲ್ಲಿ ಅಸಂಖ್ಯ ಅಪೂರ್ಣ ಕವಿತೆಗಳನ್ನು ಪೂರ್ಣಗೊಳಿಸಬೇಕಿದ್ದ, ತಾವು ಕನಸಿದ್ದ ಗೋಹರ ಜಾನ್ ಳ ಕುರಿತು ಚಲನಚಿತ್ರವನ್ನು ಮಾಡಬೇಕಿದ್ದ ಚಲಂ ಕಳೆದ ವರ್ಷ ಹಠಾತ್ತಾಗಿ ನಿರ್ಗಮಿಸಿಬಿಟ್ಟರು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ