Advertisement

Category: ದಿನದ ಪುಸ್ತಕ

ದೀಪವಿರದ ದಾರಿಯಲ್ಲಿ: ಸಲಿಂಗಪ್ರೇಮಿ ಕಲಾವಿದನೊಬ್ಬನ ಅಂತರಂಗ

‘ದೀಪವಿರದ ದಾರಿಯಲ್ಲಿ’ ಕಾರ್ಕಳದ ಸುಶಾಂತ್ ಕೋಟ್ಯಾನ್ ಬರೆದ ವಿಭಿನ್ನ ಕಾದಂಬರಿ. ಯಕ್ಷಗಾನ ಕಲಾವಿದನೊಬ್ಬ ಸಲಿಂಗ ಪ್ರೇಮಿಯಾಗಿ ಬದುಕನ್ನು ಎದುರಿಸುವ ಕತೆಯೇ ಈ ಕಾದಂಬರಿಯ ಹೂರಣ. ಸಲಿಂಗ ಪ್ರೇಮದ ಬಗ್ಗೆ ಬಹಿರಂಗ ಚರ್ಚೆಗಳು ಅಪರೂಪವಾಗಿರುವ ನಮ್ಮ ಸಮಾಜದಲ್ಲಿ ಈ ಕೃತಿಯ ಕುರಿತು ಓದುಗರಲ್ಲಿ ಕುತೂಹಲವೂ ಹೆಚ್ಚು. ಹಾಗಾಗಿ ಕಾದಂಬರಿಯು ಓದುಗನಿಗೆ ಕೊಡುವ ಒಳನೋಟಗಳೇನು ಎಂಬುದನ್ನು ಹಿರಿಯ ಲೇಖಕ ಪ್ರೊ. ಪುರುಷೋತ್ತಮ ಬಿಳಿಮಲೆ, ಕಾದಂಬರಿಗೆ ಬರೆದ ಮುನ್ನುಡಿಯಲ್ಲಿ ವಿವರಿಸಿದ್ದಾರೆ. ಕೆಂಡಸಂಪಿಗೆ ಓದುಗರಿಗಾಗಿ ಆ ಮುನ್ನುಡಿ ಇಲ್ಲಿದೆ :

Read More

ಇತಿಹಾಸದ ಪದರಗಳ ಅವಲೋಕನ..

ಸಾವಿರಾರು ವರ್ಷಗಳನ್ನು ಎಳೆದು ತಂದು ತನ್ನ ಮೂಗಿನ ನೇರದಂತೆ ಇತಿಹಾಸದ ತುಣುಕನ್ನು ಬರೆದ ಮೆಗಾಸ್ತಾನಿಸನ ಇತಿಹಾಸದ ಆಧಾರದಿಂದ ನಾವು ಅಧ್ಯಯನ ಆರಂಭಿಸುತ್ತೇವೆಯೇ ವಿನಹಃ ಮೂಲಕ್ಕೆ ಹೋಗುವುದಿಲ್ಲ. ಸಂಸ್ಕೃತ ಭಾಷೆಯ ವ್ಯಾಕರಣ ಕೊಟ್ಟ ಪತಂಜಲಿ, ವರರುಚಿ, ಪಾಣಿನಿಯ ಮೊದಲಾದವರೆಲ್ಲ ಇದ್ದುದು ಪೂರ್ವದಲ್ಲಿ, ಆದರೆ ಅದ್ಯಾಕೋ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಸಂಸ್ಕೃತ ಕಣ್ಮರೆಯಾಗಿ ಪ್ರಾಕೃತ ಆಕ್ರಮಿಸಿದ್ದು ಅಂದರೆ ಗೋಜಲು ಗೋಜಲಿನ ಇತಿಹಾಸ ಅಂದಿನಿಂದಲೇ ಆರಂಭವಾಯಿತು ಎಂದು ಸ್ಪಷ್ಟವಾದ ಮಾಹಿತಿ ನೀಡುತ್ತದೆ ಈ ಪುಸ್ತಕ.
ಸದ್ಯೋಜಾತ ಭಟ್ಟ ಬರೆದ ‘ಮಿಹಿರಕುಲಿ’ ಪುಸ್ತಕದ ಕುರಿತು ಸ್ಮಿತಾ ರಾಘವೇಂದ್ರ ಬರಹ

Read More

ವಿಶಿಷ್ಟ ಶಬ್ದಶಿಲ್ಪ ‘ಆಕಾಶದೇವರು’….

ಶೂನ್ಯತತ್ವ ಒಂದು ಬಹುಮುಖ್ಯ ತಾತ್ವಿಕತೆಯಾಗಿ ಈ ಕತೆಯಲ್ಲಿ ಕಂಡುಬರುತ್ತದೆ. ಶೂನ್ಯತತ್ವದ ಪರಿಕಲ್ಪನೆಯೂ ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಬಹುದೊಡ್ಡ ಸಾಧಕ ಪ್ರಮಾಣವಾಗಿದೆ. ಶೂನ್ಯ ಎಂದರೆ ತಟ್ಟನೆ ನೆನಪಾಗುವುದು ಅಲ್ಲಮ ಮತ್ತು ಶರಣರ ಶೂನ್ಯತತ್ವದ ಪರಿಕಲ್ಪನೆ. ಅದೊಂದು ಆನುಭಾವಿಕ ನೆಲೆಯ ಚಿಂತನೆ. ಸೃಷ್ಟಿಯ ಮೂಲತತ್ವವನ್ನು ಕುರಿತು ಆಲೋಚನೆಗೆ, ಚಿಂತನೆಗೆ ಹಚ್ಚುವ ಪರಿಕಲ್ಪನೆಯಾಗಿ ಶೂನ್ಯತತ್ವ ನಮ್ಮ ಮುಂದಿದೆ.
ಬಿ. ಸುಜ್ಞಾನಮೂರ್ತಿ ಅನುವಾದಿಸಿದ “ಆಕಾಶದೇವರು” ವಿಲೋಮಕತೆಯ ಕುರಿತು ಡಾ. ನಂದೀಶ್ವರ ದಂಡೆ ಬರಹ

Read More

ಆಸ್ಕರ್ ವೈಲ್ಡ್ ಕಾದಂಬರಿ: ಗುಂಗು ಹಿಡಿಸುವ ಓದು

ತನ್ನ ಮತ್ತು ವೇನ್ ಳ ಮಾಯೆಗಳನ್ನೆಲ್ಲ ತೋರಿಸಿ ಬೇಸ್ತು ಬೀಳಿಸುವ ಉತ್ಸಾಹ ಗ್ರೇ ಗೆ. ಬೇಸಿಲ್ ಮತ್ತು ಹ್ಯಾರಿಯನ್ನು ಕರೆದುಕೊಂಡು ಹೋಗಿ ಥಿಯೇಟರಿನಲ್ಲಿ ವೇನ್ ಳ ಪ್ರತಿಭಾ ಸೌಂದರ್ಯವನ್ನು ತೋರಿಸುವ ಪ್ರಯತ್ನ ಮಾಡಿದ ಗ್ರೇ. ಆದರೆ ಅಂದು ರಾತ್ರಿ ದೊಡ್ಡ ಆಘಾತ ಕಾದಿತ್ತು. ರೊಸಾಲಿಂಡಳ ಪಾತ್ರ ಮಾಡಿದ್ದ ವೇನ್, ಜೀವಂತಿಕೆಯನ್ನೇ ಕಳೆದುಕೊಂಡ ಆಟದ ಬೊಂಬೆಯಂತೆ ನಟಿಸಿದಳು.
ಆಸ್ಕರ್ ವೈಲ್ಡ್ ಬರೆದ ‘ದಿ ಪಿಕ್ಚ್ ರ್ ಆಫ್ ಡೋರಿಯನ್ ಗ್ರೇ’ ಕಾದಂಬರಿ ಕುರಿತು ನವೀನ ಗಣಪತಿ ಬರಹ

Read More

ಸರ್ ಎಂ. ವಿಶ್ವೇಶ್ವರಯ್ಯ ಕುರಿತ ಪುಸ್ತಕದ ಬಗ್ಗೆ ಕೆ.ಆರ್.ಉಮಾದೇವಿ ಉರಾಳ ಬರಹ

“ದಿವಾನರಾದ ಅವಧಿಯಲ್ಲಿ ಮಹಾರಾಜರೊಂದಿಗೆ ಒಮ್ಮೆ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಸೂರ್ಯೋದಯಕ್ಕೂ ಮೊದಲೇ ಎದ್ದು ವಾಯುವಿಹಾರ ಕೈಗೊಂಡಿದ್ದ ಸರ್ ಎಂ.ವಿ.ಯವರಿಗೆ ಮಣ್ಣಿನ ರಾಶಿಯಲ್ಲಿನ ಬೆಣಚುಕಲ್ಲುಗಳು ಕಣ್ಣಿಗೆ ಬೀಳುತ್ತವೆ. ಅವನ್ನು ಸೂರ್ಯನ ಬೆಳಕಲ್ಲಿ ಹಿಡಿದು ನೋಡಿದ ಅವರು ಉದ್ಗರಿಸುತ್ತಾರೆ. “ನಾವು ಕಲ್ಲಿದ್ದಲಿಗಾಗಿ ಇನ್ನು ಬರ್ಮಿಂಗ್ ಹ್ಯಾಂ ನತ್ತ ನೋಡಬೇಕಿಲ್ಲ!” ಮುಂದೆ ಅದಿರಿನ ನಿಕ್ಷೇಪಗಳನ್ನು ಗಮನಿಸುತ್ತಾರೆ.”
ಜಿ.ವಿ.ಸಂಗಮೇಶ್ವರ ಬರೆದ ‘ಕಬ್ಬಿಣದ ಕಥೆ ವ್ಯಥೆ’ ಪುಸ್ತಕದ ಬಗ್ಗೆ ಕೆ.ಆರ್.ಉಮಾದೇವಿ ಉರಾಳ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ