Advertisement

Category: ಸರಣಿ

ಕರುಣಾಳು ಬಾ ಬೆಳಕೆ…

ಅಂಗಳದಲ್ಲಿ ಯಾರೂ ಕಾಣಲಿಲ್ಲ. ಅಲ್ಲಿ ಯಾವ ಮರ್ಸಿಡಿಸ್, ಬೆನ್ಝ್ ಕಾರುಗಳೂ ನಿಂತಿರಲಿಲ್ಲ. ಭಕ್ತಾದಿಗಳ ಜನಜಂಗುಳಿ ಇರಲಿಲ್ಲ. ಝಗ ಝಗಿಸುವ ದೀಪಾಲಂಕೃತ ವೇದಿಕೆ, ಮೆತ್ತನೆಯ ಗಾದಿ ಯಾವುದೂ ಇರಲಿಲ್ಲ. ಇದ್ದುದೆಲ್ಲ ಕೇವಲ ನೀರವತೆ. ಒಳಗೆ ಯಾವುದೋ ಕೋಣೆಯೊಳಗಿಂದ ಬೆಳಕು ಕಾಣುತ್ತಿತ್ತು. ಆ ಕೋಣೆಯ ಕಿಟಕಿಯ ಬಳಿ ನಿಂತೆವು.
ಗಿರಿಜಾ ಶಾಸ್ತ್ರಿ ಬರೆಯುವ “ಆ ಕಾಲದ ರಾಜಲಕ್ಷ್ಮಿ” ಸರಣಿಯಲ್ಲಿ ಹೊಸ ಬರಹ

Read More

ಲಂಡನ್ನಿನ ಸ್ಮರಣೆಯಲ್ಲಿ ದೇಶಭಕ್ತ ತಾತ್ವಿಕರು…

ನ್ಯಾಯಾಂಗ ಹೋರಾಟದ ಸೋಲು ತಿಲಕರ ಖ್ಯಾತಿಯನ್ನು ವರ್ಚಸ್ಸನ್ನು ಹೆಚ್ಚಿಸಿತ್ತು. ದಂತಕತೆಯಾಗಿದ್ದ ಪ್ರಸಿದ್ಧ ಪತ್ರಿಕೋದ್ಯಮಿ ಬೆಂಜಮಿನ್ ಹಾರ್ನಿಮನ್ ಸಂಪಾದಕತ್ವದ “ಬಾಂಬೆ ಕ್ರೋನಿಕಲ್” ಪತ್ರಿಕೆ “ಬ್ರಿಟಿಷ್ ಜ್ಯೂರಿ ಮತ್ತು ನ್ಯಾಯಾಧೀಶರು ಲೋಕಮಾನ್ಯ ತಿಲಕರ ಬಗ್ಗೆ ಹೇಳಿದುದನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ಜನರ ಪ್ರೀತಿಯ ಹೃದಯಸಿಂಹಾಸನದಿಂದ ತಿಲಕರನ್ನು ಕೆಳಗಿಳಿಸುವಲ್ಲಿ ಕೋರ್ಟಿನ ನಿರ್ಣಯಗಳೆಲ್ಲ ನಿರರ್ಥಕ” ಎಂದು ಬರೆದಿತ್ತು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯ ಕೊನೆಯ ಕಂತಿನಲ್ಲಿ ಯೋಗೀಂದ್ರ ಮರವಂತೆ ಬರಹ

Read More

ಬಾಂಬುದಾಳಿಗೀಡಾಗಿ ಬಾನುಲಿ ಬರಿದಾಗಿದೆ ಮೌನವಾಗಿದೆ…

ಭಾಷಣ ಸ್ಪರ್ಧೆಯ ದಿನ ಬಂದಿತು. ಹೈಸ್ಕೂಲು ಕಟ್ಟಡದ ಹಿಂದಿನ ಗೋಡೆಯ ಮೇಲೆ ಹೋಗಿ ಕುಳಿತೆ. ಗೋಡೆ ಜಿಗಿದು ಸಭಾಭವನಕ್ಕೆ ಹೋಗಬೇಕೆಂದರೆ ಧೈರ್ಯ ಸಾಲದು. ಹಾಫ್ ಪ್ಯಾಂಟ್ ಹರಿದಿತ್ತು. ಷರ್ಟ್ ಗಲೀಜಾಗಿತ್ತು. ಕ್ಷೌರಿಕರಿಗೆ ಕೊಡಲಿಕ್ಕೆ ಹಣವಿಲ್ಲದ್ದಕ್ಕಾಗಿ ಕೂದಲು ಬೆಳೆದಿತ್ತು. ಕೊಬ್ಬರಿ ಎಣ್ಣೆ ಇಲ್ಲದ್ದಕ್ಕಾಗಿ ಕೂದಲು ಒಣಗಿದ್ದರಿಂದ ಕಾಡು ಮನುಷ್ಯನ ಹಾಗೆ ಕಾಣುತ್ತಿದ್ದೆ. ಭಾಷಣ ಮಾಡುವ ಸ್ಫೂರ್ತಿಗೆ ಪೂರಕವಾಗಿರುವಂಥ ಯಾವುದೂ ಇರಲಿಲ್ಲ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 63ನೇ ಕಂತು ನಿಮ್ಮ ಓದಿಗೆ

Read More

“ಆ ಕಾಲದ ರಾಜಲಕ್ಷ್ಮಿ…” ಸರಣಿ ಆರಂಭ

ರಾಜಲಕ್ಷ್ಮಿ ಎನ್. ರಾವ್ ಅವರನ್ನು ಅವರ ಕತೆಗಳ ಮೂಲಕ ಪರಿಚಯ ಮಾಡಿಕೊಂಡು ಸುಮಾರು ಮೂವತ್ತು ವರುಷಗಳ ಮೇಲಾಯಿತು. ನನ್ನ ಅಧ್ಯಯನ ಮತ್ತು ವೆಂಕಟಲಕ್ಷ್ಮಿಯವರ ಸಂದರ್ಶನದ ಒಟ್ಟು‌ ಮೊತ್ತವಾಗಿ ನಾನು ಕಂಡುಕೊಂಡ ಕತೆಗಾರ್ತಿ ರಾಜಲಕ್ಷ್ಮಿಯವರು ಬೆರಗು ಹುಟ್ಟಿಸಿದರು. ಸುಮಾರು ಹತ್ತು ಹನ್ನೆರೆಡು ವರ್ಷಗಳ ಹಿಂದೆ ಸನ್ಯಾಸಿನಿಯಾದ ಅವರನ್ನು ನಾನು ಅವರ ಆಶ್ರಮದಲ್ಲಿ ಭೇಟಿಯಾದಾಗ ಆ ಬೆರಗು ಬೆಳಕಾಗಿ ನನ್ನ ಮುಂದೆ ನಿಂತಿತ್ತು. ಆ ಬೆಳಕು ಈಗ ವಿಸ್ಮಯವಾಗಿದೆ.
ಗಿರಿಜಾ ಶಾಸ್ತ್ರಿ ಬರೆಯುವ ಸರಣಿ “ಆ ಕಾಲದ ರಾಜಲಕ್ಷ್ಮಿ” ಪ್ರತಿ ಶುಕ್ರವಾರದಂದು ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಮಾಡಿದ ತಪ್ಪುಗಳು ಮತ್ತು ಅಪ್ಪನ ಶಿಕ್ಷೆ…

ಇಬ್ಬರ ನಾಗಾಲೋಟದ ಓಟ ರೇಸಿಗೆ ಬಿದ್ದಂತೆ ಸಾಗುತ್ತಿದೆ. ನಾನು ಮುಂದೆ ಅಪ್ಪ ಹಿಂದೆ. ಓಡಿದೆ ಓಡಿದೆ….. ಅಪ್ಪನೂ ನಿಲ್ಲಿಸಲಿಲ್ಲ… ಊರ ಹೊರಭಾಗದ ರಸ್ತೆಯನ್ನು ಒಂದು ಸುತ್ತು ಸುತ್ತಿಸಿದೆ. ಅಪ್ಪ ಸುಸ್ತಾದ ಅಂತ ಕಾಣುತ್ತದೆ. ಊರಿಗೆ ಹತ್ತಿರವಾಗಿ ನಮ್ಮ ಮನೆಗೆ ಹೋಗುವ ದಾರಿಯಲ್ಲಿ ಜೋಳದ ಹೊಲ ಇತ್ತು ಅದು ಗುಂಪು ಗುಂಪಾಗಿತ್ತು. “ನಿಲ್ಲು ಓಡ್ಬೇಡ… ಓಡ್ಬೇಡ…” ಅಪ್ಪ ಕೂಗುತ್ತಲೆ ಇದ್ದ. ಅದಕ್ಕಾಗಿ ನಾನು ಓಡುವುದನ್ನು ನಿಲ್ಲಿಸಲಿಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಐದನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ