Advertisement

Category: ಸರಣಿ

ಕೋಗಿಲೆ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಯಾವುದೇ ಗೂಡು ಕಟ್ಟುವ ಗೋಜಿಲ್ಲದೆ, ಮೊಟ್ಟೆಗಳಿಗೆ ಕಾವು, ಗುಟುಕು ನೀಡದೇ, ಬೂದುಕಾಗೆ ಮತ್ತು ಕಪ್ಪುಕಾಗೆಗಳ ಗೂಡಿನಲ್ಲಿ ತಮ್ಮ ಮೊಟ್ಟೆಯನಿಟ್ಟು ಕೈತೊಳೆದುಕೊಳ್ಳುವ ಪಕ್ಷಿಗಳು. ಸಾಧಾರಣವಾಗಿ ಹೆಣ್ಣು ಕೋಗಿಲೆ ಒಂದೇ ಮೊಟ್ಟೆಯನ್ನು ಇಡುತ್ತದೆ. ಹಾಗಾಗಿ ಇವುಗಳನ್ನು ಪರಪುಟ್ಟ ಎಂದೂ ಕರೆಯುತ್ತಾರೆ! ಕಾಗೆಯದೇ ಮೊಟ್ಟೆಯ ಆಕಾರ, ಬಣ್ಣ ಆದರೆ, ತುಸು ಸಣ್ಣ ಗಾತ್ರವಿರುವ ಮೊಟ್ಟೆಗಳನ್ನು ತಾನೂ ಇಡುತ್ತದೆ. ಈ ಮೊಟ್ಟೆ, ಕಾಗೆಯ ಮೊಟ್ಟೆಯಂತೆಯೇ ತಿಳಿಹಸಿರು ಬಣ್ಣದ, ಕಂದು ಬಣ್ಣದ ಗೀರುಗಳು ಮತ್ತು ಮಚ್ಚೆಗಳಿರುತ್ತದೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೋಗಿಲೆಯ ಕುರಿತ ಬರಹ ಇಲ್ಲಿದೆ

Read More

ರಾಮಮನೋಹರ ಲೋಹಿಯಾ ಮತ್ತು ರಾಮ ಕೃಷ್ಣ ಶಿವ: ಚಿತ್ರಾ ವೆಂಕಟರಾಜು ಸರಣಿ

ಪ್ರಬಂಧದಲ್ಲಿ ರಾಮಮನೋಹರ ಲೋಹಿಯಾ ಅವರು ರಾಮ, ಕೃಷ್ಣ, ಶಿವ ಮೂವರಲ್ಲಿ ಒಂದೊಂದು ವ್ಯಕ್ತಿತ್ವವನ್ನು ಗುರುತಿಸಿದ್ದಾರೆ. ಆ ಮೂರೂ ವ್ಯಕ್ತಿತ್ವಗಳೂ ಭಾರತಕ್ಕೆ ಹೇಗೆ ಮತ್ತು ಯಾಕೆ ಬೇಕು ಎನ್ನುವುದೇ ಲೇಖನದ ಆಶಯ. ರಾಮನಲ್ಲಿನ ಸೀಮಿತ ವ್ಯಕ್ತಿತ್ವ, ಕೃಷ್ಣ ನ ಸಮೃದ್ಧ ವ್ಯಕ್ತಿತ್ಚ ಮತ್ತು ಶಿವ ನ ಪ್ರಮಾಣಾತೀತ ವ್ಯಕ್ತಿತ್ವ. ಈ ವ್ಯಕ್ತಿತ್ವಗಳನ್ನು ಆ ಪಾತ್ರಗಳ ಘಟನೆಗಳ ಮೂಲಕವೇ ನಿರೂಪಿಸುತ್ತಾರೆ. ರಾಮನೊಳಗೆ ಕೃಷ್ಣ ನ ಸಮೃದ್ಧ ವ್ಯಕ್ತಿತ್ವವೂ, ಕೃಷ್ಣನೊಳಗೆ ರಾಮನ ಸೀಮಿತತೆಯೂ ಬಂದುಬಿಡುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಸಂದರ್ಶನಕ್ಕೆಂದು ಚೆನ್ನೈ ತಲುಪಿದ ಕುತೂಹಲಕಾರಿ ಅನುಭವ…: ಬಸವನಗೌಡ ಹೆಬ್ಬಳಗೆರೆ ಸರಣಿ

ಹಣ ಅಡ್ಜಸ್ಟ್ ಆದರೆ ಮಾತ್ರ ಹೋದರಾಯ್ತು ಎಂದುಕೊಂಡು ಮಾಡೋ ಪ್ರಯತ್ನವನ್ನೆಲ್ಲ ಮಾಡಿ ಸುಮ್ಮನಾದೆ. ಇನ್ನೇನು ಇವತ್ತು ರಾತ್ರಿ ಚೆನ್ನೈಗೆ ಹೋಗಬೇಕು ಎಂದು ಅವರು ಕೊಟ್ಟಿದ್ದ ಸಂದರ್ಶನದ ದಿನ ನಾಳೆಯೇ ಆಗಿತ್ತು ಎಂಬ ದಿನದವರೆಗೂ ಪ್ರಯತ್ನ ಮಾಡಿ ಸುಮ್ಮನಾಗಿದ್ದೆ. ಕಡೇ ದಿನ ಎಂದೂ ಕೇಳದ ನಮ್ಮ ಮನೆ ಓನರ್ ಅಂಕಲ್ ಬಳಿ ಕೇಳಿದೆ. ಅದಕ್ಕವರು ಒಂದೂ ಮಾತಾಡದೇ ತುಂಬಾ ಖುಷಿಯಿಂದಲೇ ಹಣ ಕೊಟ್ಟರಲ್ಲದೇ ಸಂದರ್ಶನಕ್ಕೆ ಹಾಜರಾಗುವ ಟಿಪ್ಸ್‌ಗಳನ್ನೂ ತಿಳಿಸಿದರು, ತುಂಬಾ ಖುಷಿಯಾಗಿ ನಾನು ಬೆಂಗಳೂರಿನ ರೈಲನ್ನು ಆ ದಿನ ಬೆಳಗ್ಗೆಯೇ ಹತ್ತಿ ಬೆಂಗಳೂರಿಗೆ ಸಂಜೆಯಷ್ಟರಲ್ಲಿ ಹೋಗಿ ತಲುಪಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೇಳನೆಯ ಕಂತು ನಿಮ್ಮ ಓದಿಗೆ

Read More

ಕಾರ್ಯಕ್ರಮ ನಮ್ಮದು, ಗೊಂದಲ ದೇವರದು!: ಎಚ್. ಗೋಪಾಲಕೃಷ್ಣ ಸರಣಿ

ಆಗ ಇನ್ನೂ ವಿಕಿಪೀಡಿಯ, ಗೂಗಲ್ ಮಾವ, ಜೆಮಿನಿ ಅತ್ತೆ, ಚಾಟ್ ಪಟ್ ಅಂಕಲ್ ಮುಂತಾದ AI ಗಳೇ ಆಗಲಿ ಉಳಿದ ಜ್ಞಾನಕೋಶಗಳು ಮೊದಲಾದವು ಹುಟ್ಟಿರಲಿಲ್ಲ. ಎನ್ಸೈಕ್ಲೋಪೀಡಿಯಾ ಆಫ್ ಬ್ರಿಟಾನಿಕಾ ಇತ್ತು, ಆದರೆ ಅದು ನನ್ನಂತಹವರ ಮನೆಯಲ್ಲಿ ಇರಲಿಲ್ಲ. ಅಷ್ಟು ದೊಡ್ಡ ದೊಡ್ಡ ಪುಸ್ತಕ ಇಟ್ಟುಕೊಳ್ಳುವಷ್ಟು ಜಾಗ ನನ್ನಂತಹವರ ಐದೂವರೆ ಚದರದ ಮನೇಲಿ ಇರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅಷ್ಟು ಪುಸ್ತಕ ಕೊಳ್ಳಬೇಕು ಅಂದರೆ ಎರಡು ಮೂರು ವರ್ಷದ ಸಂಬಳ ಅದಕ್ಕೇ ಆಗಿ ಬಿಡೋದು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೯ನೇ ಬರಹ ನಿಮ್ಮ ಓದಿಗೆ

Read More

ಸುಂದರ ಕಾಡಿನ ರೋಚಕ ಕಥೆಗಳು-೯: ರೂಪಾ ರವೀಂದ್ರ ಜೋಶಿ ಸರಣಿ

ಇನ್ನು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು, ಮರವನ್ನು ಗುಟ್ಟಾಗಿ ಕಡಿದು ಸಾಗಿಸುತ್ತಿದ್ದರು. ಅರಣ್ಯಾಧಿಕಾರಿಗಳ ಕಣ್ಣುತಪ್ಪಿಸಲು, ದಟ್ಟ ಕಾಡಿನ ನಡುವೆ, ರಾತ್ರಿಯ ಬೆಳದಿಂಗಳ ಬೆಳಕಲ್ಲೇ ಸ್ಥಳೀಯರ ಸಹಾಯದಿಂದ ಈ ಕೆಲಸ ಮುಗಿಸಿ, ಗಪ್ ಚಿಪ್ ಆಗಿ ದಿಮ್ಮಿ ಸಾಗಿಸಿ ಬಿಡುವ ನಿಪುಣರಿವರು. ಆಗೆಲ್ಲ ಹಳ್ಳಿಯಲ್ಲಿ ಕಾಲು ದಾರಿಗಳು ಮಾತ್ರ. ವಾಹನ ಸಂಚಾರಕ್ಕೆ ಅಲ್ಲೊಂದು ಇಲ್ಲೊಂದು ಮಣ್ಣು ರಸ್ತೆ. ಅದು ಬೇಸಿಗೆಗಷ್ಟೇ. ಮಳೆಗಾಲದಲ್ಲಿ ಆ ರಸ್ತೆಯಲ್ಲಿ ನಡೆದರೆ, ಮೊಣಕಾಲು ತನಕ ಹೂತು ಹೋಗುತ್ತಿತ್ತು. ಇನ್ನು ವಾಹನ ಸಂಚಾರ ನೆನೆಸುವುದೂ ಕಷ್ಟ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ