Advertisement

Category: ಸಾಹಿತ್ಯ

ನವೀನ್ ಮಧುಗಿರಿ ಬರೆದ ಕಥೆ “ಬೆಳಕು”

“ಇಷ್ಟೊತ್ತು ಗುಡುಗುತ್ತಿದ್ದ ಯಜಮಾನ ಈಗ ನಕ್ಕ. ‘ಎಲ್ಲಾ ನಂದೇ; ಇಲ್ಲಿರೋ ಕಾಡು, ಮರ, ಭೂಮಿ ಎಲ್ಲಾ ನಂದೇ..’ ಗಹಗಹಿಸಿ ಜೋರಾಗಿ ನಕ್ಕ. ಜೋರುಮಳೆ ಬಂದು ನಿಂತಂತೆ ಯಜಮಾನನ ನಗು ನಿಂತಿತು. ಐದಾರು ಬಾರಿ ಚಿಲುಮೆಯ ಕಿಡಿ ಕತ್ತಲಿನಲ್ಲಿ ಯಜಮಾನನ ಕೈ ಬಾಯಿಯ ಹಾದಿಯಲ್ಲಿ ಓಡಾಡಿತು. ಆ ಸಮಯ ಅಲ್ಲಿರುವ ಪ್ರತಿಯೊಬ್ಬರ ಉಸಿರಾಟದ ಶಬ್ದವು ಸ್ಪಷ್ಟವಾಗಿ ಕೇಳಿಸುವಷ್ಟು ನಿಶ್ಯಬ್ದ ಇತ್ತು. ಆ ನಿಶ್ಯಬ್ದವನ್ನು ಸೀಳಿ ಯಜಮಾನನ ಆಜ್ಞೆಯ ನುಡಿ ಬಂತು.”

Read More

ಮಂಜುಳ ಡಿ ಪುಸ್ತಕದ ಕುರಿತು ಎಂ.ಎನ್. ಸುಂದರ್ ರಾಜ್ ಲೇಖನ

“ಅಂಕಣ ಬರೆಯುವುದೆಂದರೆ, ಒಂದು ವಿಶಾಲಾರ್ಥವನ್ನು ನೀಡುವ ವಸ್ತುವನ್ನು ಕೆಲವೇ ಮಾತುಗಳಲ್ಲಿ ಹುದುಗಿಡುವಂತಹುದು. ಅಂದರೆ ಸಮುದ್ರವನ್ನು ಸಾಸಿವೆ ಕಾಳಲ್ಲಿ ತುಂಬಿದಂತೆ. ಏಕೆಂದರೆ ಒಂದೊಂದೂ ವಸ್ತುಗಳೂ ಸಹ ಕಾದಂಬರಿ ಬರೆಯುವಷ್ಟು ವಿಷಯಗಳನ್ನು ಹೊಂದಿರುತ್ತದೆ. ಉದಾಹರಣೆಗೆ ‘ಕಾಶ್ಮೀರದ ಕರಾಳತೆಯ ಹುದುಲಿನಲ್ಲಿ……’ ನಿಜಕ್ಕೂ ಇಂದಿನ ಕಾಶ್ಮೀರದ ಸ್ಥಿತಿಗೆ ಹಿಡಿದ ಕೈಗನ್ನಡಿ.”

Read More

ಓಬಿರಾಯನಕಾಲದ ಕಥಾಸರಣಿಯಲ್ಲಿ ಕುಕ್ಕೇಟಿ ಮಾಧವ ಗೌಡ ಬರೆದ ಕಥೆ

“ಅಜ್ಜ ಅಡ್ಕಾರಿಗೆ ಹೋದದ್ದು ಯಾಕೆ ಎಂದು ಅಮೇಲೆ ತಿಳಿಯಿತು. ಅವರು ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದರು. ಮರುದಿನ ಅಮ್ಮ ಅಜ್ಜನ ಸ್ವಚ್ಛ ಬಟ್ಟೆಗಳನ್ನು ಮಡಚಿ ತಂದು ಅಜ್ಜನಿಗೆ ಕೊಟ್ಟರು. ನಾನು ಕಿಸ್ತು ಕಟ್ಟಲು ಹೋಗುವ ನಮ್ಮ ಅಜ್ಜನ ಸಡಗರವನ್ನು ಗಮನಿಸುತ್ತಿದ್ದೆ. ಯಾವುದೋ ರಾಜಕಾರ್ಯಕ್ಕೆ ಹೋಗುವವರಂತೆ ಅಜ್ಜ ಸಂಭ್ರಮಿಸುತ್ತಿದ್ದರು. ಒಗೆದು ಶುಚಿಯಾಗಿದ್ದ ಮೊಣಕಾಲಿನ ಕೆಳಗೆ ಬರುವಂಥ ಮುಂಡು ಉಟ್ಟು”

Read More

ಸಾಹಿತ್ಯ ಸಮ್ಮೇಳನ ಮತ್ತು ಗೋಷ್ಠಿ: ಮಚ್ಚೇಂದ್ರ ಪಿ ಅಣಕಲ್ ಬರೆದ ಲಲಿತ ಪ್ರಬಂಧ

“‘ನನ್ ಹೆಸ್ರು ಕಾರ್ಡನ ಕವಿಗೊಷ್ಠಿಯಲ್ಲಿ ಕೊನೆಯದು’ ಅಂತ ಕಾರ್ಡಿನಲ್ಲಿ ಮುದ್ರಣಗೊಂಡಿತ್ತು. ಅದನ್ನು ಓದುತ್ತಾ ನಿರೂಪಣೆ ಮಾಡೊ ನಾಣಿಗೆ ‘ಅಣ್ಣಾ! ಇಲ್ಲಿ ಬಾ’ ಅಂತ ಮೆಲ್ಲಗೆ ಕರೆದು ಪರದಾ ಹಿಂದೆ ಯಾರಿಗೂ ಕಾಣದಂತೆ ಡಕ್ಕನೆ ಕಾಲ್ ಬಿದ್ದು “ಹ್ಯಾಂಗಾದ್ರು ಈ ಗೋಷ್ಠಿಯಿಂದ ನನ್ನ ಹೆಸ್ರು ಬೇಗ ಹೇಳಿ ಪಾರು ಮಾಡು ನಾಣಿ” ಅಂತ ಕೇಳ್ಕೊಂಡೆ.”

Read More

ಓ.ಎಲ್. ನಾಗಭೂಷಣಸ್ವಾಮಿ ಅನುವಾದಿಸಿದ ಒರ್ಹಾನ್ ಪಮುಕ್ ಕಾದಂಬರಿಯ ಆಯ್ದ ಭಾಗ

“ಜೂನ್ ತಿಂಗಳ ಮಧ್ಯಭಾಗದಲ್ಲಿ ಒಂದು ದಿನ ಪಕ್ಕದ ಜಮೀನಿಂದ ಜನ ಖುಷಿಯಾಗಿ ಕೂಗಾಡುವುದು, ಗುಂಡು ಹಾರಿಸುವುದು ಕೇಳಿಸಿತು. ಏನೆಂದು ನೋಡುವುದಕ್ಕೆ ಹೋದೆ. ಬಾವಿಯಲ್ಲಿ ನೀರು ಚಿಮ್ಮಿತ್ತು. ಆ ಒಳ್ಳೆಯ ಸುದ್ದಿ ಕೇಳಿದ ತಕ್ಷಣ ಜಮೀನಿನ ಯಜಮಾನ ಸಂಭ್ರಮಪಡುವುದಕ್ಕೆಂದು ರಯೀಸ್ ನಿಂದ ಬಂದಿದ್ದ. ಖುಷಿಯಲ್ಲಿ ಆಕಾಶಕ್ಕೆ ಗುಂಡು ಹಾರಿಸುತಿದ್ದ. ಗಾಳಿಯಲ್ಲಿ ಮದ್ದಿನ ಪುಡಿಯ ಘಾಟಿತ್ತು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ