Advertisement

Category: ಅಂಕಣ

ಸತ್ತವರೆಲ್ಲ ಮತ್ತೆ ಬಂದಾಗ: ಸುಧಾ ಆಡುಕಳ ಅಂಕಣ

ಅದು ಅಜ್ಜಿಗೆ ಮೀಸಲಿಡುವ ದಿನವಾಗಿತ್ತು. ಮಕ್ಕಳೆಲ್ಲರೂ ಒಟ್ಟಿಗೆ ಸೇರುವುದು ವಾಡಿಕೆಯಾಗಿತ್ತು. ಅಜ್ಜಿಗೆ ಪರಮ ಪ್ರಿಯಳಾಗಿದ್ದ ಕೊನೆಯ ಮಗಳು ಮಾತ್ರ ಗಂಡನ ಮನೆಯಿಂದ ಬಂದಿರಲಿಲ್ಲ. ಅಣ್ಣಂದಿರು ಒತ್ತಾಯ ಮಾಡಿ ಕರೆದಿದ್ದರೂ ಅವಳ ಗಂಡ ಅದೇನೋ ಹಳೆಯ ಮುನಿಸಿನಿಂದಾಗಿ ಹೆಂಡತಿಯನ್ನು ತವರಿಗೆ ಕಳಿಸಿರಲಿಲ್ಲ. ಅಕ್ಕಂದಿರೆಲ್ಲ ಅವಳನ್ನು ನೆನೆಸಿಕೊಂಡು ಕಣ್ಣೀರಿಡುತ್ತಲೇ ಅಮ್ಮನಿಗೆ ಮೀಸಲಿಟ್ಟಿದ್ದರು. ಆ ರಾತ್ರಿ ಎಲ್ಲರೂ ಮಲಗಿದಾಗ ನಡುರಾತ್ರಿಯಲಿ ನೀಲಿಯ ದೊಡ್ಡಮ್ಮ ಇದ್ದಕ್ಕಿದ್ದಂತೆ ಕುಣಿದು ಕುಪ್ಪಳಿಸಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಎಂ.ವಿ. ಶಶಿಭೂಷಣ ರಾಜು ಹೊಸ ಅಂಕಣ “ಅನೇಕ ಅಮೆರಿಕಾ” ಆರಂಭ

ಮೊದಮೊದಲು ಬಂದ ಜನ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಓದಲು ಬಂದವರಿಗಂತೂ ರಾತ್ರಿ ಯಾವುದು, ಹಗಲು ಯಾವುದು ಎನ್ನುವುದು ಗೊತ್ತಾಗುವುದಿಲ್ಲ. ಮುಂಜಾನೆ ಹೊರ ಹೊರಟರೆ ಮನೆಗೆ ಬರುವುದು ಮಧ್ಯರಾತ್ರಿ ನಂತರವೇ. ಯಾವುದಾದರೂ ಕೆಫೆಯಲ್ಲೋ, ಡೈನರ್‌ಗಳಲ್ಲೋ ಕೆಲಸಮಾಡಬೇಕಾಗುತ್ತದೆ.
ವಿದೇಶಿ ನೆಲದಲ್ಲಿ ವಲಸಿಗರ ಬದುಕಿನ ಹಾಡು-ಪಾಡು ಕುರಿತ ಎಂ.ವಿ. ಶಶಿಭೂಷಣ ರಾಜು ಹೊಸ ಅಂಕಣ “ಅನೇಕ ಅಮೆರಿಕಾ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಅವನ ಸಂಗೀತದ ಸರಪಳಿಯಲ್ಲಿ…: ಆಶಾ ಜಗದೀಶ್ ಅಂಕಣ

ಒಂದು ತಾನ್ ನಿಂದ ಮತ್ತೊಂದಕ್ಕೆ ಸಂಚರಿಸುವಾಗ ಒಂದು ಸೆಕೆಂಡ್ ಮಾತ್ರದಲ್ಲಿ ನಿನ್ನ ಧ್ವನಿ ಹೊರಳುತ್ತದಲ್ಲ ಆ ನಾದ ಅದೆಷ್ಟು ಚಂದ… ಅದಕ್ಕೆ ಮುಲಾಮಿನ ಗುಣವಿದೆ. ಕ್ಷಣ ಮಾತ್ರದಲ್ಲಿ ಭಾರವಾದ ಎದೆಯನ್ನು ಹಾರಿ ನಲಿಯುವಂತೆ ಮಾಡಿಬಿಡಬಲ್ಲ ಶಕ್ತಿಯಿದೆ ಅಂತಲೇ ನನಗೆ ಬಲವಾಗಿ ಅನಿಸುತ್ತದೆ. ಆ ಕ್ಷಣ ನಾನು ಯಾರು ಎನ್ನುವುದು ನನಗೆ ಮರೆತು ಹೋಗುತ್ತದೆ. ಯಾವ ವಿಳಾಸ, ನಾಮಧೇಯವಿರದ ಶಕ್ತಿಯ ಸಣ್ಣದೊಂದು ಚೂರಿನಂತೆ ಹೊಳೆಯುತ್ತಿದ್ದೇನೆ ಎಂದು ಭಾಸವಾಗುತ್ತದೆ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಮಹಿಳಾ ಸಾಮರ್ಥ್ಯ ಮತ್ತು ಸಬಲೀಕರಣ…: ವಿನತೆ ಶರ್ಮ ಅಂಕಣ

ಜಸಿಂಡಾ ಆರ್ಡೆರ್ನ್ ತಮ್ಮ ಹೈಸ್ಕೂಲ್ ದಿನಗಳಿಂದ ಸ್ವಂತ ಸಾಮರ್ಥ್ಯ, ಬುದ್ಧಿವಂತಿಕೆ, ಕಠಿಣ ಶ್ರಮದಿಂದ ರಾಜಕೀಯ ವಲಯದಲ್ಲಿ ಬೆಳೆದವರು. ಮಗುವಿಗೆ ಜನ್ಮ ಕೊಟ್ಟು, ಬಾಣಂತಿಯಾಗಿದ್ದೂ ತಮ್ಮ ಕೆಲಸವನ್ನು ಶಿಸ್ತಿನಿಂದ ನಿರ್ವಹಿಸಿದ ಹೆಮ್ಮೆಯ ಹೆಣ್ಣು ಇವರು. ಹಾಗೆ ನೋಡಿದರೆ ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಮಹಿಳಾ ರಾಜಕೀಯ ನಾಯಕರು, ಪ್ರಧಾನಿಗಳು, ಅಧ್ಯಕ್ಷರು, ಚಾನ್ಸಲರ್ ಮುಂತಾದವರ ಉದಾಹರಣೆಗಳು ಇವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕೆಂಪಾದವೋ ಎಲ್ಲ ಕೆಂಪಾದವೋ: ಸುಧಾ ಆಡುಕಳ ಅಂಕಣ

ಆ ದಿನವೂ ಮಳೆಗೆ ಇನಿತೂ ಬಿಡುವಿಲ್ಲ. ಸಂಜೆಯಾಗುತ್ತಲೇ ರಾತ್ರಿಯಿಳಿದಂತ ಕತ್ತಲು. ನೀಲಿಯ ಅಮ್ಮ ಅಂಗಳಕ್ಕೆ ಇಣುಕಿ ಕ್ಷಣಕ್ಷಣವೂ ನೀಲಿ ಬಂದಳೆ? ಎಂದು ನಿರುಕಿಸುತ್ತಾಳೆ. ಈ ಹುಡುಗಿಗೆ ಯಾಕಿಷ್ಟು ಶಾಲೆಯ ಹುಚ್ಚೋ ಎಂದು ಮನದಲ್ಲಿಯೇ ಶಪಿಸುತ್ತಾಳೆ. ಹೊಳೆಯಂತೂ ಹುಚ್ಚುಹಿಡಿದು ಹರಿಯುತ್ತಿದೆ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ನಾಲ್ಕನೆಯ ಕಂತಿನಲ್ಲಿ ನೀಲಿಯ ಓದುವ ಹುಚ್ಚಿನ ಕತೆ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ