Advertisement

Category: ದಿನದ ಪುಸ್ತಕ

ನಿಷೇಧಿತ ಗಿರಿ ನೆತ್ತಿಯಲ್ಲಿ

ಹೀಗೆ ಕಡುಹಿಂಸೆಯಲ್ಲೇ ಹದಿನೈದು ದಿನ ಕಳೆದ ಮೇಲೆ ಕೊನೆಗೊಂದು ದಿನ ಸ್ವತಃ ಮಾಂಟ್ಗೊಮರಿ ಸಾಹೇಬರು, `ಕಾರಕೋರಂ ಶ್ರೇಣಿಯ ಎರಡು ಶಿಖರಗಳ ಅನ್ವೇಷಣೆ ದೊಡ್ಡ ಸಾಧನೆ. ನಂಗಾ ಪರ್ವತದ ವಿವರಗಳನ್ನು ಕಲೆ ಹಾಕಿದ್ದೂ ಸಾರ್ಥಕವಾಯಿತು. ಕಾರಕೋರಂ ಶ್ರೇಣಿಯ ದ್ವಿತೀಯ ಶಿಖರ, ಪೀಕ್ ಹದಿನೈದನ್ನೂ ಮೀರಿಸುವಷ್ಟು ಎತ್ತರ ಇರುವಂತಿದೆ’ ಎಂದು ಹೆಮ್ಮೆಯಿಂದ ಹೇಳಿದ್ದರು. ಉಳಿದವರೂ ತಲೆಯಾಡಿಸಿ ಸಮ್ಮತಿಸಿದ್ದರು. ಅವರ ಸಂಭಾಷಣೆ ಕೇಳಿ, `ಕಾರಕೋರಂ ಕಾಶ್ಮೀರದ ಉತ್ತರದಲ್ಲಿರುವ ಪರ್ವತಶ್ರೇಣಿ ಎಂಬುದು ಯಾರಿಗೆ ಗೊತ್ತಿಲ್ಲ. ಅದರಲ್ಲಿರುವ ಎರಡು ಎತ್ತರದ ಶಿಖರಗಳನ್ನು ಇವರೇ ಶೋಧಿಸಿದರಂತೆ!
ಡಾ. ಗಜಾನನ ಶರ್ಮ ಹೊಸ ಕಾದಂಬರಿ “ಪ್ರಮೇಯ”ದ ಕೆಲವು ಪುಟಗಳು ನಿಮ್ಮ ಓದಿಗೆ

Read More

ಗಾಂಧೀಜಿ ಬದುಕಿನ ಹರಿವುಗಳ ಒಳಾರ್ಥವನ್ನು ತೆರೆದಿಟ್ಟ ಕೃತಿ

ಗಾಂಧೀಜಿಯವರ ಕುರಿತು ಆಕ್ಷೇಪಗಳು ಬಂದಾಗ ಇದರಲ್ಲಿ ಅವರ ನಡೆ ಆ ಕಾಲದಲ್ಲಿ ಎಷ್ಟು ಸೂಕ್ತವಾಗಿತ್ತು ಎನ್ನುವದನ್ನು ಇಲ್ಲಿ ವಿವರಿಸಲಾಗಿದೆ. ಖಿಲಾಪತ್ ಚಳುವಳಿಯನ್ನು ಗಾಂಧಿ ಸಂಪೂರ್ಣವಾಗಿ ಒಪ್ಪಿಲ್ಲ; ಆದರೆ ಆ ಧರ್ಮದ ಬಗೆಗೆ ಅವರಿಗಿರುವ ಆಳ ದೃಷ್ಟಿಕೋನದಿಂದ ಮುಸಲ್ಮಾನರ ಭಾವನೆಗಳನ್ನು ಗಾಂಧಿ ಅರ್ಥಮಾಡಿಕೊಂಡಿದ್ದರು ಎನ್ನುತ್ತಾರೆ. ಹಾಗೇ ನೋಡಿದರೆ ಖಿಲಾಪತ್ ಚಳುವಳಿಯನ್ನು ಗಾಂಧಿ ಬೆಂಬಲಿಸಿದ ಕಾರಣದಿಂದಲೇ ಗಾಂಧಿ ರಾಷ್ಟ್ರೀಯ ನಾಯಕರಾಗಿ ಹೊಮ್ಮಿದ್ದು ಮತ್ತು 1920ರ ನಾಗಪುರ ಅಧಿವೇಶನದ ನಂತರ ತೀವ್ರವಾದಿಗಳನ್ನು ಬದಿಗೆ ಸರಿಸಿ ಅನಭಿಷಕ್ತ ನಾಯಕರಾಗಿರುವುದು.
ರಾಮಚಂದ್ರ ಹಬ್ಬು ಅನುವಾದಿಸಿರುವ “ಮಹಾತ್ಮ ಗಾಂಧಿ ಜೀವನ ಚರಿತೆ” ಕೃತಿಯ ಕುರಿತು ನಾರಾಯಣ ಯಾಜಿ ವಿಶ್ಲೇಷಣೆ

Read More

ಹೃದಯದ ಕಲ್ಲು ಮತ್ತು ನದಿಯೊಂದು ನಿದ್ರಿಸಿದಾಗ

ನಿದ್ರಿಸುವ ನದಿಯೆಡೆಗೆ ಹೋಗುವವರ ಎದೆಯಲ್ಲಿ ಎಳ್ಳಷ್ಟೂ ಭಯ ಇರಬಾರದು. ಅಕಸ್ಮಾತ್ ನಿನ್ನ ಮನಸ್ಸಿನಲ್ಲಿ ಒಂದೇ ಒಂದು ಕ್ಷಣ ಭಯ ಹೊಕ್ಕರೆ ನೀನು ಸತ್ತಂತೆ ಸರಿ, ನಿನ್ನ ಆತ್ಮಕ್ಕೆ ಅವುಗಳನ್ನು ಎದುರಿಸಲು ಆಗುವುದಿಲ್ಲ. ನೀನು ಪಾಪದ ಕೆಲಸ ಮಾಡಿದ್ದರೆ ಆ ಆತ್ಮಗಳು ನಿನ್ನನ್ನು ಸುಲಭವಾಗಿ ಮುಗಿಸಿಬಿಡುತ್ತವೆ. ಭಯಾನಕ ಅಂತ್ಯ ನಿನ್ನದಾಗುತ್ತದೆ. ಶುದ್ಧ ಮನಸ್ಸು ಮತ್ತು ಒಳ್ಳೆಯ ಹೃದಯ ನಿನ್ನ ರಕ್ಷಣೆ, ನಿದ್ರಿಸುವ ನದಿಯೆಡೆಗೆ ಹೋಗುವಾಗ ಯಾರೊಡನೆಯೂ ದ್ವೇಷ ಹೊಂದಿರಬಾರದು. ಮನಸ್ಸಿನಲ್ಲಿ ಕೆಡುಕು, ದುಷ್ಟತನ ಇರಬಾರದು.
ರವಿಕುಮಾರ್ ಹಂಪಿ ಅನುವಾದಿತ “ನದಿಯೊಂದು ನಿದ್ರಿಸಿದಾಗ” ಕಾದಂಬರಿಯ ಕುರಿತು ಸುಮಿತ್‌ ಮೇತ್ರಿ ಬರಹ

Read More

ಕಂದಹಾರ್ ಏರ್‌ಬೇಸಿನ ಅಪಾಯಕಾರಿ ಉಪಕ್ಯಾಂಪುಗಳು

ಕಚೇರಿಗೆ ಬಂದಾಗ ಡಾಕ್ಟರ್ ಕಿರ್ಕಿಗೆ ಕರೆ ಬಂದು ಅಗತ್ಯ ವೈದ್ಯಕೀಯ ನೆರವಿಗಾಗಿ ಅವಘಡ ನಡೆದ ಜಾಗಕ್ಕೆ ಹೋದನೆಂದು ಗೊತ್ತಾಯ್ತು. ಇಂತಹ ಪ್ರಮುಖ ಅವಘಡಗಳಾದಾಗ ಕ್ಯಾಂಪಿನಲ್ಲಿನ ಇಂತಹ ಖಾಸಗಿ ವೈದ್ಯರನ್ನು ಘಟನೆಯ ಜಾಗಕ್ಕೆ ನೆರವಿಗಾಗಿ ಕರೆಸಲಾಗುತ್ತದೆ. ನಾನು ನೋಡಿದ ವಿವರಗಳನ್ನು ಆಂಟೋನಿಯೋ ಮತ್ತು ಅಲ್ಲಿದ್ದ ಇತರೆ ಆಲ್ಬೇನಿಯನ್ ಜನರಿಗೆ ವಿವರಿಸಿದೆ. ಎಲ್ಲರೂ ಆಘಾತಕ್ಕೊಳಗಾದಂತೆ ದೊಡ್ಡ ನಿಟ್ಟುಸಿರುಬಿಟ್ಟರು. ಆಂಟೋನಿಯೋ ಮಾತ್ರ ತುಂಬಾ ಕಂಗಾಲಾದವನಂತೆ ತಲೆಮೇಲೆ ಕೈಹೊತ್ತು ಏನೇನೋ ಮನಸ್ಸಿಗೆ ಬಂದಂತೆ ಅವನ ಭಾಷೆಯಲ್ಲಿ ಗೊಣಗಲು ಶುರುಮಾಡಿದ.
ಮಂಜುನಾಥ್‌ ಕುಣಿಗಲ್‌ ಬರೆದ “ಕುಣಿಗಲ್‌ ಟು ಕಂದಹಾರ್” ಕೃತಿಯಿಂದ ಆಯ್ದ ಲೇಖನ ನಿಮ್ಮ ಓದಿಗೆ

Read More

‘ಒಳ್ಳೆಯ ದೆವ್ವ’ ಕಾದಂಬರಿ: ಮಕ್ಕಳ ಮನಸ್ಸಿನ ವೈದ್ಯ

ಮಂಜುನಾಥ ಶಾಲೆಗೆ ಹೋಗುವಾಗ ದಿನಾಲೂ ಅವನ ತಾಯಿಯನ್ನು ತಬ್ಬಿ ಮುದ್ದಾಡುತ್ತಿದ್ದ. ಅಷ್ಟೊಂದು ಪ್ರೀತಿ ವಾತ್ಸಲ್ಯ ಇಬ್ಬರಲ್ಲೂ ತುಂಬಿತ್ತು. ‘ತಾಯಿ ವಾತ್ಸಲ್ಯ ಮತ್ತು ಮಗನ ಮಂದಹಾಸ ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ’ ಎನ್ನುವ ಶಿರ್ಷಿಕೆಯೊಂದಿಗೆ ಅದು ಪತ್ರಿಕೆಯ ಮುಖಪುಟದಲ್ಲಿ ಅಚ್ಚಾಗಿತ್ತು. ಅಷ್ಟೊಂದು ಅಮೋಘವಾದ ಪ್ರೀತಿ ಇವರದಾಗಿತ್ತು. ಅದನ್ನು ನೋಡಿ ಮಗ ಫೋಟೋದಂತೆ ಕಟ್ಟು ಹಾಕಿಸಲು ತಾಯಿಗೆ ಹೇಳಿದ. ಬಾಲ್ಯದ ಆ ಅಮೂಲ್ಯ ನೆನಪನ್ನು ಗೆಳೆಯರಾದ ಪಲ್ಲವಿ, ಪವನ, ಆಕಾಶ ನೆನಪಿಸಿಕೊಳ್ಳುತ್ತಾರೆ.
ಡಾ. ಬಸು ಬೇವಿನಗಿಡದ ಬರೆದ “ಒಳ್ಳೆಯ ದೆವ್ವ” ಮಕ್ಕಳ ಕಾದಂಬರಿಯ ಕುರಿತು ನಾಗರಾಜ ಎಂ ಹುಡೇದ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ