Advertisement

Category: ದಿನದ ಪುಸ್ತಕ

ನೀರ ಮೇಲಣ ಗುಳ್ಳೆ-ಡಾಟರ್ ಆಫ್ ಪರ್ಷಿಯ: ದೇವಿಕಾ ನಾಗೇಶ್ ಬರಹ

ಈಕೆ ತನ್ನ ನೆಲದ ಸ್ಥಿತಿವಂತರು ಇಲ್ಲದವರ ಜೀವನ ಮಟ್ಟ ಸುಧಾರಣೆಗೆ ಕೈಜೋಡಿಸಿದರೆ ಸಾಮಾಜಿಕ, ರಾಜಕೀಯ, ಆಡಳಿತಾತ್ಮಕ ಬದಲಾವಣೆಗಳನ್ನು ತರಲು ಸಾಧ್ಯವಿದೆ… ಎನ್ನುವ ನಂಬಿಕೆ ಇದ್ದವರಾಗಿದ್ದಳು. ಈ ಹಿನ್ನೆಲೆಯಲ್ಲಿ ಅದ್ಭುತ ಯೋಜನೆಗಳನ್ನು ಹಾಕಿಕೊಂಡಿದ್ದಳು.. ಆಗ ಸ್ಪಂದಿಸಿದ ಹಲವರು ಈ ಸಾಧ್ಯತೆಯ ಪರಿಧಿಗಳನ್ನು ವಿಸ್ತರಿಸಿಕೊಂಡು ಆ ದೆಸೆಯಲ್ಲಿ ಸಕ್ರಿಯವಾದರು… ಇವಳ ಯೋಜನೆಗೆ ಕೈಜೋಡಿಸಿದರು.
ಸಟ್ಟರೆಹ್ ಫಾರ್ಮನ್ ಫರ್ಮ ಆತ್ಮಕಥೆ “ಡಾಟರ್ ಆಫ್ ಪರ್ಷಿಯಾ” ಕುರಿತು ದೇವಿಕಾ ನಾಗೇಶ್‌ ಬರಹ

Read More

ಗೃಹ ತಪಸ್ವಿನಿಯ ಮೌನದ ಮಾತು: “ಊರ್ಮಿಳಾ” ಕಾದಂಬರಿಯ ಕುರಿತು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಬರಹ

ನಿದ್ರೆಯನ್ನು ಯಾರಾದರು ಸ್ವಿಕರಿಸಿದರೆ ಮಾತ್ರ ನಾನು ಒಪ್ಪುವೆ ಎಂದಾಗ ಲಕ್ಷ್ಮಣ ನನ್ನ ನೆನಪಲ್ಲೆ ವಿರಹದಲ್ಲಿರುವೆ ಪತ್ನಿ ಊರ್ಮಿಳೆಗೆ ನನ್ನ ಪರವಾದ ನಿದ್ರೆ ಕರುಣಿಸು. ವನವಾಸದ ಅವಧಿ ಮುಗಿಯುವರೆಗೂ ಎಂದಾಗ ನಿದ್ರಾ ದೇವತೆ ಹಾಗೆ ಆಗಲಿ ತಥಾಸ್ತು ಎಂದು ಊರ್ಮಿಳೆ ಬಳಿ ಬಂದ ದೇವಿ ಊರ್ಮಿಳೆ ನಿನ್ನ ಪತಿ ನಿನಗೆ ಅವನ ಪರವಾದ ನಿದ್ರೆಯನ್ನು ಸ್ವಿಕರಿಸಲು ಹೇಳಿರುವನು.
ವಿಜಯಾ ವಿಷ್ಣುಭಟ್ ಬರೆದ “ಊರ್ಮಿಳಾ” ಕಾದಂಬರಿಯ ಕುರಿತು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ್ ಬರಹ

Read More

ಕರ್ಮನಿಷ್ಟೆಯಲ್ಲಿ ಜಯಕಂಡವನ ಕಥನ: ನಾರಾಯಣ ಯಾಜಿ ಬರಹ

ಮೊದಲು ಪ್ರಥಮ ಪುರುಷದಲ್ಲಿ ಪ್ರಾರಂಭಮಾಡಿದ ಹೆಗಡೆಯವರು ಇದ್ದಕ್ಕಿದ್ದಂತೆ ಅದನ್ನು ತೃತೀಯ ಪುರುಷದಲ್ಲಿ ಬರೆಯಲು ಪ್ರಾರಂಭಿಸುವುದು ಕುತೂಹಲಕಾರಿ. ಶೀರ್ಷಿಕೆಯಲ್ಲಿ ಹೇಳಿರುವಂತೆ ಇದು ಜಯರಾಮ ಹೆಗಡೆಯ ಜೀವನಕಥನ ಎನ್ನುವಾಗ ತನ್ನನ್ನು ತಾನು ಹೊರಗಡೆ ನಿಂತು ‘ಜಯರಾಮ’ ಎನ್ನುವ ಮೂಲಕ ಕಥನವನ್ನು ಹೇಳುವಾಗ ಮನಸ್ಸಿನ ಅನೇಕ ವಿಷಯಗಳನ್ನು ತೆರೆದಿಡಬಹುದು ಎನ್ನುವುದು ಅವರ ಅನಿಸಿಕೆಯಾಗಿರಬಹುದು. ಅದೂ ಅಲ್ಲದೇ ಲೇಖನನ್ನೂ ಸಹ ವಿಮರ್ಶೆಗೊಳಿಸಲು ಈ ರೀತಿಯ ಬರಹದಿಂದ ಸಾಧ್ಯ.
ಜಯರಾಮ ಹೆಗಡೆ ಜೀವನ ಕಥನ ‘ಬೀದಿಯ ಬದುಕು’ ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

Read More

ವಿಷಮಯ ವಿಶ್ವದ ವಿಷಾದ ಗಾಥೆ: ನಾಗೇಶ್‌ ಹೆಗಡೆ ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ತನ್ನ ಮಕ್ಕಳಿಗಾಗಿ ಆಸ್ತಿ, ಐಶ್ವರ್ಯ ಸಂಪತ್ತುಗಳನ್ನೆಲ್ಲ ಮಾಡುತ್ತಾನೆ. ಆದರೆ ಪ್ರಕೃತಿ ಮಾನವನಿಗೆ ಕೊಟ್ಟ ನಿಸರ್ಗದತ್ತವಾದ ಸಂಪತ್ತನ್ನೆಲ್ಲ ಲೂಟಿ ಮಾಡುತ್ತಿದ್ದಾನೆ. ನಾವು ಪ್ರಕೃತಿಗೆ ಕೊಡಬೇಕಾದ ಗೌರವವನ್ನು ಕೊಡದೆ ಅವಿಧೇಯತೆಯಿಂದ ನಡೆಸಿಕೊಳ್ಳುತ್ತಾ ಬಂದಿದ್ದೇವೆ. ಪ್ರಕೃತಿಯ ಮುನಿಸನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೇ, ಅದು ಸಾಧ್ಯವೇ? ಪ್ರಕೃತಿಯ ವಿರುದ್ಧ ಮನುಷ್ಯ ಗೆದ್ದಿದ್ದೇ ಆದರೆ ಮುಂದೆ ಅವನಿಗೆ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಚಿಂತಕ ಯೂಜಿನ್ ಶುಮಾಕರ್‌ರ ಮಾತನ್ನು ಲೇಖಕರು ಉಲ್ಲೇಖಿಸುತ್ತಾರೆ.
ನಾಗೇಶ್‌ ಹೆಗಡೆ ಬರೆದ ‘ಪರಿಸರದ ಮಹಾ ದುರಂತಗಳು’ ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ

Read More

‘ಸೀತೆ ಹೂ’ ಅರಳುವ ಸಮಯ…: ಶಾಂತಾ ಜಯಾನಂದ್ ಕವನ ಸಂಕಲನಕ್ಕೆ ಎಚ್.ಆರ್.‌ ಸುಜಾತಾ ಮುನ್ನುಡಿ

ನಿಸರ್ಗ ಪ್ರೇಮ, ಸಂಸಾರ ಹೊಂದಾಣಿಕೆ, ಸಾಮಾಜಿಕ ನಡವಳಿಕೆ, ಸಾಮಾಜಿಕ ನ್ಯಾಯ, ಹೆಣ್ಣಿನ ಶೋಷಣೆ, ಎಲ್ಲವನ್ನೂ ಒರೆಗೆ ಹಚ್ಚುವ ಸಾಮರ್ಥ್ಯ ಶಾಂತಾ ಜಯಾನಂದರ ಕವನಗಳಲ್ಲಿ ಕಾಣಸಿಗುತ್ತವೆ. ರೂಪದರ್ಶಿ, ಕುಂಬಳ ಬಳ್ಳಿಯ ಹೂವು, ಸೀತೆಹೂ, ಸೀರೆ ಮಾರುವ ಹುಡುಗ, ವಿಮಾನ ನಿಲ್ದಾಣ, ಬುದ್ಧ, ನೀಲಿ ಕುರಿಂಜಿ, ಪಯಣ, ಸಾಲು ಮರದ ತಿಮ್ಮಕ್ಕ, ಪಂಚ ಪತಿವ್ರತೆಯರು, ಮುಂತಾದ ಕವನಗಳು ಜಗತ್ತಿನ ಚಲನೆಯನ್ನೂ , ಅದರಲ್ಲಿ ಉಳಿಯುವ ನೆನಪನ್ನು, ತಾತ್ವಿಕ ಧೋರಣೆಯನ್ನು ತೆರೆದು ತೋರುತ್ತವೆ.
ಶಾಂತಾ ಜಯಾನಂದ್ ಕವನ ಸಂಕಲನ “ಸೀತೆ ಹೂ” ಕೃತಿಗೆ ಎಚ್.ಆರ್.‌ ಸುಜಾತಾ ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ