Advertisement

Category: ಸಂಪಿಗೆ ಸ್ಪೆಷಲ್

ಊರು ಕೇರಿ ಬಿಟ್ಟು ಬಂದು…: ಶುಭಶ್ರೀ ಭಟ್ಟ ಬರಹ

ತುಸುವೂ ಪರಿಚಯವೇ ಇಲ್ಲದ ಹೊಸ ಬೀದಿಯ ಅಪರಿಚಿತ ಸದ್ದಿಗೆ, ಆ ರಾತ್ರಿಯ ನೀರವತೆಗೆ, ಪರಿಮಳವಿಲ್ಲದ ಹಗಲಿಗೆ, ನಮ್ಮವರೇ ಕಾಣಿಸದ ಆಗಂತುಕ ರಸ್ತೆಯ ಚಲನೆಗೆ ವಿನಾಕಾರಣ ನಿಟ್ಟುಸಿರು ಉಮ್ಮಳಿಸಿ ಬರುತ್ತಿತ್ತು. ಅಡುಗೆ ಮನೆಯ ಬಿಡುವಿಲ್ಲದ ಕೆಲಸ, ಮಾಡಲೇ ಬೇಕಾದ ಕೆಲವು ಮನೆ ಕೆಲಸ, ಆಫೀಸಿನ ಹೊಸ ಪ್ರಾಜೆಕ್ಟಿನ ಶೆಡ್ಯೂಲ್, ಮಗನನ್ನು ಹೊಸ ಶಾಲೆಗೆ ರೂಢಿ ಮಾಡಿಸಬೇಕಾದ ಅಗತ್ಯ, ಬಿಡಲಾರದ ಬರವಣಿಗೆ-ಓದು ಹೀಗೆ ದಿನದ ಅರೆ ಕ್ಷಣವನ್ನೂ ವ್ಯಯಿಸದೆ ಎಲ್ಲವನ್ನೂ ನಿಭಾಯಿಸುತ್ತಾ ದಿನ ಕಳೆಯುತ್ತಿತ್ತು. ಆದರೂ ಕೆಲವೊಮ್ಮೆ ಸಂಜೆಯಾಗುವಷ್ಟರಲ್ಲಿ ಖಾಲಿತನ ಆವರಿಸಿಕೊಳ್ಳುತ್ತಿತ್ತು.
ಮಹಾನಗರದ ಭಾಗವಾಗಿ ವಾಸಿಸುವ ಅನುಭವದ ಕುರಿತು ಶುಭಶ್ರೀ ಭಟ್ಟ ಬರಹ ನಿಮ್ಮ ಓದಿಗೆ

Read More

ಹುಬ್ಬಳ್ಳಿಗರ ಇಂಗ್ಲೀಷ್ ವ್ಯಾಮೋಹ: ರೂಪಾ ಜೋಶಿ ಬರೆದ ಲಲಿತ ಪ್ರಬಂಧ

ಇಲ್ಲಿಯ ಭಾಷೆಯಲ್ಲಿ ಎಲ್ಲರಿಗೂ “ರೀ”…. ಎಂಬ ಅಕ್ಷರ ಹಚ್ಚಿಯೇ ಮಾತಾಡುವ ರೂಢಿಯಿದೆ. ಅಪ್ಪಾರು, ಅವ್ವಾರು, ಅಕ್ಕಾರು, ಮಾಮಾರು, ಅಣ್ಣಾರು, ಅಜ್ಜಾರು ಹೀಗೇ. ಎಲ್ಲರನ್ನೂ ಬಹುವಚನದಲ್ಲೇ ಹೆಸರಿಸುವ ಈ ಪದ್ಧತಿ ನಿಜಕ್ಕೂ ಒಳ್ಳೆಯದೇ. ಅದೇ ಕಾರಣಕ್ಕೆ ಆಂಗ್ಲ ಪದ ಬಳಕೆ ಮಾಡಿದಾಗಲೂ ಅವರು ಅದಕ್ಕೆ ಕನ್ನಡದ ‘ರೀ’ ಮತ್ತೂ ‘ರು’ ಪದ ಹಚ್ಚಿ, ” ಮೇಡಮ್ರಿ, ಸರ್ರೀ, ಮಮ್ಮೀರೀ…. ಡ್ಯಾಡಿರೀ, ಅಜ್ಜಾರ್ರೀ, ಅಂಕಲ್ರೀ ಅಂತ ರೂಪಾಂತರಿಸಿ, ಅದು ನಮ್ಮ ಕನ್ನಡದ್ದೇ ಅನ್ನುವಷ್ಟು ಸಲೀಸಾಗಿ ಬಳಸುವುದನ್ನು ನೋಡಿ, ನನಗೆ ಮೊದ ಮೊದಲು ತುಂಬಾ ವಿಸ್ಮಯವೆನ್ನಿಸುತ್ತಿತ್ತು.
ರೂಪಾ ರವೀಂದ್ರ ಜೋಷಿ ಬರೆದ ಪ್ರಬಂಧ

Read More

ಪಿತೃಪ್ರಧಾನತ್ವದ ಗೋಚರ-ಅಗೋಚರ ಹೊರೆಗಳು: ನಮ್ರತಾ ಪೊದ್ದಾರ್ ಬರಹ

ಪಿತೃಪ್ರಧಾನ ವ್ಯವಸ್ಥೆಯಿಂದ ಮಹಿಳೆಯರಿಗೆ ಹಾನಿಯಾಗುವಂತೆಯೇ ಪುರುಷರೂ ಇದರ ಹೊರೆಯನ್ನು ಅನುಭವಿಸುತ್ತಾರೆ. ಇಂದಿಗೂ ಕೂಡ ಹುಡುಗರು ಅಥವಾ ಪುರುಷರೆಂದರೆ ಭಾವನಾತ್ಮಕವಾಗಿ ಗಟ್ಟಿಯಾಗಿರಬೇಕು; ಭಾವನಾಜೀವಿಯಾಗುವುದು ಅಥವಾ ಬಹಿರಂಗವಾಗಿ ಅಳುವುದು ಇವೆಲ್ಲಾ ದೌರ್ಬಲ್ಯದ ಲಕ್ಷಣಗಳು ಎಂದೇ ಭಾವಿಸಲಾಗುತ್ತದೆ. ಇಂದು ಅನೇಕ ಹುಡುಗರಿಗೆ ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಹುಡುಗ ಎಂದರೆ ಅಷ್ಟೇ ದುಡಿಯಬೇಕು; ಇಷ್ಟೇ ದುಡಿಯಬೇಕು ಎನ್ನುವ ಅವಾಸ್ತವಿಕ ನಿರೀಕ್ಷೆಗಳನ್ನು ಪೋಷಿಸಿ ಮದುವೆಯನ್ನೇ ವ್ಯಾಪಾರದ ಸರಕನ್ನಾಗಿ ಪರಿವರ್ತಿಸಿರುವುದು ಪಿತೃಪ್ರಧಾನ ವ್ಯವಸ್ಥೆಯ ಚಿಂತನೆಯೇ!
ಮಹಿಳೆ ಮತ್ತು ಪುರುಷರ ಮೇಲಾಗುವ ಪಿತೃಪ್ರಧಾನ ವ್ಯವಸ್ಥೆಯ ಹೊರೆಗಳ ಕುರಿತು ನಮ್ರತಾ ಪೊದ್ದಾರ್‌ ಬರಹ ನಿಮ್ಮ ಓದಿಗೆ

Read More

ಯೇಸುವಿನ ಪ್ರೀತಿ ಔದಾರ್ಯಕ್ಕೆ ಮಿಡಿದ ಕಾವ್ಯಲೋಕ: ರಾಜೇಂದ್ರ ಕುಮಾರ್ ಕೆ ಮುದ್ನಾಳ್ ಬರಹ

ವಾಕ್ಯವೇ ದೇವರು ಎನ್ನುವ ಕ್ರಿಸ್ತನ ಅನುಯಾಯಿಗಳು ವಾಕ್ಯದ ಮುಖಾಂತರ ನಡೆಯುತ್ತೇವೆ ಎಂಬ ಭ್ರಮೆಯಲ್ಲಿ ಇರುತ್ತಾರೆ ಅದು ಅವರ ಅರಿವಿಗೆ ಬರುವಷ್ಟರಲ್ಲಿ ಪಾಪದ ಕೊಡ ತುಂಬುತ್ತಲಿರುತ್ತದೆ. ಅಂದು ಏಸುವನ್ನು ದೈಹಿಕವಾಗಿ ಶಿಲುಬೆಗೆ ಏರಿಸಿದರೆ, ಇಂದಿನ ಅನುಯಾಯಿಗಳೆಂಬ ಅಂಧ ಭಕ್ತರ ದಂಡು ಮಾನಸಿಕವಾಗಿ ಯೇಸುವನ್ನು ಶಿಲುಬೆಗೇರಿಸಿದ್ದಾರೆ ಎಂಬ ಭಾವ ಕವಿತೆಯದ್ದಾಗಿದೆ. ವಚನಕಾರರು ಅಂತರಂಗ ಶುದ್ದಿ ಬಹಿರಂಗ ಶುದ್ದಿಯನ್ನು ಇಲ್ಲಿ ವಾಕ್ಯದ ಮೂಲಕ ನೆನಪಿಸಿಕೊಳ್ಳಬಹುದು.
ಕನ್ನಡ ಸಾಹಿತ್ಯದಲ್ಲಿ ಏಸು ಕ್ರಿಸ್ತನ ಬದುಕಿನ ಕುರಿತು ರಚಿತವಾದ ಕವಿತೆಗಳ ಕುರಿತು ಡಾ. ರಾಜೇಂದ್ರ ಕುಮಾರ್ ಕೆ ಮುದ್ನಾಳ್ ಬರಹ ನಿಮ್ಮ ಓದಿಗೆ

Read More

ಕನ್ನಡವೆಂಬ ಮರೆಗುಳಿ ಮನಸು!: ದರ್ಶನ್‌ ಜಯಣ್ಣ ಬರಹ

ಮಧ್ಯ ಪ್ರದೇಶದಲ್ಲಿನ ಕೆಲವು ಬುಡಕಟ್ಟುಗಳು ಕನ್ನಡಕ್ಕೆ ಬಲು ಹತ್ತಿರದ ಭಾಷೆಗಳನ್ನು ಮಾತನಾಡುತ್ತಾರೆ. ಇತ್ತೀಚೆಗೆ ಅದರ ಮೂಲ ಕರ್ನಾಟಕ ಮತ್ತು ಅವರೆಲ್ಲಾ ಎಲ್ಲೆಡೆ ಹಬ್ಬಿದ್ದ ನಮ್ಮ ಸಾಮ್ರಾಜ್ಯಗಳ ಜೀವಂತ ಮನುಷ್ಯ ಉಳಿಕೆಗಳು ಎಂಬುದು ಕಂಡು ಬಂದಿದೆ. ಮಹಾರಾಷ್ಟ್ರದ ಮರಾಠಿಯ ಕೊಂಕಣಿಯ ಬೆಳವಣಿಗೆಯಲ್ಲಿ ಕನ್ನಡದ ಭಾಷೆಗಳ ಕೊಡುಗೆಯಿದೆ, ತೆಲುಗಿಗೆ ತಮಿಳಿಗೆ ಎಷ್ಟೋ ಕೊಡು-ಕೊಳ್ಳುವ ಪ್ರಕ್ರಿಯೆಗಳಾಗಿವೆ. ಅದು ನಾವು ಉಪಯೋಗಿಸುವ ಎಷ್ಟೋ ಪದಗಳಲ್ಲಿ, ಅಕ್ಷರಗಳಲ್ಲಿ ತೋರುತ್ತದೆ.
ಕನ್ನಡ ಭಾಷೆ ಮತ್ತು ಅದರ ಬಳಕೆಯ ಕುರಿತು ದರ್ಶನ್‌ ಜಯಣ್ಣ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ