Advertisement

Category: ಸರಣಿ

ಸಾಗರದ ಸದ್ದೂ, ಮೌನ ತೀರದ ಕಥೆಯೂ…: ರಾಮ್ ಪ್ರಕಾಶ್ ರೈ ಕೆ. ಸರಣಿ

ಇಲ್ಲಿನ ಐದು ಪಾತ್ರಗಳು ಪಂಚಭೂತಗಳ ಸಂಕೇತ. ಸಿಡಿಯುವ ರಿಚ್ಚಿ ಬೆಂಕಿಯಾದರೆ, ಮೌನ ಧ್ಯಾನಿ ಮುನ್ನಾ ಗಾಳಿ, ಅಲೆಮಾರಿಯಂತೆ ಸಾಗುವ ರಾಘು ನೀರು, ಸಹನಾಮೂರ್ತಿ ರತ್ನಕ್ಕ ಭೂಮಿ, ಬಾಲು ಆಗಸ. ಇದನ್ನು ಹೊರತುಪಡಿಸಿದರೆ, ಚಿತ್ರದ ಮಾತುಗಳು ಸೆರೆ ಆಗಿದ್ದು ಸಿಂಕ್ ಸೌಂಡ್ ತಂತ್ರಜ್ಞಾನದ ಮೂಲಕ. ಇದರಲ್ಲಿ, ದೃಶ್ಯದೊಂದಿಗೆ ಮಾತುಗಳ ದಾಖಲೀಕರಣ ಕೂಡ ನಡೆದು, ದೈನಂದಿನ ಬದುಕು ಕಣ್ಣ ಮುಂದೆ ಸಾಗುತ್ತಿರುವಂತೆ ಭಾಸವಾಗುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ”ಸಿನಿ ಪನೋರಮಾ” ಸರಣಿ

Read More

ಬೆಂಗಳೂರು ಮತ್ತು ನೀರು ಸರಬರಾಜು ವ್ಯವಸ್ಥೆ: ಎಚ್. ಗೋಪಾಲಕೃಷ್ಣ ಸರಣಿ

ಗಂಡಸರು ಆಗ ನೀರು ಹಿಡಿಯಲು ಕಬ್ಬಿಣದ ಬಕೆಟ್ ತರುತ್ತಿದ್ದರು. ಅದನ್ನು ಎತ್ತಿ ಒಯ್ಯುವುದು ಗಂಡಿಗೆ ಸುಲಭ. ಆದರೆ ಹೆಂಗಸರಿಗೆ ಇದು ಸರಿ ಬಾರದು. ಕಾರಣ ಬಕೆಟ್ ಕಾಲಿಗೆ ತೊಡರುವುದು. ನಮ್ಮ ಮನೆಗೆ ಬೀದಿ ನಲ್ಲಿಯಿಂದ ನೀರು ಹೊತ್ತು ತರುವ ಕೆಲಸ ಎರಡನೇ ಅಣ್ಣ ರಾಜು ಮಾಡುತ್ತಿದ್ದ. ದಷ್ಟ ಪುಷ್ಟವಾಗಿ ಬೆಳೆದಿದ್ದ ಅವನು ತಲಾ ಮೂವತ್ತು ಲೀಟರ್ ಹಿಡಿಸುವ ಎರಡು ಕಬ್ಬಿಣದ ಬಕೆಟ್‌ನಲ್ಲಿ ನೀರು ತುಂಬಿಸಿಕೊಂಡು ಒಂದೊಂದು ಕೈನಲ್ಲಿ ಒಂದೊಂದು ಬಕೆಟ್ ಹಿಡಿದು ನೀರು ತರುತ್ತಿದ್ದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಬದುಕು ಇರುವುದು ಬದುಕಲು.. ಕಳೆದುಕೊಳ್ಳಲಲ್ಲ: ಸುಮಾವೀಣಾ ಸರಣಿ

ಹತ್ತನೆ ತರಗತಿಗೆ ಬಂದಾಗ ಇಬ್ಬರೂ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುವ ಅವಕಾಶವಿತ್ತು. ಅದೂ ಬೋರ್ಡಿಂಗ್ ಶಾಲೆಯಲ್ಲಿ. ಇಬ್ಬರೆ ಕುಳಿತುಕೊಳ್ಳುವ ಬೆಂಚ್ ನಮಗೆ ಹೇಳಿ ಮಾಡಿಸಿದಂತಿತ್ತು.. ನಮಗೆ ಆಗೆಲ್ಲ ಇಂಕ್ ಪೆನ್ನಿನಲ್ಲೇ ನೋಟ್ಸ್ ಬರೆಸುತ್ತಿದ್ದರು. ಒಂದುವೇಳೆ ಇಂಕ್ ಖಾಲಿಯಾದರೆ ಒಬ್ಬರ ಪೆನ್ನಿನಿಂದ ಇನ್ನೊಬ್ಬರ ಪೆನ್ನಿಗೆ ಇಂಕ್ ಹಾಕಿಕೊಳ್ಳುತ್ತಿದ್ದೆವು. ಗೊರಟೆ ಹೂ, ದುಂಡುಮಲ್ಲಿಗೆ ಮುಡಿಯಲು ಪೈಪೋಟಿ ನಡೆಸುತ್ತಿದ್ದೆವು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ

Read More

ಮಂಜು ಎನ್ನುವ ಮುಗ್ಧರೂಪದ ಅವಸಾನ..: ಅನುಸೂಯ ಯತೀಶ್ ಸರಣಿ

ಮಕ್ಕಳ ಮನಸ್ಸು ಬಿಳಿ ಕಾಗದದಂತೆ. ನಾವು ಏನು ತುಂಬಿದರೂ ಅದನ್ನೆ ಬರೆದುಕೊಳ್ಳುತ್ತದೆ. ಹಾಗಾಗಿ ಶಿಕ್ಷಕರಾದವರು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವಾಗ ಬಹಳ ಎಚ್ಚರಿಕೆಯಿಂದ, ಸೂಕ್ಷ್ಮಮತಿಯಾಗಿ ಆರೋಗ್ಯಕರವಾಗಿ ತಿದ್ದಬೇಕು. ಆದ್ದರಿಂದ ಒಂದಷ್ಟು ಕಡಕ್ ದನಿಯನ್ನು ಸೇರಿಸಿ ಇನ್ನೂ ಮುಂದೆ ಅವನನ್ನು ತಿಕ್ಕಲು ಮಂಜ ಅನ್ನಬಾರದು‌.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿಯಲ್ಲಿ ಮಂಜು ಎಂಬ ಹುಡುಗನ ಬಾಳಿನ ಕತೆ

Read More

ಕೇರಿಯ ಕುಟುಂಬವೊಂದರ ನೆನಪು: ಮಾರುತಿ ಗೋಪಿಕುಂಟೆ ಸರಣಿ

ಪಕ್ಕದ ಊರಿಗೆ ಒಂದೆರಡು ಬಾರಿ ಹೋದಾಗ ಅವರ ಮನೆಗೆ ನಾವು ಹೋಗಿದ್ದೆವು. ಆದರೆ ಹಿರಿಮಗ ಪಾಂಡುರಂಗನ ಮೇಲೆ ಬಹಳಷ್ಟು ಜವಾಬ್ದಾರಿ ಇತ್ತು. ಆತ ದುಡಿದ… ದುಡಿಯುತ್ತಲೆ ಇದ್ದ. ತಂಗಿಯ ಮದುವೆಯನ್ನು ಬಹಳ ಜೋರಾಗಿಯೆ ಮಾಡಿದ. ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ತಮ್ಮನ ಮದುವೆಯೂ ಆಗಿ ಆತ ಬೇರೆಯಾದನು. ಪಾಂಡುರಂಗ ಎಲ್ಲ ಜವಾಬ್ದಾರಿಗಳ ನಡುವೆ ಒಂದಿಷ್ಟು ಸಾಲಗಾರನಾದ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ