Advertisement

Category: ಸರಣಿ

ಹಾಸ್ಯೋತ್ಸವದ ಚಾಲನೆ…: ಎಚ್. ಗೋಪಾಲಕೃಷ್ಣ ಸರಣಿ

ಮಿಡಲ್ ಬರಹಗಾರರ ಗುಂಪು ಒಂದು ಶುರು ಮಾಡುವ ಐಡಿಯಾ ನಮ್ಮಲ್ಲಿ ಬಿತ್ತಿದರು. ಇದು ನಂತರ ಮಿಡಲ್ ಬದಲಿಗೆ ಹಾಸ್ಯಬರಹಗಾರರ ಸಂಘಟನೆ ಆಗಲಿ ಅಂತ ನಿರ್ಧಾರ ಆಯಿತು. ಹಿಂದೆ ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆ ಆರಂಭಿಸಿದಾಗ ಶ್ರೀ ಆನಂದರಾಮ ಶಾಸ್ತ್ರಿ ಅವರು ನೀತಿ ನಿಯಮ ರೂಪಿಸಿದ್ದರು ಅಂತ ಹೇಳಿದ್ದೆ. ಇದಕ್ಕೂ ಅವರೇ ಆರಂಭಿಕ ಪತ್ರಗಳು ಸಿದ್ಧ ಮಾಡಿದರು. ಇದಕ್ಕೆ ಬೇಕಾದ ನಮ್ಮ ಮೀಟಿಂಗ್‌ಗಳು ಬೆಂಗಳೂರಿನ ಸಂಗಮ್ ಟಾಕೀಸ್ ಮುಂದೆ ಸೇರಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೫ನೇ ಬರಹ ನಿಮ್ಮ ಓದಿಗೆ

Read More

ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು: ಸುವರ್ಣ ಚೆಳ್ಳೂರು ಸರಣಿ

ಆಕಾಶದಾಗಿನ ಸಾಲು ಚುಕ್ಕಿ ನೋಡಿ ನಾನು ನಿದ್ದಿಗೆ ಜಾರಿದೆ.‌ ಮುಂಜೆನೆದ್ದಾಗ ಹೊಲದಾಗ ಮಂಜುಮಂಜಾಗಿತ್ತು, ಬೆಳ್ಳಕ್ಕಿ ಅದಾಗಲೇ ಎದ್ದು ಹೊಲದಾಗ ಹಾರಾಡಿಕ್ಯಂತ ಹೊಲದಿಂದ ಹೊಲಕ್ಕ ಹೊಂಟಿದ್ವು. ನಾನು ಮತ್ತ ಲಕ್ಷ್ಮಮ್ಮತ್ತಿ ಎದ್ದು ಮನಿ ದಾರಿ ಹಿಡದ್ವಿ. ಬೆಳಗಾ ಮುಂಜೇಲೆ ಹೊಲದ ದಾರಿ ಅದೊಂಥರಾ ಯಾವುದೊ ಚಿತ್ರ ಕಂಡಂಗ ಕಾಣತಿತ್ತು, ಆಕಡೆ ಇಕಡೆ ಹಸರು, ಅಲ್ಲಲ್ಲಿ ಹೊಲದಾಗಿದ್ದ ಒಂಟಿಮರ ಅದಕ್ಕಿದ್ದ ಮುಳ್ಳುಗಳು, ಹೊಲದಗುಂಟ ಹರಿತಿದ್ದ ಸಣ್ಣ ಕಾಲುವೆ ಅದರ ದಂಡಿಗಿದ್ದ ಸಮುದ್ರ ಬಾಳೆ ಹೂವು, ಸರ್ಕಾರ್ ಕಳ್ಳಿ ಇವೆಲ್ಲಾ ಆ ಹೊಲದ ಹಾದಿಗೆ ಬಿಡಿಸಿರೊ ಚಿತ್ರಗಳಿದ್ದಂಗ ಇದ್ವು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

Read More

ಕಾಡುಕೋಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಇನ್ನು ಈ ಕಾಡುಕೋಳಿಗಳನ್ನು ಸಾಕಿ ಬೆಳೆಸುವುದು ಅಸಾಧ್ಯ ಎನ್ನುವುದು ನಿಮಗೆ ತಿಳಿದೇ ಇದೆ. ಹಾಗಿರುವಾಗ ಕೋಳಿಗಳನ್ನು ಸಾಕಿ ಬೆಳೆಸುತ್ತಾರಲ್ಲ ಅದು ಹೇಗೆ ಎಂದು ನೀವು ಕೇಳಬಹುದು. ಗೂಡಿನಲ್ಲಿ ಸಾಕಿ ಬೆಳೆಸುವ ಕೋಳಿಗಳು, ಕೆಂಪು ಕಾಡುಕೋಳಿ ಎಂಬ ಮತ್ತೊಂದು ಪ್ರಭೇದದ ಪಕ್ಷಿ. ಕೆಂಪು ಕಾಡುಕೋಳಿಗಳು ಭಾರತದ ಉತ್ತರ ಮತ್ತು ಪೂರ್ವ ಭಾಗದಲ್ಲಿರುವ ರಾಜ್ಯಗಳ ಹಾಗೂ ಪೂರ್ವ ಏಶಿಯಾ ದೇಶಗಳ ಕಾಡುಗಳಲ್ಲಿ ಮಾತ್ರ ಕಂಡುಬರುವ ಹಕ್ಕಿಗಳು. ಸುಮಾರು 8-10 ಸಾವಿರ ವರ್ಷಗಳಿಂದಲೂ, ಪ್ರಪಂಚದ ನೂರಾರು ದೇಶಗಳಲ್ಲಿ, ಮೊಟ್ಟೆ ಹಾಗೂ ಮಾಂಸಕ್ಕಾಗಿ ಸಾಕುತ್ತಿರುವುದು ಇದೇ ಕೆಂಪು ಕಾಡುಕೋಳಿಗಳನ್ನು ಎಂದರೆ ನಿಮಗೆ ಆಶ್ಚರ್ಯವಾಗಬಹುದು!
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ

Read More

ಗಣೇಶ ಮೂರ್ತಿಯ ಗಿಫ್ಟ್ ಮಹಿಮೆ…: ಬಸವನಗೌಡ ಹೆಬ್ಬಳಗೆರೆ ಸರಣಿ

ಒಮ್ಮೆ ವೈದ್ಯರ ಬಳಿ ನಮ್ಮ ಕಂಪೆನಿಯ ಬಗ್ಗೆ ಹೆಚ್ಚಿಗೆ ಹೇಳಲು ಹೋಗಿ ಅವರಿಂದ ಉಗಿಸಿಕೊಂಡಿದ್ದೆ. ಚಿಕ್ಕವನಿದ್ದಾಗಿಂದಲೂ ನಾನು ಮತ್ತೊಬ್ಬರಿಂದ ಹೇಳಿಸಿಕೊಳ್ಳುವುದಾಗಲಿ, ಬಯ್ಯಿಸಿಕೊಳ್ಳುವ ಕೆಲಸ ಮಾಡಿರಲಿಲ್ಲ. ಒಂದೊಮ್ಮೆ ಈ ಕೆಲಸದಲ್ಲಿ ಯಾರಾದ್ರೂ ಏನಾದ್ರೂ ಅಂದರೆ ಕೆಲಸವನ್ನು ಬಿಟ್ಟು ಹೋಗುವಷ್ಟು ಸಿಟ್ಟು ಬರುತ್ತಿತ್ತು. ಆದರೆ ನನಗೆ ಜೀವನದಲ್ಲಿ ಸೆಟ್ಲ್ ಆಗಬೇಕೆಂಬ ಮನೋಭಿಲಾಶೆ ಇದ್ದುದರಿಂದ ಎಷ್ಟೇ ಒತ್ತಡ ಬಂದರೂ ನಾನು ಸಹಿಸಿಕೊಳ್ಳುತ್ತಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತನೆಯ ಕಂತು ನಿಮ್ಮ ಓದಿಗೆ

Read More

ಬ್ಯಾಟಿ ಬಸಮ್ಮನ ಕತೀ ಕೇಳ್ರಿ…: ಸುವರ್ಣ ಚೆಳ್ಳೂರು ಸರಣಿ

ನಾನು ಹಿಂಗ ನನ್ನ ಬದುಕನ್ನ ನಾನಾ ಕಟ್ಟಿಗ್ಯಂಡು ದುಡ್ಯಾಕತೀನಿ, ಹೆಣಮಕ್ಕಳಂದ್ರ ಬರೀ ಅಂದ ಚಂದ ಮೈ ಬಣ್ಣ ಅನ್ಕೊಂಡಿರೋರ್ನ ಮಿರ್ಚಿನ ಬಿಸಿ ಎಣ್ಯಾಗ ಎದ್ದಿದಂಗ ಎದ್ದಿ ಕಳಸ್ತಿನಿ, ದಾರಿಯೊಳಾಗ ದಿಕ್ಕಿರಲಾರದ ಸಿಕ್ಕ ಈ ರಾಮಪ್ಪಗೂ ನನಗೂ ಕತಿ ಕಟ್ಟತಾರ ಆದ್ರ, ತಲಿ ಸರಿ ಇಲ್ಲದಿರೊ ಆತಗ ಬೇಕಾಗಿರಾದು ಎರಡೊತ್ತಿನ ಊಟ ಅಷ್ಟ! ಎರಡಕ್ಷರ ಗೊತ್ತಿರೊ ನನಗ, ಯಾವ ಜಾತಿ ಜಿಡ್ಡಿನ ಮ್ಯಾಗೂ ನಂಬಿಕಿ ಇಲ್ಲ. ಊರಿನ್ಯಾರು ಅದೆಷ್ಟSS ಕತಿ ಕಟ್ಟಿದರೂನು ನಾನು ನನ್ನ ಕತಿನ ನಾನೇ ಬರಿಯಾಕಿ’ ಅಂತ ಮತ್ತೊಮ್ಮೆ ಜೋರಾಗಿ ನಗತೊಡಗಿದ್ಲು. ಆಕಿ ಮಾತ್ ಕೇಳಿ ಮೈ ಜುಮ್ಮಂದಂಗಾತು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಒಂಭತ್ತನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ