Advertisement

Category: ಸಾಹಿತ್ಯ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ದಾಕ್ಷಾಯಣಿ ಯಡಹಳ್ಳಿ ಕತೆ

ಗಂಡಗ ಹ್ಯಾಂಗ್ ಹೇಳ್ಳಿ ಅನ್ನ ಚಿಂತ್ಯಾತು. ಕೂಸು ಅತ್ತತ್ತ್ ತೊಡಿ ಮ್ಯಾಲೆ ಮಕ್ಕೊಂತು. ಅಕಿನೂ ಅತ್ತತ್ತ್ ಹೈರಾಣಾಗಿದ್ಲು. ಗಲ್ಲದ್ ಮ್ಯಾಲೆ ಕೈ ಇಟ್ಗೊಂಡು ಚಿಂತೀ ಮಾಡ್ಕೊಂತ ಕುಂತ್ಲು. ಹಂಗ ಕಣ್ಣ್ ಮುಚ್ಚಿದ್ವು. ಬಾಗ್ಲಾ ತಗದು ಪರಪ್ಪ ಒಳ್ಗ ಬಂದಾ. `ಯಾಕ್ ಮಕ್ಕೊಂಡಿಯಲೇ ಏನಾಗೇತಿ, ಗಲ್ಲಕ್ಕ್ ಕೈ ಹಚ್ಚೀದಿ ಗುಡ್ಡ್ ಬಂದು ತೆಲಿ ಮ್ಯಾಲೆ ಬಿದ್ದೈತೇನಂದ”. ಸುಮ್ನ ಇದ್ಲು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ದಾಕ್ಷಾಯಣಿ ಯಡಹಳ್ಳಿ ಬರೆದ ಕತೆ ‘ವರ್ತುಲ’ ನಿಮ್ಮ ಈ ಭಾನುವಾರದ ಓದಿಗೆ

Read More

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕಥೆ

ಮೂಲೆಯ ಮುರುಕು ಬೆಂಚಿನಲ್ಲಿ ಕುಳಿತು ಆ ವ್ಯಕ್ತಿಯ ಮಾತು- ವರ್ತನೆಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವೆಂಕಪ್ಪ- ಅಣ್ಣುವಿಗೆ ಇನ್ನಷ್ಟು ಕುತೂಹಲವಾಯಿತು. “ಇವನೊಬ್ಬ ಬೋನಸ್ ಆಯುಷ್ಯದಲ್ಲಿ ಬದುಕುತ್ತಿದ್ದಾನೆ. ಇವನ ದುರ್ಬುದ್ಧಿಯನ್ನು ದೇವರು ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಂಡಿದ್ದಿದ್ದರೆ ಇಷ್ಟರಲ್ಲಾಗಲೇ ಇವನು ಕೊಟ್ಟಾಯಿ ಆಗಿ, ಇವನ ಮೂರನೇ ವರ್ಷದ ಶ್ರಾದ್ಧ ಮುಗಿದಿರಬೇಕಿತ್ತು” ಎಂದು ರಾಮಣನ ಹಿಂದಿನಿಂದ ಮಾತನಾಡಿಕೊಳ್ಳುತ್ತಿದ್ದವರು ಈ ಇಬ್ಬರು, ವೆಂಕಪ್ಪ ಮತ್ತು ಅಣ್ಣು. ಇನ್ನಷ್ಟು ದಿನ ಬದುಕಿರಬೇಕಿತ್ತು…

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚಿಂತಾಮಣಿ ಕೊಡ್ಲೆಕೆರೆ ಕತೆ

ನನ್ನೊಳಗೆ ಉಷಾ ಜೀವಂತವಾಗಿಯೇ ಇದ್ದಳು. ಕೆಲವೊಮ್ಮೆ ಕನಸುಗಳಲ್ಲಿ ಬಂದು ತನ್ನ ದುಃಖದ ಕಥೆಗಳನ್ನು ಹೇಳಿಕೊಂಡಳು. ಇನ್ನು ಕೆಲವೊಮ್ಮೆ ಅವಳೊಬ್ಬ ಸದ್ಗೃಹಿಣಿಯಾಗಿ ತಲೆಗೆ ಮಿಂದು, ಕೂದಲು ಕಟ್ಟಿಕೊಂಡು, ಬಟ್ಟೆ ತುರುಬು ಹಾಕಿ, ಮಂಗಲ ಕುಂಕುಮವನ್ನಿಟ್ಟುಕೊಂಡು ನಂದಿನಿ ಹಾಲಿನ ಪ್ಯಾಕೆಟ್ ಮನೆಯೊಳಗೆ ತರುತ್ತಿರುವಂತೆ ಕನಸಾಗುತ್ತಿತ್ತು. ‘ಸದಾಶಿವಯ್ಯನವರ ಮಾತನ್ನು ಎಂದಿಗೂ ನಂಬಬೇಡ’ ಎಂದು ಒಂದು ಸಲ ಹೇಳಿ ಹೋದಳು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಚಿಂತಾಮಣಿ ಕೊಡ್ಲೆಕೆರೆ

Read More

ಸದಾಶಿವ ಸೊರಟೂರು ಬರೆದ ಈ ಭಾನುವಾರದ ಕಥೆ

ಬೆಳಕಿರುವ ಜಗದಲ್ಲಿ ತನ್ನವರು ಎಲ್ಲೋ ಕಳೆದು ಹೋಗಿರುವಾಗ ಹುಡುಕಿ ಸೇರಿಕೊಳ್ಳಲು ಹಂಬಲಿಸಿ ಸೋತು ಹೋದಳು. ಸುಮ್ಮನೆ ಅಲೆಯಬೇಕು. ಒಂದೂರಲಿ ಒಂದೆರಡು ದಿನ. ಭಿಕ್ಷೆಯ ಕೂಳು ಹೊಟ್ಟೆಗಿತ್ತು. ಹರಿದ ಎರಡು ದುಪ್ಪಟಿಗಳು ರಾತ್ರಿ ಚಳಿಗಿದ್ದವು. ರಾತ್ರಿ ಮಾತ್ರ ಸ್ನಾನದ ಹಂಗಿನಲ್ಲಿ ಅವಳ ಬೆತ್ತಲೆ ದೇಹವನ್ನು ನೋಡಿತ್ತು. ಆಚೆ ನೆಲದಲ್ಲಿ ಕೂಡಿಸಿಟ್ಟ ಮೂರು ಕಲ್ಲುಗಳು ಅವಳ ಅಡುಗೆ ಮನೆ. ಇಂತಿಪ್ಪ ಆಕೆಯ ಬದುಕು ಬೆಳಕು, ಕತ್ತಲುಗಳ ಮಧ್ಯೆ ನುಗ್ಗುತ್ತಿತ್ತು.
ಸದಾಶಿವ ಸೊರಟೂರು ಬರೆದ ಕಥೆ “ಬಯಲು” ನಿಮ್ಮ ಈ ಭಾನುವಾರದ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚೀಮನಹಳ್ಳಿ ರಮೇಶಬಾಬು ಕತೆ

ಮಳೆ ನಿಂತಿತ್ತಾದರೂ ಸಂದಿಯಲ್ಲಿರುವ ನೀರು ಖಾಲಿಯಾಗುವವರೆಗು ಮನೆಯೊಳಗೆ ನೀರು ಬರುತ್ತಲೆ ಇತ್ತು. ಹಾಗಾಗಿ ಅವಳು ಬಹುಪಾಲು ರಾತ್ರಿಯೆಲ್ಲ ಹಾಗೆ ನೀರನ್ನು ಹೊರ ಹಾಕುತ್ತಲೆ ಇದ್ದಳು. ಅದಾದ ಮೇಲೆ ಮಣ್ಣನ್ನೆಲ್ಲ ತೆಗೆದು ಒಂದಷ್ಟು ಸ್ವಚ್ಛಗೊಳಿಸಿದ್ದಳಾದರು ಮುಂಜಾವಿನವರೆಗೂ ತಾರಸಿ ಸೋರುತ್ತಲೆ ಇತ್ತು. ಅವಳು ತುಂಬಿದ ಪಾತ್ರೆಗಳಲ್ಲಿನ ನೀರನ್ನು ಆಚೆ ಚಲ್ಲಿ ಮತ್ತೆ ಅದೇ ಜಾಗದಲ್ಲಿ ಇಡುತ್ತಿದ್ದಳು. ಹೀಗೆ ರಾತ್ರಿಯೆಲ್ಲ ಎದ್ದು ಬಗ್ಗಿ ಓಡಾಡಿ ಹೈರಾಣಾಗಿದ್ದಳು. ರಾತ್ರಿಯ ಕತ್ತಲಲ್ಲಿ ಅದುಮಿಟ್ಟುಕೊಂಡಿದ್ದ ಅವಳೆಲ್ಲ ಭಾವನೆಗಳು ಬೆಳಗಾಗುತ್ತಿದ್ದಂತೆ ಸಿಡಿದು ಸದ್ದು ಮಾಡತೊಡಗಿದವು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ