Advertisement

Category: ಸಾಹಿತ್ಯ

ಸುನಂದಾ ಕಡಮೆ ಬರೆದ ಈ ಭಾನುವಾರದ ಕತೆ “ನಿವೃತ್ತಿ”

ಕೈಯಲ್ಲಿದ್ದ ಲಾಠಿಯಿಂದ ರಬ್ಬನೆ ಅವಳ ಕಾಲಿನ ಮೇಲೆ ಒಂದೇಟು ಬಿತ್ತು, ಇದನ್ನು ಮಾತ್ರ ಶೀಲಕ್ಕ ನಿರೀಕ್ಷಿಸಿರಲಿಲ್ಲ, ‘ಅಯ್ಯ ನಮ್ಮವ್ವ.. ನನಗ ಹೊಡೀತೀರಿ? ಅಯ್ಯ ಅಯ್ಯ..’ ಅಂತ ಮುಳುಮುಳು ಮಾಡಿದಳು. ಆಗಲೇ ಪ್ರತಾಪಣ್ಣ ಬಾಗಿಲು ತೆರೆದು ಗೇಟುದಾಟಿಯಾಗಿತ್ತು. ಅವಮಾನದಿಂದ ದುಃಖ ಉಮ್ಮಳಿಸಿತು, ಯಾಕೋ ಅವನು ಮೊದಲಿನಂತಿಲ್ಲ ಅನ್ನಿಸಿತು. ಬಲಗಾಲ ಮೀನಖಂಡದಲ್ಲಿ ಎದ್ದ ನೋವನ್ನು ನೀವಿಕೊಳ್ಳುತ್ತಿರುವಾಗಲೇ ಮಗ ಕಾಲ್ ಮಾಡಿದ, ವಿಷಯ ತಿಳಿದು ‘ಮೂವತ್ತೈದ ವರ್ಷ ತೊಟ್ಕೊಂಡ ಯೂನಿಫಾರ್ಮ ಐತದ, ಅದ್ನ ನೋಡ್ಕೋತ ಇದ್ರ ಅಪ್ಪಗ ಒಂಥರಾ ಟೆಮ್ಟ್ ಆಗ್ತಿರಬೇಕ, ನಾಳಿಂದ ಅದ್ನ ತಗದ ಎಲ್ಲರ ಹುಗಸಿ ಇಟ್ಬಿಡು’ ಅಂದ.
ಸುನಂದಾ ಕಡಮೆ ಬರೆದ ಕತೆ “ನಿವೃತ್ತಿ” ನಿಮ್ಮ ಈ ಭಾನುವಾರದ ಓದಿಗೆ

Read More

ಸ. ಹರೀಶ್‌ ಬರೆದ ಈ ಭಾನುವಾರದ ಕತೆ

ಎಲ್ಲವನ್ನು ಕೇಳಿಸಿಕೊಂಡಿದ್ದ ಅವಿನಾಶ್ ಡಾಕ್ಟರಿಗೆ ಕೈ ಮುಗಿದ. ಅಲ್ಲಿ ಮಾಧವಿಗೆ ಮನಸ್ಸು ತೀರಾ ತಲ್ಲಣಿಸಿ ಹೋಯಿತು. ಯಾವಾಗ ಕೇರ್ ಟೇಕರ್ ತನ್ನ ಸುತ್ತಾಟ ಮುಗಿಸಿ ಮನೆ ಒಳಗೆ ಕಾಲಿಟ್ಟಳೊ, ಅವಳಿಗೆ ಮನುಷ್ಯರ ಬಗ್ಗೆ ನಂಬಿಕೆಯೇ ಹೊರಟು ಹೋಯಿತು. ಅವಳ ಮುಖದ ಮೇಲೆ ದುಡ್ಡು ಬಿಸಾಕಿ, `ಮುಖ ತೋರಿಸಬೇಡ, ನಿನಗೆ ಪೊಲೀಸಿಗೆ ಕೊಡದೇ ಬಿಟ್ಟಿದ್ದೀನಿ, ಗೆಟ್ ಲಾಸ್ಟ್’ ಅಂತ ನರನಾಡಿ ಕಿತ್ತುಬರುವಂತೆ ಅರಚಿದಳು.
ಸ. ಹರೀಶ್‌ ಕಥಾ ಸಂಕಲನ “ಅಮ್ಮ ಅಂದ್ರೆ ಭೂಮಿ”ಯ ಶೀರ್ಷಿಕೆ ಕತೆ, ನಿಮ್ಮ ಈ ಭಾನುವಾರದ ಓದಿಗೆ

Read More

ಆಶಾ ರಘು ಬರೆದ ಈ ಭಾನುವಾರದ ಕತೆ “ನೇಪಥ್ಯ”

ನಾನು ಬಣ್ಣ ಹಚ್ತಾ, ಮೊಳೆ ಹೊಡೀತಾ, ಲೈಟು ಕಟ್ತಾ ಬೆಳೆಯತೊಡಗಿದೆ. ಹರಿದ ಒಳ ಅಂಗಿಯ ಮೇಲೆ ರಾಜಕುಮಾರನ ಗರಿಗರಿ ಉಡುಪು..! ತಲ್ಲಣಗಳಲ್ಲಿ ಕುಸಿಯುವ ಮನಸ್ಸನ್ನು ಮೀರಿ ಹೊರಗೆ ಹಾಸ್ಯೋತ್ಸಾಹದ ಸಂಭಾಷಣೆಗಳ ಹೊನಲು..! ಒಮ್ಮೊಮ್ಮೆ ಇದು ತಿರುಗುಮುರುಗೂ ಆಗುವುದುಂಟು..! ನಾಟಕವಲ್ಲವೇ..!? ಎಷ್ಟೋ ಬಾರಿ ನಾನು ವಾಸ್ತವ ಸಂಗತಿಗಳಿಗೆ ಪ್ರತಿಕ್ರಿಯಿಸಿದರೆ, ಅದು ದಿಟವಾ ಅಥವಾ ನಾಟಕ ಆಡುತ್ತಿದ್ದೇನೆಯಾ ಅಂತ ನನಗೇ ಗುಮಾನಿ ಅನ್ನಿಸುವಷ್ಟು ಅಭಿನಯ ಕಲೆ ನನಗೆ ಒಲಿಯಿತು. ನಡೆಯುತ್ತಿದ್ದವನಿಗೆ ಸೈಕಲ್ ಬಂತು.
ಆಶಾ ರಘು ಬರೆದ “ಕೆಂಪು ದಾಸವಾಳ” ಕಥಾ ಸಂಕಲನದ ಕತೆ “ನೇಪಥ್ಯ” ಈ ಭಾನುವಾರದ ಬಿಡುವಿನ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವೈದೇಹಿ ಬರೆದ ಕತೆ

ಯಾಕೋ ನನಗೆ ಕೋರ್ಟುಮನೆ ಅಲೆದೇ ಸೋತು ಕುಸಿದುಹೋಗಿದ್ದ ಅಪ್ಪನ ಹೋರಾಟದ ಬಗ್ಗೆ ಹೇಳಲೇಬೇಕೆನಿಸಿತು. ಆಸ್ತಿಗಾಗಿ ಕುಟುಂಬದಲ್ಲೇ ಒಂದು ಆತ್ಮಹತ್ಯೆ ಆಯಿತು, ಒಂದು ಕೊಲೆ ಆಯಿತು, ಇದೆಲ್ಲ ನಮ್ಮ ಮಟ್ಟಿಗೆ ಎಂಥ ದೊಡ್ಡದು ಯೋಚಿಸಿ. ಅಪ್ಪ ಕಡೆಕಡೆಗೆ ತಮ್ಮದೇ ಕುಟುಂಬದೊಂದಿಗೆ ಕೋರ್ಟುಕಚೇರಿ ವ್ಯಾಜ್ಯ ಯಾಕಾದರೂ ಬೇಕಿತ್ತು ಅಂತ ಕೊರಗುತಿದ್ದರು ಅಷ್ಟಿಷ್ಟಲ್ಲ. ಹಾಗೆಂದು ‘ಜಗಳ ಬೇಡ, ಎಲ್ಲ ನಿಮಗೇ, ತಕೊಳ್ಳಿ’ ಅಂತ ಬಿಟ್ಟುಕೊಟ್ಟರೇನು? ಇಲ್ಲವಲ್ಲ. ಅದು ಸಾಧ್ಯವೂ ಇಲ್ಲ. ‘ಒಂದು ರೀತಿ ಮಹಾಭಾರತದಲ್ಲಿ ಬರುವ ಧರ್ಮವ್ಯಾಧನ ಕತೆಯಂತೆ ನಾವೆಲ್ಲ.
ನಾನು ಮೆಚ್ಚಿದ ನನ್ನ ಕಥಾ ಸರಣಿಯ ಕೊನೆಯ ಕಂತಿನಲ್ಲಿ ವೈದೇಹಿ ಬರೆದ ಕತೆ “ಅಮುದ ಹೇಳಿದ ಕತೆ”

Read More

ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿನ ರಾಚನಿಕತೆಯ ಪ್ರಶ್ನೆ: ಎನ್.ಎಸ್.ಶ್ರೀಧರ ಮೂರ್ತಿ ಬರಹ

ಭೈರಪ್ಪನವರ ಎರಡನೆಯ ಸಾಧ್ಯತೆಯ ಕಾದಂಬರಿಗಳಲ್ಲಿ ವೈಚಾರಿಕತೆ ಬಹುಮುಖಿಯಾಗಿದೆ. ಅದರ ಕೇಂದ್ರವನ್ನು ಕೃತಿಯ ಸಂರಚನೆ ಹಿಡಿದಿಡುತ್ತದೆ. ಇಲ್ಲಿನ ಓದು ಕೂಡ ಬಹುಮುಖಿಯಾಗ ಬೇಕಾಗಿದ್ದು. ‘ತಂತುʼ ಕಾದಂಬರಿಯನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಇದು ತುರ್ತು ಪರಿಸ್ಥಿತಿಯ ರಾಜಕೀಯ ಕಥನ ಎನ್ನುವುದು ನಿಜ. ಅದರ ಜೊತೆಗೆ ಕೌಟಂಬಿಕ ಪ್ರಶ್ನೆಗಳಿವೆ. ತಾಯಿ-ಮಗನ ಸಂಬಂಧದ ಪರಿಶೀಲನೆ ಇದೆ. ದಾಂಪತ್ಯದಾಚೆಗೆ ಸೆಳೆಯುವ ಸಂಬಂಧವಿದೆ. ಸಂಗೀತದ ನೆಲೆ ಕೂಡ ಇದೆ. ಇದನ್ನು ಗಹನತೆಯ ಜೊತೆಗೆ ಅಲ್ಲಲ್ಲಿ ಕಾಣುವ ಜನಪ್ರಿಯ ವಿವರಗಳ ಜೊತೆಗೇ ಗ್ರಹಿಸಿಕೊಳ್ಳಬೇಕು.
ಎಸ್.ಎಲ್. ಭೈರಪ್ಪನವರ ಕಾದಂಬರಿಗಳ ಕುರಿತು ಎನ್.ಎಸ್.‌ ಶ್ರೀಧರಮೂರ್ತಿ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ