Advertisement

Category: ದಿನದ ಪುಸ್ತಕ

ವಸುಧೇಂದ್ರರ ‘ತೇಜೋ=ತುಂಗಭದ್ರಾ’ ಕುರಿತು ಎಚ್.ಆರ್. ರಮೇಶ್ ಲೇಖನ

“ಹಂಪಕ್ಕಳನ್ನು ಇವರ ಸುಪರ್ದಿಗೆ ಬಿಟ್ಟು ಹೊರಟಾಗ ಹಂಪಕ್ಕಳಿಗೆ ಇವನ ಮೇಲೆ ಆಸೆ ಹುಟ್ಟುತ್ತದೆ. ಆದರೆ ಅವನು ‘ನಾನೊಂದು ದೇಶದವನು, ನೀನು ಮತ್ತೊಂದು ದೇಶದವಳು. ಒಂದಕ್ಕೊಂದು ಸಂಬಂಧವಿಲ್ಲದ ಸಂಸ್ಕೃತಿಯಲ್ಲಿ ಬೆಳೆದವರು. ಇಬ್ಬರಿಗೂ ಹೊಂದಾಣಿಕೆಯಾಗುವುದಿಲ್ಲ ಹಂಪಮ್ಮ’ ಎನ್ನುತ್ತಾನೆ. ಅದಕ್ಕೆ ಅವಳು ‘ಕಣ್ಣಾ, ಹಲವಾರು ಬಗೆಯ ಕುಲಾವಿಗಳನ್ನು ಹೊಲಿದವಳು ನಾನು… “

Read More

ಅಕ್ಷತಾ ಕೃಷ್ಣಮೂರ್ತಿ ಪುಸ್ತಕಕ್ಕೆ ಪ್ರೊ.ಕಾಳೇಗೌಡ ನಾಗವಾರ ಬರೆದ ಮುನ್ನುಡಿ

“ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರುವ ಸಮ್ಮೇಳನ, ವಿಚಾರಗೋಷ್ಠಿಗಳಲ್ಲಿ ಆಗಾಗ್ಗೆ ಸುಕ್ರಜ್ಜಿಯ ಒಡನಾಟವು ನೀಡುವ ಆನಂದದ ಸವಿಯನ್ನು ನಾವೆಲ್ಲಾ ಅನುಭವಿಸಿದ್ದೇವೆ. ಕಾಡುಗೊಲ್ಲರ ಸಿರಿಯಜ್ಜಿ, ಸಾಲುಮರದ ತಿಮ್ಮಕ್ಕ, ಹಾಲಕ್ಕಿ ಒಕ್ಕಲು ಬುಡಕಟ್ಟಿನ ವಿಶಿಷ್ಟ ಪ್ರತಿಭೆ ಸುಕ್ರಿ ಬೊಮ್ಮಗೌಡ- ಮುಂತಾದ ಈ ಪ್ರಕೃತಿಯ ಕಂದಮ್ಮಗಳು ನೀಡುವ ಅನುಭವಲೋಕ ಹಾಗೂ …”

Read More

ವಿ.ಆರ್. ಕಾರ್ಪೆಂಟರ್ ಕಥಾ ಸಂಕಲನ ಕುರಿತು ಶ್ರೀದೇವಿ ಕೆರೆಮನೆ ಬರಹ

“ಬ್ರಾಹ್ಮಿನ್ ಕೆಫೆ ಎನ್ನುವ ಪಿಡಿಎಫ್ ಒಂದು ಝಗ್ಗನೆ ಮೊಬೈಲ್ ಗೆ ಬಂದು ಕುಳಿತಾಗ ಆ ಹೆಸರು ಆಶ್ಚರ್ಯ ಹುಟ್ಟಿಸಿರಲಿಲ್ಲ. ಯಾಕೆಂದರೆ ಎಷ್ಟೋ ದಿನಗಳಿಂದ ಗೆಳೆಯ ವಿ ಆರ್ ಕಾರ್ಪೆಂಟರ್ ಈ ಹೆಸರನ್ನು ಹೇಳುತ್ತಲೇ ಇದ್ದ. ಕೆಲವೊಮ್ಮೆ ಅಲ್ಲಿನ ಕತೆಗಳ ಒಂದಿಷ್ಟು ಎಳೆಗಳನ್ನೂ ಕೂಡ. ಆದರೆ ಕತೆಗಳು ಪೂರ್ಣಗೊಂಡ ನಂತರ ಅದು ಪಡೆದುಕೊಂಡ ತಿರುವುಗಳನ್ನು ಕಂಡಾಗ ಮೈ ಜುಂ ಎನಿಸುವಂತಾಗುತ್ತದೆ.”

Read More

ಫಕೀರ ಕಾವ್ಯ ಸಂಕಲನಕ್ಕೆ ಡಾ. ಮಲರ್ ವಿಳಿ ಬರೆದ ಮುನ್ನುಡಿ

“‘ಸಾವೆಂಬುದು ನಿರಾಳ ಮೌನ’ ಕವಿತೆಯಲ್ಲಿ ಒಬ್ಬ ವ್ಯಕ್ತಿಯ ಸಾವಿನ ನಂತರದ ನೆನಪುಗಳು ಹೇಗೆಲ್ಲ ನಮ್ಮನ್ನು ಕಾಡುತ್ತವೆ, ಇಲ್ಲಿಯ ತದ್ರೂಪ ಚಿತ್ರಣಗಳು ನಮ್ಮ ಮನಸ್ಸನ್ನು ತಟ್ಟುತ್ತವೆ, ಎಚ್ಚರಿಸುತ್ತವೆ. ತಾತ್ತ್ವಿಕತೆಯನ್ನು ಬೋಧಿಸುತ್ತವೆ, ನಶ್ವರತೆಯ ಸಂದೇಶವನ್ನು ಸಾರುತ್ತಾ ನೆನಪೊಂದೇ ಉಳಿಯುವುದು ಎಂಬ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಶ್ರೀಧರರು ರಚಿಸಿದ್ದಾರೆ. `ನಗುವಿನ ಬೀಜಗಳು ಮಾರಾಟಕ್ಕಿವೆ’-ಇತ್ತೀಚೆಗೆ ನಗು…”

Read More

ಗಿರೀಶ್ ಜಕಾಪುರೆ ಪುಸ್ತಕದ ಕುರಿತು ಶ್ರೀದೇವಿ ಕೆರೆಮನೆ ಬರಹ

“ಒಂದು ಮುಕ್ತ ಛಂದದ ಕಾವ್ಯವನ್ನು ಬರೆಯುವಾಗಲೇ ಪ್ರತಿ ಸಾಲಿನ ನವಿರಾದ ಹೊಂದಾಣಿಕೆಗೆ ಅದೆಷ್ಟು ಕಷ್ಟಪಡಬೇಕಾಗುತ್ತದೆ ಎಂಬುದು ಕವಿತೆಯನ್ನು ತೀವ್ರವಾಗಿ ಅನುಭವಿಸುತ್ತ ಬರೆಯುವ ಎಲ್ಲರಿಗೂ ಗೊತ್ತು. ಗಜಲ್ ಎಂದರೆ ಅದರ ಪ್ರತಿ ಸಾಲನ್ನೂ ಒಂದೇ ಮಾತ್ರೆಗೆ ಅಳವಡಿಸಬೇಕು. ಕನ್ನಡದಲ್ಲಿ ಮೊಟ್ಟಮೊದಲ ಸಲ ಗಜಲ್ ಅನ್ನು ಅದರ ಮೂಲ ಛಂದಸ್ಸಿನಲ್ಲಿ ಹಿಡಿದಿಡುವ ಕೆಲಸವನ್ನು ಗಿರೀಶ್ ಜಕಾಪುರೆ ಮಾಡಿದ್ದಾರೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ